ಪಂಜು ಗಂಗೊಳ್ಳಿ

ಈ ಜೀವ ಜೀವನ: ಮದನ್-ಅಭಾರಾಣಿ ಎಂಬ ಪತಿತೋದ್ಧಾರಕ ಪತಿ -ಪತ್ನಿ

ದನ್ಒಡಿಶಾ ರಾಜ್ಯದ ಭುವನೇಶ್ವರದ ‘ನಳಿನಿದೇವಿ ಕಾಲೇಜ್ ಆಫ್ ಎಜುಕೇಷನ್’ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ಮನುಷ್ಯಹೆಂಡತಿ ಹಾಗೂ ಇಬ್ಬರು ಮಕ್ಕಳಿರುವ ಒಂದು ಕೆಳ ಮಧ್ಯಮ ವರ್ಗದ ಸಾಧಾರಣ ಸಂಸಾರಇತರ ಎಲ್ಲಾ ಗೌರವಸ್ಥ ಕೆಳಮಧ್ಯಮ ವರ್ಗದ ಕುಟುಂಬದವರಂತೆ ಮದನರದೂ ಹೆಚ್ಚಿನ ವಿಶೇಷತೆಗಳಿಲ್ಲದ ಜೀವನ ಕ್ರಮಆದರೆಅವರ ಬದುಕಿನಲ್ಲಿ ನಡೆದ ಒಂದು ಚಿಕ್ಕ ಘಟನೆ ಅವರ ಜೀವನ ಕ್ರಮವನ್ನು ಇನ್ನಿಲ್ಲದಂತೆ ಬದಲಾಯಿಸಿತು!

ಅದು 1998ರ ಜನವರಿ ತಿಂಗಳುಮದನ್ ಮತ್ತು ಅವರ ಹೆಂಡತಿ ಅಭಾರಾಣಿ ಒಂದು ರಾತ್ರಿ ಸಿನಿಮಾ ನೋಡಿ ವಾಪಸ್ ಬರುತ್ತಿದ್ದರುಅವರು ಬರುತ್ತಿದ್ದ ದಾರಿಯಲ್ಲಿನ ಒಂದು ಬೀಡಾ ಅಂಗಡಿ ಬಳಿ ಒಂದಷ್ಟು ಜನ ವೇಶ್ಯೆಯರುಕಣ್ಣಿಗೆ ರಾಚುವಂತೆ ಅಲಂಕಾರ ಮಾಡಿಕೊಂಡುಗಿರಾಕಿಗಳನ್ನು ಕಾಯುತ್ತ ನಿಂತಿದ್ದರುಅಭಾರಾಣಿ ಅಂದಿನವರೆಗೆ ತನ್ನ ಬದುಕಿನಲ್ಲೆಂದೂ ವೇಶ್ಯೆಯರನ್ನು ಕಂಡವರಲ್ಲಅವರು ಆ ಹೆಂಗಸರು ಯಾರುಯಾಕೆ ಹಾಗೆ ಅಲಂಕಾರ ಮಾಡಿಕೊಂಡು ಆ ಸರಿ ರಾತ್ರಿಯಲ್ಲಿ ಬೀದಿ ಬದಿಯಲ್ಲಿ ನಿಂತಿದ್ದಾರೆ ಎಂದು ಕೇಳಿದಾಗ ಮದನ್ಅವರು ಯಾರುಯಾಕೆ ನಿಂತಿದ್ದಾರೆ ಎಂದು ಆಕೆಗೆ ಹೇಳುತ್ತಾರೆಅವರು ವೇಶ್ಯೆಯರು ಎಂದು ತಿಳಿದಾಗ ಅಭಾರಾಣಿಗೆ ಅವರ ಬಗ್ಗೆ ಜುಗುಪ್ಸೆ ಹುಟ್ಟಲಿಲ್ಲಬದಲಿಗೆತನ್ನಂತೆಯೇ ಹೆಣ್ಣಾದ ಅವರ ಬದುಕಿನ ಸ್ಥಿತಿ ಬಗ್ಗೆ ಅವರಲ್ಲಿ ಮರುಕ ಹುಟ್ಟುತ್ತದೆಆದರೆಆ ಘಟನೆ ಮುಂದೆ ಅವರ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ ಎಂಬುದನ್ನು ಅವರು ಊಹಿಸಿಯೂ ಇರಲಿಲ್ಲ.

