ರಾಜ್ಯ

ರೈತ ಉತ್ಪಾದಕ ಸಂಸ್ಥೆಗಳ ಬಾಕಿ ಅನುದಾನ ಶೀಘ್ರ ಬಿಡುಗಡೆ: ಎನ್.ಚಲುವರಾಯಸ್ವಾಮಿ

ಬೆಳಗಾವಿ: ರಾಜ್ಯದಲ್ಲಿ ಜಲಾನಯನ ಇಲಾಖೆ ವತಿಯಿಂದ ಸ್ಥಾಪಿಸಲಾಗಿರುವ ಅಮೃತ ರೈತ ಉತ್ಪಾದಕ ಸಂಸ್ಥೆಗಳಿಗೆ ಬಾಕಿ ಇರುವ ಅನುದಾನವನ್ನು ಆದಷ್ಟು ಶೀಘ್ರ ಒದಗಿಸುವುದಾಗಿ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸಭೆ ಸದಸ್ಯ ಅರಗ ಜ್ಞಾನೇಂದ್ರ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗಧಿಪಡಿಸಿದ ಅನುದಾನ ಪೂರ್ಣವಾಗಿ ಬಿಡುಗಡೆಯಾಗದೇ ಕೊರತೆ ಉಂಟಾಗಿದೆ. ಆದರೆ ನಮ್ಮ ಸರ್ಕಾರ ರೈತ ಪರವಾಗಿದ್ದು, ಆದಷ್ಟು ಹೆಚ್ಚಿನ ಅನುದಾನವನ್ನು ಈ ವರ್ಷದ ಹಣಕಾಸು ವರ್ಷದಲ್ಲೇ ಬಿಡುಗಡೆ ಮಾಡಲಾಗುವುದು. ಉಳಿಕೆ ಹಣವನ್ನು ಮುಂದಿನ ಹಣಕಾಸಿನ ವರ್ಷದಲ್ಲಿ ಹೊಂದಾಣಿಕೆ ಮಾಡಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಅಮೃತ ರೈತ ಉತ್ಪಾದಕರ ಸಂಸ್ಥೆ ಯೋಜನೆಯಡಿ ಬೇಡಿಕೆ ಮತ್ತು ಬಿಡುಗಡೆಯಾದ ಅನುದಾನದ ವಿವರಗಳು

2021-22
ಒಟ್ಟು ಗುರಿ 750 ಎಫ್.ಪಿ.ಒ ಅನುದಾನದ ಗುರಿ 225 ಕೋಟಿಗಳು
ರಚನೆಯಾದ ಎಫ್.ಪಿ.ಒ 330 ಸಂಖ್ಯೆ
ಪ್ರಥಮ ವರ್ಷಕ್ಕೆ ಬೇಕಾದ ಅನುದಾನ 330*8.75 ಲಕ್ಷಗಳು = 28.88 ಕೋಟಿಗಳು
ಬಿಡುಗಡೆಯಾದ ಅನುದಾನ 10.35 ಕೋಟಿಗಳು
ಬಾಕಿ 18.53 ಕೋಟಿಗಳು

2022-23
ಕಳೆದ ವರ್ಷ 2021-22ರ ಬಾಕಿ 18.53 ಕೋಟಿಗಳು
ಕಳೆದ ವರ್ಷ ರಚಿಸಿದ (2021-22) 330 ಸಂಘಗಳ 2ನೇ ವರ್ಷದ ಬೇಡಿಕೆ 330*12.09 ಲಕ್ಷಗಳು = 39.89 ಕೋಟಿಗಳು
2022-23ನೇ ಸಾಲಿನಲ್ಲಿ ರಚನೆಯಾದ 156 ಸಂಘಗಳ ಮೊದಲನೇ ವರ್ಷದ ಬೇಡಿಕೆ 156*8.75 ಲಕ್ಷಗಳು = 13.65 ಕೋಟಿಗಳು
2021-22ನೇ ಸಾಲು ಸೇರಿದಂದ 2022-23ನೇ ಸಾಲಿಗೆ ಬೇಕಾದ ಒಟ್ಟು ಅನುದಾನ 72.07 ಕೋಟಿಗಳು
ಬಿಡುಗಡೆಯಾದ ಅನುದಾನ 33.98 ಕೋಟಿಗಳು
ಬಾಕಿ ಅನುದಾನ 38.98 ಕೋಟಿಗಳು

