ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಐದನೇ ಪಂದ್ಯ ಇಂದು ( ನವೆಂಬರ್ 23 ) ಅರ್ಬನ್ರೈಸರ್ಸ್ ಹೈದರಾಬಾದ್ ಹಾಗೂ ಇಂಡಿಯಾ ಕ್ಯಾಪಿಟಲ್ಸ್ ತಂಡಗಳ ನಡುವೆ ರಾಂಚಿಯ ಜೆಎಸ್ಡಿಎ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಕಾಂಪ್ಲೆಕ್ಸ್ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸುರೇಶ್ ರೈನಾ ನಾಯಕತ್ವದ ಅರ್ಬನ್ರೈಸರ್ಸ್ ಹೈದರಾಬಾದ್ ತಂಡ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್ ತಂಡದ ವಿರುದ್ಧ 3 ರನ್ಗಳ ರೋಚಕ ಜಯ ದಾಖಲಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅರ್ಬನ್ರೈಸರ್ಸ್ ಹೈದರಾಬಾದ್ ತಂಡ ಗುರುಕೀರತ್ ಸಿಂಗ್, ನಾಯಕ ಸುರೇಶ್ ರೈನಾ ಹಾಗೂ ಪೀಟರ್ ಟ್ರೆಗೊ ಅಬ್ಬರದ ಬ್ಯಾಟಿಂಗ್ ಸಹಾಯದಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿ ಇಂಡಿಯಾ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 190 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಇಂಡಿಯಾ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿ 3 ರನ್ಗಳ ಅಂತರದಿಂದ ಸೋಲನ್ನು ಅನುಭವಿಸಿತು. ಇದು ಅರ್ಬನ್ರೈಸರ್ಸ್ ಹೈದರಾಬಾದ್ ಈ ಟೂರ್ನಿಯಲ್ಲಿ ದಾಖಲಿಸಿದ ಎರಡನೇ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ ತಂಡ ಅಗ್ರಸ್ಥಾನದಲ್ಲಿದೆ.
ಅಂತಿಮ ಹಂತದಲ್ಲಿ ಇಂಡಿಯಾ ಕ್ಯಾಪಿಟಲ್ಸ್ ತಂಡದ ಆಶ್ಲೀ ನರ್ಸ್ ಅಬ್ಬರಿಸಿದರೂ ಕೊನೆಯ ಓವರ್ನಲ್ಲಿ ಅರ್ಬನ್ರೈಸರ್ಸ್ ಗೆಲುವು ದಾಖಲಿಸಿತು. ಕೊನೆಯ 12 ಎಸೆತಗಳಲ್ಲಿ ಗೆಲ್ಲಲು 31 ರನ್ಗಳ ಅಗತ್ಯವಿದ್ದಾಗ 19ನೇ ಓವರ್ನಲ್ಲಿ ಆಶ್ಲೀ ನರ್ಸ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಚಚ್ಚಿ ಗೆಲುವಿನ ಭರವಸೆ ಮೂಡಿಸಿದರು. ಅಂತಿಮ ಓವರ್ನಲ್ಲಿ ಗೆಲ್ಲಲು 11 ರನ್ಗಳ ಅಗತ್ಯವಿದ್ದಾಗ ಪೀಟರ್ ಟ್ರೆಗೋ ಯಾವುದೇ ಬೌಂಡರಿ ನೀಡದೇ ತಂಡಕ್ಕೆ ಗೆಲುವು ತಂದಿಟ್ಟರು. ತಂಡದ ಪರ ಅಬ್ಬರಿಸಿದ ಗುರುಕೀರತ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅರ್ಬನ್ರೈಸರ್ಸ್ ಇನ್ನಿಂಗ್ಸ್: ಅರ್ಬನ್ ರೈಸರ್ಸ್ ಪರ ಡ್ವೇಯ್ನ್ ಸ್ಮಿತ್ 3, ಮಾರ್ಟಿನ್ ಗಪ್ಟಿಲ್ 2, ಗುರುಕೀರತ್ ಸಿಂಗ್ 54 ಎಸೆತಗಳಲ್ಲಿ 89, ಸುರೇಶ್ ರೈನಾ 27 ಎಸೆತಗಳಲ್ಲಿ 46, ಸ್ಟುವರ್ಟ್ ಬಿನ್ನಿ 1, ಪೀಟರ್ ಟ್ರೆಗೋ 20 ಎಸೆತಗಳಲ್ಲಿ ಅಜೇಯ 36 ರನ್, ಯೋಗೇಶ್ ನಗರ್ ಅಜೇಯ 6 ರನ್ ಬಾರಿಸಿದರು.
ಇಂಡಿಯಾ ಕ್ಯಾಪಿಟಲ್ಸ್ ಪರ ಇಸೂರು ಉಡಾನಾ ಎರಡು ವಿಕೆಟ್, ಮುನಾಫ್ ಪಟೇಲ್, ಕೆಪಿ ಅಪ್ಪಣ್ಣ, ರಸ್ಟಿ ದೆರಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಇಂಡಿಯಾ ಕ್ಯಾಪಿಟಲ್ಸ್ ಇನ್ನಿಂಗ್ಸ್: ಕ್ಯಾಪಿಟಲ್ಸ್ ಪರ ಗೌತಮ್ ಗಂಭೀರ್ ಡಕ್ಔಟ್, ಹಶೀಮ್ ಆಮ್ಲಾ 5, ಕಿರ್ಕ್ ಎಡ್ವಾರ್ಡ್ 11, ಬೆನ್ ಡಂಕ್ 5, ರಿಕಾರ್ಡೊ ಪೊವೆಲ್ 26, ಕೆವಿನ್ ಪೀಟರ್ಸನ್ 48 ಎಸೆತಗಳಲ್ಲಿ 77, ಆಶ್ಲೀ ನರ್ಸ್ 25 ಎಸೆತಗಳಲ್ಲಿ ಅಜೇಯ 41 ಹಾಗೂ ರಸ್ಟಿ ದೆರಾನ್ ಅಜೇಯ 2 ರನ್ ಬಾರಿಸಿದರು.
ಅರ್ಬನ್ರೈಸರ್ಸ್ ಹೈದರಾಬಾದ್ ಪರ ಕ್ರಿಸ್ ಎಮ್ಪೊಫು ಎರಡು ವಿಕೆಟ್, ಪೀಟರ್ ಟ್ರೆಗೊ, ಟಿನೊ ಬೆಸ್ಟ್ ಹಾಗೂ ಪವನ್ ಸುಯಲ್ ತಲಾ ಒಂದೊಂದು ವಿಕೆಟ್ ಪಡೆದರು.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…