ಮನೆಗೆ ಬಂದ ಅಭಾರಾಣಿ ಆ ವೇಶ್ಯೆಯರ ಬಗ್ಗೆಅವರ ಕೆಲಸದ ಬಗ್ಗೆ ಇನ್ನಷ್ಟು ಹೆಚ್ಚು ವಿವರವಾಗಿ ತಿಳಿದುಕೊಂಡುಅವರಿಗೆ ತಾವೇನು ಸಹಾಯ ಮಾಡಬಹುದು ಎಂದು ಮದನ್‌ರಲ್ಲಿ ಚರ್ಚಿಸುತ್ತಾರೆಸಾಮಾಜಿಕಆರ್ಥಿಕ ಪುನರ್ವಸತಿ ಮೂಲಕ ಅವರ ಬದುಕನ್ನು ಬದಲಾಯಿಸಬಹುದು ಎಂದು ತೀರ್ಮಾನಿಸಿಒಂದು ಯೋಜನೆಯನ್ನು ಸಿದ್ಧ ಪಡಿಸುತ್ತಾರೆಅದರಂತೆ ಕಾರ್ಯಪ್ರವೃತ್ತರಾಗಿ, ‘ಒಡಿಶಾ ಪತಿತ ಉದ್ಧಾರ ಸಮಿತಿ’ ಎಂಬ ಒಂದು ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆಆದರೆತಾವು ಕೈಗೊಂಡ ಕಾರ್ಯ ಎಷ್ಟು ದುಸ್ತರವಾದುದು ಎಂಬುದು ಅವರಿಗೆ ಮೊದಲ ಪ್ರಯತ್ನದಲ್ಲೇ ಅರಿವಾಗುತ್ತದೆಅವರು ತಮ್ಮ ಯೋಜನೆಯೊಂದಿಗೆ ಸಮೀಪದ ‘ಮಾಲಿ ಸಾಹಿ’ ಎಂಬ ಕೆಂಪುದೀಪ ಪ್ರದೇಶಕ್ಕೆ ಹೋದಾಗಅಲ್ಲಿ ವೇಶ್ಯೆಗಾರಿಕೆ ವೃತ್ತಿ ನಡೆಸುತ್ತಿದ್ದವರು ಮದನ್‌ರನ್ನು ಥಳಿಸಿಅಭಾರಾಣಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಕಳಿಸುತ್ತಾರೆಆ ಘಟನೆಯ ಕಾರಣಕ್ಕೆಮದನ್ ಕೆಲಸ ಮಾಡುತ್ತಿದ್ದ ಕಾಲೇಜಿನ ಆಡಳಿತ ಮಂಡಳಿ ಅವರನ್ನು ಕೆಲಸದಿಂದ ಸಸ್ಪೆಂಡ್ ಮಾಡಿತುಆವರೆಗೂ ಕೂಡು ಕುಟುಂಬ ಪದ್ಧತಿ ಅನುಸರಿಸುತ್ತಿದ್ದ ಮದನ್‌ರ ಸಹೋದರರುಆಸ್ತಿ ಪಾಲು ಮಾಡಿಕೊಂಡು ಅವರಿಂದ ದೂರವಾದರುಆದರೆಮದನ್ ಹಾಗೂ ಅಭಾರಾಣಿ ಇವ್ಯಾವುದರಿಂದಲೂ ವಿಚಲಿತರಾಗದೆ ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಾರೆ.

