ಕ್ರೀಡೆ

ProKabaddi : ಚಾಂಪಿಯನ್ ಪಟ್ಟ ಅಲಂಕರಿಸಿದ ʼಜೈಪುರ ಪಿಂಕ್ ಪ್ಯಾಂಥರ್ಸ್ʼ

ಮುಂಬೈ: ಪ್ರೊ ಕಬಡ್ಡಿ ಲೀಗ್ ಸೀಸನ್ 9ರ ರೋಚಕ ಫೈನಲ್​ನಲ್ಲಿ ಪುಣೇರಿ ಪಲ್ಟನ್ ತಂಡವನ್ನು 33-29ರಿಂದ ಮಣಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎರಡನೇ ಬಾರಿಗೆ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಜಯಿಸಿತು.
ಫೈನಲ್​ ಹಣಾಹಣಿಯಲ್ಲಿ ವಿ ಅಜಿತ್, ಸುನಿಲ್ ಕುಮಾರ್ ಮತ್ತು ಅರ್ಜುನ್ ದೇಶ್ವಾಲ್ ಅವರು ತಲಾ 6 ಅಂಕ ಗಳಿಸಿ ಜೈಪುರ ತಂಡದ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದರು. ಪಂದ್ಯಾರಂಭದ ನಿಮಿಷಗಳಲ್ಲಿ ಪಂಕಜ್ ಮೋಹಿತ್​ ಅದ್ಭುತ ದಾಳಿ ನಡೆಸಿ ಪುಣೇರಿ ಪಲ್ಟನ್ 3-1 ಮುನ್ನಡೆ ನೀಡಿದ್ದರು. ಆದರೆ, ಜೈಪುರ ತಂಡ ಮರುಹೋರಾಟ ನಡೆಸಿ 3-3ರಿಂದ ಸಮಬಲ ಸಾಧಿಸಿತು. ಬಳಿಕ ಒಂಬತ್ತನೇ ನಿಮಿಷದ ವೇಳೆಗೆ ಪುಣೆ ತಂಡವು 5-4ರಲ್ಲಿ ಮುನ್ನಡೆಯಲ್ಲಿತ್ತು.ಆ ಬಳಿಕ, ವಿ ಅಜಿತ್ ತಮ್ಮ ಪರಾಕ್ರಮ ಪ್ರದರ್ಶಿಸತೊಡಗಿದ್ದರಿಂದ ಜೈಪುರವು 6-6ರಲ್ಲಿ ಸ್ಕೋರ್ ಸಮಗೊಳಿಸಿತು. ಎರಡೂ ಕಡೆಯಿಂದ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಮೊಹಮ್ಮದ್ ನಬಿಬಕ್ಷ್ ಕ್ಷಿಪ್ರ ದಾಳಿ ಮತ್ತು ಟ್ಯಾಕಲ್ ಪಾಯಿಂಟ್ ಕಬಳಿಸಿ 16ನೇ ನಿಮಿಷದ ವೇಳೆಗೆ ಪುಣೆಗೆ 10-8ರಲ್ಲಿ ಮುನ್ನಡೆಗೆ ನೆರವಾದರು.

ಆದರೆ, 19ನೇ ನಿಮಿಷದಲ್ಲಿ ಪ್ಯಾಂಥರ್ಸ್​ನ ಅಜಿತ್‌ ಅವರು ಸಂಕೇತ್‌ ಸಾವಂತ್‌ ಮತ್ತು ಗೌರವ್‌ ಖತ್ರಿಯನ್ನು ಕ್ಯಾಚ್‌ ಔಟ್‌ ಮಾಡಿದರು. ವಿರಾಮದ ವೇಳೆಗೆ ಪ್ಯಾಂಥರ್ಸ್ 14-12ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ಆದಿತ್ಯ ಶಿಂಧೆ ಅವರನ್ನು ಟ್ಯಾಕಲ್​ ಮಾಡಿದ ಪ್ಯಾಂಥರ್ಸ್ 22ನೇ ನಿಮಿಷದಲ್ಲಿ ಪಲ್ಟನ್ ತಂಡವನ್ನು ಆಲೌಟ್ ಮಾಡಿ 18-13 ಮುನ್ನಡೆ ಸಾಧಿಸಿತು. ಆದರೂ ಸಹ ಆಕಾಶ್ ಶಿಂಧೆ ಕೆಲ ಪಾಯಿಂಟ್ ರೈಡ್​ಗಳು ಹಾಗೂ ಅಜಿತ್​ರನ್ನು ಟ್ಯಾಕಲ್​ ಮಾಡಿದ ಪುಣೆ 17-18ರ ಸ್ಕೋರ್‌ನತ್ತ ತಲುಪಿತು. ಆದರೆ ಅಂಕುಶ್ ಅವರು ಆಕಾಶ್ ಶಿಂಧೆಯನ್ನು ಟ್ಯಾಕಲ್​ ಮಾಡಿ, ಪ್ಯಾಂಥರ್ಸ್ ಮುನ್ನಡೆಯನ್ನು ಹಿಗ್ಗಿಸಿದರು. ಕೆಲ ಹೊತ್ತಲ್ಲೇ ಆದಿತ್ಯ ಶಿಂಧೆ ಅವರು ಅಂಕುಶ್ ಮತ್ತು ಸಾಹುಲ್ ಕುಮಾರ್ ಅವರನ್ನು ಕ್ಯಾಚ್ ಔಟ್ ಮಾಡುವ ಮೂಲಕ ಪುಣೆ ತಂಡವನ್ನು 20-23 ಸ್ಕೋರ್​​ನತ್ತ ಕೊಂಡೊಯ್ದರು.ಬಳಿಕ 34ನೇ ನಿಮಿಷದಲ್ಲಿ 27-22ರಲ್ಲಿ ಮುನ್ನಡೆ ಕಾಯ್ದುಕೊಂಡ ಜೈಪುರ ತಂಡದ ನಾಯಕ ಸುನಿಲ್ ಕುಮಾರ್ ಒಂದೆರಡು ಅದ್ಭುತ ಟ್ಯಾಕಲ್ ಪಾಯಿಂಟ್‌ ದೋಚಿದರು. ಆದರೂ ಬೆಂಬಿಡದ ಪುಣೆ ತಂಡ 38ನೇ ನಿಮಿಷದಲ್ಲಿ ದೇಶ್ವಾಲ್ ಅವರನ್ನು ಟ್ಯಾಕಲ್ ಮಾಡಿ 25-29ರ ಸ್ಕೋರ್​ ತಲುಪಿತು
ನಂತರ, ಬಾದಲ್ ಸಿಂಗ್ ಅವರು ವಿ ಅಜಿತ್​​ರನ್ನು ಟ್ಯಾಕಲ್​ ಮಾಡಿದರೆ, ಆದಿತ್ಯ ಶಿಂಧೆ ಅವರು ಅದ್ಭುತ ರೈಡಿಂಗ್​ ಮಾಡಿದರು. ಆದರೆ ಪಂದ್ಯದ ಕೊನೆಯ ನಿಮಿಷಗಳಲ್ಲಿ ಪ್ಯಾಂಥರ್ಸ್ 31-29ರಲ್ಲಿ ಮುನ್ನಡೆ ಹೊಂದಿದ್ದಲ್ಲದೆ, ಪಲ್ಟಾನ್​ಗೆ ಅಂಕ ಗಳಿಸಲು ಕಡಿವಾಣ ಹಾಕುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಪಂದ್ಯದ ಅಂತಿಮ ಸೆಕೆಂಡ್​ಗಳಲ್ಲಿ ಸಮಯೋಚಿತ ಆಟವಾಡಿದ ಪ್ಯಾಂಥರ್ಸ್ ತಂಡ ಎರಡನೇ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿಗೆ ಮುತ್ತಿಕ್ಕಿತು.

