ಕ್ರೀಡೆ

ಮನೀಶ್‌ ಪಾಂಡೆ ಪಡೆಗೆ ರೋಚಕ ಜಯ

ಮೈಸೂರು :ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಯುನೈಟೆಡ್‌ ವಿರುದ್ಧದ ಪಂದ್ಯದಲ್ಲಿ 28 ರನ್‌ಗಳ ಅಂತರದಲ್ಲಿ ಅದ್ಭುತ ಜಯ ದಾಖಲಿಸಿದೆ.

ಜಯ ಗಳಿಸಲು ಗುಲ್ಬರ್ಗ ತಂಡ ಮಂಗಳೂರಿಗೆ 165 ರನ್‌ಗಳ ಕಠಿಣ ಸವಾಲು ನೀಡಿತ್ತು. ಅಭಿನವ್‌ ಮನೋಹರ್‌ (51) ಕ್ರೀಸಿನಲ್ಲಿ ಇರುವವರೆಗೂ ಮಂಗಳೂರು ಗೆಲ್ಲುವ ಲಕ್ಷಣ ತೋರಿತ್ತು, ಆದರೆ ಗುಲ್ಬರ್ಗದ ಬೌಲರ್‌ಗಳಾದ ವಾಧ್ವಾನಿ ಹಾಗೂ ಕಾರ್ತಿಕ್‌ ಎರಡು ಓವರ್‌ಗಳಲ್ಲಿ 5 ವಿಕೆಟ್‌ ಹಂಚಿಕೊಳ್ಳುವ ಮೂಲಕ ಮಂಗಳೂರು ಸೋಲಿನ ಅಂಚಿಗೆ ಸಿಲುಕಿತು. ಅಂತಿಮವಾಗಿ 8 ಎಸೆತ ಬಾಕಿ ಇರುವಾಗಲೇ ಮಂಗಳೂರು 136 ರನ್‌ ಗಳಿಸಿ ಸರ್ವ ಪತನ ಕಂಡಿತು.

ಸವಾಲಿನ ಮೊತ್ತ ಗಳಿಸಿದ ಗುಲ್ಬರ್ಗ:

ನಾಯಕ ಮನೀಶ್‌ ಪಾಂಡೆ (58) ಹಾಗೂ ಕೋದಂಡ ಅಜಿತ್‌ (38) ಅವರ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡ ಮಂಗಳೂರು ಯುನೈಟೆಡ್‌ ವಿರುದ್ಧ 6 ವಿಕೆಟ್‌ಗೆ 164 ರನ್‌ ಗಳಿಸಿತು. ದೇವದತ್ತ ಪಡಿಕ್ಕಲ್‌ 25 ರನ್‌ ಗಳಿಸಿ ಗುಲ್ಬರ್ಗಕ್ಕೆ ಉತ್ತಮ ಆರಂಭ ಕಲ್ಪಿಸಿದ್ದರು.

ನಾಯಕ ಪಾಂಡೆ 40 ಎಸೆಗಳನ್ನೆದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 58 ರನ್‌ ಗಳಿಸಿ ಕುಸಿದ ತಂಡಕ್ಕೆ ನೆರವಾದರು. ಪಡಿಕ್ಕಲ್‌ ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಸೇರಿತ್ತು. ಅಜಿತ್‌ ಕಾರ್ತಿಕ್‌ 38* ರನ್‌ ಗಳಿಸಲು 5.2 ಓವರ್‌ಗಳಲ್ಲು ವಿವಿಯೋಗಿಸಿದರು. ಇದು ಮಂದಗತಿಯ ರನ್‌ ಗಳಿಕೆಯಾಗಿ ಕಾಣಬಹುದು, ಆದರೆ ವಿಕೆಟ್‌ ಉರುಳುತ್ತಿರುವಾಗ ನಾಯಕನಿಗೆ ಉತ್ತಮ ರೀತಿಯಲ್ಲಿ ಸಾಥ್‌ ನೀಡಿ ಇನ್ನಿಂಗ್ಸ್‌ ಕಟ್ಟುವುದೂ ಮುಖ್ಯವಾಗಿತ್ತು. ಕಾರ್ತಿಕ್‌ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿತ್ತು.

