ನವದೆಹಲಿ: ವಿಶ್ವದಲ್ಲಿ ಅತ್ಯಂತ ದುಬಾರಿ ಮರವೊಂದಿದೆ. ಅದನ್ನು ಬೇರೆ ದುಬಾರಿ ಮರಗಳಂತೆ ಫರ್ನಿಚರ್ ಅಥವಾ ಮತ್ತೇನೋ ಮಾಡಲು ಬಳಸಲ್ಲ. ಬದಲಿಗೆ ಸುಗಂಧ ದ್ರವ್ಯಗಳನ್ನು ತಯಾರಿಸಲು ಬಳಸುತ್ತಾರೆ.
ಸುಗಂಧ ದ್ರವ್ಯಗಳ ಉತ್ಪಾದನೆಯಲ್ಲಿ ಬಳಸುವ ಆ ದುಬಾರಿ ಮರ ಬೇರಾವುದು ಅಲ್ಲ. ಅದುವೇ ಅಕ್ವಿಲೇರಿಯಾ. ಇದನ್ನು ವುಡ್ ಆಫ್ ದಿ ಗಾಡ್ಸ್ ಎಂದೂ ಸಹ ಕರೆಯಲಾಗುತ್ತದೆ. ಸುಗಂಧ ದ್ರವ್ಯ ಉದ್ಯಮದಲ್ಲಿ ಇದನ್ನು ದ್ರವಚಿನ್ನ ಅಂತಲೂ ಕರೆಯಲಾಗುತ್ತದೆ.
ಈ ಮರವನ್ನು ಶತಮಾನಗಳಿಂದ ವಿಶಿಷ್ಟ ಸುಗಂಧಕ್ಕಾಗಿ ಬಳಸಲಾಗುತ್ತದೆ. ಈ ಅಮೂಲ್ಯವಾದ ಮರವು ಆಗ್ನೇಯ ಏಷ್ಯಾದ ದಟ್ಟವಾದ ಮಳೆ ಕಾಡುಗಳಿಗೆ ಸ್ಥಳೀಯವಾದ ಮರವಾಗಿದೆ. ಈ ಮರಗಳಿಗೆ ನಿರ್ದಿಷ್ಟ ಅಚ್ಚು ಬಿದ್ದು ಅದಕ್ಕೆ ಸೋಂಕಿನ ರೀತಿ ಆಗುತ್ತದೆ.
ಈ ಸೋಂಕು ಉಂಟಾದಾಗ ಅಲ್ಲಿಂದ ಮರದಲ್ಲಿ ಒಂದು ರೀತಿಯ ಸ್ರಾವ ಹೊರಬರುತ್ತದೆ. ಅದಕ್ಕೆ ಔದ್ ಎನ್ನಲಾಗುತ್ತದೆ. ಇದು ಅದ್ಬುತ ಸುವಾಸನೆಯನ್ನು ಹೊರ ಸೂಸುತ್ತದೆ. ಇದೇ ಕೊನೆಯ ಸುಗಂಧ ತಯಾರಿಕೆಗೆ ಕಾರಣವಾಗುತ್ತದೆ. ಈ ಮರಗಳಲ್ಲಿ ಔದ್ ಸೃಷ್ಟಿಯಾಗೋದು ಸಂಪೂರ್ಣವಾಗಿ ನೈಸರ್ಗಿಕ ರೀತಿಯಲ್ಲೇ.
ಅಪರೂಪದ ಸಂಗತಿಯೆಂದರೆ ಈ ಮರಗಳ ಒಂದು ಭಾಗ ಮಾತ್ರ ರಾಳವನ್ನು ಉತ್ಪಾದಿಸುತ್ತದೆ. ನಂತರ ಇದು ಸಂಗ್ರಹವಾಗಲು ದಶಕಗಳನ್ನೇ ತೆಗೆದುಕೊಳ್ಳಬಹುದು. ಈ ಸ್ರಾವದ ಬೆಲೆ ಪ್ರತಿ ಕಿಲೋ ಗ್ರಾಂಗೆ ಚಿನ್ನಕ್ಕಿಂತ ದುಬಾರಿಯಾಗಿದೆ.
ಪ್ರಸ್ತುತ ಔದ್ನ ಬೇಡಿಕೆ ಹೆಚ್ಚಿದ್ದು, ಜನಪ್ರಿಯತೆಯ ಉಲ್ಬಣವು ಅಕ್ವಿಲೇರಿಯಾ ಮರಗಳ ಅಪಾಯಕ್ಕೆ ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸುಗಂಧ ದ್ರವ್ಯ ಉದ್ಯಮದಲ್ಲಿ ಔದ್ ಭಾರೀ ಜನಪ್ರಿಯವಾಗಿದೆ. ಪಾಶ್ಚಿಮಾತ್ಯ ಸುಗಂಧ ದ್ರವ್ಯದಲ್ಲಿ ಈ ಅಂಶ ಇರುವಂತೆ ಉತ್ಪಾದಿಸಲಾಗುತ್ತಿದೆ.
ನವದೆಹಲಿ: ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಈ ಕುರಿತು…
ನವದೆಹಲಿ: ಚುನಾವಣಾ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ…
ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿದರು. ವಿಧಾನಸಭೆಯಲ್ಲಿ ವಂದೇಮಾತರಂ ಗೀತೆ…
ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ ಸಂಚಾರ ವ್ಯತ್ಯಯ, ವಿಮಾನ ವಿಳಂಬ ಸಮಸ್ಯೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಇಂದು 127…
ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.…