2023-24 (ಯಾವುದೇ ಹೊಸ ಸಂಘ ರಚನೆಯಾಗಿರುವುದಿಲ್ಲ)
ಕಳೆದ ವರ್ಷ 2022-23ರ ಬಾಕಿ 38.98 ಕೋಟಿಗಳು
2021-22ನೇ ಸಾಲಿನಲ್ಲಿ ರಚಿಸಿದ 330 ಸಂಘಗಳ 3ನೇ ವರ್ಷದ ಅನುದಾನ ಬೇಡಿಕೆ 330*9.16 ಲಕ್ಷಗಳು = 30.22 ಕೋಟಿಗಳು
2022-23ನೇ ಸಾಲಿನಲ್ಲಿ ರಚಿಸಿದ 156 ಸಂಘಗಳ 2ನೇ ವರ್ಷದ ಬೇಡಿಕೆ 156*12.09 ಲಕ್ಷಗಳು = 18.86 ಕೋಟಿಗಳು
2023-24ನೇ ಸಾಲಿನ ಒಟ್ಟು ಬೇಡಿಕೆ 88.16 ಕೋಟಿಗಳು
ಬಿಡುಗಡೆಯಾದ ಅನುದಾನ 4.0 ಕೋಟಿಗಳು
ಬಾಕಿ 84.16 ಕೋಟಿಗಳು

2024-25
ಕಳೆದ ವರ್ಷದ ಬಾಕಿ(2023-24) 84.16 ಕೋಟಿಗಳು
2022-23ನೇ ಸಾಲಿನಲ್ಲಿ ರಚಿಸಿದ 156 ಸಂಘಗಳ 3ನೇ ವರ್ಷದ ಅನುದಾನ ಬೇಡಿಕೆ 156*9.16 ಲಕ್ಷಗಳು = 14.28 ಕೋಟಿಗಳು
ಒಟ್ಟು ಬೇಡಿಕೆ 98.44 ಕೋಟಿಗಳು
ಬಿಡುಗಡೆ 1.16 ಕೋಟಿಗಳು
ಬಾಕಿ 97.28 ಕೋಟಿಗಳು

97.28 ಕೋಟಿಗಳ ಬಾಕಿ ಬೇಡಿಕೆಯಲ್ಲಿ 2024-25ನೇ ಸಾಲಿಗೆ ರೂ.54 ಕೋಟಿಗಳ ಅನುದಾನ ಬೇಡಿಕೆಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ.

ಉಳಿದ ಬಾಕಿ ಬೇಡಿಕೆ ರೂ.43 ಕೋಟಿಗಳನ್ನು ಮುಂದಿನ ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ಅಂತಿಮವಾಗಿ ಪಡೆದು ಸಂಘಗಳ ಪ್ರಗತಿಯನ್ನು ಪರಿಶೀಲಿಸಿ ವೆಚ್ಚ ಭರಿಸಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದರು

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

9 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

9 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

9 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

9 hours ago

ಪಕ್ಕದಲ್ಲೇ ನದಿಯಿದ್ದರೂ ಚಿಕ್ಕಮಂದಗೆರೆ ಗ್ರಾಮಕ್ಕಿಲ್ಲ ನೀರು!

ಮಹೇಶ್ ಕರೋಟಿ ಹೇಮಾವತಿ ನದಿ ದಡದಲ್ಲೇ ನೀರಿಗಾಗಿ ಹಾಹಾಕಾರ ಕಿಕ್ಕೇರಿ: ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಂದಗೆರೆ ಗ್ರಾಮವು ಹೇಮಾವತಿ…

9 hours ago

ಕೊಡಗಿನಲ್ಲಿ1,20,874 ಮಕ್ಕಳಿಗೆ ಮಾತ್ರೆ ವಿತರಣೆ ಗುರಿ

ನವೀನ್ ಡಿಸೋಜ ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಜಂತುಹುಳು ಬಾಧೆ ತಡೆಗೆ ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆ ಮಡಿಕೇರಿ:…

9 hours ago