ಕ್ರೀಡೆ

ಭಾರತ ಸೋಲುವ ಮೂಲಕ ಕ್ರಿಕೆಟ್‌ ಗೆದ್ದಿದೆ: ಅಬ್ದುಲ್‌ ರಝಾಕ್

ನವದೆಹಲಿ : ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯುದ್ದಕ್ಕೂ ಭಾರತ ವಿರೋದ್ಧ ಹಲವಾರು ಗಂಭೀರ ಆರೋಪಗಳನ್ನು ಪಾಕಿಸ್ತಾನ ಮಾಡುತ್ತಾ ಬರುತ್ತಿದೆ.

ಭಾರತ ಆತಿಥ್ಯ ವಹಿಸಿದ್ದ ಏಕದಿನ ವಿಶ್ವಕಪ್‌ 2023 ರಲ್ಲಿ ನೀರಸ ಪ್ರದರ್ಶನ ತೋರಿದ ಪಾಕಿಸ್ತಾನ ಲೀಗ್‌ ಹಂತದಲ್ಲಿ ಟೂರ್ನಿಯಿಂದ ಹೊರ ನಡೆದಿತ್ತು. ಇದರಿಂದ ಅಸಮಧಾನಗೊಂಡಿದ್ದ ಪಾಕ್‌ ಮಾಜಿ ಆಟಗಾರರು ಭಾರತ ವಿರುದ್ಧ ಒಂದಲ್ಲಾ ಒಂದು ಆರೋಪ ಮಾಡುತ್ತಲೇ ಬರುತ್ತಿದ್ದಾರೆ.

ಪಾಕ್‌ ಆಟಗಾರ ಹಸನ್‌ ರಾಜಾ ಭಾರತ ಆಟಗಾರರಿಗೆ ಬೇರೆ ಚೆಂಡು ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಬಾಲಿವುಡ್‌ ನಟಿ ಐಶ್ವರ್ಯ ರೈನ್ನು ಮದುವೆಯಾಗಿ ಸುಂದರವಾದ ಮಗುವನ್ನು ಅವರಿಂದ ನಿರೀಕ್ಷಿಸಲು ಸಾಧ್ಯವೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಪಾಕ್‌ ಆಲ್‌ರೌಂಡರ್‌ ಅಬ್ದುಲ್‌ ರಝಾಕ್‌ ಇದೀಗ ಭಾರತ ವಿಶ್ವಕಪ್‌ ಸೋತಿದ್ದಕ್ಕೆ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ.