andolanait

Recent Posts

ಕೆಆರ್‌ಎಸ್‌ ಜಲಾಶಯಕ್ಕೆ ಮತ್ತಷ್ಟು ಹೆಚ್ಚಾದ ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು…

2 hours ago

ಓದುಗರ ಪತ್ರ: ಮ್ಯಾನ್‌ಹೋಲ್ ಸರಿಪಡಿಸಿ

ವಿಜಯನಗರಕ್ಕೆ ಹೋಗುವ ರಸ್ತೆಯಲ್ಲಿ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಮಹಾದ್ವಾರದ ಎದುರಗಡೆ ರಸ್ತೆಯ ಅಂಚಿಗೆ ಸೇರಿದಂತಿರುವ ಮ್ಯಾನ್ ಹೋಲ್‌ನಿಂದ ಹೊಲಸು ನೀರು…

6 hours ago

ಓದುಗರ ಪತ್ರ: ಎಚ್೧ಎನ್೧ ಮುನ್ನೆಚ್ಚರಿಕೆ ಇರಲಿ

ಕರ್ನಾಟಕದ ೩೨ ಜಿಗಳಲ್ಲಿ ಆಗಸ್ಟ್೨೨ರವರೆಗೆ ಒಟ್ಟು ೫,೦೦೦ ಎಚ್೧ಎನ್೧ ಪ್ರಕರಣಗಳು ದಾಖಲಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲೂ ಪ್ರಕರಣಗಳು…

6 hours ago

ಓದುಗರ ಪತ್ರ: ಭಲೆ ದರ್ಶನ್…ಭಲೆ ಭಲೆ…

ಕೆಲವು ದಿನಗಳ ಹಿಂದೆ ನಂಜನಗೂಡು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಸ್ಥಳೀಯ…

6 hours ago

ಪೊಲೀಸ್ ಆಪ್‌ಗೆ ಖಾಸಗಿ ಸಿಸಿಟಿವಿ ಸೇರ್ಪಡೆ

ಎಚ್.ಎಸ್.ದಿನೇಶ್‌ಕುಮಾರ್ ಅಪರಾಧ ಪ್ರಕರಣಗಳ ಪತ್ತೆಗೆ ನಗರ ಪೊಲೀಸರ ಕಾರ್ಯ ತಂತ್ರ; ಆಪ್ ವ್ಯಾಪ್ತಿಯಲ್ಲಿ ೩೦,೦೦೦ ಸಿಸಿಟಿವಿಗಳು; ಸಿಸಿಟಿವಿ ಸ್ಥಿತಿ ಬಗ್ಗೆಯೂ…

6 hours ago

ಫ್ಲೈಓವರ್ ಕಾಮಗಾರಿ ಕುಂಟುತ್ತಿದೆಯೇಕೆ?

ಎಂ.ಕೇಶವ ಮೈಸೂರು: ನಗರದ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ಹಾಗೂ ನಂಜನಗೂಡು ರಸ್ತೆಯ ಎಪಿಎಂಸಿ ಬಳಿ ನಿರ್ಮಾ ಣವಾಗುತ್ತಿರುವ ಫ್ಲೈ…

9 hours ago