ಕ್ರೀಡೆ

ಸ್ಮೃತಿ ಜೊತೆ ಮದುವೆ ಮುಂದೂಡಿಕೆ : ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಪಲಾಶ್‌

ಮುಂಬೈ : ಬಾಲಿವುಡ್-ಕ್ರಿಕೆಟ್‌ನ ಅತ್ಯಂತ ಚರ್ಚಿತ ಪ್ರೇಮಕಥೆಗೆ ಒಂದೇ ದಿನದಲ್ಲಿ ಎಲ್ಲವೂ ತಲೆಕೆಳಗಾಯಿತು! ನವೆಂಬರ್ 23ಕ್ಕೆ ಸಂಗ್ಲಿಯಲ್ಲಿ ಭರ್ಜರಿಯಾಗಿ ನಡೆಯಬೇಕಿದ್ದ ಸ್ಮೃತಿ ಮಂಧಾನ-ಪಲಾಸ್ ಮುಚ್ಛಲ್ ಮದುವೆಯನ್ನು ಕೇವಲ ಗಂಟೆಗಳ ಮೊದಲು ರದ್ದುಗೊಳಿಸಲಾಯಿತು. ಕಾರಣ ಸ್ಮೃತಿಯ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಮದುವೆಯ ದಿನವೇ ಗಂಭೀರ ಹೃದಯಾಘಾತ! ಆ ದಿನದಿಂದ ಇಲ್ಲಿಯವರೆಗೆ ಸೋಷಿಯಲ್ ಮೀಡಿಯಾದಲ್ಲಿ “ಮದುವೆ ರದ್ದಾ?”, “ಬ್ರೇಕಪ್ ಆಯ್ತಾ?” ಎಂಬ ಪ್ರಶ್ನೆಗಳ ಸುರಿಮಳೆ.

ಇದೇ ಮೊದಲ ಬಾರಿಗೆ, ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪಲಾಸ್ ಮುಚ್ಛಲ್ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಕಪ್ಪು ಹೂಡಿ, ಕಪ್ಪು ಗಾಗಲ್ಸ್, ಮುಖದಲ್ಲಿ ಯಾವುದೇ ಭಾವವಿಲ್ಲದೆ, ಶಾಂತವಾಗಿ ನಡೆದು ಹೋದ ಆ ಒಂದು ನಿಮಿಷದ ವೀಡಿಯೋ ಈಗ ವೈರಲ್! ಪಪಾರಾಜಿಗಳು “ಪಲಾಸ್ ಭಾಯ್, ಏನಾಯ್ತು ಸರ್?” ಎಂದು ಕೂಗಿದರೂ ಅವರು ಸಣ್ಣ ನಗು ಮಾತ್ರ ಬೀರಿ ಸೈಲೆಂಟ್ ಆಗಿ ಕಾರಿಗೆ ಹತ್ತಿ ಹೊರಟರು. ಆ ಒಂದು ನೋಟದಲ್ಲಿ ಸಾವಿರ ಕಥೆಗಳು ಅಡಗಿವೆ ಎನ್ನುತ್ತಿವೆ ಸೋಶಿಯಲ್‌ ಮಿಡಿಯಾದ ಕಾಮೆಂಟ್‌ಗಳು.

ಇನ್ನೊಂದೆಡೆ ಸ್ಮೃತಿ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಫೋಟೋ-ವೀಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಪಲಾಸ್ ತನ್ನ ಪ್ರೊಫೈಲ್‌ನಲ್ಲಿ ಇನ್ನೂ ಸ್ಮೃತಿ ಜೊತೆಗಿನ ಪ್ರೀ-ವೆಡ್ಡಿಂಗ್ ಚಿತ್ರಗಳನ್ನು ಇಟ್ಟುಕೊಂಡಿದ್ದಾರೆ. ಇದರಿಂದಲೇ ಅಭಿಮಾನಿಗಳಿಗೆ “ಇವರಿಬ್ಬರ ನಡುವೆ ಇನ್ನೂ ಪ್ರೀತಿ ಇದೆ” ಎಂಬ ಭರವಸೆ ಮೂಡಿದೆ.

