ಕ್ರೀಡೆ

ನಮ್ಮದು ಉತ್ತಮ ತಂಡವಲ್ಲ, ಪ್ಲೇ ಆಫ್ ಆಡಲು ನಾವು ಅರ್ಹರಲ್ಲ: ಆರ್ ಸಿಬಿ ನಾಯಕ ಫಾಫ್‌

ಬೆಂಗಳೂರು: 2023ರ ಐಪಿಎಲ್ ಕೂಟದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿರ್ಗಮಿಸಿದೆ. ಸತತ ಮೂರು ಬಾರಿ ಪ್ಲೇ ಆಫ್ ತಲುಪಿದ್ದ ಆರ್ ಸಿಬಿ ಈ ಬಾರಿ ಅಂತಿಮ ಪಂದ್ಯದಲ್ಲಿ ಸೋಲುವ ಮೂಲಕ ಲೀಗ್ ಹಂತದಲ್ಲೇ ಮನೆದಾರಿ ಹಿಡಿದಿದೆ. ಆರ್ ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಈ ಋತುವಿನ ಐಪಿಎಲ್‌ನಲ್ಲಿನ ತನ್ನ ತಂಡದ ಪ್ರದರ್ಶನದ ಬಗ್ಗೆ ವಿಮರ್ಶಾತ್ಮಕ ಮೌಲ್ಯಮಾಪನ ಮಾಡಿದ್ದು “ಕೂಟದಲ್ಲಿ ನಮ್ಮದು ಅತ್ಯುತ್ತಮ ತಂಡಗಳಲ್ಲಿ ಒಂದಾಗಿರಲಿಲ್ಲ ಮತ್ತು ಪ್ಲೇ ಆಫ್ ತಲುಪುಲು ಅರ್ಹರಾಗಿರಲಿಲ್ಲ” ಎಂದು ಹೇಳಿದರು.

“ನಮ್ಮ ಋತುವು ಅಲ್ಲಿಗೆ ಕೊನೆಗೊಳ್ಳುತ್ತದೆ ಎಂದು ನಾನು ನಿರಾಶೆಗೊಂಡಿದ್ದೇನೆ. ನಾವು ನಮ್ಮ ಬಗ್ಗೆ ಆಳವಾಗಿ ಅವಲೋಕಿಸಿದರೆ, ನಾವು ಸ್ಪರ್ಧೆಯಲ್ಲಿ ಅತ್ಯುತ್ತಮ ತಂಡಗಳಲ್ಲಿ ಒಂದಾಗಿರಲಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ” ಎಂದು ಫಾಫ್ ಹೇಳಿದರು.

ನಾವು ಅದೃಷ್ಟ ಹೊಂದಿದ್ದೆವು, ಹೀಗಾಗಿ ಋತುವಿನ ಉದ್ದಕ್ಕೂ ಕೆಲವು ಉತ್ತಮ ಪ್ರದರ್ಶನಗಳು ಬಂದಿದ್ದವು, ಆದರೆ ಒಟ್ಟಾರೆಯಾಗಿ ತಂಡವಾಗಿ, ನೀವು 15-14 ಪಂದ್ಯಗಳ ಅವಧಿಯನ್ನು ನೋಡಿದರೆ, ನಾವು ಬಹುಶಃ ಪ್ಲೇ ಆಫ್ ನಲ್ಲಿರಲು ಅರ್ಹರಲ್ಲ” ಎಂದು ಆರ್ ಸಿಬಿ ನಾಯಕ ಫಾಫ್ ಹೇಳಿದರು.