ಭಾರತ ವಿಶ್ವಕಪ್‌ ಆಡಲು ತಮಗೆ ಬೇಕಾದ ಹಾಗೆ ಪಿಚ್‌ ಕಂಡಿಷನ್‌ ಅನ್ನು ಬದಲಾಯಿಸಿಕೊಂಡಿದೆ. ಇದು ಭಾರತಕ್ಕೆ ಅನುಕೂಲವಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಜೊತೆಗೆ ಭಾರತ ತಂಡ ಏಕದಿನ ವಿಶ್ವಕಪ್‌ ಫೈನಲ್‌ ನಲ್ಲಿ ಸೋತಿದ್ದು ಒಳ್ಳೆಯದು. ಭಾರತ ಸೋತಿದ್ದಕ್ಕೆ ಕ್ರಿಕೆಟ್‌ ಗೆದ್ದಿತು ಎಂದು ಅವರು ಅಭಿಪ್ರಾಯಪಟ್ಟದ್ದಾರೆ. ಬ್ಯಾಟಿಂಗ್‌ ಬೌಲಿಂಗ್‌ ಎರಡರಲ್ಲಿಯೂ ಹೀನಾಯ ಪ್ರದರ್ಶನ ತೋರಿದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ೬ ವಿಕೆಟ್‌ಗಳ ಸೋಲು ಅನುಭವಿಸಿತ್ತು. ೧೨ ವರ್ಷಗಳ ಕಪ್‌ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು. ಇತ್ತ ಅತ್ಯುತ್ತಮ ಪ್ರದರ್ಶನ ತೋರಿದ ಆಸೀಸ್‌ ತವರು ನೆಲದಲ್ಲಿ ಭಾರತವನ್ನು ಮಣಿಸಿ ೬ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ರಝಾಕ್‌ ಹೇಳಿದೇನು? : ಪಾಕ್‌ ನ ಖಾಸಗಿ ಟಿವಿ ಶೋ ಒಂದರಲ್ಲಿ ಮಾತನಾಡಿದ್ದ ರಝಾಕ್‌, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಭಾರತ ಸೋಲಿನೊಂದಿಗೆ ಕ್ರಿಕೆಟ್‌ ಗೆದ್ದಿದೆ, ಏಕೆಂದರೆ ಭಾರತ ಅವರಿಗೆ ಬೇಕಾದ ಹಾಗೆ, ಅವರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದರು. ಒಂದು ವೇಳೆ ಅವರು ಈ ಟೂರ್ನಿಯಲ್ಲಿ ಭಾರತ ಗೆದ್ದಿದ್ದರೇ ಕ್ರಿಕೆಟ್‌ ಮೇಲೆ ಅವರು ಪ್ರಾಬಲ್ಯ ಸಾಧಿಸುತ್ತಿದ್ದರು. ಭಾರತ ತಂಡ ಫೈನಲ್‌ ನಲ್ಲಿ ಗೆದ್ದಿದ್ದರೇ ನನಗೆ ನಿಜವಾಗಿಯೂ ಬೇಸವಾಗುತ್ತಿತ್ತು. ಕ್ರಿಕೆಟ್‌ ಧೈರ್ಯ ಮತ್ತು ಮಾನಸಿಕವಾಗಿ ಸದೃಡವಾಗಿರುವ ತಂಡಕ್ಕೆ ನೆರವಾಗುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಭಾರತ ಗೆದ್ದಿದ್ದರೆ ನಿಜವಾಗಿಯೂ ನಾವು ಪಶ್ಚಾತಾಪ ಪಡುತ್ತಿದ್ದೆವು. ಅವರಿಗೆ ಬೇಕಾದ ಹಾಗೆ ಕಂಡಿಷನ್‌ ನ್ನು ಸಂಪೂರ್ಣವಾಗಿ ಬಳಸಕೊಂಡಿದ್ದಾರೆ. ಸೆಮಿಸ್‌ ನಲ್ಲಿ ಬೃಹತ್‌ ಮೊತ್ತ ಕಲೆಹಾಕಿ, ಫೈನಲ್‌ನಲ್ಲಿ ನಿಧಾನಗತಿಯಿಂದ ಪಿಚ್‌ ಕೂಡಿತ್ತು. ಇಲ್ಲಿ ಒಂದು ತಪ್ಪು ನಡೆದಿದೆ ಎಂದು ನನಗನಿಸುತ್ತಿದೆ. ಪಿಚ್‌ಗಳು, ಅವುಗಳ ವಾತಾವರಣ ಎರಡು ತಂಡಗಳಿಗೆ ಸಮತೋಲನದಿಂದ ಕೂಡಿರಬೇಕು. ಕೊಹ್ಲಿ ಶತಕ ಸಿಡಿಸಿದ್ದರೆ ಭಾರತ ಅದರ ಲಾಭ ಟೀಂ ಇಂಡಿಯಾ ಪಡೆಯುತ್ತಿತ್ತು. ಆ ಮೂಲಕ ಕಪ್‌ ಗೆಲ್ಲುತ್ತಿದ್ದರು ಎಂದು ಅವರು ದೂರಿದ್ದಾರೆ.

ವಿಶ್ವಕಪ್‌ ಟೂರ್ನಿ ವೇಳೆ ಭಾರತದ ಮೇಲೆ ವಿಭಿನ್ನ ಚೆಂಡು ಬಳಕೆ, ಡಿಆರ್‌ಎಸ್‌, ಪಿಚ್‌ ಸೇರಿದಂತೆ ಹಲವಾರು ಆರೋಪಗಳನ್ನು ಮಾಡಲಾಗಿತ್ತು.

andolanait

Recent Posts

ಚಿರತೆ ದಾಳಿ : ರೈತನಿಗೆ ಗಾಯ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್ ರೈತ…

30 mins ago

ಮಹಾತ್ಮ ಗಾಂಧಿ ಪುಣ್ಯತಿಥಿ | ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರ ನಮನ

ಹೊಸದಿಲ್ಲಿ : ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರ 78ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ…

1 hour ago

ಡ್ರಗ್ಸ್‌ ಗುಮಾನಿ | ಎನ್‌ಸಿಬಿ ಅಧಿಕಾರಿಗಳ ದಾಳಿ ಫಾಲೋಅಪ್‌ ಅಷ್ಟೇ : ಗೃಹ ಸಚಿವ

ಮೈಸೂರು : ಮೈಸೂರಿನಲ್ಲಿ ಡ್ರಗ್ಸ್‌ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್‌.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್‌…

2 hours ago

ಓದುಗರ ಪತ್ರ: ಮಾನಸ ಗಂಗೋತ್ರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…

6 hours ago

ಓದುಗರ ಪತ್ರ: ಶಾಂತಿ, ಸೌಹಾರ್ದ ಸಭೆಗಳು ಹೆಚ್ಚು ಹೆಚ್ಚು ನಡೆಯಲಿ

ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…

6 hours ago

ಓದುಗರ ಪತ್ರ: ಶ್ರೇಷ್ಠ ಕಾರ್ಮಿಕ ಧುರೀಣ ಅನಂತ ಸುಬ್ಬರಾವ್

ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ…

6 hours ago