ಇದನ್ನು ಓದಿ: ಬುಮ್ರಾ, ಮಂದಾನಗೆ ಬಿಸಿಸಿಐ ಗೌರವ

ಆದರೆ ಟ್ವಿಸ್ಟ್ ಇಲ್ಲಿಗೆ ಮುಗಿಯಲಿಲ್ಲ! ರೆಡ್ಡಿಟ್‌ನಲ್ಲಿ ಪಲಾಸ್‌ಗೆ ಸಂಬಂಧಿಸಿದ ಕೆಲವು “ಚಾಟ್ ಸ್ಕ್ರೀನ್‌ಶಾಟ್‌ಗಳು” ಸೋರಿಕೆಯಾಗಿ ಬಾಂಬ್ ಸಿಡಿದಂತಾಗಿದೆ. ಡ್ಯಾನ್ಸ್ ಕೊರಿಯೋಗ್ರಾಫರ್, ಮಾಡೆಲ್‌ಗಳೊಂದಿಗಿನ ಸಂದೇಶಗಳು ಎಂದು ಹೇಳಲಾದ ಆ ಚಿತ್ರಗಳು ಈಗ ಎಲ್ಲೆಡೆ ಹರಿದಾಡುತ್ತಿವೆ. ಆದರೆ ಪಲಾಸ್‌ ಕುಟುಂಬಸ್ಥರು “ಇದೆಲ್ಲ ಫೇಕ್, ದಯವಿಟ್ಟು ಗಾಸಿಪ್‌ಗೆ ಕಿವಿಗೊಡಬೇಡಿ” ಎಂದು ಕೋರಿದ್ದಾರೆ.

ಈ ನಡುವೆ ಆಸ್ಟ್ರೇಲಿಯಾದಿಂದ ವಾಪಸ್ ಬಂದ ಸ್ಮೃತಿಯ ಬೆಸ್ಟ್ ಫ್ರೆಂಡ್ ಜೆಮಿಮಾ ರಾಡ್ರಿಗೆಸ್ ನೇರವಾಗಿ ಸ್ಮೃತಿ ಮನೆಗೆ ತೆರಳಿ ಸ್ಮೃತಿಯನ್ನು ಆಲಿಂಗನ ಮಾಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಕ್ಷಣವಾಗಿ ಮಾರ್ಪಟ್ಟಿದೆ.

ಈಗ ಎಲ್ಲರ ಕಣ್ಣು ಒಂದೇ ಕಡೆ – ಈ ರೊಮಾಂಟಿಕ್-ಡ್ರಾಮಾಟಿಕ್ ಕಥೆಯ ಮುಂದೇನು? ಮದುವೆ ಮತ್ತೆ ನಡೆಯಲಿದೆಯೇ? ಎಂಬ ಸುದ್ದಿಗಳಿಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ತಾಪಮಾನ ಇಳಿಕೆ : ಬೆಂಗಳೂರಲ್ಲಿ ಚಳಿ ಹೆಚ್ಚಳ

ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…

3 hours ago

ಸಿಎ ಸೈಟ್‌ ಕಟ್ಟಡ ನಿರ್ಮಾಣ ಕಾಲಮಿತಿ ; 3 ವರ್ಷದಿಂದ 5 ವರ್ಷ ಹೆಚ್ಚಳದ ಭರವಸೆ

ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…

3 hours ago

ಮೈಸೂರು : ಆನ್‌ಲೈನ್‌ನಲ್ಲಿ ವೈದ್ಯರೊಬ್ಬರಿಗೆ 82 ಲಕ್ಷ ರೂ. ವಂಚನೆ

ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…

3 hours ago

SC/ST ದೌರ್ಜನ್ಯ ತಡೆ : ನಾಗರಿಕ ಹಕ್ಕು ಜಾರಿ ನೂತನ ಠಾಣೆ ಮೈಸೂರಲ್ಲಿ ಕಾರ್ಯರಂಭ

ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…

3 hours ago

ಕೆಪಿಎ-ಮಹಿಳಾ-ಮಕ್ಕಳ ಅಭಿವೃದ್ಧಿ ಸಂಸ್ಥೆ ನಡುವೆ ಒಡಂಬಡಿಕೆ

ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…

3 hours ago

ಮೈಸೂರಲ್ಲಿ ಎಸ್.ಎಲ್.ಬೈರಪ್ಪ ಸ್ಮಾರಕ ನಿರ್ಮಾಣ : ಸಿಎಂ ಘೋಷಣೆ

ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

4 hours ago