ಬೆಂಗಳೂರು : ನಾಯಕ ಮಯಾಂಕ್ ಅಗರ್ವಾಲ್ ಅವರ ಅಮೋಘ ಶತಕದ ಬಲದಿಂದಾಗಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಮೈಸೂರು ವಾರಿಯರ್ಸ್ ವಿರುದ್ಧ 10 ರನ್ಗಳ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಮಹಾರಾಜ ಟೂರ್ನಿಯ 2023ನೇ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ನಾಯಕ ಹಾಗೂ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (57 ಎಸೆತ 105 ರನ್) ಗಳಿಸಿ ಔಟಾಗಿದ್ದಾರೆ. ಈ ಸ್ಪೋಟಕ ಇನ್ನಿಂಗ್ಸ್ನಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್ಗಳು ಒಳಗೊಂಡಿತ್ತು. 19ನೇ ಓವರ್ನಲ್ಲಿ ಮಯಾಂಕ್ ಗೌತಮ್ ಮಿಶ್ರಾಗೆ ವಿಕೆಟ್ ಒಪ್ಪಿಸುವ ಮೂಲಕ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಇನ್ನು ಬೆಂಗಳೂರು ಬ್ಲಾಸ್ಟರ್ಸ್ 200ರೆ ಗಡಿ ದಾಟಲು ಕಾರಣವಾದ ಮತ್ತೋರ್ವ ಆಟಗಾರನೆಂದರೆ ಸೂರಜ್ ಅಹುಜಾ. ಕೇವಲ 10 ಎಸೆತಗಳಲ್ಲಿ 35 ರನ್ಗಳನ್ನು ಬಾರಿಸಿ ಮಿಂಚಿದರು. ಹೀಗಾಗಿ ಬ್ಲಾಸ್ಟರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ಗಳನ್ನು ಗಳಿಸಿತು.
ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಮೈಸೂರು ವಾರಿಯರ್ಸ್ ಅದ್ಭುತ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 4.5 ಓವರ್ಗಳಲ್ಲಿ 60 ರನ್ಗಳಿಸುವ ಮೂಲಕ ದಿಟ್ಟವಾಗಿ ರನ್ ಬೆನ್ನಟ್ಟುವ ಮುನ್ಸುಆಚನೆ ನೀಡಿತು. ಆರಂಭಿಕ ಆಟಗಾರ ಎಸ್ಯು ಕಾರ್ತಿಕ್ 70 (30) ತಂಡಕ್ಕೆ ಚೇತರಿಕೆ ನೀಡಿದರು. ಅವರಿಗೆ ಜೊತೆಯಾಗಿ ಸಮರ್ಥ್ 35(16) ರನ್ ಹೊಳೆ ಹರಿಸಿದರು.
ಮೈಸೂರು ವಾರಿಯರ್ಸ್ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಇಳಿದಾಗ ಬೌಂಡರಿಗಳ ಮಳೆ ಸುರಿಯುತ್ತಿತ್ತು, ಏಕೆಂದರೆ ಆರಂಭಿಕರಾದ ಮತ್ತು ರವಿಕುಮಾರ್ ಸಮರ್ಥ್ (16 ಎಸೆತಗಳಲ್ಲಿ 35) ಸಮರ್ಥ್ ಔಟಾಗುವ ಮೊದಲು 29 ಎಸೆತಗಳಲ್ಲಿ 60 ರನ್ಗಳ ಜೊತೆಯಾಟ ನಡೆಸಿದರು. ಕಾರ್ತಿಕ್ 22 ಎಸೆತಗಳಲ್ಲಿ ಪಂದ್ಯಾವಳಿಯ ಅತ್ಯಂತ ವೇಗದ ಅರ್ಧಶತಕವನ್ನು ತಂದಾಗ ದಾಳಿಯು ಮುಂದುವರೆಯಿತು, ಆರು ಓವರ್ಗಳ ನಂತರ ತಂಡವನ್ನು 88-1 ಕ್ಕೆ ಕೊಂಡೊಯ್ಯಿತು, ಇದು ಈ ಆವೃತ್ತಿಯಲ್ಲಿ ಪವರ್ಪ್ಲೇಯ ಕೊನೆಯಲ್ಲಿ ಅತ್ಯಧಿಕ ಸ್ಕೋರ್ ಆಗಿತ್ತು.
ನಾಯಕ ಕರುಣ್ ನಾಯರ್ 32(34) ಮಂದಗತಿಯ ಆಟ ತಂಡಕ್ಕೆ ಚೇತರಿಕೆ ನೀಡಿತಾದರು ಗೆಲ್ಲುವಲ್ಲಿ ವಿಫಲವಾಯಿತು. ಅಂತಿಮವಾಗಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 202ರನ್ ಗಳಿಸಲಷ್ಟೇ ಶಕ್ತವಾಯಿತು. ಆಮೂಲಕ ಬೆಂಗಳೂರು ತನ್ನ ಮೊದಲ ಗೆಲುವನ್ನು ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್ಗಳಲ್ಲಿ 212-4: ಮಯಾಂಕ್ ಅಗರ್ವಾಲ್ 105( 57) 105, ಸೂರಜ್ ಅಹುಜಾ 35*(10), ಡಿ ನಿಶ್ಚಲ್ 29(25), ಜಗದೀಶ ಸುಚಿತ್ 2-34, ಮೋನಿಶ್ ರೆಡ್ಡಿ 1-32, ಗೌತಮ್ ಮಿಶ್ರಾ 1-32
ಮೈಸೂರು ವಾರಿಯರ್ಸ್ 20 ಓವರ್ಗಳಲ್ಲಿ 202-8: ಎಸ್ಯು ಕಾರ್ತಿಕ್ 70(30), ರವಿಕುಮಾರ್ ಸಮರ್ಥ್ 35(16), ಕರುಣ್ ನಾಯರ್ 32(34), ಮೊಹ್ಸಿನ್ ಖಾನ್ 4-35, ಸರ್ಫರಾಜ್ ಅಶ್ರಫ್ 2-23, ಎಲ್ ಆರ್ ಕುಮಾರ್ 1-46
ಪಂದ್ಯಶ್ರೇಷ್ಠ : ಮಯಾಂಕ್ ಅಗರ್ವಾಲ್
ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…
ಮುಂಬೈ: ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…
ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…
ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…
ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…