ದೇಶ- ವಿದೇಶ

ʼಆನೆಗಳ ಸ್ನೇಹಿತರುʼ ಹೆಸರಿನಲ್ಲಿ ವಿನೂತನ ಕ್ರಮ: ಮೋದಿ ಶ್ಲಾಘನೆ

ಗುವಾಹಟಿ: ಅಸ್ಸಾಂನ ನಗಾಂವ್‌ ಜಿಲ್ಲೆಯಲ್ಲಿ ಮಾನವ-ಆನೆಗಳ ನಡುವಿನ ಸಂಘರ್ಷ ತಡೆಗಟ್ಟಲು ಅಲ್ಲಿನ ಜನರು ʼಆನೆಗಳ ಸ್ನೇಹಿತರುʼ (ಹಾಥಿ ಬಂಧು) ಎಂಬ ಹೆಸರಿನಲ್ಲಿ ವಿನೂತನ ದಾರಿ ಕಂಡುಕೊಂಡಿರುವುದನ್ನು ʼಮನದ ಮಾತುʼ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು.

ವಿವಿಧ ಹುಲ್ಲನ್ನು ಬೆಳೆದು ಆನೆಗಳ ಹಾವಳಿ ತಪ್ಪಿಸುವ ಈ ವಿನೂತನ ಕಾರ್ಯದ ಆಡಿಯೊ ಕ್ಲಿಪ್‌ ಅನ್ನು ʼಎಕ್ಸ್‌ʼ ನಲ್ಲಿ ಹಂಚಿಕೊಂಡಿರುವ ಮೋದಿ ಅವರು, ನಗಾಂವ್‌ ಜಿಲ್ಲೆಯ ಪ್ರಯತ್ನವು ಪ್ರತಿಯೊಬ್ಬರನ್ನೂ ಪ್ರೇರೇಪಿಸುವ ಶಕ್ತಿ ಹೊಂದಿದೆ ಎಂದು ಹೇಳಿದ್ದಾರೆ.

ನಗಾಂವ್‌ ಜಿಲ್ಲೆಯಲ್ಲಿ ನಿರಂತರವಾಗಿ ಮಾನವ-ಆನೆ ಸಂಘರ್ಷ ನಡೆಯುತ್ತಿತ್ತು. ಇದರಿಂದ ಕಂಗಲಾಗಿದ್ದ ಗ್ರಾಮಸ್ಥರು ʼಹಾಥಿ ಬಂಧುʼ ಹೆಸರಿನಲ್ಲಿ ವಿನೂತನ ಹೆಜ್ಜೆ ಇಟ್ಟಿದ್ದಾರೆ. ಗ್ರಾಮಸ್ಥರೆಲ್ಲ ಒಗ್ಗೂಡಿ 264 ಎಕರೆ ಬರಡು ಭೂಮಿಯಲ್ಲಿ ಮೇವಿನ ಹುಲ್ಲು (ನೇಪಿಯರ್‌ ಹುಲ್ಲು) ಬೆಳೆಯುವ ಮೂಲಕ ಆಹಾರ ಅರಸಿ ಗ್ರಾಮಗಳಿಗೆ ಬರುತ್ತಿದ್ದ ಆನೆಗಳಿಗೆ ಕಡಿವಾಣ ಹಾಕಿದ್ದಾರೆ.

ಇದರಿಂದ ಕೃಷಿ ಭೂಮಿಗೆ ಆನೆಗಳು ಲಗ್ಗೆ ಇಡುವುದು ಕಡಿಮೆ ಆಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ರಸ್ತೆಗಳ ದಾರುಣತೆ: ಬೇಕಿದೆ ಇಲಾಖೆಗಳ ಸಮನ್ವಯತೆ

ಶ್ರೇಯಸ್ ದೇವನೂರು ಮಾದರಿ ಮೈಸೂರು ಉಳಿವಿಗೆ ಒಂದು ಸಮಗ್ರ ಸಭೆ, ದೀರ್ಘಕಾಲಿಕ ಯೋಜನೆ ಅಗತ್ಯ ಮೈಸೂರು - ಅರಮನೆಗಳ ನಗರ,…

2 hours ago

ಕೊಡಗು ‘ಜಿಲ್ಲೆಯಲ್ಲಿ ಜಲ್‌ಜೀವನ್ ಮಿಷನ್ ಯೋಜನೆ ಪ್ರಗತಿ’

ಪುನೀತ್ ಮಡಿಕೇರಿ ೪೫೭ ಕಾಮಗಾರಿಗಳ ಪೈಕಿ ೩೬೯ ಕಾಮಗಾರಿಗಳು ಪೂರ್ಣ ಮಡಿಕೇರಿ: ಕುಡಿಯುವ ನೀರಿನ ಗೃಹ ನಳ ನೀರು ಸಂಪರ್ಕ…

2 hours ago

ಪ್ರವಾಸಿಗರ ಆಕರ್ಷಣೆಗೆ ವರುಣ ಕೆರೆಗೆ ನವಸ್ಪರ್ಶ

ಕೆ.ಬಿ.ರಮೇಶನಾಯಕ ೧೫ ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣ  ಪ್ರವಾಸಿಗರ ಕಣ್ಮನ ಸೆಳೆಯಲು ಹತ್ತು ಹಲವು ಮನರಂಜನಾ ಚಟುವಟಿಕೆಗಳು ಮೈಸೂರಿನಿಂದ…

2 hours ago

ಮೈಸೂರು ಜಿಲ್ಲೆಯಲ್ಲಿ ಪಶು ಪಾಲನೆಗೆ ಪಶು ವೈದ್ಯರ ಬರ

ಹೆಚ್.ಎಸ್. ದಿನೇಶ್‌ಕುಮಾರ್ ಮೈಸೂರು ಜಿಲ್ಲೆಯಲ್ಲಿ ೨೭ ಮಂದಿ ಪಶು ವೈದ್ಯರ ಹುದ್ದೆ ಖಾಲಿ ಮೈಸೂರು: ಹಸು, ಎಮ್ಮೆ, ಕುರಿಗಳಂತಹ ಪ್ರಾಣಿಗಳು…

3 hours ago

ಸಿದ್ದಾಪುರ | ಕಾಡಾನೆ ದಾಳಿಗೆ ಓರ್ವ ಗಂಭೀರ

ಸಿದ್ದಾಪುರ : ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಲ್ಕೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‌ಮಂಗಲ…

13 hours ago