ಕ್ರೀಡೆ

Under-19 worldcup 2024: ಫೈನಲ್‌ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ!

ಬೆನೋನಿ: ನಾಯಕ ಉದಯ್‌ ಸಹರಾನ್‌ ಮತ್ತು ಸಚಿನ್‌ ದಾಸ್‌ ಅವರ ಅಮೊಘ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಗೆಲುವು ದಾಖಲಿಸಿದೆ. ಆ ಮೂಲಕ ಅಂಡರ್‌-19 ಏಕದಿನ ವಿಶ್ವಕಪ್‌ ನಲ್ಲಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

ಇಲ್ಲಿನ ವಿಲೋಮೂರ್ ಪಾರ್ಕ್ ಮೈದಾನದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂಡರ್‌-19 ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 244ರನ್‌ ಗುರಿಯನ್ನು 48.5 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 248 ರನ್‌ ಕಲೆಹಾಕಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರೀಕ್ಷಿತ ಆರಂಭ ಕಂಡು ಬರಲಿಲ್ಲ. ಆರಂಭಿಕ ಸ್ಟೀವ್ ಸ್ಟೋಕ್ (14) ಬೇಗನೆ ನಿರ್ಗಮಿಸಿದರು. ನಂತರ ಬಂದ ಟೀಗರ್‌ ಖಾತೆ ತೆರೆಯದೇ ಹಿಂದುರಿಗಿದರು. ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಲುವಾನ್-ಡ್ರೆ ಪ್ರಿಟೋರಿಯಸ್ ಮತ್ತು ರಿಚರ್ಡ್ ಸೆಲೆಟ್ಸ್ವಾನೆ ಚೇತರಿಕೆ ಆಟವಾಡಿದರು. ಪ್ರಿಟೋರಿಯಸ್ 102 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 76 ರನ್‌ ಕೆಲಹಾಕಿದರೆ, ರಿಚರ್ಡ್(64) ರನ್‌ ಬಾರಿಸಿದರು. ಆಲಿವರ್ ವೈಟ್‌ಹೆಡ್‌ (22), ನಾಯಕ ಜುವಾನ್ ಜೇಮ್ಸ್ (24) ಮತ್ತು ಟ್ರಿಸ್ಟಾನ್ ಲೂಸ್ (23) ಬಾರಿಸಿ ತಂಡ 200 ಗಡಿ ದಾಟಲು ಸಹಕರಿಸಿದರು. ಸೌಥ್‌ ಅಫ್ರಿಕಾ ಅಂತಿಮವಾಗಿ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 244 ರನ್‌ ಬಾರಿಸಿತು.

ಟೀಂ ಇಂಡಿಯಾ ಪರ ರಾಜ್‌ ಲಿಂಬಾನಿ 60/3, ಮುಷೀರ್‌ ಖಾನ್‌ 43/2 ವಿಕೆಟ್‌ ಕಬಳಿಸಿ ಗಮನ ಸೆಳೆದರು.

ಈ ಮೊತ್ತವನ್ನು ಚೇಸ್‌ ಮಾಡಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯಿತು. ಅಂದುಕೊಂಡಂತೆ ಆರಂಭ ಪಡೆಯದ ಟೀಂ ಇಂಡಿಯಾ ಬಹುತೇಕ ಅತಿಥೇಯ ಪ್ರಾಬಲ್ಯಕ್ಕೆ ಸಿಲುಕಿ ಸೋಲು ಕಾಣಲಿದೆ ಎಂದು ಊಹಿಸಲಾಗಿತ್ತು. ಆದರೆ ನಾಯಕ ಉದಯ್‌ ಸಹರನ್‌ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ ಸಚಿನ್‌ ದಾಸ್‌ ತಂಡದ ದಿಕ್ಕನ್ನೇ ಬದಲಿಸಿದರು. ಇವರಿಬ್ಬರು ಮುರಿಯದ ಜೋಡಿಯಾಗಿ 150 ರನ್‌ ಜೊತೆಯಾಟವಾಡಿ ತಂಡಕ್ಕೆ ಜಯ ತಂದಿಟ್ಟರು.

