ದೇಶ- ವಿದೇಶ

ವೃದ್ಧರ ಜೊತೆಯಾಗಲಿರುವ ಗುಡ್ ಫೆಲೋಸ್ ಸ್ಟಾರ್ಟ್‌ಪ್‌ ಕಂಪನಿಗೆ ಕೈ ಜೋಡಿಸಿದ ಟಾಟಾ

ನವದೆಹಲಿ : ರತನ್ ಟಾಟಾ ಅಂದ್ರೇನೆ ಬತ್ತದ ಉತ್ಸಾಹ, ಸಾಧನೆಗೆ ಪ್ರೇರಕ ಶಕ್ತಿ. ಹೊಸ ಉದ್ಯಮಕ್ಕೆ ಕೈ ಹಾಕುವ ಯುವಪಡೆಗೆ ಸದಾ ಪ್ರೋತ್ಸಾಹ, ಬೆಂಬಲ ನೀಡುವ ರತನ್ ಟಾಟಾ ಸದ್ಯ ಅಂಥದ್ದೇ ಒಂದು ಕಾರ್ಯ ಮಾಡಿದ್ದಾರೆ. ಇಳಿವಯಸ್ಸಿನಲ್ಲಿ ಒಂಟಿತನದಿಂದ ಬಳಲುವ ವೃದ್ಧರಿಗೆ ಜೊತೆಯಾಗುವ ವಿನೂತನ ಸ್ಟಾರ್ಟಪ್‌ ಕಂಪನಿಯಲ್ಲಿ ಸ್ವತಃ ಹಿರಿಯ ನಾಗರಿಕರಾಗಿರುವ ರತನ್ ಟಾಟಾ ಹೂಡಿಕೆ ಮಾಡೋದಾಗಿ ಘೋಷಿಸಿದ್ದಾರೆ. ಆ.16ರಂದು ಪ್ರಾರಂಭವಾದ ಮುಂಬೈ ಮೂಲದ ಗುಡ್ ಫೆಲೋಸ್ ಎಂಬ ಸ್ಟಾರ್ಟ್ ಅಪ್ ಗೆ 84 ವರ್ಷದ ಭಾರತದ ಹಿರಿಯ ಉದ್ಯಮಿ ರತನ್ ಟಾಟಾ ಬೆನ್ನಲುಬಾಗಿ ನಿಂತಿದ್ದಾರೆ.  ಈ ಆ್ಯಪ್ ನ ಸಂಸ್ಥಾಪಕ ಶಂತನು ನಾಯ್ಡು ರತನ್ ಟಾಟಾ ಅವರ ಸಹಾಯಕರಾಗಿ  2018ರಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. 30 ವರ್ಷ ವಯಸ್ಸಿನ ಶಂತನು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದಿದ್ದು, ಈ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದಾರೆ. ಈ ಸ್ಟಾರ್ಟಪ್‌ ಯುವ ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತದೆ. ಅವರು ಹಿರಿಯ ನಾಗರಿಕರಿಗೆ ಮೊಮ್ಮಕ್ಕಳ ಮಾದರಿಯಲ್ಲೇ ನೆರವು ನೀಡುತ್ತಾರೆ.

ಈ ಯುವ ಜನರನ್ನು ‘ಗುಡ್ ಫೆಲೋಸ್’ ಎಂದು ಕರೆಯಲಾಗುತ್ತದೆ. ಇನ್ನು ಈ ಕಂಪನಿಯ ಸೇವೆ ಆಯ್ಕೆ ಮಾಡುವ ಹಿರಿಯ ನಾಗರಿಕರಿಗೆ  ‘ಗ್ರ್ಯಾಂಡ್ ಪಲ್’ ಎನ್ನಲಾಗುತ್ತದೆ. ಪ್ರತಿ ಗ್ರ್ಯಾಂಡ್ ಪಲ್ ಗೆ ಅವರಿಗೆ ಹೊಂದಿಕೆಯಾಗುವ ಗುಡ್ ಫೆಲೋಸ್ ಅನ್ನು ಒದಗಿಸೋದೇ ಈ ಕಂಪನಿಯ ಉದ್ದೇಶ. ‘ಜೊತೆಗಾರಿಕೆ ಅನ್ನೋದು ವಿಭಿನ್ನ ಜನರಿಗೆ ವಿಭಿನ್ನ ಸಂಗತಿಯಾಗಿದ್ದು, ಈ ಸ್ಟಾರ್ಟಪ್‌ ಅದಕ್ಕೆ ಮಹತ್ವ ನೀಡುತ್ತದೆ. ಕೆಲವರಿಗೆ ಟಿವಿ ನೋಡೋದು, ಇನ್ನೂ ಕೆಲವರಿಗೆ ಹಳೆಯ ಕಥೆಗಳನ್ನು ಹೇಳಲು ಜೊತೆಗಾರರ ಅಗತ್ಯವಿರುತ್ತದೆ. ನಾವು ಅದೆಲ್ಲವನ್ನೂ ಒದಗಿಸುತ್ತೇವೆ. ಈ ಕಂಪನಿಯಲ್ಲಿ ಟಾಟಾ ಅವರ ಹೂಡಿಕೆ ಈ ಪರಿಲ್ಪನೆಗೆ ನಾವು ನೀಡಿರುವ ಶ್ರದ್ಧೆಗೆ ಸಿಕ್ಕ ಬಹುದೊಡ್ಡ ಪ್ರೋತ್ಸಾಹದ ಮೂಲ’ ಎಂದು ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಶಂತನು ಹೇಳಿದರು.

