ರಾಜ್ಯ

ಅರಣ್ಯಾಧಿಕಾರಿಗಳಿಂದ ಚಿನ್ನದಂಗಡಿ ಮಾಲೀಕರ ಮೇಲೆ ದೌರ್ಜನ್ಯ : ಟಿ.ಎ. ಶರವಣ ಆಕ್ರೋಶ

ಬೆಂಗಳೂರು : ಹುಲಿ ಉಗುರು ವಿಚಾರವಾಗಿ ರಾಜ್ಯದ ಚಿನ್ನದ ಅಂಗಡಿಗಳ ಮಾಲೀಕರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ಮಾಡ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಚಿನ್ನದ ಅಂಗಡಿ ಮಾಲೀಕರಾದ ಟಿ.ಎ. ಶರವಣ ಆರೋಪ ಮಾಡಿದರು.

ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಲಿ ಉಗುರು ವಿಚಾರವಾಗಿ ಚಿನ್ನದ ಅಂಗಡಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ಮಾಡ್ತಾ ಇದ್ದಾರೆ. ನೋಟಿಸ್ ಕೊಡದೆ, ತಪಾಸಣೆ ನಡೆಸದೆ ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡಿದ್ದು ಸರಿಯಲ್ಲ. ರಾಜ್ಯದಲ್ಲಿ ಎಷ್ಟೆಲ್ಲಾ ಸಮಸ್ಯೆಗಳಿವೆ, ಅದರ ಪರಿಹಾರಕ್ಕೆ ಸರ್ಕಾರ ಗಮನ ಹರಿಸೋಕೆ ಆಗ್ತಿಲ್ವ ಎಂದು ವಾಗ್ದಾಳಿ ನಡೆಸಿದರು.

ಯಾವ ವಿಚಾರವನ್ನು ಮುಚ್ಚಿಡೋಕ್ಕೆ ಹುಲಿ ಉಗುರು ವಿಷಯವನ್ನು ಹೈಲೈಟ್ ಮಾಡ್ತಾ ಇದ್ದೀರಾ? ಅಸಲಿ ಹುಲಿ ಉಗುರು ಧರಿಸೋ ಶಕ್ತಿ ಯಾರಿಗೂ ಇಲ್ಲ. ಹಸುವಿನ ಕೊಂಬು ಹಾಗೂ ಸಿಂತೆಟಿಕ್ ವಸ್ತುವಿನಿಂದ ಅಕ್ಕಸಾಲಿಗರಿಂದ ಮಾಡಿಸಿರೋದು. ಹುಲಿ ಉಗುರು ಅಷ್ಟೇನಾ, ಆನೆ ಕೂದಲೂ ಕಾಣಲ್ವಾ? ಆನೇ ಕೂದಲು, ಹುಲಿ ಉಂಗುರು ಎಂದು ನಾವು ಮಾರುತ್ತಿರುವುದು ಕಪ್ಪು ಪ್ಲಾಸ್ಟಿಕ್ ಪೈಪ್ ಪ್ರಾಣಿಗಳ ಬಗ್ಗೆ ಅಷ್ಟೊಂದು ಕಾಳಜಿ ಇದ್ರೆ ಮೊದಲು ಜನರಲ್ಲಿ ಜಾಗೃತಿ ಮೂಡಿಸಿ ಎಂದರು.

ಅರ್ಚಕರು, ರಾಜಕೀಯ ವ್ಯಕ್ತಿಗಳು, ಸಿನಿ ತಾರೆಯರ ಮೇಲೆ ದಾಳಿ ಮಾಡೋದು ಬಿಡಿ. ನಿಜ್ವಾಗ್ಲೂ ಯಾರ ಬಳಿ ಇದೆ ಅಂಥವರಿಗೆ ವಾಪಾಸ್ ಕೊಡೋಕೆ 2 ತಿಂಗಳು ಟೈಮ್ ಕೊಡಿ. ಅದನ್ನು ಬಿಟ್ಟು ಒಡವೆ ಅಂಗಡಿಗಳ ಮೇಲೆ ದಾಳಿ ಮಾಡಿ, ದಬ್ಬಾಳಿಕೆ ಮಾಡೋದು ಸರಿಯಲ್ಲ. ಹೀಗೆ ಮುಂದುವರಿದರೆ ನಾವು ಪ್ರತಿಭಟನೆಗೆ ಮುಂದಾಗ್ತಿವಿ ಎಂದು ಶರವಣ ಎಚ್ಚರಿಕೆ ನೀಡಿದರು.

ತುಮಕೂರಿನ ವಿಶ್ವಾಸ ಜ್ಯುಯಲರ್ಸ್ ಮೇಲೆ ನಿನ್ನೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲಿ ಮಾಲೀಕ ಇಲ್ಲದ ಕಾರಣಕ್ಕೆ, ಅವರ ಮನೆಗೆ ಕಳ್ಳನ ರೀತಿ ಹುಡುಕಿಕೊಂಡು ಹೋಗಿದ್ದಾರೆ. ನೋಟಿಸ್ ಕೊಟ್ಟು ತಪಾಸಣೆ ಬನ್ನಿ, ಬೇಡ ಅನ್ನಲ್ಲ. ಸರ್ಕಾರ ನೆಡೆಸುವ ಮಂತ್ರಿಗಳು ಮೊದಲು ಸರಿ ಇದ್ದಾರಾ ನೋಡಿಕೊಳ್ಳಿ. ಚಿಕ್ಕವರಿಗೆ ಒಂದು ನ್ಯಾಯ, ದೊಡ್ಡವರಿಗೆ ಮತ್ತೊಂದು ನ್ಯಾಯಾನಾ? ಕುಮಾರಸ್ವಾಮಿಯವರ ಮನೆಯಲ್ಲಿ ಇದ್ದ ಲಾಕೆಟ್ ನಕಲಿ. ಅದನ್ನು ನಾನೇ ಪರಿಶೀಲಿಸಿ ಅಧಿಕಾರಿಗಳಿಗೆ ಒಪ್ಪಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

lokesh

Recent Posts

ಗುಂಡ್ಲುಪೇಟೆ | ಉಪಟಳ ನೀಡುತಿದ್ದ ಹುಲಿ ಸೆರೆ ; ಮತ್ತೊಂದು ದರ್ಶನ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…

10 hours ago

ಬೆಳ್ತಂಗಡಿ | ಮಹೇಶ್‌ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು

ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…

11 hours ago

ಲೋಕಸಭೆ | ವಿಭಾ ಜಿರಾಮ್‌ ಮಸೂದೆ ಅಂಗೀಕಾಋ : ಪ್ರತಿಪಕ್ಷಗಳಿಂದ ಪ್ರತಿ ಹರಿದು ಆಕ್ರೋಶ

ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…

11 hours ago

ಸಿಎಂ ಕುಟುಂಬ ನಿವೇಶನ ಪಡೆದ ಪ್ರಕರಣ : ಡಿ.23ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಈಗ ಎಂಡಿಎ)ದಿಂದ ಕಾನೂನು ಬಾಹಿರವಾಗಿ…

11 hours ago

ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ : ಉಭಯ ದೇಶಗಳಿಗೂ ಶಕ್ತಿ ; ಮೋದಿ ಬಣ್ಣನೆ

ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ…

12 hours ago

ನೇಮಕಾತಿ ವಿಳಂಬ | ಪ್ರತಿಧ್ವನಿಸಿದ ಪ್ರತಿಭಟನೆಗಳು

ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್.ಅಶೋಕ್…

12 hours ago