ಕ್ರೀಡೆ

IND vs ENG 2nd Test: ಇಂಗ್ಲೆಂಡ್‌ 253 ರನ್‌ಗಳಿಗೆ ಆಲ್‌ಔಟ್; 2ನೇ ದಿನದಾಟದಂತ್ಯಕ್ಕೆ ಭಾರತಕ್ಕೆ 171 ರನ್‌ಗಳ ಮುನ್ನಡೆ‌

ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋತ ಟೀಮ್‌ ಇಂಡಿಯಾ ನಿನ್ನೆಯಿಂದ ( ಫೆಬ್ರವರಿ 2 ) ವಿಶಾಖಪಟ್ಟಣದ ವೈಎಸ್‌ ರಾಜಶೇಖರ ರೆಡ್ಡಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಮೊದಲ ಎರಡನೇ ದಿನದಾಟದಂತ್ಯಕ್ಕೆ 171 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 336 ರನ್‌ ಗಳಿಸಿದ್ದ ಟೀಮ್‌ ಇಂಡಿಯಾ ಎರಡನೇ ದಿನದಾಟ ಆರಂಭಿಸಿ ಮೊದಲ ಇನ್ನಿಂಗ್ಸ್‌ನಲ್ಲಿ 396 ರನ್‌ಗಳಿಗೆ ಆಲ್‌ಔಟ್‌ ಆಯಿತು. ಯಶಸ್ವಿ ಜೈಸ್ವಾಲ್‌ 209 ರನ್‌ ಗಳಿಸಿ ಅಬ್ಬರಿಸಿದರು. ಅತ್ತ ತನ್ನ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಕೇವಲ 253 ರನ್‌ಗಳಿಗೆ ಆಲ್‌ಔಟ್‌ ಆಯಿತು. ಎರಡನೇ ದಿನವೇ ತನ್ನ ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿರುವ ಭಾರತ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 28 ರನ್‌ ಗಳಿಸಿದೆ. ಯಶಸ್ವಿ ಜೈಸ್ವಾಲ್‌ ಅಜೇಯ 15 ಹಾಗೂ ನಾಯಕ ರೋಹಿತ್‌ ಶರ್ಮಾ ಅಜೇಯ 13 ರನ್‌ ಗಳಿಸಿದ್ದಾರೆ.

ಭಾರತದ ಮೊದಲ ಇನ್ನಿಂಗ್ಸ್:‌ ಯಶಸ್ವಿ ಜೈಸ್ವಾಲ್‌ 209, ರೋಹಿತ್‌ ಶರ್ಮಾ 14, ಶುಬ್‌ಮನ್‌ ಗಿಲ್‌ 34, ಶ್ರೇಯಸ್‌ ಅಯ್ಯರ್‌ 27, ರಜತ್‌ ಪಾಟಿದಾರ್‌ 32, ಅಕ್ಷರ್‌ ಪಟೇಲ್‌ 27 ಹಾಗೂ ಶ್ರೀಕರ್‌ ಭರತ್‌ 17 ರನ್‌, ರವಿಚಂದ್ರನ್‌ ಅಶ್ವಿನ್‌ 20, ಜಸ್‌ಪ್ರೀತ್‌ ಬುಮ್ರಾ 6, ಮುಖೇಶ್‌ ಕುಮಾರ್‌ ಶೂನ್ಯ ಹಾಗೂ ಕುಲ್‌ದೀಪ್‌ ಯಾದವ್‌ ಅಜೇಯ 8 ರನ್‌ ಗಳಿಸಿದರು.

ಇಂಗ್ಲೆಂಡ್‌ ಪರ ಜೇಮ್ಸ್‌ ಆಂಡರ್‌ಸನ್‌, ಶೋಯೆಬ್‌ ಬಷೀರ್‌ ಹಾಗೂ ರೆಹಾನ್‌ ಅಹ್ಮದ್‌ ತಲಾ 3 ವಿಕೆಟ್‌ ಪಡೆದರು ಮತ್ತು ಟಾಮ್‌ ಹಾರ್ಟ್ಲಿ ಒಂದು ವಿಕೆಟ್‌ ಕಬಳಿಸಿದರು.

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್:‌ ಜಾಕ್‌ ಕ್ವಾವ್ಲಿ 76, ಬೆನ್ ಡಕೆಟ್‌ 21, ಓಲ್ಲಿ ಪೋಪ್‌ 23, ಜೋ ರೂಟ್‌ 5, ಜಾನಿ ಬೇರ್‌ಸ್ಟೋವ್‌ 25, ನಾಯಕ ಬೆನ್‌ ಸ್ಟೋಕ್ಸ್‌ 47, ಬೆನ್‌ ಫೋಕ್ಸ್‌ 6, ರೆಹಾನ್‌ ಅಹ್ಮದ್‌ 6, ಟಾಮ್‌ ಹಾರ್ಟ್ಲಿ 21, ಜೇಮ್ಸ್‌ ಆಂಡರ್‌ಸನ್‌ 6 ಹಾಗೂ ಶೋಯೆಬ್ ಬಷೀರ್‌ ಅಜೇಯ 8 ರನ್‌ ಗಳಿಸಿದರು.

ಭಾರತದ ಪರ ಜಸ್‌ಪ್ರೀತ್‌ ಬುಮ್ರಾ 6 ವಿಕೆಟ್‌, ಕುಲ್‌ದೀಪ್‌ ಯಾದವ್‌ 3 ವಿಕೆಟ್‌ ಹಾಗೂ ಅಕ್ಷರ್‌ ಪಟೇಲ್‌ ಒಂದು ವಿಕೆಟ್‌ ಪಡೆದರು.

andolana

Recent Posts

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

3 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

3 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

3 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

3 hours ago

ಪಕ್ಕದಲ್ಲೇ ನದಿಯಿದ್ದರೂ ಚಿಕ್ಕಮಂದಗೆರೆ ಗ್ರಾಮಕ್ಕಿಲ್ಲ ನೀರು!

ಮಹೇಶ್ ಕರೋಟಿ ಹೇಮಾವತಿ ನದಿ ದಡದಲ್ಲೇ ನೀರಿಗಾಗಿ ಹಾಹಾಕಾರ ಕಿಕ್ಕೇರಿ: ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಂದಗೆರೆ ಗ್ರಾಮವು ಹೇಮಾವತಿ…

3 hours ago

ಕೊಡಗಿನಲ್ಲಿ1,20,874 ಮಕ್ಕಳಿಗೆ ಮಾತ್ರೆ ವಿತರಣೆ ಗುರಿ

ನವೀನ್ ಡಿಸೋಜ ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಜಂತುಹುಳು ಬಾಧೆ ತಡೆಗೆ ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆ ಮಡಿಕೇರಿ:…

3 hours ago