ರಾಜ್ಯ

ಅದೇ ಆನೆ ಕೊಡಿ, ಪಳಗಿಸಿ ಅಂಬಾರಿ ಹೊರಿಸುತ್ತೇನೆ : ಮಾವುತ ವಿನು

ಹಾಸನ: ಮಾವುತ ವಿನು, ಕುಟುಂಬದವರನ್ನು ಬಿಟ್ಟು ಆನೆಯ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದುದು. ಈಗಷ್ಟೇ ಸಾವಿನ ನೋವಿನಿಂದ ಹೊರಬರುತ್ತಿರುವ ವಿನು ಸಂದರ್ಶನವೊಂದರಲ್ಲಿ ಚಿನ್ನನೆ ಹೋದ ಮೇಲೆ ಬಹಳ ನೋವಾಯಿತು. ಆದರೀಗ ಸ್ವಲ್ಪ ಪರವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಮಾವುತ ವಿನುಗೆ ಅರ್ಜುನನ್ನು ಕಳೆದುಕೊಂಡ ದುಃಖದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅರ್ಜುನ ಆನೆಯ 11ನೇ ದಿನದ ಪುಣ್ಯಸ್ಮರಣೆ ದಿನದಂದು ಕೂಡ ವಿನು ಕಣ್ಣೀರು ಹಾಕತ್ತಲೇ ಅರ್ಜುನನ ಸಮಾಧಿ ಬಳಿ ಬಂದು ‘ಅಪ್ಪಾ ನನ್ನ ಸ್ವಾಮಿಯನ್ನು ಏಳಸಪ್ಪಾ, ಎದ್ದೇಳಸಪ್ಪಾ…’ ಎಂದು ಬೇಡಿಕೊಳ್ಳುತ್ತಿದ್ದರು.

ಹಾಗೆಯೇ ಯಾರೂ ಏನೂ ನೋವು ಮಾಡಿಕೊಳ್ಳಬೇಡಿ ಎಂದು ವಿನು ನಾಡಿನ ಜನತೆಯ ಬಳಿ ಮನವಿ ಮಾಡಿಕೊಂಡಿದ್ದಾರೆ. ಬೇಕಾದರೆ ಬಳ್ಳೆಯಲ್ಲಿ ಗೋರಿ ತರಹ ಏನಾದರೂ ಮಾಡೋಣ ಎಲ್ಲರೂ ಬಂದು ಅದರ ಆಶೀರ್ವಾದ ಪಡೆದುಹೋಗಿ ಎಂದಿದ್ದಾರೆ.

ನಾಡಿನ ಜನತೆಗೆ ಕಾಡುತ್ತಿರುವ ಪ್ರಶ್ನೆಯೆಂದರೆ ವಿನು ಅವರು ಮಂದೆ ಏನು ಮಾಡುತ್ತಾರೆ? ಅಂತ. ಅವರ ತಂದೆ ಜಮೀನ್ದಾರ ಆಗು ಅಂತ ಮೊದಲಿನಿಂದಲೂ ಹೇಳುತ್ತಿದ್ದಾರೆ. ಆದರೆ ವಿನು ಅವರು ಮಾತ್ರ ಅರ್ಜುನನನ್ನು ಕೊಂದ ಅದೇ ಆನೆ ಕೊಡಿ ಎಂದು ಕೇಳುತ್ತಿದ್ದಾರೆ.

ಹೌದು, ವಿನು ಅದನ್ನು ಪಳಗಿಸಿ ದಸರಾಗೆ ತರುವ ವ್ಯವಸ್ಥೆ ಮಾಡುತ್ತೇನೆ. ದಸರಾಗೆ ಬಂದು ಅದು ಕೂಡ ಅಂಬಾರಿ ಹೊರಬೇಕು. ಆ ತರಹ ವ್ಯವಸ್ಥೆ ಮಾಡುತ್ತೇನೆ. ಕಣ್ಣ ಮುಂದೆಯೇ ಹೊಡೆದಾಡಿದ್ದು ಕಣ್ಣಿಗೆ ಕಟ್ಟಿದಂತಿದೆ. ನನಗೆ ಅದೇ ಆನೆ ಬೇಕು. ನಾನು ಅದನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

