ಅಹ್ಮದಾಬಾದ್ : ಪ್ರೊ ಕಬಡ್ಡಿ ಲೀಗ್ (ಪಿಕೆಎಲ್ ಸೀಸನ್ 10) 2023 ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಜಯಭೇರಿ ಬಾರಿಸಿದೆ. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ಅರೆನಾ ಟ್ರಾನ್ಸ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧ ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 38-32 ಅಂತರದಿಂದ ಗೆಲುವು ದಾಖಲಿಸಿದರು.
ಗುಜರಾತ್ ರ ಸೋನು ಜಗ್ಲಾನ್ ಅವರು 11 ರೈಡ್ ಪಾಯಿಂಟ್ ತಂದುಕೊಡುವ ಮೂಲಕ ಗುಜರಾತ್ ಗೆಲುವಿಗೆ ಕಾರಣರಾದರು. ರಾಕೇಶ್ 5, ರೋಹಿತ್ ಗುಲಿಯಾ 4 ರೈಡ್ ಪಾಯಿಂಟ್ ತಂದುಕೊಟ್ಟರು.
ಇಸ್ಮಾಯಿಲ್ 3 ಟ್ಯಾಕಲ್ ಪಾಯಿಂಟ್ ಮತ್ತು 1 ಬೋನಸ್ ಪಾಯಿಂಟ್ ತಂದುಕೊಟ್ಟರು.
ಇತ್ತ ತೆಲುಗು ಟೈಟನ್ಸ್ ಪರ ಪವನ್ ಶೆರಾವತ್ 6 ರೈಡ್ ಪಾಯಿಂಟ್, 1 ಟ್ಯಾಕಲ್ ಮತ್ತು 4 ಬೋನಸ್ ಮೂಲಕ 11 ಪಾಯಿಂಟ್ ತಂದುಕೊಟ್ಟರು. ರಜನೀಶ್ ದಳಾಳ್ 5, ಸಂಜೀವಿನಿ 2 ಟ್ಯಾಕಪ್, 3 ಬೋನಸ್ ಮೂಲಕ 5 ಪಾಯಿಂಟ್, ರಾಬಿನ್ ಚೌಧರಿ 3 ಬೋನಸ್ ಪಾಯಿಂಟ್ ಪಡೆದರು.
40 ನಿಮಿಷಗಳ ಕಾದಾಟದಲ್ಲಿ ಆರಂಭದಿಂದಲೇ ಯಶಸ್ಸು ಪಡೆದ ಗುಜರಾತ್ ಉದ್ಘಾಟನಾ ಪಂದ್ಯದಲ್ಲಿ ಗೆಲುವು ದಾಖಲಿಸಿತು.
ಪ್ರೊ ಕಬಡ್ಡಿ ಲೀಗ್ 2023 ಯಲ್ಲಿ ಪಂದ್ಯವನ್ನು ಗೆದ್ದ ತಂಡಕ್ಕೆ 5 ಅಂಕಗಳನ್ನು ನೀಡಲಾಗುತ್ತದೆ, ಆದರೆ ಸೋತ ತಂಡಕ್ಕೆ 0 ಅಂಕಗಳನ್ನು ನೀಡಲಾಗುತ್ತದೆ. ಪಂದ್ಯ ಟೈನಲ್ಲಿ ಅಂತ್ಯಗೊಂಡರೆ, ಎರಡೂ ತಂಡಗಳಿಗೆ 3 ಅಂಕಗಳನ್ನು ನೀಡಲಾಗುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ತಂಡಗಳು ಒಂದೇ ಅಂಕಗಳನ್ನು ಪಡೆದರೆ, ಉತ್ತಮ ಅಂಕಗಳನ್ನು ಹೊಂದಿರುವ ತಂಡವನ್ನು ಪಾಯಿಂಟ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರಿಸಲಾಗುತ್ತದೆ.
ಪ್ರೊ ಕಬಡ್ಡಿ ಲೀಗ್ನಲ್ಲಿ ಗೆದ್ದ ತಂಡಕ್ಕೆ 3 ಕೋಟಿ ರೂ ಬಹುಮಾನ ನೀಡುತ್ತಾರೆ.
ರನ್ನರ್ಅಪ್ ತಂಡಕ್ಕೆ 1.8 ಕೋಟಿ ಬಹುಮಾನ
ಸೆಮಿಸ್ನಲ್ಲಿ ಸೋತ ತಂಡಗಳಿಗೆ (ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ) 90 ಲಕ್ಷ ಬಹುಮಾನ.
ಐದು ಮತ್ತು ಆರನೇ ಸ್ಥಾನಕ್ಕೆ 45 ಲಕ್ಷ ಬಹುಮಾನ ನೀಡಲಾಗುತ್ತದೆ.
ಮಂಡ್ಯ : ಸಾಲ ಬಾಧೆಯಿಂದ ದಂಪತಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಿ.ಹಟ್ಟಣ ಗ್ರಾಮದಲ್ಲಿ…
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…
ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…
ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…
ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…
ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…