ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಜುಲೈ 7ಕ್ಕೆ ವಿಶೇಷ ಸ್ಥಾನಮಾನವಿದೆ. ಏಕೆಂದರೆ ಅಂದು ಕ್ರಿಕೆಟ್ ಲೋಕದ ದಿಗ್ಗಜ ಆಟಗಾರನು ಹುಟ್ಟಿದ ದಿನ. ಕ್ಯಾಪ್ಟನ್ ಕೂಲ್ ಎಂದೇ ಖಾತಿ ಪಡೆದ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಶುಕ್ರವಾರ (ಜುಲೈ 7) ತಮ್ಮ 42ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಕ್ರಿಕೆಟಿಗರ ವೃತ್ತಿಬದುಕು 36-38ರ ಒಳಗೆ ಅಂತ್ಯವಾಗಿಬಿಡುತ್ತದೆ. ಅದರಲ್ಲೂ ವಿಕೆಟ್ಕೀಪರ್ಗಳು 35ರ ಬಳಿಕ ಆಟ ಮುಂದುವರಿಸುವುದು ಬಹಳಾ ಕಷ್ಟ. ಆದರೆ, ಸ್ಪರ್ಧಾತ್ಮ ಕ್ರಿಕೆಟ್ನಲ್ಲಿ ಮುಂದುವರಿಯುವ ತುಡಿತ ಹೊಂದಿರುವ ಎಂಎಸ್ಡಿ ಇದೇ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದುಕೊಟ್ಟು, ನಿವೃತ್ತಿ ಸದ್ಯಕ್ಕಿಲ್ಲ ಎಂದೇ ಸಂದೇಶ ರವಾನಿಸಿದ್ದರು.
“ಉತ್ತರ ಹುಡುಕುತ್ತಿದ್ದೇನೆ? ಟ್ರೋಫಿ ಗೆದ್ದಾಗ ನಿವೃತ್ತಿ ಹೇಳಲು ಸೂಕ್ತ ಸಮಯವಾಗಿರುತ್ತದೆ. ಆದರೆ, ಎಲ್ಲೆಡೆ ನನಗೆ ಸಿಕ್ಕಿರುವ ಪ್ರೀತಿಗೆ ಪ್ರತಿಯಾಗಿ ಏನಾದರೂ ಕೊಡಬೇಕಲ್ಲವೆ. ಇಲ್ಲಿಂದ ಆಟ ನಿಲ್ಲಿಸಿ ಹೊರ ನಡೆಯುವುದು ಸುಲಭ. ಆದರೆ, ಕಠಿಣ ಹಾದಿ ಏನೆಂದರೆ ಮುಂದಿನ 9 ತಿಂಗಳು ಕಷ್ಟ ಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ಅಭಿಮಾನಿಗಳಿಗೆ ನಾನು ನೀಡಲಿರುವ ಉಡುಗೊರೆ, ನನ್ನ ದೇಹಕ್ಕೆ ಇದು ಕಷ್ಟವಾದರೂ ಖಂಡಿತಾ ಪ್ರಯತ್ನಿಸಲಿದ್ದೇನೆ,” ಎಂದು ಐಪಿಎಲ್ 2023 ಫೈನಲ್ ಬಳಿಕ ಧೋನಿ ಹೇಳಿದ್ದರು.
ಮಂಡಿ ನೋವಿನ ಗಾಯದ ಸಮಸ್ಯೆ ಎದುರಿಸಿರುವ ಎಂಎಸ್ ಧೋನಿ, ಸಂಪೂರ್ಣ ಚೇತರಿಕೆ ಕಂಡರೆ ಮಾತ್ರವೇ 17ನೇ ಆವೃತ್ತಿಯ ಐಪಿಎಲ್ನಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲವಾದರೆ ಸಿಎಸ್ಕೆ ಕೋಚಿಂಗ್ ಬಳಗ ಸೇರಿಕೊಳ್ಳಲಿದ್ದಾರೆ.
ಚೆನ್ನೈ: ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಯಲು, ತಮಿಳುನಾಡು ಸರ್ಕಾರವು ಎಲ್ಲಾ ರೀತಿಯ ಮದ್ಯ ಖರೀದಿ ಮತ್ತು…
ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದೆ. ನಾಳೆ ಮತ್ತಷ್ಟು ತೀವ್ರತೆ…
ಲಕ್ನೋ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಮಳೆ ಹೊಡೆತಕ್ಕೆ 53 ಜನರಿಗೆ…
ಬೆಂಗಳೂರು: ಇದೇ ತಿಂಗಳ 24 ರಂದು ನಡೆಯಬೇಕಿದ್ದ ಎಂಬಿಎ, ಎಂಸಿಎ ಕೋರ್ಸ್ಗಳ ಪ್ರವೇಶ್ ಪರೀಕ್ಷೆಯನ್ನು ಜೂನ್.14ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಮಿಳುನಾಡಿಗೆ ಭತ್ತ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ…
ಹನೂರು: ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಹೊಂದಿರುವ ಮಾರ್ಟಳ್ಳಿಯಲ್ಲಿ ಸದ್ಯ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದ…