dk suresh verbal attack on munirathna
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲೆಗಳ ಸಮೇತ ಮಂಗಳವಾರ ಮಾತನಾಡುವುದಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ (D.K Suresh) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಸವಾಲ್ ಹಾಕಿರುವುದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದರು.
ಅವನು ಎಂಥಾ ಚೆಂಗ್ಲು ಅಂತ ಗೊತ್ತಿದ್ಯಾ? ನಾನು ದಾಖಲೆ ಸಮೇತ ಬಿಡುಗಡೆ ಮಾತನಾಡುತ್ತೇನೆ. ಆಸಿಡ್ ಮೊಟ್ಟೆ ತಲೆಗೆ ಬಿದ್ದು ಮೆಂಟಲ್ ಆಗಿದ್ದಾನೆ, ಏನೇನೊ ಮಾತನಾಡುತ್ತಿದ್ದಾನೆ ಎಂದು ಲೇವಡಿ ಮಾಡಿದರು.
ಆಸಿಡ್ ಮೊಟ್ಟೆ ಅವರ ತಲೆ ಮೇಲೆ ಬಿದ್ದಿದೆ. ಅದಕ್ಕೆ ಅವರಿಗೆ ಆ ರೀತಿ ಆಗಿದೆ ಎಂದು ವೈದ್ಯರು ಅವತ್ತೆ ಹೇಳಿದ್ರಲ್ಲ ಎಂದು ಸಂಸದ ಡಾ.ಮಂಜುನಾಥ್ ಹೆಸರು ಹೇಳದೆ ಪರೋಕ್ಷವಾಗಿ ಡಿ.ಕೆ.ಸುರೇಶ್ ವ್ಯಂಗ್ಯವಾಡಿದರು.
ರಾಜ್ಯದ ಹುಚ್ಚು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೆ ಸರಿ ಹೋಗಲ್ಲ. ಕೇಂದ್ರದ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದರು.
ರಾಜ್ಯಪಾಲರು, ರಾಷ್ಟ್ರಪತಿ ಎಲ್ಲರಿಗೂ ದೂರು ಕೊಡ್ತಾರಲ್ಲ. ಪ್ರಧಾನಿ ಸಾಮಾನ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಾರಾ, ಇಲ್ಲ ಮುನಿರತ್ನಗೆ ಪ್ರಧಾನಿ ಚಿಕಿತ್ಸೆ ಪಡೆಯುವ ಆಸ್ಪತ್ರೆಯಲ್ಲಿ ಟ್ರೀಟೆಂಟ್ ಕೊಡಿಸಬೇಕು. ದೆಹಲಿಯ ಏಮ್ಸೌನಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದರು.
ಮುನಿರತ್ನ ವಿರುದ್ಧ ಬಳಕೆ ಮಾಡಲು ಚಂಗ್ಲು ಪದಕ್ಕಿಂದ ಬೇರೆ ಏನಾದರೂ ಇದೆಯೇ ಹೇಳಿ ಎಂದು ಪ್ರಶ್ನಿಸಿದ ಸುರೇಶ್, ಆ ಪದವನ್ನೇ ಬಳಸಿ ಅವನಿಗೆ ಛೀಮಾರಿ ಹಾಕುತ್ತೇನೆ. ಈಗ ಮಾತನಾಡುವುದಿಲ್ಲ ಎಂದರು.
ಜಾತಿ ಜನಗಣತಿ ವರದಿಯನ್ನು ನಾನು ಪೂರ್ಣವಾಗಿ ವರದಿಯನ್ನ ನೋಡಿಲ್ಲ, ಅಂಕಿ ಅಂಶಗಳನ್ನ ನೋಡಿ ಮಾತನಾಡುತ್ತೇನೆ. ಮಂಗಳವಾರ ಈ ಬಗ್ಗೆ ಮಾತಾಡುತ್ತೇನೆ ಎಂದರು.
ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…
ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…
ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…
ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…
ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…