ದೋಹಾ: ಫಿಫಾ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಎಫ್ ಬಣದ ಬೆಲ್ಜಿಯಂ ತಂಡವು ಮಿಚಿ ಬಥ್ಶುವಾಯಿ ಅವರ ಗೋಲು ಮತ್ತು ಥಿಬಾಟ್ ಕೋರ್ಟೊಯಿಸ್ ಅವರ ಅದ್ಭುತ ನಿರ್ವಹಣೆಯಿಂದ ಬಲಿಷ್ಟ ಕೆನಡಾ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಶುಭಾರಂಭ ಮಾಡಿತು.
ಈ ಗೆಲುವಿನಿಂದ ಬೆಲ್ಜಿಯಂ ಬಣದಲ್ಲಿ ಮೊದಲ ಶ್ರೇಯಾಂಕ ಪಡೆಯಿತು. ರೊಮೆಲು ಲುಕಾಕು ಅವರು ಗಾಯಗೊಂಡ ಕಾರಣ ಬೆಲ್ಜಿಯಂನ ದಾಳಿಯ ನೇತೃತ್ವ ಬಥ್ಶುವಾಯಿ
ವಹಿಸಿದ್ದರು.
ಕೆನಡಾ ತಂಡವು ಸಹ ಅತ್ಯಂತ ಉತ್ಸಾಹದಿಂದ ಆಟ ಆರಂಭಿಸಿ ಭರ್ಜರಿ ಪ್ರದರ್ಶನ ನೀಡುವ ಸೂಚನೆ ನೀಡಿತ್ತು. ಪಂದ್ಯದ 11ನೇ ನಿಮಿಷದಲ್ಲಿ ಬೆಲ್ಜಿಯಂನ ಯಾನ್ನಿಕ್ ಕ್ಯಾರಾಸ್ಕೊ ಚೆಂಡನ್ನು ಕೈಯಲ್ಲಿ ಮುಟ್ಟಿದ ಕಾರಣ ಕೆನಡಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು. ಅಲ್ಫಾನ್ಸೊ ಡೇವಿಸ್ ಪೆನಾಲ್ಟಿ ಹೊಡೆಯುವ ಅವಕಾಶ ಪಡೆದರು. ವಿಶ್ವದ ಶ್ರೇಷ್ಠ ಗೋಲ್ಕೀಪರ್ಗಳಲ್ಲಿ ಒಬ್ಬರಾಗಿರುವ ಕೋರ್ಟೊಯಿಸ್ ಅವರು ಡೇವಿಸ್ ಅವರಿಗೆ ಐತಿಹಾಸಿಕ ಗೋಲು ದಾಖಲಿಸಲು ನಿರಾಕರಿಸಿದರು. ಅವರ ಉತ್ತಮ ಹೊಡೆತವನ್ನು ಕೋಟೋಯಿಸ್ ಅದ್ಭುತ ರೀತಿಯಲ್ಲಿ ತಡೆದರು.
ಇದರಿಂದ ಕೆನಡಾ ಮುನ್ನಡೆ ಸಾಧಿಸಲು ಸಾಧ್ಯವಾಗಲೇಯಿಲ್ಲ.
ಕೆನಡಾ ತಂಡ 36 ವರ್ಷಗಳ ಸುದೀರ್ಘ ಸಮಯದ ಬಳಿಕ ವಿಶ್ವಕಪ್ನಲ್ಲಿ ಆಡಲು ಅರ್ಹತೆ
ಪಡೆದಿತ್ತು. 1986ರಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಆಡಿದ್ದ ಕೆನಡಾ ತಂಡವು ಆರಂಭದ ಮೂರು ಪಂದ್ಯಗಳಲ್ಲಿ ಸೋಲು ಕಂಡಿತಲ್ಲದೇ ಒಂದೇ ಒಂದು ಗೋಲು ಹೊಡೆಯಲು ಸಾಧ್ಯವಾಗಿರಲಿಲ್ಲ.
ಮೊರಾಕ್ಕೊ ಮತ್ತು ಕ್ರೊವೇಷ್ಯಾ ನಡುವಣ ಪಂದ್ಯ 0-0 ಅಂತರದಿಂದ ಡ್ರಾ ಆದ್ದರಿಂದ ಬೆಲ್ಜಿಯಂ ಮೇಲುಗೈ ಸಾಧಿಸಲು ಯಶಸ್ವಿಯಾಯಿತು.
ಮೈಸೂರು : ಇಲ್ಲಿನ ಕುವೆಂಪುನಗರದಲ್ಲಿ ನಡೆದಿದ್ದ ನಿತ್ಯಾನಂದ ಅವರ ಅನುಮಾನಾಸ್ಪದ ಸಾವಿನ ಪ್ರಕರಣ ಕೊಲೆ ಪ್ರಕರಣವಾಗಿ ತಿರುಗಿದ್ದು, ಪತ್ನಿ ಸುಶೀಲ…
ಬೆಂಗಳೂರು : ಬಿಜೆಪಿ ಪಕ್ಷದ ರಾಷ್ಟೀಯ ಮತ್ತು ರಾಜ್ಯ ಮಟ್ಟದ ನಾಯಕರ ವಿರುದ್ಧ ಅವಹೇಳನಕಾರಿ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿ…
ದಿಸ್ಪುರ್: ನೆರೆಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಭಾರೀ…
ಎಚ್.ಡಿ.ಕೋಟೆ: ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದ ಜಲಾಶಯಗಳು ಬರಿದಾಗುತ್ತಿವೆ. ರಾಜ್ಯದಲ್ಲಿ ಮೊದಲು ಭರ್ತಿಯಾಗುವ ಜಲಾಶಯ ಎಂಬ…
ಉತ್ತರ ಪ್ರದೇಶದ ಅಯೋಧ್ಯಾ ರಾಮಮಂದಿರದಲ್ಲಿ ಕಾಣಿಕೆ ಹಣ ಹಾಗೂ ದೇಣಿಗೆಯನ್ನು ದುರ್ಬಳಕೆ ಮಾಡಿರುವುದು ಅನೂಹ್ಯ ಪ್ರಕರಣ. ಇದರಿಂದ ಕೋಟ್ಯಂತರ ಜನರ…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಹಲವು ಲಿಂಗಾಯತ ಮಠಗಳಿಗೆ ಮುಖ್ಯಮಂತ್ರಿ ಡಿಕೆಶಿ ಅವರು ಆಪ್ಯಾಯಮಾನ ಕರ್ನಾಟಕದಲ್ಲಿ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಲು…