ಮೈಸೂರು: ಮೈಸೂರಿನ ಐರನ್ ಮ್ಯಾನ್ ಖ್ಯಾತಿಯ ಡಾ.ಉಷಾ ಹೆಗ್ಡೆ ವಿಶ್ವದ ಅತಿ ಎತ್ತರದ ಹಿಮ ಪರ್ವತ ಏರುವ ಮೂಲಕ ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ನಾಗರೀಕ ಮಹಿಳೆ ಎನಿಸಿದ್ದಾರೆ.
52 ವರ್ಷದ ಉಷಾ ಹೆಗ್ಡೆ ಅವರು ಜೆಎಸ್ಎಸ್ ಡೆಂಟಲ್ ಕಾಲೇಜಿನ ಪ್ರೊಫೆಸರ್ ಆಗಿದ್ದಾರೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಓದಿದ್ದು, ಮೈಸೂರಿನ ಜೆಎಸ್ಎಸ್ ಡೆಂಟಲ್ ಕಾಲೇಜಿನಲ್ಲಿ. ಅದೇ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದುಕೊಂಡು ಹಿಮಾಲಯ ಪರ್ವತ ಏರಿ ಮಹೋನ್ನತ ಸಾಧನೆ ಮಾಡಿದ್ದಾರೆ.
52 ದಿನಗಳ ಕಾಲ ಸುದೀರ್ಘ ಪ್ರವಾಸ ಮಾಡಿ ಬಂದ ಧೀರ ವನಿತೆ ಡಾ.ಉಷಾ ಹೆಗ್ಡೆಯವರ ಪರ್ವಾರೋಹಣ ಮೈನವಿರೇಳಿಸಿದೆ.
ಮೊದಲ ದಿನ ಏಪ್ರಿಲ್.2ರಂದು ಮೈಸೂರಿನಿಂದ ಹೊರಟ ಉಷಾ ಅವರು ವಾಪಸ್ ಬಂದಿದ್ದು ಮೇ.25ರಂದು. ಏಪ್ರಿಲ್ 6ರಿಂದ ಹಿಮಾಲಯ ಚಾರಣ ಆರಂಭಿಸಿದ್ದಾರೆ. ನೇಪಾಳದ ಲುಕ್ಲಾ ಜಾಗದಿಂದ ನಡಿಗೆ ಆರಂಭಿಸಿ ಏಪ್ರಿಲ್ 8ರಂದು ಟ್ರಕ್ಕಿಂಗ್ ಬೇಸ್ ಕ್ಯಾಂಪ್ ರೀಚ್ ಆಗಿದ್ದಾರೆ.
ಒಂದು ರಾತ್ರಿ ಕ್ಯಾಂಪ್ನಲ್ಲಿ ಕಳೆದ ಬಳಿಕ ಕ್ಯಾಂಪ್ 2 ತಲುಪಿ ಎರಡು ದಿನ ಕಳೆದಿದ್ದಾರೆ. ನಂತರ 3ನೇ ದಿನ ಎರಡನೇ ಕ್ಯಾಂಪ್ನಿಂದ ಹೊರಟು 3ನೇ ಕ್ಯಾಂಪ್ನಲ್ಲಿ ಒಂದು ದಿನ ಕಳೆದಿದ್ದಾರೆ. ನಂತರ ಕ್ಯಾಂಪ್ 4ಕ್ಕೆ ತಲುಪಿ 3 ಗಂಟೆ ಅಲ್ಲೇ ತಂಗಿದ ಬಳಿದ ರಾತ್ರಿಯಿಡೀ ನಡೆದು ಮೇ.19 ಬೆಳಿಗ್ಗೆ 6.10ಕ್ಕೆ ತುದಿ ತಲುಪಿದ್ದಾರೆ.
ಇದಕ್ಕಾಗಿ ಎಡು ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದ ಡಾ.ಉಷಾ ಹೆಗ್ಡೆ ಅವರು, ಈ ಮೊದಲು ದೇಶದ ಇತರ ಸ್ಥಳಗಳಲ್ಲಿ ಪರ್ವತ ಹತ್ತಿ ತಯಾರಿ ನಡೆಸಿದ್ದರು.
ಮೈಸೂರು : ಆದಿವಾಸಿ ಸಮುದಾಯಗಳ ಮೇಲಿನ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಹಾಗೂ ಮೈಸೂರು ಭಾಗದಲ್ಲಿ ದಾಖಲಾಗಿರುವ 134 ಪೋಕ್ಸೊ ಪ್ರಕರಣಗಳು…
ಮೈಸೂರು : ಸೋಮವಾರ ಪಬ್ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಕಾರಣಕ್ಕಾಗಿ ಅಬಕಾರಿ…
ಚೆನ್ನೈ: ತಮಿಳುನಾಡಿನ ರೈತರಿಗೆ ಸಿಎಂ ವಿಜಯ್ ಬಂಪರ್ ಕೊಡುಗೆ ನೀಡಿದ್ದಾರೆ. ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 75,000 ರೂ…
ಮಡಿಕೇರಿ: ಮುಂಗಾರು ಮಳೆ ಕೊರತೆಯಿಂದ ಹಾರಂಗಿ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಸಿದಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆಗಾಲವಾದರೂ ಜಿಲ್ಲೆಯಲ್ಲಿ ಮಳೆ…
ನವದೆಹಲಿ: ಮೆಡಿಕಲ್ ಶಾಪ್ಗಳಲ್ಲಿ ಇನ್ಮು ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್ ಖರೀದಿ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ…
ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ವಿಜಯ್ ರಾಘವೇಂದ್ರ, ಶ್ರೀಮುರಳಿ ಅವರ ತಾಯಿ…