ಕ್ರೀಡೆ

ಇಂದಿನಿಂದ ಪ್ರೋ ಕಬಡ್ಡಿ ಅಬ್ಬರ ಶುರು

ಅಹಮದಾಬಾದ್‌ : ಇಂದಿನಿಂದ ಪ್ರೋ ಕಬಡ್ಡಿ ಸೀಸನ್‌ 10 ಆರಂಭವಾಗಲಿದ್ದು, ಬರೋಬ್ಬರಿ ಮೂರು ತಿಂಗಳುಗಳ ಕಾಲ ಕ್ರೀಡಾಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಲಿದೆ.

ವರ್ಲ್ಡ್‌ ಕಪ್‌ ಕೈ ತಪ್ಪಿದ ಹತಾಶೆಯಲ್ಲಿದ್ದ ಕ್ರೀಡಾಭಿಮಾನಿಗಳಿಗೆ ಪ್ರೋ ಕಬಡ್ಡಿ ನವ ಚೈತನ್ಯವನ್ನು ನೀಡಿದೆ.

ಕೋವಿಡ್‌ ನಂತರ ಕೆಲವೇ ಕೆಲವು ಕೇಂದ್ರಗಳಿಗೆ ಮಾತ್ರ ಸೀಮಿತವಾಗಿದ್ದ ಕಬಡ್ಡಿ ಪಂದ್ಯಾಟಗಳು ಈ ಬಾರಿ 12 ಫ್ರಾಂಚೈಸಿಗಳ ಕೇಂದ್ರದಲ್ಲಿಯೂ ಕೂಡ ನಡೆಯಲಿವೆ.

ಪ್ರತಿ ದಿನ 2 ಪಂದ್ಯಗಳು ಪ್ರೇಕ್ಷಕರನ್ನು ರಂಜಿಸಲಿವೆ. ರಾತ್ರಿ 8 ಗಂಟೆಗೆ ಮೊದಲ ಪಂದ್ಯ ಆರಂಭವಾಗಲಿದ್ದು, ಎರಡನೇ ಪಂದ್ಯ ರಾತ್ರಿ 9 ಗಂಟೆಗೆ ಆರಂಭವಾಗಲಿದ್ದು, ಪಂದ್ಯಾವಳಿಗಳು ಸ್ಟಾರ್‌ ಸ್ಪೋರ್ಟ್ಸ್‌ ನಲ್ಲಿ ನೇರಪ್ರಸಾರವಾಗಲಿದೆ.

ಪ್ರೋ ಕಬಡ್ಡಿ ಸೀಸನ್‌ 10 ರ ಜಾಹಿರಾತು ಕ್ರಿಡಾಭಿಮಾನಿಗಳ ಜೋಶ್‌ ಹೆಚ್ಚಿಸಿತ್ತು. ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿರುವ ಸ್ಯಾಂಡಲ್ವುಡ್‌ ಬಾದ್‌ ಶಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಈ ಜಾಹಿರಾತಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಕಿಚ್ಚ ಸುದೀಪ್‌ ಹೊಳೆಯುತ್ತಿರುವ ಬೆಳಗಿನ ಸೂರ್ಯ ರಶ್ಮಿಯ ಬೇಳಕಲ್ಲಿ ಬೆಳ್ಳನೆ ಕುದುರೆಯೇರಿ ರೋಶಾವೇಶದಿಂದ ಬರುತ್ತಾರೆ.

ಈ ಜಾಹಿರಾತನ್ನು ಯಾವುದೇ ಸಿನಿಮಾಗೂ ಕಮ್ಮಿ ಇಲ್ಲದಂತೆ ಶೂಟ್‌ ಮಾಡಲಾಗಿದೆ. ಈ ವಿಡಿಯೋದ ಆರಂಭದಲ್ಲಿ ಕಿಚ್ಚ ಯಾವುದೋ ಯುದ್ಧಕ್ಕೆ ಹೋಗುತ್ತಿರುವ ಖದರ್‌ ನಲ್ಲಿ ಬಿಳಿ ಬಣ್ಣದ ಕುದುರೆಯೇರಿ ರಾಜನಂತೆ ಬರುತ್ತಾರೆ. ನಟ ಬಾಲಯ್ಯ ಕೂಡ ಎದುರಿನಿಂದ ಮತ್ತೊಂದು ಕುದುರೆಯೇರಿ ಬರುತ್ತಾರೆ. ಇವರಿಬ್ಬರೂ ಮುಖಾಮುಖಿಯಾಗಿ ಜಗಜ್ಜೆಟ್ಟಿಗಳಂತೆ ಕಾದಾಡುವಾಗ ಕಬಡ್ಡಿ ನಮ್ದು ಎನ್ನುವ ಸಾಲು ಬರುತ್ತದೆ.