ಅದೇ ವರ್ಷಅಂದರೆ 1998ರಲ್ಲಿ ‘ಮಾಲಿಸಾಹಿ’ ಕಾಲೋನಿಯಿಂದ ವೇಶ್ಯೆಯರನ್ನು ಎತ್ತಂಗಡಿ ಮಾಡುವ ಕೋರ್ಟು ಆದೇಶ ಬರುತ್ತದೆಆಗ ಮದನ್ ದಂಪತಿಗಳು ಕೋರ್ಟಿಗೆ ಒಂದು ಮನವಿ ಸಲ್ಲಿಸಿಆ ಮಹಿಳೆಯರು ತಾವು ಮಾಡುವ ಉದ್ಯೋಗದ ಕಾರಣ ಅವರಿಗೆ ಬೇರೆ ಪ್ರದೇಶಗಳಲ್ಲಿ ನೆಲಯೂರಲು ಹಲವು ಕಷ್ಟಗಳು ಎದುರಾಗುವುದರಿಂದ ಅವರಿಗೆ ಸೂಕ್ತ ಪುನರ್ವಸತಿಯನ್ನು ಕಲ್ಪಿಸಬೇಕೆಂದು ಕೇಳಿಕೊಳ್ಳುತ್ತಾರೆಮತ್ತುಅದೇ ವರ್ಷ ನವೆಂಬರ್ ತಿಂಗಳಲ್ಲಿ ‘ಡೈರೆಕ್ಟೊರೇಟ್ ಆಫ್ ಸೋಷಿಯಲ್ ವೆಲ್ಛೇರ್’ ಸಂಸ್ಥೆಯ ಸಹಾಯದಿಂದ ಒಂದು ಸರ್ವೆಯನ್ನು ನಡೆಸಿ, ‘ಮಾಲಿಸಾಹಿ’ ಕಾಲೋನಿಯಲ್ಲಿ 75 ಕುಟುಂಬಗಳಿಂದ 90 ಜನ ಮಹಿಳೆಯರು ವೇಶ್ಯೆಗಾರಿಕೆಯಿಂದ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆಅವರಲ್ಲಿ 50 ಕುಟುಂಬಗಳಿಗೆ ರೇಷನ್ ಕಾರ್ಡ್ ಕೊಡಿಸಲು ಅರ್ಜಿ ಸಲ್ಲಿಸುತ್ತಾರೆಆದರೆಅವರ ಆ ಅರ್ಜಿ ತಿರಸ್ಕರಿ ಸಲ್ಪಡುತ್ತದೆಆಗ ಅಭಾರಾಣಿ, ‘ಭಾರತೀಯ ಪತಿತ ಉದ್ಧಾರ ಸಭಾ’ ದ ಅಧ್ಯಕ್ಷರಿಗೆ ಪತ್ರ ಬರೆದುಸರ್ಕಾರದಿಂದ ಅದೇಶ ಹೊರಡಿಸಿ, 72 ಗಂಟೆಗಳಲ್ಲಿ ಆ 50 ಕುಟುಂಬಗಳಿಗೆ ರೇಷನ್ ಕಾರ್ಡುಗಳು ದೊರಕುವಂತೆ ಮಾಡುತ್ತಾರೆಅದಾದ ನಂತರ, ‘ಮಾಲಿಸಾಹಿ’ ಕಾಲೋನಿಗೆ ನಲ್ಲಿ ನೀರಿನ ಸೌಕರ್ಯ ಮತ್ತು ವಿದ್ಯುತ್ ಸಂಪರ್ಕ ದೊರಕಿಸಲು ಪ್ರಯತ್ನಿಸಿಅದರಲ್ಲೂ ಸಫಲರಾಗುತ್ತಾರೆ.

