india pakistan military
ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು 26 ಅಮಾಯಕರನ್ನು ಕೊಂದ ನಂತರ ಭಾರತ-ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. ಸಿಂಧೂ ಜಲ ಒಪ್ಪಂದ ರದ್ದು, ವೀಸಾ ರದ್ದು, ಅಟ್ಟಾರಿ ಗಡಿ ಬಂದ್ ಸೇರಿದಂತೆ ಹಲವು ಕ್ರಮಗಳನ್ನು ಭಾರತ ಕೈಗೊಂಡಿದೆ. ಇದರಿಂದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯುದ್ಧದ ಸನ್ನಿವೇಶ ಉದ್ಭವಿಸಿದೆ.
ಮತ್ತೊಂದೆಡೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬುಧವಾರ(ಏ.30) ರಾಜಕೀಯ ವ್ಯವಹಾರಗ ಸಂಪುಟ ಸಮಿತಿ ಸಭೆ ನಡೆಯುತ್ತಿದ್ದು, ಎಲ್ಲರಲ್ಲೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಈಗಾಗಲೇ ಎರಡು ದೇಶಗಳ ನಡುವೆ ನಾಲ್ಕು ಯುದ್ಧಗಳು ನಡೆದಿವೆ, ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಐದನೇ ಯುದ್ಧ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಯುದ್ಧದ ಪ್ರಸ್ತಾಪ ಬಂದಾಗ, ಯಾವ ದೇಶ ಬಲಿಷ್ಠ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಈ ಬಲಾಬಲ ಸಂಖ್ಯೆಯ ಸಮಗ್ರ ಮಾಹಿತಿ ಇಲ್ಲಿದೆ.
ಭಾರತ-ಪಾಕಿಸ್ತಾನ ಬಲಾಬಲ
ಭಾರತ ಸೈನಿಕರು ; 14,55,550
(ವಿಶ್ವದ 2ನೇ ಅತಿ
ದೊಡ್ಡ ಸೈನ್ಯ).
ಮೀಸಲು ಸಿಬ್ಬಂದಿ ;
9,60,000
ಪ್ಯಾರಾಮಿಲಿಟರಿ ;
25,27,000
ಟ್ಯಾಂಕ್ಗಳು ;
4,201
ಒಟ್ಟು ವಿಮಾನಗಳು;
2,229 (ವಿಶ್ವದಲ್ಲಿ 4ನೇ ಸ್ಥಾನ).
ಫೈಟರ್ ಜೆಟ್ಗಳು;
513
ಫೈಟರ್ ಜೆಟ್ಗಳು: ರಫೇಲ್, ಸುಖೋಯ್ 30, ತೇಜಸ್
ಹೆಲಿಕಾಪ್ಟರ್ಗಳು ;
899
ಅಟ್ಯಾಕ್ ಹೆಲಿಕಾಪ್ಟರ್ಗಳು ;
80
ವಿಮಾನವಾಹಕ ನೌಕೆಗಳು ; 2
ಫಿರಂಗಿಗಳು ;
9,719
ಆರ್ಮರ್ಡ್ ವೆಹಿಕಲ್ಗಳು ;
1,48,594
ಸಬ್ಮರೀನ್ ;
18
ಡಿಸ್ಟ್ರಾಯರ್ ನೌಕೆಗಳು ;
13
ಪರಮಾಣು ಶಕ್ತಿ
130-150 (ಸಿಡಿತಲೆಗಳು)
ಪಾಕಿಸ್ತಾನ
ಸೈನಿಕರು ;
6,54,000
ರಿಸರ್ವ್ ಸಿಬ್ಬಂದಿ ;
6,50,000
ಪ್ಯಾರಮಿಲಿಟರಿ ;
5,00,000
ಟ್ಯಾಂಕ್ಗಳು ;
2,627
ಫಿರಂಗಿಗಳು ;
4,472
ಆರ್ಮಡ್ ವೆಹಿಕಲ್ಗಳು ;
17,516
ಒಟ್ಟು ವಿಮಾನಗಳು ;
1,399
ಫೈಟರ್ ಜೆಟ್ಗಳು ;
328
ಫೈಟರ್ ಜೆಟ್ಗಳು ;
ಎಫ್-16, ಜೆಎಫ್-17
ಹೆಲಿಕಾಪ್ಟರ್ಗಳು; 373
ಅಟ್ಯಾಕ್ ಹೆಲಿಕಾಪ್ಟರ್ಗಳು ;
57
ವಿಮಾನವಾಹಕ ನೌಕೆಗಳು ;
0
ಸಬ್ ಮರೀನ್ಗಳು ;
8
ಡಿಸ್ಟಾಯರ್ ನೌಕೆಗಳು 0
ಪರಮಾಣು ಶಕ್ತಿ ;
140-150(ಸಿಡಿತಲೆಗಳು)
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…