ಕ್ರೀಡೆ

Vijay Hazare Trophy 2023: ರೌಂಡ್‌ 3 ಪಂದ್ಯಗಳ ಮುಕ್ತಾಯದ ಬಳಿಕ ಅಗ್ರಸ್ಥಾನದಲ್ಲಿವೆ ಈ 4 ತಂಡಗಳು

ಸದ್ಯ ನಡೆಯುತ್ತಿರುವ ವಿಜಯ್‌ ಹಜಾರೆ ಟ್ರೋಫಿಯ ರೌಂಡ್‌ 3 ಪಂದ್ಯಗಳು ನಿನ್ನೆ ( ನವೆಂಬರ್‌ 27 ) ಮುಕ್ತಾಯಗೊಂಡಿವೆ. ಇನ್ನು ಕರ್ನಾಟಕ ತಂಡ ರೌಂಡ್‌ 3 ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಸತತ ಮೂರನೇ ಜಯ ಸಾಧಿಸಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.

ಮೊದಲಿಗೆ ಜಮ್ಮು ಕಾಶ್ಮೀರದ ವಿರುದ್ಧ ಕಣಕ್ಕಿಳಿದು 222 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದ ಕರ್ನಾಟಕ ಎರಡನೇ ಪಂದ್ಯದಲ್ಲಿ ಉತ್ತರಾಖಂಡ ತಂಡದ ವಿರುದ್ಧ 52 ಪಂದ್ಯಗಳ ಜಯ ದಾಖಲಿಸಿತ್ತು. ಹೀಗೆ ಹ್ಯಾಟ್ರಿಕ್‌ ಜಯ ಸಾಧಿಸಿರುವ ಕರ್ನಾಟಕ ಕರ್ನಾಟಕ ಗ್ರೂಪ್‌ ಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇನ್ನು ಮುಂಬೈ, ವಿದರ್ಭ, ರಾಜಸ್ಥಾನ್‌ ಹಾಗೂ ಮಧ್ಯ ಪ್ರದೇಶ ತಂಡಗಳೂ ಸಹ ತಮ್ಮ ತಮ್ಮ ಅಂಕಪಟ್ಟಿಗಳಲ್ಲಿ ಹ್ಯಾಟ್ರಿಕ್‌ ಜಯದೊಂದಿಗೆ ಅಗ್ರಸ್ಥಾನವನ್ನು ಅಲಂಕರಿಸಿವೆ.

ಹಾಗಿದ್ದರೆ ಟೂರ್ನಿಯ ಮೊದಲ 3 ಸುತ್ತಿನ ಪಂದ್ಯಗಳು ಮುಕ್ತಾಯವಾದ ಬಳಿಕ ಅಂಕಪಟ್ಟಿ ಹೇಗಿದೆ, ಯಾವ ತಂಡಗಳು ಟಾಪ್‌ 3 ಸ್ಥಾನ ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಗ್ರೂಪ್‌ A
ಮುಂಬೈ – 3 ಪಂದ್ಯ, 3 ಗೆಲುವು, 12 ಅಂಕ
ತ್ರಿಪುರ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ
ಕೇರಳ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ

ಗ್ರೂಪ್‌ B

ವಿದರ್ಭ – 3 ಪಂದ್ಯ, 3 ಗೆಲುವು, 12 ಅಂಕ
ಸರ್ವಿಸಸ್ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ
ಹೈದರಾಬಾದ್ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ‌

ಗ್ರೂಪ್‌ C

ಕರ್ನಾಟಕ – 3 ಪಂದ್ಯ, 3 ಗೆಲುವು, 12 ಅಂಕ
ಹರಿಯಾಣ – 3 ಪಂದ್ಯ, 3 ಗೆಲುವು, 12 ಅಂಕ
ಚಂಡೀಗಢ – 3 ಪಂದ್ಯ, 2 ಗೆಲುವು,‌ 1 ಸೋಲು, 8 ಅಂಕ

ಗ್ರೂಪ್‌ D

ರಾಜಸ್ಥಾನ್ – 3 ಪಂದ್ಯ, 3 ಗೆಲುವು, 12 ಅಂಕ
ಗುಜರಾತ್ – 3 ಪಂದ್ಯ, 2 ಗೆಲುವು, 1 ಸೋಲು 8 ಅಂಕ
ಅಸ್ಸಾಂ – 2 ಪಂದ್ಯ, 1 ಗೆಲುವು, 1 ಸೋಲು, 4 ಅಂಕ

ಗ್ರೂಪ್‌ E

ಮಧ್ಯ ಪ್ರದೇಶ – 3 ಪಂದ್ಯ, 3 ಗೆಲುವು, 12 ಅಂಕ
ತಮಿಳುನಾಡು – 2 ಪಂದ್ಯ, 2 ಗೆಲುವು, 8 ಅಂಕ
ಬೆಂಗಾಳ್ – 3 ಪಂದ್ಯ, 2 ಗೆಲುವು, 1 ಸೋಲು 8 ಅಂಕ

andolana

Recent Posts

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

5 hours ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

8 hours ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

8 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

9 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

11 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

12 hours ago