ಬೆಂಬಲ ಬೆಲೆಯಡಿ ಭತ್ತ, ರಾಗಿ ಖರೀದಿ ನೋಂದಣಿ ಮರೆತ ಆಡಳಿತ …
ಚಾಮರಾಜನಗರ: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ೦ ಯೋಜನೆಯಡಿ ಭತ್ತ, ರಾಗಿ ಖರೀದಿಗಾಗಿ ಆರಂಭ ಗೊಳ್ಳಬೇಕಿದ್ದ ರೈತರ ಹೆಸರು ನೋಂದಣಿ ಪ್ರಕ್ರಿಯೆ ಜಿಲ್ಲೆಯಲ್ಲಿ ಮೂರು ದಿನಗಳಾದರೂ ಇನ್ನೂ ಶುರುವಾಗಿಲ್ಲ!
ಸಾಫ್ಟ್ ವೇರ್ ಅಪ್ಡೇಟ್ ಸಮಸ್ಯೆ ಎದುರಾಗಿರುವುದು ಮಾತ್ರವಲ್ಲದೇ
ಖರೀದಿ ಏಜೆನ್ಸಿ ಪಡೆದಿರುವ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ನಿಗದಿಯಂತೆ ಡಿ.೧೫ರಿಂದ ನೋಂದಣಿ ಪ್ರಾರಂಭಿಸಲಾಗಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.
ಚಾಮರಾಜನಗರ, ಸಂತೇಮರಹಳ್ಳಿ, ಕೊಳ್ಳೇಗಾಲ, ಹನೂರು ಹಾಗೂ ಯಳಂದೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಭತ್ತ , ರಾಗಿ ಖರೀದಿಗೆ ಸಂಬಂಧಿಸಿದ ನೊಂದಣಿ ಕೇಂದ್ರವನ್ನು ಗುರುವಾರದಿಂದಲೇ ತೆರೆಯುವುದಾಗಿ ಮಾಧ್ಯಮಗಳ ಮೂಲಕ ಜಿಲ್ಲಾಡಳಿತ ತಿಳಿಸಿತ್ತು.
ಹೀಗಾಗಿ ಜಿಲ್ಲೆಯ ಈ ಐದೂ ಕೇಂದ್ರಗಳಿಗೆ ರೈತರು ಬರತೊಡಗಿದ್ದು ನೊಂದಣಿ ಇನ್ನೂ ಆರಂಭ ಆಗದಿರುವುದನ್ನು ತಿಳಿದು ಅಸಮಾಧಾನ ಹೊರಹಾಕಿದ್ದಾರೆ.
ಗೊತ್ತುಪಡಿಸಿದ ದಿನದಿಂದ ಮಾಡಲಾಗದಿದ್ದರೆ ಯಾವಾಗಿನಿಂದ ನೋಂದಣಿ
ಮಾಡುತ್ತೇವೆ ಎಂಬುದನ್ನಾದರೂ ಕೊನೆ ಪಕ್ಷ ಪತ್ರಿಕೆಗಳ ಮೂಲಕ ಸಂಬಂಧಿ ಸಿದವರು ತಿಳಿಸಬೇಕಿತ್ತು. ಹಾಗೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಭತ್ತ, ರಾಗಿ ಮಾರಾಟ ಮಾಡುವ ರೈತರು ವಿನಾ ಕಾರಣ ಕೇಂದ್ರಗಳತ್ತ ಅಲೆದು ಬಂದು ಹೋಗುವಂತಾಗಿದೆ ಎಂದು ರೈತ ಜಯಣ್ಣ ತೀವ್ರ ಬೇಸರ ವ್ಯಕ್ತಪಡಿಸಿದರು.
೨೦೨೨-೨೩ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತ , ರಾಗಿಯ ಕೊಯ್ಲನ್ನು ರೈತರು ಅದಾಗಲೇ ಕೈಗೆತ್ತಿಕೊಂಡಿದ್ದು ಬೆಂಬಲ ಬೆಲೆಯಡಿ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್ಗೆ ೨೦೪೦ ರೂ., ಗ್ರೇಡ್-ಎ ಭತ್ತ ಕ್ಕೆ೨೦೬೦ ರೂ., ರಾಗಿಗೆ ೩೫೭೮ ರೂ. ನಿಗದಿ ಪಡಿಸಲಾಗಿದೆ.
ಮುಕ್ತ ಮಾರುಕಟ್ಟೆಯಲ್ಲೀಗ ಬೆಂಬಲ ಬೆಲೆಗಿಂತ ಧಾರಣೆ ಕಡಿಮೆ ಇದ್ದು ಖರೀದಿ ನೊಂದಣಿ ತಡ ಮಾಡಿದರೆ ರೈತರು ಕಾಯ್ದು ಕೂರುವ ಸಾಧ್ಯತೆ ತುಂಬಾ ಕಡಿಮೆ.
ಒಕ್ಕಣೆ ಸ್ಥಳದಲ್ಲೇ ಮಾರಾಟ ಮಾಡುವ ರೈತರೇ ಯಾವಾಗಲೂ ಹೆಚ್ಚು. ಸಾಕಷ್ಟು ಜಾಗ ಬೇಕಾಗುವುದರಿಂದ ಒಕ್ಕಣೆ ಮಾಡಿದ್ದನ್ನು ಸಂಗ್ರಹ ಮಾಡುವುದು ಕಷ್ಟದ ಕೆಲಸ. ಸಾಲಸೋಲದ ಹಂಗಿನಲ್ಲಿ ಇದ್ದ ರೈತರಂತೂ ಬೆಂಬಲ ಬೆಲೆ ಕಾಯ್ದು ಕೂರಲಾರರು. ಜಿಲ್ಲಾಡಳಿತ ಇದನ್ನರಿಯಬೇಕು.
ನೊಂದಣಿ ತಡವಾದಷ್ಟೂ ಈ ಉತ್ಪನ್ನಗಳು ಮಧ್ಯವರ್ತಿಗಳ ಪಾಲಾಗಿ ರೈತರಿಗೆ ನಷ್ಟ ಉಂಟಾಗುತ್ತದೆ ಎಂಬುದು ರೈತರ ಅನಿಸಿಕೆ.
ನೋಂದಣಿಯಾದ ಭತ್ತ, ರಾಗಿಯನ್ನು ಜ.೧ರಿಂದ ಮಾ. ೨೩ರವರೆಗೆ ಖರೀದಿಸುವುದಾಗಿ ಜಿಲ್ಲಾಧಿಕಾರಿಯವರು ಈಗಾಗಲೇ ತಿಳಿಸಿದ್ದು ನೋಂದಣಿಯನ್ನೇ ಹೀಗೆ ತಡ ಮಾಡಿದರೆ ಹೇಗೆ ಎಂಬುದು ಬೆಳೆಗಾರರ ಪ್ರಶ್ನೆ.
ತಾಂತ್ರಿಕ ಕಾರಣಗಳಿಂದ ಭತ್ತ, ರಾಗಿ ಖರೀದಿ ನೋಂದಣಿಯನ್ನು ನಿಗದಿಯಂತೆ ಡಿ.೧೫ರಿಂದ ಆರಂಭಿಸಲಾಗಿಲ್ಲ.ಡಿ.೧೯ರ ಸೋಮವಾರದಿಂದ ಜಿಲ್ಲೆಯ ಐದೂ ಕೇಂದ್ರಗಳಲ್ಲಿ ನೋಂದಣಿ ಆರಂಭಿಸಲಾಗುತ್ತಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
– ರವೀಂದ್ರ, ಜಿಲ್ಲಾ ವ್ಯವಸ್ಥಾಪಕರು, ಕ.ರಾ.ಸ.ಮಾ. ಮಂಡಳಿ.
ಭತ್ತ, ರಾಗಿಯನ್ನು ನೊಂದಣಿ ಮಾಡುತ್ತಿದ್ದಂತೆ ರೈತರಿಂದ ಖರೀದಿಸಬೇಕು. ಜ.೧ರಿಂದ ಖರೀದಿಸುವುದಾಗಿ ಜಿಲ್ಲಾಡಳಿತ ತಿಳಿಸಿದ್ದು ಕೊಯ್ಲು ಮಾಡಿರುವ ಉತ್ಪನ್ನವನ್ನು ಅಲ್ಲಿಯವರೆಗೆ ಸಂಗ್ರಹಿಸಿ ಇಟ್ಟುಕೊಳ್ಳುವುದು ಈಗಿನ ಅಕಾಲಿಕ ಮಳೆ ಪರಿಸ್ಥಿತಿಯಲ್ಲಿ ತುಂಬಾ ಕಷ್ಟದ ಕೆಲಸ.
-ಬಸವಣ್ಣ, ರೈತ ಮುಖಂಡರು, ಹೊನ್ನೂರು.
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು…
ವಿಜಯನಗರಕ್ಕೆ ಹೋಗುವ ರಸ್ತೆಯಲ್ಲಿ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಮಹಾದ್ವಾರದ ಎದುರಗಡೆ ರಸ್ತೆಯ ಅಂಚಿಗೆ ಸೇರಿದಂತಿರುವ ಮ್ಯಾನ್ ಹೋಲ್ನಿಂದ ಹೊಲಸು ನೀರು…
ಕರ್ನಾಟಕದ ೩೨ ಜಿಗಳಲ್ಲಿ ಆಗಸ್ಟ್೨೨ರವರೆಗೆ ಒಟ್ಟು ೫,೦೦೦ ಎಚ್೧ಎನ್೧ ಪ್ರಕರಣಗಳು ದಾಖಲಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲೂ ಪ್ರಕರಣಗಳು…
ಕೆಲವು ದಿನಗಳ ಹಿಂದೆ ನಂಜನಗೂಡು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಸ್ಥಳೀಯ…
ಎಚ್.ಎಸ್.ದಿನೇಶ್ಕುಮಾರ್ ಅಪರಾಧ ಪ್ರಕರಣಗಳ ಪತ್ತೆಗೆ ನಗರ ಪೊಲೀಸರ ಕಾರ್ಯ ತಂತ್ರ; ಆಪ್ ವ್ಯಾಪ್ತಿಯಲ್ಲಿ ೩೦,೦೦೦ ಸಿಸಿಟಿವಿಗಳು; ಸಿಸಿಟಿವಿ ಸ್ಥಿತಿ ಬಗ್ಗೆಯೂ…
ಎಂ.ಕೇಶವ ಮೈಸೂರು: ನಗರದ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ಹಾಗೂ ನಂಜನಗೂಡು ರಸ್ತೆಯ ಎಪಿಎಂಸಿ ಬಳಿ ನಿರ್ಮಾ ಣವಾಗುತ್ತಿರುವ ಫ್ಲೈ…