1999ರಲ್ಲಿ ಸುಂಟರಗಾಳಿ ಎದ್ದುನೂರಾರು ಜನರ ಮನೆಗಳ ಜೊತೆ ‘ಮಾಲಿಸಾಹಿ’ ಕಾಲೋನಿಯ ವೇಶ್ಯೆಯರ ಮನೆಗಳೂ ಹಾನಿಗೊಳಗಾದವುಹಲವರ ಮನೆಗಳು ಸಂಪೂರ್ಣವಾಗಿ ನಾಶವಾದವುಆ ಸುಂಟರ ಗಾಳಿಯಲ್ಲಿ ಮದನ್ಅಭಾರಾಣಿಯ ಮನೆಯೂ ತೀವ್ರವಾಗಿ ಹಾನಿಗೊಂಡಿತುಆದರೆಅದನ್ನು ಲೆಕ್ಕಿಸದೆಅವರಿಬ್ಬರು ಮೊದಲು ‘ಮಾಲಿಸಾಹಿ’ ಕಾಲೋನಿಯ ಹೆಂಗಸರಿಗೆ ಬಟ್ಟೆಆಹಾರ ಕೊಡಿಸಿಅವರುಗಳ ಮನೆ ದುರಸ್ತಿಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಿ ನಂತರ ತಮ್ಮ ಮನೆಯ ದುರಸ್ತಿಗೆ ನಿಂತರುದಂಪತಿಗಳು ತಮಗಾಗಿ ಪಡುವ ಕಷ್ಟ ಹಾಗೂ ನಿಸ್ವಾರ್ಥ ಸೇವೆಯನ್ನು ಕಂಡು ಮಾಲಿಸಾಹಿ ಕಾಲೋನಿಯ ಜನ ಕೊನೆಗೂ ಅವರನ್ನು ತಮ್ಮವರೆಂದು ಒಪ್ಪಿಕೊಂಡುಪ್ರೀತಿಯಿಂದ ಮದನ್ ಬಾಯ್ಅಭಾ ಬೆಹನ್ ಎಂದು ಕರೆಯತೊಡಗಿದರುಮದನ್ ದಂಪತಿಗಳ ಮನೆಯಲ್ಲಿ ಯಾವುದೇ ಹಬ್ಬ ಹರಿದಿನವಿಶೇಷ ಕಾರ್ಯಕ್ರಮಗಳು ನಡೆದಾಗ ಆ ಮಹಿಳೆಯರು ಅಲ್ಲಿ ಹಾಜರಿರುತ್ತಾರೆರಾಖಿ ಬಂಧನ್ ದಿನ ಮದನ್‌ರಿಂದ ರಾಖಿ ಕಟ್ಟಿಸಿಕೊಳ್ಳಲು ಅವರ ಮನೆಯೆದುರು ಸಾಲು ನಿಲ್ಲುತ್ತಾರೆಮದನ್‌ರ ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದರೆ ಈ ಮಹಿಳೆಯರು ಸ್ವತಃ ಬಂದು ಆರೈಕೆ ಮಾಡುತ್ತಾರೆ.

ಮದನ್ಅಭಾರಾಣಿ ಹುಟ್ಟು ಹಾಕಿದ ‘ಒಡಿಶಾ ಪತಿತ ಉದ್ಧಾರ ಸಮಿತಿ’ ಮಾಲಿಸಾಹಿ ಪ್ರದೇಶದಲ್ಲಿ ನಿಯಮಿತವಾಗಿ ಆರೋಗ್ಯ ಶಿಬಿರಗಳನ್ನು ನಡೆಸುತ್ತದೆರಾಜ್ಯ ಸರ್ಕಾರದ ಸಹಾಯ ಪಡೆದು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ‘ಏಡ್ಸ್ ಸೆಲ್ಲ್’ನ್ನು ಹುಟ್ಟು ಹಾಕಿಒಂದು ಏಡ್ಸ್ ಆಸ್ಪತ್ರೆಯನ್ನು ನಡೆಸುತ್ತಿದೆಅಲ್ಲಿನ ವೇಶ್ಯೆಯರ ಮಕ್ಕಳಿಗಾಗಿ ಒಂದು ಶಾಲೆ ಯನ್ನೂ ಕಟ್ಟಿದೆಇವೆಲ್ಲಕ್ಕಿಂತ ಮುಖ್ಯವಾಗಿ, 77 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಅಕ್ಕಿ ಮಿಲ್ಲನ್ನು ತೆರೆದುಮಾಲಿಸಾಹಿಯ ನೂರಾರು ಮಹಿಳೆಯರಿಗೆ ಜೀವನ ನಡೆಸಲು ಪರ್ಯಾಯ ಮಾರ್ಗವನ್ನು ದೊರಕಿಸಿಕೊಟ್ಟಿದೆ.

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

5 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

7 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

7 hours ago