ದೇಶ- ವಿದೇಶ

ಜಗತ್ತಿನ ಹಿರಿಯ ಡಿಸ್ಕೋ ಜಾಕಿ ಅಂಕಲ್ ರೇ ಇನ್ನಿಲ್ಲ

ಹಾಂಗ್‌ಕಾಂಗ್: ಜಗತ್ತಿನ ಅತೀ ಹಿರಿಯ ಡಿಜೆ (ಡಿಸ್ಕೋ ಜಾಕಿ) ಎಂದು ಖ್ಯಾತಿಯಾಗಿದ್ದ ಹಾಂಗ್‌ಕಾಂಗ್‌ನ ಮರಿಯಾ ಕೊರಡಿರೋ ಅವರು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅಭಿಮಾನಿಗಳಿಂದ ‘ಅಂಕಲ್ ರೇ’ ಎಂದು ಜನಪ್ರಿಯರಾಗಿದ್ದ ಮರಿಯಾ ಕೊರಡಿರೋ ಜಗತ್ತಿನಲ್ಲಿ ಅತೀ ಹೆಚ್ಚು ಹಿರಿಯ ಹಾಗೂ ದೀರ್ಘಕಾಲದ ಡಿಸ್ಕೋ ಜಾಕಿ ಎಂದು ಗಿನ್ನಿಸ್ ದಾಖಲೆ ಸೇರಿದ್ದರು.

2021ರಲ್ಲಿ ತಮ್ಮ 96 ನೇ ವಯಸ್ಸಿನಲ್ಲಿ ಡಿಸ್ಕೋ ಜಾಕಿ ಕೆಲಸಕ್ಕೆ ನಿವೃತ್ತಿ ತೆಗೆದುಕೊಂಡಿದ್ದ ಅವರು ಇತ್ತೀಚೆಗೆ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕುಟುಂಬದವರ ಸಮ್ಮುಖದಲ್ಲೇ ಸಂಗೀತದ ಬೀಳ್ಕೊಡುಗೆಯೊಂದಿಗೆ ಅಂಕಲ್ ರೇ ನಿಧನರಾದರು.

ಪೋರ್ಚುಗಲ್‌ನಿಂದ ಬಂದಿದ್ದ ವಲಸೆ ಕುಟುಂಬದಲ್ಲಿ ಅಂಕಲ್ ರೇ 1924 ರಲ್ಲಿ ಹಾಂಗ್‌ಕಾಂಗ್‌ನಲ್ಲಿ ಜನಿಸಿದ್ದರು. ವೃತ್ತಿಯ ಆರಂಭದಲ್ಲಿ ಕೆಲ ವರ್ಷ ಜೈಲು ವಾರ್ಡನ್ ಹಾಗೂ ಬ್ಯಾಂಕ್‌ ಕ್ಲರ್ಕ್ ಆಗಿ ಕೆಲಸ ಮಾಡಿದರು. ಸಂಗೀತದ ಮೇಲೆ ವಿಪರೀತ ಮೋಹ ಹೊಂದಿದ್ದ ಅವರು 1949ರಲ್ಲಿ ಹಾಂಗ್‌ಕಾಂಗ್ ರೇಡಿಯೊ ಸ್ಟೇಷನ್ (RTHK) ಸೇರಿದ್ದರು. ಅಲ್ಲಿಂದ 7 ದಶಕ ಹಾಂಗ್‌ಕಾಂಗ್ ಜನತೆಗೆ ಸಂಗೀತದ ರಸದೌತಣವನ್ನು ಉಣಬಡಿಸಿದ್ದರು.

‘ತಮ್ಮ ಪ್ರೊಗ್ರೆಸಿವ್ ಜಾಜ್’, ‘ಆಲ್ ದಿ ವೇ ವಿತ್ ರೇ’ ಎಂಬ ಕಾರ್ಯಕ್ರಮಗಳ ಮೂಲಕ ಅಂಕಲ್ ರೇ ಅವರು ಹಾಂಗ್‌ಕಾಂಗ್‌ನಲ್ಲಿ ಮನೆಮಾತಾಗಿದ್ದರು. ಯುವಕ ಯುವತಿಯರು ಇವರ ಡಿಜೆ ಕಾರ್ಯಕ್ರಮಗಳನ್ನು ಮುಗಿಬಿದ್ದು ಆನಂದಿಸುತ್ತಿದ್ದರು. ಆಲ್ ದಿ ವೇ ವಿತ್ ರೇ ಕಾರ್ಯಕ್ರಮ 51 ವರ್ಷ 3 ತಿಂಗಳು ಪ್ರಸಾರವಾಗಿತ್ತು

andolanait

Recent Posts

ಉಪಸಭಾಪತಿಗೆ ಚಿತ್ರಹಿಂಸೆ ಆರೋಪ : ಐಪಿಎಸ್‌ ಅಧಿಕಾರಿ ಬಂಧನ

ಅಮರಾವತಿ : ಹಿಂದಿನ ವೈಎಸ್‍ಆರ್‍ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರ…

6 hours ago

ಮಾರ್ಚ್‌ 11ರಿಂದ ವೈದ್ಯಾಧಿಕಾರಿಗಳ ಮುಷ್ಕರ : ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ…

6 hours ago

ಟ್ರಂಪ್‌ ಜಾಗತಿಕ ಸುಂಕ ರದ್ದು : ವರದಿ

ವಾಷಿಂಗ್ಟನ್ : ಕಾನೂನುಬಾಹಿರವಾಗಿ ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ…

7 hours ago

ಸಫಾರಿ ಆದಾಯದ ಶೇ.35 ಭಾಗ ಕಾಡಿನಂಚಿನ ಜನಕಲ್ಯಾಣಕ್ಕೆ ಬಳಕೆ : ಖಂಡ್ರೆ

ಬೆಂಗಳೂರು : ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಗ್ರಾಮಗಳಲ್ಲಿ…

7 hours ago

ವನ್ಯಜೀವಿ ಸಂಚಾರ | ಕಾಡಂಚಿನ ಗ್ರಾಮದ ಮುಖಂಡರಿಗೆ ಮಾಹಿತಿ ರವಾನಿಸಲು ಖಂಡ್ರೆ ಸೂಚನೆ

ಬೆಂಗಳೂರು : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ…

7 hours ago

ಮನರೇಗಾ ನಾಶ | ಜನರ ಅನ್ನ ಕಿತ್ತುಕೊಳ್ಳುತ್ತಿರುವ ಕೇಂದ್ರ ; ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ : ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್…

8 hours ago