ಇನ್ನು ಈ ವಿಡಿಯೋವನ್ನು ಹಂಚಿಕೊಂಡಿದ್ದ ಬೆಂಗಳೂರು ಬುಲ್ಸ್‌ ತಂಡದ ರಾಯಭಾರಿ ಕಿಚ್ಚ ಸುದೀಪ್‌, ಬರ್ಕಯ್ಯ. ಪೇಪರ್‌ ಮುಂದಾಗಡೆ ಬರ್ಕೋ. ಕಬಡ್ಡಿ ನಮ್ದು. ನೋಡಿರಿ ಪ್ರೋ ಕಬಡ್ಡಿ ಲೀಗ್‌ ಡಿಸೆಂಬರ್‌ 2 ರಾತ್ರಿ 8 ರಿಂದ ನಿಮ್ಮ ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಡಿಸ್ನಿ ಪ್ಲಸ್‌ ಹಾಟ್ ಸ್ಟಾರ್‌ ನಲ್ಲಿ ಎಂದು ಬರೆದುಕೊಂಡಿದ್ದರು.

ಇದೀಗ ಪ್ರೋ ಕಬಡ್ಡಿ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದ್ದು. ಕ್ರೀಡಾಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.

lokesh

Recent Posts

ಅಪ್ಪಟ ಸಮಾಜವಾದಿ, ಗುಡಿಸಲೂ ಇರದಿದ್ದ ಜೋಗಿ ಕಿಶನ್ ಪಟ್ನಾಯಕ್

ಪ್ರೊ.ರವಿವರ್ಮಕುಮಾರ್, ಸಮಾಜವಾದಿ ಚಿಂತಕರು ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಇಂದು ಕಿಶನ್ ಜನ್ಮದಿನ; ಅವರ ನೆನಪು ನಮ್ಮೊಡನೆ ಸದಾ ಹಸಿರಾಗಿರಲಿ.…

8 hours ago

ಶೀಘ್ರವೇ ಆಟೋ ಬಾಡಿಗೆ ಪರಿಷ್ಕೃತ ದರ ಪ್ರಕಟ

ನವೀನ್ ಡಿಸೋಜ ಮಡಿಕೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಹೆಚ್ಚಳಕ್ಕೆ ನಿರ್ಧಾರ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಟೋ ರಿಕ್ಷಾ…

8 hours ago

ಜೇನು ಕೃಷಿಗೆ ಸರ್ಕಾರದ ಬಲ

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಕುರಿ ಸಾಕಾಣಿಕೆ, ಹೈನುಗಾರಿಕೆ ಹೀಗೆ ರೈತರಿಗೆ ಉಪಯೋಗವಾಗುವಂತಹ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಇದೀಗ ರೈತರು…

8 hours ago

ಜು.20ಕ್ಕೆ ವಿಧಾನಪರಿಷತ್ ಐದು ಸ್ಥಾನ ತೆರವು

ಕೆ.ಬಿ.ರಮೇಶನಾಯಕ ಮೈಸೂರು: ರಾಜ್ಯದಲ್ಲಿ ಜುಲೈ ೨೦ಕ್ಕೆ ತೆರವಾಗಲಿರುವ ವಿಧಾನಪರಿಷತ್‌ನ ಐದು ನಾಮನಿರ್ದೇಶಿತ ಸ್ಥಾನಗಳಿಗೆ ಸದಸ್ಯರನ್ನು ನೇಮಕ ಮಾಡುವುದಕ್ಕೆ ದಿನಗಣನೆ ಶುರುವಾಗಿದೆ.…

8 hours ago

ಮೈಸೂರಿನ 2 ಹೋಟೆಲ್‌, ಚಾ.ನಗರ ಕೋರ್ಟ್‌ಗೆ ಬಾಂಬ್‌ ಬೆದರಿಕೆ ; ಒಬ್ಬ ವ್ಯಕ್ತಿಯಿಂದಲೇ ಇ-ಮೇಲ್

ಮೈಸೂರು‌ : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ…

18 hours ago