ಈ ಸ್ಟಾರ್ಟಪ್‌  ಆ್ಯಪ್ ಮೂಲಕ ಕಾರ್ಯನಿರ್ವಹಿಸುತ್ತದೆ. ಹಿರಿಯ ನಾಗರಿಕರು ಈ ಆ್ಯಪ್ ಗೆ ಹಣ ನೀಡಿ ಚಂದಾದಾರರಾಗಬಹುದು. ಒಂದು ತಿಂಗಳು ಉಚಿತವಾಗಿ  ಈ ಸಂಸ್ಥೆಯ ಸೇವೆಗಳ ಅನುಭವ ಪಡೆಯಲು ಹಿರಿಯ ನಾಗರಿಕರಿಗೆ ಅವಕಾಶ ನೀಡಲಾಗುತ್ತದೆ. ಎರಡನೇ ತಿಂಗಳಿಂದ ಸೇವೆಗಳಿಗೆ ಶುಲ್ಕಗಳನ್ನು ವಿಧಿಸಲಾಗುತ್ತದೆ. ಚಂದಾದಾರಿಕೆ ಶುಲ್ಕ ವೈಯಕ್ತಿಕ ಯೋಜನೆ ಆಯ್ಕೆ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ ಎಂದು ಕಂಪನಿ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ಶುಲ್ಕವನ್ನು ಸಮರ್ಥಿಸಿಕೊಂಡಿರುವ ಕಂಪನಿ, ತನ್ನ ಯುವ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆ ಒದಗಿಸೋದು ಕೂಡ ಅಗತ್ಯವಾಗಿದೆ ಎಂದು ಹೇಳಿದೆ.

ಈ ವಿನೂತನ ಸ್ಟಾರ್ಟಪ್‌ ಕಂಪನಿಯಲ್ಲಿ ರತನ್ ಟಾಟಾ ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯಿಲ್ಲ. ಆದ್ರೆ ಈ  ಸ್ಟಾರ್ಟಪ್‌ ಬಗ್ಗೆ ರತನ್ ಟಾಟಾ ಆಸಕ್ತಿ ಹೊಂದಿರೋದು ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಅವರು ಆಡಿದ ಮಾತುಗಳಲ್ಲೇ ವ್ಯಕ್ತವಾಗಿತ್ತು. ‘ಜೊತೆಗಾರರಿಗಾಗಿ ಹಂಬಲಿಸುತ್ತ ಏಕಾಂಗಿಯಾಗಿ ಸಮಯ ಕಳೆಯುವ ತನಕ ನಿಮಗೆ ಒಂಟಿತನದ ಅನುಭವ ಗೊತ್ತಾಗಿರೋದಿಲ್ಲ’ ಎಂದು ಅವರು ಹೇಳಿದ್ದರು.

ಪ್ರಾರಂಭದಲ್ಲಿ ಕಂಪನಿ ಮುಂಬೈನಲ್ಲಿ ಕಾರ್ಯನಿರ್ವಹಿಸುವ ಯೋಜನೆ ಹೊಂದಿದೆ. ಆದರೆ, ನಿಧಾನವಾಗಿ ಪುಣೆ, ಚೆನ್ನೈ ಹಾಗೂ ಬೆಂಗಳೂರಿಗೆ ತನ್ನ ಕಾರ್ಯಗಳನ್ನು ವಿಸ್ತರಿಸುವ ಗುರಿ ಹೊಂದಿದೆ. ಆಸಕ್ತರು thegoodfellows.in ಸೈನ್ ಅಪ್ ಆಗಬಹುದು ಅಥವಾ 91 8779524307 ಸಂಖ್ಯೆಗೆ ಮಿಸ್ ಕಾಲ್ ನೀಡಬಹುದು.

ಯುವಜನರು ಈ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಕೊಳ್ಳಬಹುದು. ಇವರನ್ನು ‘ಗುಡ್ ಫೆಲೋಸ್’ ಎಂದು ಕರೆಯಲಾಗುತ್ತದೆ. ಸೈಕಾಮೆಟ್ರಿ ಟೆಸ್ಟ್ ಮೂಲಕ ಅವರನ್ನು ಆಯ್ಕೆ ಮಾಡುತ್ತಾರೆ. ಇತ್ತೀಚೆಗೆ ಮುಂಬಯಿಯಲ್ಲಿ 800 ಪದವೀಧರರು ಪರೀಕ್ಷೆಗೆ ಕೂತಿದ್ದರಂತೆ, ಅವರಲ್ಲಿ ತೇರ್ಗಡೆಯಾದವರು ಕೇವಲ 20 ಮಂದಿಯಷ್ಟೇ!

andolana

Recent Posts

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

24 mins ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

54 mins ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

4 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

4 hours ago

ನೈಸ್ ಯೋಜನೆ ಸರ್ಕಾರದ ವಶಕ್ಕೆ ; ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದು ಒತ್ತಾಯಿಸಿದ ಹೆಚ್.ಡಿ.ಕುಮಾರಸ್ವಾಮಿ

ತಕ್ಷಣವೇ ನೈಸ್ ರಸ್ತೆ ಟೋಲ್ ಸಂಗ್ರಹಕ್ಕೆ ತಡೆ ಹಾಕಬೇಕು ಎಂದು ಕೇಂದ್ರ ಸಚಿವರ ಅಗ್ರಹ ಹೈಕೋರ್ಟ್ ಅಭಿಪ್ರಾಯದಂತೆ ನೈಸ್ ಯೋಜನೆಯನ್ನು…

4 hours ago

ಚಾಮರಾಜನಗರ ಶೂಟೌಟ್‌ ಪ್ರಕರಣ: ಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಕೊಡಗು: ಚಾಮರಾಜನಗರದ ಹನೂರಿನಲ್ಲಿ ನಡೆದ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕೊಡಗಿನಲ್ಲಿ ಮಾಧ್ಯಮದವರು…

6 hours ago