ಕ್ರೀಡೆ

ಕೆ.ಎಲ್‌ ರಾಹುಲ್‌ ಹೋರಾಟ ವ್ಯರ್ಥ, ಸೋಲುವ ಪಂದ್ಯದಲ್ಲಿ ಗೆದ್ದ ಗುಜರಾತ್‌!

ಲಖನೌ: ಗುಜರಾತ್‌ ಟೈಟನ್ಸ್‌ ಎದುರು ಸುಲಭವಾಗಿ ಗೆಲ್ಲುವ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಕೇವಲ 7 ರನ್‌ಗಳಿಂದ ಸೋಲು ಅನುಭವಿಸಿತು. ಕೇವಲ 136 ರನ್‌ ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್, ಕೆ.ಎಲ್‌ ರಾಹುಲ್‌ ಅರ್ಧಶತಕದ ಹೊರತಾಗಿಯೂ ಸೋಲಿನ ಆಘಾತ ಅನುಭವಿಸಿತು.

ಇಲ್ಲಿನ ಏಕನಾ ಸ್ಟೇಡಿಯಂನಲ್ಲಿ ಗುಜರಾತ್‌ ಟೈಟನ್ಸ್ ನೀಡಿದ್ದ 136 ರನ್‌ ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್ ತಂಡ ಸುಲಭವಾಗಿ ಗೆಲುವು ದಾಖಲಿಸಲಿದೆ ಎಂದು ಭಾವಿಸಲಾಗಿತ್ತು. ಅದರಂತೆ 6.3 ಓವರ್‌ಗಳಿಗೆ ಕೆ.ಎಲ್‌ ರಾಹುಲ್‌ ಹಾಗೂ ಕೈಲ್‌ ಮೇಯರ್ಸ್‌ ಜೋಡಿ 55 ರನ್‌ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟಿತ್ತು.

ಕೈಲ್‌ ಮೇಯರ್ಸ್‌ (24) ಹಾಗೂ ಕೃಣಾಲ್ ಪಾಂಡ್ಯ (23) ಸಿಕ್ಕ ಉತ್ತಮ ಆರಂಭದಲ್ಲಿ ಪಂದ್ಯ ಮುಗಿಸುವಲ್ಲಿ ಎಡವಿದರು. ಇದರ ಹೊರತಾಗಿಯೂ ಕೆಎಲ್‌ ರಾಹುಲ್‌ 61 ಎಸೆತಗಳಲ್ಲಿ 68 ರನ್‌ ಗಳಿಸಿ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ, ಡೆತ್‌ ಓವರ್‌ಗಳಲ್ಲಿ ಮೊಹಮ್ಮದ್‌ ಶಮಿ ಹಾಗೂ ಮೋಹಿತ್ ಶರ್ಮಾ ಶಿಸ್ತುಬದ್ದ ದಾಳಿಯ ಎದುರು ಪಂಜಾಬ್‌ ತೀವ್ರ ಹಿನ್ನಡೆ ಅನುಭವಿಸಿತು.

ಕೊನೆಯ 3 ಓವರ್‌ಗಳಲ್ಲಿ 23 ರನ್ ಅಗತ್ಯವಿದ್ದಾಗ 18ನೇ ಓವರ್‌ನಲ್ಲಿ ಮೋಹಿತ್‌ ಶರ್ಮಾ ಕೇವಲ 6 ರನ್‌ ಕೊಟ್ಟರೆ, 19ನೇ ಓವರ್‌ನಲ್ಲಿ ಮೊಹಮ್ಮದ್‌ ಶಮಿ ಕೇವಲ 5 ರನ್‌ಗೆ ಕೆ.ಎಲ್‌ ರಾಹುಲ್‌ ಪಡೆಯನ್ನು ನಿಯಂತ್ರಿಸಿದರು. ಆ ಮೂಲಕ ಕೊನೆಯ ಓವರ್‌ನಲ್ಲಿ 12 ರನ್‌ ಅಗತ್ಯವಿದ್ದಾಗ ಮೊಹಿತ್‌ ಶರ್ಮಾ, ಕೆ.ಎಲ್‌ ರಾಹುಲ್‌, ಮಾರ್ಕಸ್‌ ಸ್ಟೋಯ್ನಿಸ್‌ ಅವರನ್ನು ಔಟ್ ಮಾಡಿದರು. ಇದರ ಜೊತೆಗೆ ಆಯುಷ್‌ ಬದೋನಿ ಮತ್ತು ದೀಪಕ್‌ ಹೂಡ ರನ್‌ಔಟ್‌ ಆದರು. ಅಂತಿಮವಾಗಿ ಗುಜರಾತ್‌ ಟೈಟನ್ಸ್‌ 7 ರನ್‌ ರೋಚಕ ಗೆಲುವು ತನ್ನದಾಗಿಸಿಕೊಂಡಿತು. ಅದಹಾಗೆ ಲೋ ಸ್ಕೋರಿಂಗ್‌ ಪಂದ್ಯದ ಕೊನೆಯ 5 ಓವರ್‌ಗಳಿಗೆ ಕೇವಲ 19 ರನ್‌ ನೀಡಿದ ಗುಜರಾತ್‌ ಟೈಟನ್ಸ್‌ ಬೌಲರ್‌ಗಳಿಗೆ ಈ ಗೆಲುವಿನ ಶ್ರೇಯ ಸಲ್ಲಬೇಕು.

