ಕ್ರೀಡೆ

ವಿಮಾನದಲ್ಲಿ ಅಸ್ವಸ್ಥಗೊಂಡ ಮಯಾಂಕ್‌ ಪಾರಾಗಿದ್ದು ಹೇಗೆ? ಪೊಲೀಸ್‌ ದೂರು ದಾಖಲಿಸಿದ ಕ್ರಿಕೆಟಿಗ

ನಿನ್ನೆ ( ಜನವರಿ 30 ) ಅಗರ್ತಲದಿಂದ ಗುಜರಾತ್‌ನ ಸೂರತ್‌ಗೆ ತೆರಳಲು ವಿಮಾನ ಏರಿದ್ದ ಕ್ರಿಕೆಟಿಗ ಮಯಾಂಕ್‌ ಅಗರ್ವಾಲ್‌ ನೀರು ಸೇವನೆಯಿಂದ ಅಸ್ವಸ್ಥಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಪಟ್ಟಿದ್ದ ಮಯಾಂಕ್ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮ್ಯಾನೇಜರ್‌ ಮೂಲಕ ಎನ್‌ಸಿಸಿಪಿಎಸ್‌ ಠಾಣೆಯಲ್ಲಿ ಪೊಲೀಸ್‌ ದೂರನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಮಯಾಂಕ್‌ ಅಗರ್ವಾಲ್‌ ಅಪಾಯದಿಂದ ಪಾರಾಗಿದ್ದು ಎರಡರಿಂದ ಮೂರು ದಿನಗಳ ಕಾಲ ಮಾತನಾಡಲಾಗುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಮುಂದಿನ ಒಂದು ಪಂದ್ಯವನ್ನು ಮಯಾಂಕ್‌ ಆಡುವುದು ಅನುಮಾನವಾಗಿದೆ.

ಏನಿದು ಪ್ರಕರಣ?

ತ್ರಿಪುರ ವಿರುದ್ಧದ ಪಂದ್ಯದಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದ ಮಯಾಂಕ್‌ ಅಗರ್ವಾಲ್‌ ಫೆಬ್ರವರಿ 2ರಿಂದ ಆರಂಭವಾಗಲಿರುವ ರೈಲ್ವೆ ವಿರುದ್ಧ ಮುಂದಿನ ಪಂದ್ಯವನ್ನು ಆಡಲು ಗುಜರಾತ್‌ನ ಸೂರತ್‌ಗೆ ವಿಮಾನದಲ್ಲಿ ನಿನ್ನೆ ( ಜನವರಿ 30 ) ಪ್ರಯಾಣ ಕೈಗೊಂಡಿದ್ದರು.

ಈ ವೇಳೆ ಮಯಾಂಕ್‌ ಅಗರ್ವಾಲ್‌ ತಮ್ಮ ಸೀಟಿನ ಮುಂಭಾಗ ಇದ್ದ ಬಾಟಲ್‌ನಲ್ಲಿದ್ದ ನೀರನ್ನು ಕುಡಿದಿದ್ದರು. ಕೂಡಲೇ ನಾಲಿಗೆ, ಬಾಯಿ ಹಾಗೂ ಕೆನ್ನೆ ಸುಟ್ಟು ಹೋದ ಅನುಭವವಾದ ಮಯಾಂಕ್‌ ಅಗರ್ವಾಲ್‌ ಅವರನ್ನು ಅಗರ್ತಲದ ಎಎಲ್‌ಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನು ಮಯಾಂಕ್‌ ಅಗರ್ವಾಲ್‌ ಕುಡಿದಿದ್ದ ಬಾಟಲ್‌ನಲ್ಲಿ ಇದ್ದದ್ದು ನೀರಲ್ಲ ಆಸಿಡ್‌ ಎಂಬ ಅನುಮಾನಗಳೂ ಸಹ ವ್ಯಕ್ತವಾಗಿದ್ದವು.

ಘಟನೆ ವಿವರಿಸಿದ ಮ್ಯಾನೇಜರ್‌

“ವಿಮಾನ ಹತ್ತಿ ಹೊರಡುವ ಮುನ್ನ ಮಯಾಂಕ್‌ಗೆ ಬಾಯಾರಿಕೆಯಾಯಿತು. ಹಾಗಾಗಿ ಮುಂದಿನ ಸೀಟ್ ಪಾಕೆಟ್ ಹಿಂದೆ ಇಟ್ಟಿದ್ದ ನೀರು ಕುಡಿದರು. ಕೆಲವು ನಿಮಿಷಗಳ ನಂತರ ಗಂಟಲು ತುರಿಕೆಯಾಗುತ್ತಿದೆ, ವಾಂತಿ ಬರುವ ಹಾಗೆ ಆಗುತ್ತಿದೆ ಎಂದು ಹೇಳಿ ವಾಷ್‌ರೂಮ್‌ ಕಡೆ ಓಡಿ ಹೋದರು ಹಾಗೂ ಗಗನಸಖಿಯರಿಗೆ ಈ ಕುರಿತು ವಿಷಯ ತಿಳಿಸಿದರು. ಬಳಿಕ ವಿಮಾನದಲ್ಲಿ ವೈದ್ಯರು ಇದ್ದಾರಾ ಎಂದು ಗಗನಸಖಿಯರು ತುರ್ತು ಕರೆ ನೀಡಿ ವಿಚಾರಿಸಿದರು. ದುರಾದೃಷ್ಟವಷಾತ್‌ ವಿಮಾನದಲ್ಲಿ ವೈದ್ಯರಿಲ್ಲದ ಕಾರಣ ನಿಲ್ದಾಣ ಆಡಳಿತಕ್ಕೆ ಮಾಹಿತಿ ನೀಡಲಾಯಿತು. ಬಳಿಕ ಬಂದ ವೈದ್ಯರು ಮಯಾಂಕ್‌ ಪರಿಸ್ಥಿತಿ ನೋಡಿ ಇಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುವುದಿಲ್ಲ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕು ಎಂದು ಹೇಳಿದರು. ನಂತರ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡು ಆಸ್ಪತ್ರೆಗೆ ಕರೆದೊಯ್ದೆವು” ಎಂದು ಕರ್ನಾಟಕ ತಂಡದ ಮ್ಯಾನೇಜರ್‌ ಇಂಡಿಯಾ ಟುಡೇ ಜತೆ ಮಾತನಾಡಿ ತಿಳಿಸಿದರು.

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

9 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

10 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

11 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago