ಕ್ರೀಡೆ

ನಮ್ಮದು ಉತ್ತಮ ತಂಡವಲ್ಲ, ಪ್ಲೇ ಆಫ್ ಆಡಲು ನಾವು ಅರ್ಹರಲ್ಲ: ಆರ್ ಸಿಬಿ ನಾಯಕ ಫಾಫ್‌

ಬೆಂಗಳೂರು: 2023ರ ಐಪಿಎಲ್ ಕೂಟದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿರ್ಗಮಿಸಿದೆ. ಸತತ ಮೂರು ಬಾರಿ ಪ್ಲೇ ಆಫ್ ತಲುಪಿದ್ದ ಆರ್ ಸಿಬಿ ಈ ಬಾರಿ ಅಂತಿಮ ಪಂದ್ಯದಲ್ಲಿ ಸೋಲುವ ಮೂಲಕ ಲೀಗ್ ಹಂತದಲ್ಲೇ ಮನೆದಾರಿ ಹಿಡಿದಿದೆ. ಆರ್ ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಈ ಋತುವಿನ ಐಪಿಎಲ್‌ನಲ್ಲಿನ ತನ್ನ ತಂಡದ ಪ್ರದರ್ಶನದ ಬಗ್ಗೆ ವಿಮರ್ಶಾತ್ಮಕ ಮೌಲ್ಯಮಾಪನ ಮಾಡಿದ್ದು “ಕೂಟದಲ್ಲಿ ನಮ್ಮದು ಅತ್ಯುತ್ತಮ ತಂಡಗಳಲ್ಲಿ ಒಂದಾಗಿರಲಿಲ್ಲ ಮತ್ತು ಪ್ಲೇ ಆಫ್ ತಲುಪುಲು ಅರ್ಹರಾಗಿರಲಿಲ್ಲ” ಎಂದು ಹೇಳಿದರು.

“ನಮ್ಮ ಋತುವು ಅಲ್ಲಿಗೆ ಕೊನೆಗೊಳ್ಳುತ್ತದೆ ಎಂದು ನಾನು ನಿರಾಶೆಗೊಂಡಿದ್ದೇನೆ. ನಾವು ನಮ್ಮ ಬಗ್ಗೆ ಆಳವಾಗಿ ಅವಲೋಕಿಸಿದರೆ, ನಾವು ಸ್ಪರ್ಧೆಯಲ್ಲಿ ಅತ್ಯುತ್ತಮ ತಂಡಗಳಲ್ಲಿ ಒಂದಾಗಿರಲಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ” ಎಂದು ಫಾಫ್ ಹೇಳಿದರು.

ನಾವು ಅದೃಷ್ಟ ಹೊಂದಿದ್ದೆವು, ಹೀಗಾಗಿ ಋತುವಿನ ಉದ್ದಕ್ಕೂ ಕೆಲವು ಉತ್ತಮ ಪ್ರದರ್ಶನಗಳು ಬಂದಿದ್ದವು, ಆದರೆ ಒಟ್ಟಾರೆಯಾಗಿ ತಂಡವಾಗಿ, ನೀವು 15-14 ಪಂದ್ಯಗಳ ಅವಧಿಯನ್ನು ನೋಡಿದರೆ, ನಾವು ಬಹುಶಃ ಪ್ಲೇ ಆಫ್ ನಲ್ಲಿರಲು ಅರ್ಹರಲ್ಲ” ಎಂದು ಆರ್ ಸಿಬಿ ನಾಯಕ ಫಾಫ್ ಹೇಳಿದರು.

ಗುಜರಾತ್ ವಿರುದ್ಧದ ಸೋಲಿನ ಬಗ್ಗೆ ಮಾತನಾಡಿದ ಫಾಫ್, “ಈ ಸೋಲು ಇನ್ನೂ ನೋವುಂಟು ಮಾಡುತ್ತಿದೆ. ನಾವು ಭಾನುವಾರ ರಾತ್ರಿ ನಿಜವಾಗಿಯೂ ಕಷ್ಟಪಟ್ಟು ಪ್ರಯತ್ನಿಸಿದ್ದೇವೆ, ಆದರೆ ದುರದೃಷ್ಟವಶಾತ್ ವಿಫಲವಾದೆವು. ಈ ವರ್ಷದ ನಮ್ಮ ಪಾಸಿಟಿವ್ ಗಳನ್ನು ನೋಡಿದರೆ ಗ್ಲೆನ್ ಮ್ಯಾಕ್ಸ್‌ವೆಲ್ ಆಟ, ನನ್ನ ಮತ್ತು ವಿರಾಟ್ ನಡುವೆ ನಾವು ಹೊಂದಿದ್ದ ಜೊತೆಯಾಟಗಳು. ಬಹುಶಃ ಪ್ರತಿ ಪಂದ್ಯದಲ್ಲೂ 50 ರನ್ ಜೊತೆಯಾಟವಾಡಿದ್ದೆವು. ಮೊಹಮ್ಮದ್ ಸಿರಾಜ್ ಉತ್ತಮ ಸೀಸನ್ ಹೊಂದಿದ್ದರು” ಎಂದರು.