ಗುಜರಾತ್ ಟೈಟನ್ಸ್‌ ಪರ ನೂರ್ ಅಹ್ಮದ್‌ ಹಾಗೂ ಮೋಹಿತ್‌ ಶರ್ಮಾ ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಕೇವಲ 3 ಓವರ್‌ಗಳಿಗೆ 17 ರನ್‌ ನೀಡಿ ಎರಡು ವಿಕೆಟ್‌ ಕಿತ್ತ ಮೋಹಿತ್‌ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್‌ ವಿವರ

ಗುಜರಾತ್‌ ಟೈಟನ್ಸ್‌: 20 ಓವರ್‌ಗಳಿಗೆ 135-6 (ಹಾರ್ದಿಕ್‌ ಪಾಂಡ್ಯ 66, ವೃದ್ದಿಮಾನ್ ಸಹಾ 47; ಕೃಣಾಲ್‌ ಪಾಂಡ್ಯ 16ಕ್ಕೆ 2, ಮಾರ್ಕಸ್‌ ಸ್ಟೋಯ್ನಿಸ್‌ 20ಕ್ಕೆ 2)

ಲಖನೌ ಸೂಪರ್‌ ಜಯಂಟ್ಸ್: 
20 ಓವರ್‌ಗಳಿಗೆ 128-7 (ಕೆ.ಎಲ್‌ ರಾಹುಲ್‌ 68, ಕೈಲ್‌ ಮೇಯರ್ಸ್‌ 24, ಕೃಣಾಲ್‌ ಪಾಂಡ್ಯ 23; ಮೋಹಿತ್‌ ಶರ್ಮಾ 17ಕ್ಕೆ 2, ನೂರ್‌ ಅಹ್ಮದ್‌ 18ಕ್ಕೆ 2)

andolanait

Recent Posts

ಅಕಾಲಿಕ ಮಳೆಯಿಂದ ಒಣ ಮರ ಬಿದ್ದು ದೇಗುಲ ಹಾನಿ

ವಿರಾಜಪೇಟೆ: ಅಕಾಲಿಕ ಮಳೆಯ ಪರಿಣಾಮ ಒಣಗಿದ ಮರ ದೇಗುಲದ ಕಟ್ಟಡ ದ ಮೇಲೆ ಬಿದ್ದು ಹಾನಿಯಾಗಿರುವ ಘಟನೆ ವಿರಾಜಪೇಟೆ ತೆಲುಗರಬೀದಿ…

5 hours ago

ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ಸೂಕ್ತ ಕ್ರಮ: ಡಿಸಿಎಫ್‌ ಶ್ರೀಪತಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್, ಆನೆಕಂದಕ ನಿರ್ಮಾಣ…

5 hours ago

ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರ ಭರವಸೆ ಈಡೇರಿಕೆಗೆ ಆಗ್ರಹ: ತಹಶಿಲ್ದಾರ್‌ ಮುಖಾಂತರ ಸರ್ಕಾರಕ್ಕೆ ಮನವಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಚ್ 2026ರ ರಾಜ್ಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿದ್ದ ಹಿಂದಿನ…

5 hours ago

ಹನೂರು| ಚಿರತೆ ದಾಳಿಗೆ ಹಸು ಬಲಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ಚಿರತೆ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ರಾಮಾಪುರ ಸಮೀಪದ…

6 hours ago

ಹನೂರು| ಭೂತರಾಯನ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಎಂ.ಆರ್.ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ರಾಮನಗುಡ್ಡ ಜಲಾಶಯಕ್ಕೆ ನೀರು ತುಂಬಿಸಿ, ಅಲ್ಲಿಂದ…

6 hours ago

ಎಷ್ಟೇ ಟೀಕಿಸಿದರೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ: ಗೃಹ ಸಚಿವ ಪರಮೇಶ್ವರ್‌

ತುಮಕೂರು: ಎಷ್ಟೇ ಟೀಕೆ ಟಿಪ್ಪಣಿಗಳು ಬಂದರೂ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಭರವಸೆ…

6 hours ago