ಕೊನೆಯ ಕ್ಷಣದಲ್ಲಿ ರಿತೇಶ್‌ ಭಟ್ಕಳ್‌ 6 ಎಸೆತಗಳನ್ನೆದುರಿಸಿ ಗಳಿಸಿದ 18 ರನ್‌ನಿಂದಾಗಿ ಗುಲ್ಬರ್ಗ ಸವಾಲಿನ ಮೊತ್ತ ಗಳಿಸುವಲ್ಲಿ ಯಶಸ್ವಿಯಾಯಿತು. ಮಂಗಳೂರು ಯುನೈಟೆಡ್‌ ಪರ ಎಚ್‌.ಎಸ್‌ ಶರತ್‌ ಹಾಗೂ ವೈಶಾಖ್‌ ವಿಜಯ್‌ ಕುಮಾರ್‌ ತಲಾ 2 ವಿಕೆಟ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌:

ಗುಲ್ಬರ್ಗ ಮಿಸ್ಟಿಕ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 164 (ಮನೀಶ್‌ ಪಾಂಡೆ 58, ದೇವದತ್ತ ಪಡಿಕ್ಕಲ್‌ 25, ಅಜಯ್‌ ಕಾರ್ತಿಕ್‌ 38* ವೈಶಾಖ್‌ ವಿಜಯ್‌ ಕುಮಾರ್‌ 31ಕ್ಕೆ 2, ಶರತ್‌ 43ಕ್ಕೆ 2)

ಮಂಗಳೂರು ಯುನೈಟೆಡ್‌: 18.4 ಓವರ್‌ಗಳಲ್ಲಿ 136 (ಅಭಿನವ್‌ ಮನೋಹರ್‌ 51, ಸುಜಯ್‌ ಸತರ್‌ 22, ಕೌಶಲ್‌ ವಾಧ್ವಾನಿ 48ಕ್ಕೆ 3, ಕಾರ್ತಿಕ್‌ 9ಕ್ಕೆ 2, ಪವನ್‌ ಭಾಟಿಯಾ 26ಕ್ಕೆ 2)

andolanait

Recent Posts

ಹುಣಸೂರು: ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಹುಣಸೂರು: ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಮಾಹಿತಿ ಪ್ರಕಾರ…

17 mins ago

ಟಿ.ನರಸೀಪುರ: ಗುಂಜಾನರಸಿಂಹಸ್ವಾಮಿ ದರ್ಶನಕ್ಕೆ ಹರಿದುಬಂದ ಜನಸಾಗರ

ಟಿ.ನರಸೀಪುರ: ಇಂದು ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದ್ದು, ಟಿ.ನರಸೀಪುರದ ಪ್ರಸಿದ್ಧ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ…

33 mins ago

ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ: ಸಚಿವ ಪರಮೇಶ್ವರ್‌

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್‌ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ಕೊಡುವ ಕುರಿತು ಗೃಹ ಸಚಿವ…

2 hours ago

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಬೇಗಂ ಖಲೀದಾ ಜಿಯಾ ನಿಧನ

ಡಾಕಾ: ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಇಂದು ಬೆಳಿಗ್ಗೆ ಡಾಕಾದ ಎವರ್‌ಕೇರ್‌…

2 hours ago

ಮೈಸೂರಿನಲ್ಲಿ ವೈಕುಂಠ ಏಕಾದಶಿ ಸಂಭ್ರಮ: ದೇಗುಲಗಳಲ್ಲಿ ಭಕ್ತಸಾಗರ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀವೆಂಟಕರಮಣಸ್ವಾಮಿ ದೇವಾಲಯವು ಇಂದು…

2 hours ago

ಹೊಸ ವರ್ಷಾಚರಣೆ: ರಾಜ್ಯದೆಲ್ಲೆಡೆ ತುರ್ತು ಚಿಕಿತ್ಸಾ ಸೇವೆಗೆ ಸಿದ್ಧತೆ

ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ರಾಜ್ಯದ ವಿವಿಧೆಡೆ ಸಾರ್ವಜನಿಕರು ಅಸ್ವಸ್ಥರಾಗುವ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ…

3 hours ago