ಗುಜರಾತ್ ವಿರುದ್ಧದ ಸೋಲಿನ ಬಗ್ಗೆ ಮಾತನಾಡಿದ ಫಾಫ್, “ಈ ಸೋಲು ಇನ್ನೂ ನೋವುಂಟು ಮಾಡುತ್ತಿದೆ. ನಾವು ಭಾನುವಾರ ರಾತ್ರಿ ನಿಜವಾಗಿಯೂ ಕಷ್ಟಪಟ್ಟು ಪ್ರಯತ್ನಿಸಿದ್ದೇವೆ, ಆದರೆ ದುರದೃಷ್ಟವಶಾತ್ ವಿಫಲವಾದೆವು. ಈ ವರ್ಷದ ನಮ್ಮ ಪಾಸಿಟಿವ್ ಗಳನ್ನು ನೋಡಿದರೆ ಗ್ಲೆನ್ ಮ್ಯಾಕ್ಸ್‌ವೆಲ್ ಆಟ, ನನ್ನ ಮತ್ತು ವಿರಾಟ್ ನಡುವೆ ನಾವು ಹೊಂದಿದ್ದ ಜೊತೆಯಾಟಗಳು. ಬಹುಶಃ ಪ್ರತಿ ಪಂದ್ಯದಲ್ಲೂ 50 ರನ್ ಜೊತೆಯಾಟವಾಡಿದ್ದೆವು. ಮೊಹಮ್ಮದ್ ಸಿರಾಜ್ ಉತ್ತಮ ಸೀಸನ್ ಹೊಂದಿದ್ದರು” ಎಂದರು.

andolanait

Recent Posts

ಮೈಸೂರು: ಕೆಮಿಕಲ್‌ ಘಟಕದ ಮೇಲೆ ದೆಹಲಿ ಪೊಲೀಸರ ದಾಳಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದು, ಕೆಮಿಕಲ್‌ ಘಟಕದಲ್ಲಿ ಲೇಬಲ್ ಇಲ್ಲದ ಖಾಲಿ ಬಾಟಲ್‌ಗಳನ್ನು…

17 mins ago

ಓದುಗರ ಪತ್ರ: ಜಗಕೆ ಮಾದರಿ!

ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…

4 hours ago

ಓದುಗರ ಪತ್ರ: ವಿವೇಕಾನಂದ ಪ್ರತಿಮೆ ಅನಾವರಣಗೊಳಿಸಿ

ಮೈಸೂರಿನ ವಿವೇಕಾನಂದ ನಗರದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಪ್ರತಿಮೆಯನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿದೆ. ಜ.೧೨ರಂದು ಸ್ವಾಮಿ ವಿವೇಕಾನಂದರ…

4 hours ago

ಓದುಗರ ಪತ್ರ: ಮಲ್ಲಯ್ಯನ ಬೆಟ್ಟ ಅಭಿವೃದ್ಧಿಗೊಳಿಸಿ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿರುವ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ (ಮಲ್ಲಯ್ಯನ ಬೆಟ್ಟ) ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ…

4 hours ago

ಓದುಗರ ಪತ್ರ: ಬಸ್ ತಂಗುದಾಣ ನಿರ್ಮಿಸಿ

ಚಾಮರಾಜನಗರದ, ಸಿಂಹ ಚಲನಚಿತ್ರಮಂದಿರದ ಎದುರಿರುವ ಎಲ್‌ಐಸಿ ಕಚೇರಿಯ ಮುಂಭಾಗದಲ್ಲಿ ನಂಜನಗೂಡು-ಮೈಸೂರು ಸೇರಿದಂತೆ ವಿವಿಧ ಮಾರ್ಗಗಳ ಬಸ್‌ಗಳು ಸಂಚರಿಸುತ್ತವೆ. ಈ ಸ್ಥಳದಲ್ಲಿ…

4 hours ago

ಓದುಗರ ಪತ್ರ: ರಥೋತ್ಸವ: ಮುನ್ನೆಚ್ಚರಿಕೆ ಅಗತ್ಯ

ಚಾಮರಾಜನಗರ ಜಿಲ್ಲೆ ಮುಕ್ಕಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಮಾಯಮ್ಮ ದೇವಿ ರಥೋತ್ಸವದ ವೇಳೆ ರಥದ ಚಕ್ರದ ದಂಡ ಮುರಿದ ಪರಿಣಾಮ…

4 hours ago