ರಾಷ್ಟ್ರೀಯ

ಷೇರು ಮಾರುಕಟ್ಟೆಯಲ್ಲಿ ಹಾಂಕಾಂಗ್‌ನ ಹಿಂದಿಕ್ಕಿದ ಭಾರತ: ಮತ್ತೊಂದು ದಾಖಲೆ ನಿರ್ಮಿಸಿದ ಭಾರತ!

 ನವದೆಹಲ: ಭಾರತ, ಷೇರುಪೇಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಹಾಂಗ್‌ಕಾಂಗ್‌ ಮಾರ್ಕೆಟ್‌ನ ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಸ್ಟಾಕ್‌ಮಾರ್ಕೆಟ್‌ ಅನ್ನೋ ಸಾಧನೆ ಮಾಡಿದೆ.

ಮಂಗಳವಾರ ಹಾಂಗ್‌ಕಾಂಗ್‌ ಷೇರುಪೇಟೆಯಲ್ಲಿ ದಾಖಲಾದ ಎಲ್ಲ ಷೇರುಗಳ ಮೊತ್ತ 4.29 ಬಿಲಿಯನ್‌ ಡಾಲರ್‌ ಆಗಿದ್ರೆ, ಭಾರತದ ಷೇರುಗಳ ಮೌಲ್ಯ 4.33 ಟ್ರಿಲಿಯನ್‌ ಡಾಲರ್‌ ಆಗಿದೆ.

ಇದೇ ಮೊದಲ ಬಾರಿಗೆ 4 ಟ್ರಿಲಿಯನ್‌ ಡಾಲರ್‌ ಮಾರ್ಕ್‌ನ್ನ ಕ್ರಾಸ್‌ ಮಾಡಿದೆ. ಇದ್ರಲ್ಲಿ ಕಳೆದೆರಡು ವರ್ಷಗಳಲ್ಲೇ 2 ಟ್ರಿಲಿಯನ್‌ ಡಾಲರ್‌ ಮೌಲ್ಯದ ಷೇರುಗಳು ಸೇರಿವೆ.

ಅಂದ್ಹಾಗೆ ಇತ್ತೀಚಿನ ವರ್ಷಗಳಲ್ಲಿ ಭಾರತ ಮಾರ್ಕೆಟ್‌ ಹೂಡಿಕೆದಾರರ ಡಾರ್ಲಿಂಗ್‌ ಆಗ್ತಿದೆ. ಕಾರ್ಪೊರೇಟ್‌ ವಲಯದಲ್ಲಿ ಒಳ್ಳೇ ಆದಾಯ ಬರ್ತಿರೋದ್ರಿಂದ ರಿಟೇಲ್‌ ಹೂಡಿಕೆದಾರರ ಬೇಸ್‌ ಜಾಸ್ತಿಯಾಗ್ತಿದೆ.

ಇದೆ ವೇಳೆ ಅತ್ತ ಕೋವಿಡ್‌ ರೆಸ್ಟ್ರಿಕ್ಷನ್ಸ್‌, ಕಂಪನಿಗಳ ಮೇಲೆ ಚೀನಿ ಸರ್ಕಾರದ ಹಿಡಿತ, ಪ್ರಾಪರ್ಟಿ ಸೆಕ್ಟರ್‌ನ ಬಿಕ್ಕಟ್ಟು, ಜಿಯೋಪಾಲಿಟಿಕಲ್‌ ಉದ್ವಿಗ್ನತೆಯಿಂದ ಚೀನಾ ಮಾರ್ಕೆಟ್‌ ಡೌನ್‌ ಆಗ್ತಿದೆ.

ಚೀನಾದ ಹೆಸರಾಂತ ಕಂಪನಿಗಳು ಲಿಸ್ಟ್‌ ಆಗಿರೋ ಹಾಂಗ್‌ಕಾಂಗ್‌ ಮಾರ್ಕೆಟ್‌ ಬೀಳ್ತಾ ಇದೆ. 2021ರಿಂದ ಹಾಂಗ್‌ಕಾಂಗ್‌ ಮಾರ್ಕೆಟ್‌ ವ್ಯಾಲೂವೇಷನ್‌ನಲ್ಲಿ 6 ಟ್ರಿಲಿಯನ್‌ ಡಾಲರ್‌ ನೀರಿನಂತೆ ಹರಿದು ಹೋಗಿದೆ.

ಹೀಗಾಗಿ ವಿದೇಶಿ ಹೂಡಿಕೆದಾರರು ಭಾರತದತ್ತ ಮುಖ ಮಾಡಿದ್ದಾರೆ. ಕಳೆದ ವರ್ಷ ಸುಮಾರು 21 ಬಿಲಿಯನ್‌ ಡಾಲರ್‌ ಭಾರತದಲ್ಲಿ ಇನ್ವೆಸ್ಟ್‌ ಮಾಡಿದ್ದಾರೆ.

andolanait

Recent Posts

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ(ಡಿಎ)ಯನ್ನು ಶೇ.1.50ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2026 ಜನವರಿ 1ರಿಂದ ಅನ್ವಯವಾಗುವಂತೆ…

3 hours ago

ಮೇ.13ರಂದು ಬೆಂಗಳೂರು ಜನತೆಗೆ ಬಿಗ್‌ ಗಿಫ್ಟ್:‌ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಮೇ.13ಕ್ಕೆ ಬೆಂಗಳೂರು ಜನತೆಗೆ ಬಿಗ್‌ ಗಿಫ್ಟ್‌ ನೀಡಲಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ…

3 hours ago

ದೇವರಾಜ ಮಾರುಕಟ್ಟೆಗೆ ಸಂಸದ ಯದುವೀರ್‌ ಒಡೆಯರ್‌ ಭೇಟಿ

ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡದಲ್ಲಿ ಒಂದಾಗಿರುವ ದೇವರಾಜ ಮಾರುಕಟ್ಟೆಗೆ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಂದು ಭೇಟಿ ನೀಡಿ…

4 hours ago

ಪಂಚಭೂತಗಳಲ್ಲಿ ಲೀನರಾದ ಸಚಿವ ಡಿ.ಸುಧಾಕರ್‌

ಚಿತ್ರದುರ್ಗ: ಸಕಲ ಸರ್ಕಾರಿ ಗೌರವಗಳೊಂದಿಗೆ ಚಳ್ಳಕೆರೆಯ ಚಿತಾಗಾರದಲ್ಲಿ ಹಿರಿಯೂರು ಶಾಸಕ ಡಿ.ಸುಧಾಕರ್‌ ಅವರ ಅಂತ್ಯಕ್ರಿಯೆ ನೆರವೇರಿತು. ಬೆಳಿಗ್ಗೆಯಿಂದ ಸುಧಾಕರ್‌ ಅವರ…

4 hours ago

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ: ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಜಮೀನಿನಲ್ಲಿದ್ದ ರೈತನೋರ್ವನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ತೀವ್ರ…

4 hours ago

ಎಂ.ಕೆ.ಸ್ಟಾಲಿನ್‌ ಭೇಟಿಯಾದ ತಮಿಳುನಾಡು ನೂತನ ಸಿಎಂ ವಿಜಯ್‌

ಚೆನ್ನೈ: ತಮಿಳುನಾಡಿನ ನೂತನ ಸಿಎಂ ವಿಜಯ್‌ ಅವರಿಂದು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿಯಾದರು. ಸದ್ಯ ಇಂದಿನ ಸಭೆಯಲ್ಲಿ ಇಬ್ಬರು…

5 hours ago