andolanait

Recent Posts

ಕೃಷಿ ಕ್ಷೇತ್ರ ಅಭಿವೃದ್ಧಿ ಅಪರಿಮಿತ ಸಾಧನೆ : ಸಚಿವ ಎನ್ ಚಲುವರಾಯಸ್ವಾಮಿ

ಬೆಂಗಳೂರು : ಕೃಷಿ ಕ್ಷೇತ್ರದ ಅಭಿವೃದ್ಧಿ-ರೈತರ ಕಲ್ಯಾಣದಲ್ಲಿ ಕರ್ನಾಟಕ ದೇಶದಲ್ಲೆ ಅತಿ ಹೆಚ್ಚಿನ ಸಾಧನೆ ಮಾಡಿದ ರಾಜ್ಯವಾಗಿದ್ದು, ಬೆಳೆ ವಿಮೆಯಲ್ಲಿ…

4 hours ago

ವಿದೇಶಿ ಉದ್ಯೋಗ ಆಮಿಷ : ವಿದ್ಯಾರ್ಥಿಗೆ 1.80 ಕೋಟಿ ವಂಚನೆ!

ಮೈಸೂರು : ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿ ಕೆರಳ ಮೂಲದ ಇಬ್ಬರು ದುಷ್ಕರ್ಮಿಗಳು ನಗರದ ವಿದ್ಯಾರ್ಥಿಯೋರ್ವನಿಗೆ 1.80 ಕೋಟಿ…

4 hours ago

ಟಿ20 ವಿಶ್ವಕಪ್ 2026 : ಕಣದಲ್ಲಿವೆ 20 ತಂಡಗಳು

ಕೊಲಂಬೊ : ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಹತ್ತನೇ ಆವೃತ್ತಿ ನಾಳೆ (ಫೆಬ್ರವರಿ 7) ಭಾರತ ಮತ್ತು ಶ್ರೀಲಂಕಾ…

5 hours ago

ಅರಣ್ಯ ಭೂಮಿಯಲ್ಲಿ ನಿಯಮ ಬಾಹಿರ ರೆಸಾರ್ಟ್ ನಿರ್ಮಿಸಿದರೆ ನಿರ್ದಾಕ್ಷಿಣ್ಯ ಕ್ರಮ : ನಿತೇಶ್‌ ಪಾಟೀಲ್‌ ಎಚ್ಚರಿಕೆ

ಚಾಮರಾಜನಗರ : ಅರಣ್ಯ ಭೂಮಿಯಲ್ಲಿ ನಿಯಮಬಾಹಿರವಾಗಿ ರೆಸಾರ್ಟ್, ಹೋಂ ಸ್ಟೇ, ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು…

5 hours ago

ಉದ್ಯಮಿ ಅರವಿಂದ್‌ ರೆಡ್ಡಿಗೆ ಕೊಲೆ ಬೆದರಿಕೆ ; ಆರೋಪಿ ಬಂಧನ

ಬೆಂಗಳೂರು : ವಿಆರ್ ಗ್ರೂಪ್‌ನ ಸಂಸ್ಥಾಪಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಅವರಿಗೆ ಕೊಲೆ ಬೆದರಿಕೆ…

6 hours ago

ಯತೀಂದ್ರ ನಮ್ಮ ಹೈಕಮಾಂಡ್‌, ಅವರು ಹೇಳಿದ ಮೇಲೆ ಇನ್ನೇನಿದೆ : ಡಿಸಿಎಂ ಡಿಕೆಶಿ

ಮಂಗಳೂರು : ಯತೀಂದ್ರ ಸಿದ್ದರಾಮಯ್ಯ ಅವರೇ ಈಗ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಮುಗಿಯಿತು. ಈ ಬಗ್ಗೆ ನನಗೆ…

7 hours ago