andolanait

Recent Posts

ಬಂಧನದಲ್ಲಿರುವ ಮುನಿರತ್ನ ಆರೋಗ್ಯದಲ್ಲಿ ದಿಢೀರ್‌ ಏರುಪೇರು: ಜಯದೇವ ಆಸ್ಪತ್ರೆಗೆ ದಾಖಲು

ಬೆಂಗಳೂರು: ಲಂಚ ಬೇಡಿಕೆ, ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ…

1 hour ago

ದಸರಾ ಚಲನಚಿತ್ರೋತ್ಸವ- 2024| ಉತ್ತಮ ಕಿರುಚಿತ್ರ ಆಯ್ಕೆಗೆ ಪರಿಣಿತರಿಂದ ವೀಕ್ಷಣೆ

ಐನಾಕ್ಸ್ ಚಿತ್ರಮಂದಿರದಲ್ಲಿ ಆಯ್ಕೆಯಾದ ಅತ್ಯುತ್ತಮ ಕಿರು ಚಿತ್ರಗಳ ಪ್ರದರ್ಶನ ಮೈಸೂರು : ದಸರಾ ಚಲನ ಚಿತ್ರೋತ್ಸವ 2024ರ ಅಂಗವಾಗಿ ಕಿರು ಚಿತ್ರಗಳ…

2 hours ago

ಮೈಶುಗರ್: 2.5 ಲಕ್ಷ ಟನ್‌ನಷ್ಟು ಕಬ್ಬು ಅರೆಯಲು ಯಾವುದೇ ತೊಂದರೆ ಇಲ್ಲ: ಡಾ: ಹೆಚ್.ಎಲ್ ನಾಗರಾಜು

ಮಂಡ್ಯ: ಮೈ ಶುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಕೆಲಸ ನಡೆಯುತ್ತಿದ್ದು, ಪ್ರತಿದಿನ ಸುಮಾರು 3000 ಟನ್ ನಷ್ಟು…

2 hours ago

ಹನೂರು: ಬಿಆರ್‌ಟಿ ವನ್ಯಜೀವಿ ವ್ಯಾಪ್ತಿಯಲ್ಲಿ ಆನೆ ಸಾವು

ಹನೂರು: ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೈಲೂರು ವನ್ಯಜೀವಿ ವಲಯದ ಪಿ.ಜಿ ಪಾಳ್ಯ ಶಾಖೆ ಮಾವತ್ತೂರು…

2 hours ago

ಕೋಮುಗಲಭೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ: ಆರ್‌.ಅಶೋಕ ಆಗ್ರಹ

ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ರಾಜಕಾರಣ: ವಿಪಕ್ಷ ನಾಯಕ ಬೆಂಗಳೂರು: ನಾಗಮಂಗಲದ ಕೋಮುಗಲಭೆ, ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್‌ ಧ್ವಜ ಹಾರಿಸಿದ ಘಟನೆ ಹಾಗೂ…

3 hours ago

ಜೊತೆಗಿದ್ದ ಯುವತಿಗೆ ಲೈಂಗಿಕ ಕಿರುಕುಳ: ಕೊರಿಯೋಗ್ರಾಫರ್‌ ವಿರುದ್ಧ ದೂರು ದಾಖಲು

ಮೈಸೂರು: ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ ವರೆಗೂ ಅನೇಕ ದಕ್ಷಿಣ ಭಾರತದ ಸ್ಟಾರ್‌ ನಟರಿಗೆ ಕೊರಿಯೋಗ್ರಾಫರ್‌ ಮಾಡಿರುವ ಹೆಸರಾಂತ ತೆಲುಗು ಡ್ಯಾನ್ಸ್ ಕೊರಿಯೋಗ್ರಾಫರ್‌…

3 hours ago