ಅಹ್ಮದಾಬಾದ್ : ಪ್ರೊ ಕಬಡ್ಡಿ ಲೀಗ್ (ಪಿಕೆಎಲ್ ಸೀಸನ್ 10) 2023 ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಜಯಭೇರಿ ಬಾರಿಸಿದೆ. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ಅರೆನಾ ಟ್ರಾನ್ಸ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧ ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 38-32 ಅಂತರದಿಂದ ಗೆಲುವು ದಾಖಲಿಸಿದರು.
ಗುಜರಾತ್ ರ ಸೋನು ಜಗ್ಲಾನ್ ಅವರು 11 ರೈಡ್ ಪಾಯಿಂಟ್ ತಂದುಕೊಡುವ ಮೂಲಕ ಗುಜರಾತ್ ಗೆಲುವಿಗೆ ಕಾರಣರಾದರು. ರಾಕೇಶ್ 5, ರೋಹಿತ್ ಗುಲಿಯಾ 4 ರೈಡ್ ಪಾಯಿಂಟ್ ತಂದುಕೊಟ್ಟರು.
ಇಸ್ಮಾಯಿಲ್ 3 ಟ್ಯಾಕಲ್ ಪಾಯಿಂಟ್ ಮತ್ತು 1 ಬೋನಸ್ ಪಾಯಿಂಟ್ ತಂದುಕೊಟ್ಟರು.
ಇತ್ತ ತೆಲುಗು ಟೈಟನ್ಸ್ ಪರ ಪವನ್ ಶೆರಾವತ್ 6 ರೈಡ್ ಪಾಯಿಂಟ್, 1 ಟ್ಯಾಕಲ್ ಮತ್ತು 4 ಬೋನಸ್ ಮೂಲಕ 11 ಪಾಯಿಂಟ್ ತಂದುಕೊಟ್ಟರು. ರಜನೀಶ್ ದಳಾಳ್ 5, ಸಂಜೀವಿನಿ 2 ಟ್ಯಾಕಪ್, 3 ಬೋನಸ್ ಮೂಲಕ 5 ಪಾಯಿಂಟ್, ರಾಬಿನ್ ಚೌಧರಿ 3 ಬೋನಸ್ ಪಾಯಿಂಟ್ ಪಡೆದರು.
40 ನಿಮಿಷಗಳ ಕಾದಾಟದಲ್ಲಿ ಆರಂಭದಿಂದಲೇ ಯಶಸ್ಸು ಪಡೆದ ಗುಜರಾತ್ ಉದ್ಘಾಟನಾ ಪಂದ್ಯದಲ್ಲಿ ಗೆಲುವು ದಾಖಲಿಸಿತು.
ಪ್ರೊ ಕಬಡ್ಡಿ ಲೀಗ್ 2023 ಯಲ್ಲಿ ಪಂದ್ಯವನ್ನು ಗೆದ್ದ ತಂಡಕ್ಕೆ 5 ಅಂಕಗಳನ್ನು ನೀಡಲಾಗುತ್ತದೆ, ಆದರೆ ಸೋತ ತಂಡಕ್ಕೆ 0 ಅಂಕಗಳನ್ನು ನೀಡಲಾಗುತ್ತದೆ. ಪಂದ್ಯ ಟೈನಲ್ಲಿ ಅಂತ್ಯಗೊಂಡರೆ, ಎರಡೂ ತಂಡಗಳಿಗೆ 3 ಅಂಕಗಳನ್ನು ನೀಡಲಾಗುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ತಂಡಗಳು ಒಂದೇ ಅಂಕಗಳನ್ನು ಪಡೆದರೆ, ಉತ್ತಮ ಅಂಕಗಳನ್ನು ಹೊಂದಿರುವ ತಂಡವನ್ನು ಪಾಯಿಂಟ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರಿಸಲಾಗುತ್ತದೆ.
ಪ್ರೊ ಕಬಡ್ಡಿ ಲೀಗ್ನಲ್ಲಿ ಗೆದ್ದ ತಂಡಕ್ಕೆ 3 ಕೋಟಿ ರೂ ಬಹುಮಾನ ನೀಡುತ್ತಾರೆ.
ರನ್ನರ್ಅಪ್ ತಂಡಕ್ಕೆ 1.8 ಕೋಟಿ ಬಹುಮಾನ
ಸೆಮಿಸ್ನಲ್ಲಿ ಸೋತ ತಂಡಗಳಿಗೆ (ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ) 90 ಲಕ್ಷ ಬಹುಮಾನ.
ಐದು ಮತ್ತು ಆರನೇ ಸ್ಥಾನಕ್ಕೆ 45 ಲಕ್ಷ ಬಹುಮಾನ ನೀಡಲಾಗುತ್ತದೆ.
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…
ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…
ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…
‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…