ಬೆಂಗಳೂರು : ನವೋದ್ಯಮಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಜಾರಿಗೆ ತಂದಿರುವ ಎಲಿವೇಟ್ ಸಹಾಯಧನ ಕಾರ್ಯಕ್ರಮದ ನೆರವು ಪಡೆದ ಬೆಂಗಳೂರು ಮೂಲದ ಏರೋಸ್ಪೇಸ್ ಕಂಪೆನಿಯೊಂದು AI-ಸ್ಥಳೀಯ ರೇಡಿಯೋ ಆವರ್ತನ ಉಪಗ್ರಹ ಮೂಲಸೌಕರ್ಯವನ್ನು ನಿರ್ಮಿಸಲು $2.5 ಮಿಲಿಯನ್ ಪ್ರೀ ಸೀಡ್ ಫಂಡ್ ಸಂಗ್ರಹಿಸಿದೆ.
ಎಲಿವೇಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಧನಸಹಾಯ ಪಡೆಯಲು ಅರ್ಹತೆ ಪಡೆದ ವಿಜೇತ ಕಂಪೆನಿಗಳು ಯಶಸ್ಸಿನೆಡೆಗೆ ಉನ್ನತಿಯನ್ನು ಸಾಧಿಸುತ್ತಿರುವುದು ತಮಗೆ ಸಂತೋಷ ತಮದಿದೆ, ವಿನೂತನ ಚಿಂತನೆಗಳನ್ನು ಹೊಂದಿದ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ನಮ್ಮ ಯೋಜನೆಗೆ ಇದು ಸಾರ್ಥಕತೆಯನ್ನು ತಂದುಕೊಟ್ಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಎಲಿವೇಟ್ ಕಾರ್ಯಕ್ರಮದ ಮೂಲಕ ಆರಂಭದ ದಿನಗಳಲ್ಲಿ ಸರ್ಕಾರದ ಬೆಂಬಲ ಪಡೆದ ಹಲವು ನವೋದ್ಯಮಗಳು ಯಶಸ್ಸನ್ನು ಸಾಧಿಸಿ ಇಂದು ದೊಡ್ಡ ಕಂಪೆನಿಗಳಾಗಿ ಹೊರಹೊಮ್ಮಿವೆ ಎಂದು ಮಾಹಿತಿ ಹಂಚಿಕೊಂಡಿರುವ ಸಚಿವರು ಕ್ಸೋವಿಯನ್ ಏರೋಸ್ಪೇಸ್ (@XovianAero), AI-ಸ್ಥಳೀಯ ರೇಡಿಯೋ ಆವರ್ತನ ಉಪಗ್ರಹ ಮೂಲಸೌಕರ್ಯವನ್ನು ನಿರ್ಮಿಸಲು ಪೂರ್ವ-ಬೀಜ ನಿಧಿಯಲ್ಲಿ $2.5 ಮಿಲಿಯನ್ ಸಂಗ್ರಹಿಸಿದೆ, ಚಿತ್ರಣದ ಮೇಲೆ ಮಾತ್ರ ಕೇಂದ್ರೀಕರಿಸುವ ಪರಂಪರೆಯ ಉಪಗ್ರಹಗಳಿಗಿಂತ ಭಿನ್ನವಾಗಿ, ಕ್ಸೋವಿಯನ್ನ ವ್ಯವಸ್ಥೆಯು ಸಂಪೂರ್ಣ ರೇಡಿಯೋ ಸ್ಪೆಕ್ಟ್ರಮ್ ಅನ್ನು ಸೆರೆಹಿಡಿಯುತ್ತದೆ, ಸಮುದ್ರ, ವಾಯುಯಾನ, BFSI, ರಕ್ಷಣಾ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದಂತಹ ಕ್ಷೇತ್ರಗಳಿಗೆ ನೈಜ-ಸಮಯದ ಬುದ್ಧಿಮತ್ತೆಯನ್ನು ಸಕ್ರಿಯಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ, ಕರ್ನಾಟಕವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ತನ್ನ ನಾಯಕತ್ವವನ್ನು ಸ್ಥಿರವಾಗಿ ನಿರ್ಮಿಸಿದೆ ಮತ್ತು ಕ್ಸೋವಿಯನ್ನಂತಹ ಸ್ಟಾರ್ಟ್ಅಪ್ಗಳು ಆ ನಾಯಕತ್ವವನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪರಿಷತ್ ಚುನಾವಣೆ ಫಲಿತಾಂಶದ ಮೂಲಕ ಭಿನ್ನಮತೀಯರು, ಮೈತ್ರಿ ಕೂಟಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಡಿಕೆಶಿ ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು…
ಅಡ್ಡ ಮತದಾನ ಮಾಡಿ ‘ಆತ್ಮ ಸಾಕ್ಷಿ’ಯೆಂಬ ತಡೆಗೋಡೆಯ ರಕ್ಷಣೆ ಪಡೆದಿರುವ ಶಾಸಕರ ಪತ್ತೆಗೆ ‘ಸತ್ಯಶೋಧನೆ’, ‘ಆಣೆ-ಪ್ರಮಾಣ’ಗಳೆಲ್ಲವೂ ಗುಡ್ಡ ಅಗೆದು ಇಲಿ…
ಹೊಸದಿಲ್ಲಿ : ದೇಶದಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಮರುಪರೀಕ್ಷೆಯಲ್ಲಿ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ದೇಶದ…
ಚೆನ್ನೆ : ಇಲ್ಲಿನ ತಿರುವಳ್ಳೂರಿನಲ್ಲಿರುವ ಸೀಗಡಿ ಸಂಸ್ಕರಣಾ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಅಮೋನಿಯಾ ಅನಿಲ ಸೋರಿಕೆಯಾಗಿ, ಏಳು ಮಂದಿ ಮಹಿಳಾ…
ಆಧಾರ್ ಕಾರ್ಡ್ ಪರಿಶೀಲನೆ ನಂತರ ಶಂಕೆ ನಿವಾರಣೆ ಮೈಸೂರು : ಪಶ್ಚಿಮ ಬಂಗಾಳದಿಂದ ಬಂದವರನ್ನು ಬಾಂಗ್ಲಾ ದೇಶದ ನಿವಾಸಿಗಳೆಂದು ತಿಳಿದ…