ಒಡಿಶಾ: ಪುರಾಣ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ್ ಓಪನ್ ಮಾಡಲಾಗಿದೆ.
ಬರೋಬ್ಬರಿ 46 ವರ್ಷಗಳ ಬಳಿಕ ರತ್ನಗಳ ಭಂಡಾರವನ್ನು ಸೂಕ್ತ ಭದ್ರತೆ ಮತ್ತು ಧಾರ್ಮಿಕ ಕಾರ್ಯದ ಜೊತೆ ತೆರೆಯಲಾಗಿದೆ. 1978ರಲ್ಲಿ ಭಂಡಾರದ ಕೊಠಡಿ ತೆರೆಯಲಾಗಿತ್ತು. ಇದಾದ ನಂತರ ಕೊಠಡಿ ತೆರೆದಿರಲಿಲ್ಲ. ಇದೀಗ ನಕಲಿ ಕೀಲಿ ಕೈ ಬಳಸಿ ಇಂದು ಭಂಡಾರವನ್ನು ಓಪನ್ ಮಾಡಲಾಗಿದೆ. ನಿರೀಕ್ಷೆಯಂತೆಯೇ ರತ್ನ ಭಂಡಾರದೊಳಗೆ ಚಿನ್ನಾಭರಣಗಳಿರುವ 15 ಪೆಟ್ಟಿಗೆ ಸೇರಿದಂತೆ ಅತ್ಯಮೂಲ್ಯ ಸಂಪತ್ತು ಸಿಕ್ಕಿದೆ ಎನ್ನಲಾಗಿದೆ.
ಮೊದಲಿಗೆ ಬಾಗಿಲು ಓಪನ್ ಮಾಡುವುದಕ್ಕೂ ಮುನ್ನ ಜಗನ್ನಾಥನಿಗೆ ಪೂಜೆ ಸಲ್ಲಿಸಿ, ಆಡಳಿತ ಮಂಡಳಿ ಸದಸ್ಯರು ರತ್ನ ಭಂಡಾರದ ಬಾಗಿಲು ತೆರೆದರು.
ಈ ಹಿಂದೆ 1978ರಲ್ಲಿ ಪುರಿ ಜಗನ್ನಾಥನ ರತ್ನ ಭಂಡಾರ ಓಪನ್ ಮಾಡಲಾಗಿತ್ತು. ಇದೀಗ ಬರೋಬ್ಬರಿ 46 ವರ್ಷಗಳ ಬಳಿಕ ರತ್ನ ಭಂಡಾರವನ್ನು ಮತ್ತೊಮ್ಮೆ ತೆರೆಯಲಾಗಿದೆ. ರತ್ನ ಭಂಡಾರದ ಬಾಗಿಲು ಓಪನ್ ಮಾಡಿದ ಬಳಿಕ ಶಿಫ್ಟಿಂಗ್ ಸ್ಟ್ರಾಂಗ್ ರೂಮ್ಗೆ ರತ್ನಭಂಡಾರ ರವಾನೆ ಮಾಡಲಾಗಿದೆ. ಬೆಲೆಬಾಳುವ ರತ್ನ ಭಂಡಾರಕ್ಕೆ ಬಿಗಿ ಭದ್ರತೆಯನ್ನೂ ಸಹ ಒದಗಿಸಲಾಗಿದೆ.
ಕಾರ್ಯಾಚರಣೆ ವಿಡಿಯೋ ಗೌಪ್ಯತೆ ಕಾಪಾಡಲಾಗುತ್ತೆ. ದಾಖಲೆಗಾಗಿ ಕಾರ್ಯಾಚರಣೆ ವಿಡಿಯೋ ರೆಕಾರ್ಡ್ ಮಾಡಲಾಗಿದ್ದು, ದೇಗುಲದ ಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದರು. ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ ಮಾರ್ಗಸೂಚಿಯಂತೆ ಬಾಗಿಲು ಓಪನ್ ಮಾಡಲಾಗಿದೆ.
ಇನ್ನು ಪುರಿ ಜಗನ್ನಾಥನ ರತ್ನ ಭಂಡಾರದಲ್ಲಿ ಅಪಾರ ಪ್ರಮಾಣದ ಸಂಪತ್ತು ಸಿಕ್ಕಿದೆ ಎನ್ನಲಾಗಿದೆ. ಚಿನ್ನಾಭರಣಗಳಿರುವ 9 ಅಡಿ ಅಗಲ ಮತ್ತು 3 ಅಡಿ ಎತ್ತರದ ಪೆಟ್ಟಿಗೆ, 128 ಕೆಜಿ ತೂಕದ 454 ಚಿನ್ನದ ಆಭರಣಗಳು, 221 ಕೆಜಿ ತೂಕದ 293 ಬೆಳ್ಳಿ ಆಭರಣಗಳು ಭಂಡಾರದಲ್ಲಿ ಸಿಕ್ಕಿವೆ. ಇನ್ನು 12,800ಕ್ಕೂ ಹೆಚ್ಚು ರತ್ನಖಚಿತ ಆಭರಣಗಳು, ಅಮೂಲ್ಯ ಹರಳುಗಳು, 22 ಸಾವಿರಕ್ಕೂ ಹೆಚ್ಚು ಬೆಳ್ಳಿ ವಸ್ತುಗಳು ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಮೈಸೂರು : ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯನ್ನು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಅಪರ…
ಹೊಸದಿಲ್ಲಿ : ನೀಟ್-ಯುಜಿ 2026 ಮರುಪರೀಕ್ಷೆ ಹಿನ್ನೆಲೆ ಟೆಲಿಗ್ರಾಂನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.…
ಮೈಸೂರು : ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ. ಅತ್ತು-ಕರೆದು ಅಧಿಕಾರ ಪಡೆದಿಲ್ಲ. ನನ್ನ-ಸಿದ್ದರಾಮಯ್ಯರ ನಡುವೆ ಯಾವ ವೈಮನಸ್ಸು ಇಲ್ಲ.…
ಮೈಸೂರು : ನಗರದಲ್ಲಿ ರೌಡಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಮುಂದಾಗಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಸರ್ಕಾರದ ಆದೇಶದನ್ವಯ…
ಮೈಸೂರು: ದಶಕಗಳ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ದುಬಾರಿ ವೆಚ್ಚದ ಚಿಕಿತ್ಸೆ ಪಡೆಯುವುದನ್ನು ತಗ್ಗಿಸುವ ಜತೆಗೆ ಬೆಂಗಳೂರಿನ…
ನಾಳಿದ್ದು 21ರಂದು ನಡೆಯುವ ನೀಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆಪ್ಅನ್ನು ಜೂ. 27ರ ವರೆಗೆ ತಾತ್ಕಾಲಿಕವಾಗಿ ಕೇಂದ್ರ ಸರ್ಕಾರ ಬ್ಯಾನ್…