ಓಪನರ್‌ ಆದರ್ಶ್‌ ಸಿಂಗ್‌ ಶೂನ್ಯಕ್ಕೆ ಔಟಾದರು. ನಂಬಿಕೆಯ ಬ್ಯಾಟರ್‌ ಮುಷಿರ್‌ ಖಾನ್‌ ನಾಲ್ಕು ರನ್‌ಗೆ ನಿರ್ಗಮಿಸಿದರು. ಅರ್ಶಿನ್‌ ಕುಲ್ಕರ್ಣಿ (12) ಅವಿನಾಶ್‌ (10) ಆಘಾತ ಅನುಭಿಸಿದ್ದ ವೇಳೆ, ನಾಯಕ ಸಹರನ್‌ 124 ಎಸೆತಗಳಲ್ಲಿ 6 ಬೌಂಡರಿ ಸಹಿತ 81 ರನ್‌ ಕಲೆಹಾಕಿದರೇ, ಸಚಿನ್‌ ದಾಸ್‌ 95 ಎಸೆತಗಳಲ್ಲಿ 11 ಬೌಂಡರಿ 1 ಸಿಕ್ಸರ್‌ ಸಹಿತ 96 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಅಂತಿಮವಾಗಿ 48.5 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿದ ಟೀಂ ಇಂಡಿಯಾ ಈ ವಿಶ್ವಕಪ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು.

ದಕ್ಷಿಣ ಆಫ್ರಿಕಾ ಪರ ಕ್ವೆನಾ ಮಫಕಾ 32/3, ಟ್ರಿಸ್ಟಾನ್ ಲೂಸ್ 37/3 ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ: ಉದಯ್‌ ಸಹರನ್‌

ಸ್ಕೋರ್‌ ವಿವರ;
ದಕ್ಷಿಣ ಆಫ್ರಿಕಾ: ಬ್ಯಾಟಿಂಗ್‌- ಲುವಾನ್-ಡ್ರೆ ಪ್ರಿಟೋರಿಯಸ್ 76, ರಿಚರ್ಡ್ ಸೆಲೆಟ್ಸ್ವಾನೆ 64, ನಾಯಕ ಜುವಾನ್ ಜೇಮ್ಸ್ 24. ಬೌಲಿಂಗ್‌- ರಾಜ್‌ ಲಿಂಬಾನಿ 60/3, ಮುಷೀರ್‌ ಖಾನ್‌ 43/2

ಟೀಂ ಇಂಡಿಯಾ: ಬ್ಯಾಟಿಂಗ್‌- ಉದಯ್‌ ಸಹರನ್‌ 81, ಸಚಿನ್‌ ದಾಸ್‌ 96, ರಾಜ್‌ ಲಿಂಬಾನಿ 13. ಬೌಲಿಂಗ್‌- ಕ್ವೆನಾ ಮಫಕಾ 32/3, ಟ್ರಿಸ್ಟಾನ್ ಲೂಸ್ 37/3

andolanait

Recent Posts

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

56 mins ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

7 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

13 hours ago

ಓದುಗರ ಪತ್ರ: ವೈದ್ಯಕೀಯ ಸೀಟು ಹೆಚ್ಚಳ: ಪ್ರಶಂಸನೀಯ ನಡೆ

೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…

13 hours ago

ಓದುಗರ ಪತ್ರ: ಬಂದ್ ಮಾಡುವುದರಿಂದ ನಮಗೇ ತೊಂದರೆ ಅಲ್ಲವೇ?

ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್‌ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…

13 hours ago

ತಂಬಾಕು ನಿಯಂತ್ರಣ: ಕೇಂದ್ರ ದ್ವಂದ್ವ ನೀತಿ

ವಸಂತಕುಮಾರ ಮೈಸೂರು ಮಠ, ತಂಬಾಕು ವಿರೋಧಿ ಹೋರಾಟಗಾರ ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು ಯಾವುದೇ ರೀತಿಯ…

13 hours ago