ನವದೆಹಲಿ: ದೇಶದ ಪ್ರಥಮ ಆತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ʼವಂದೇ ಮೆಟ್ರೋʼ ರೈಲಿಗೆ ಗುಜರಾತ್ನ ಭುಜ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ಅಹಮದಾಬಾದ್ನಿಂದ ವರ್ಚುವಲ್ ಆಗಿ ಚಾಲನೆ ನೀಡಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಸಚಿವಾಲಯ, ವಂದೇ ಮೆಟ್ರೊ ರೈಲು ಸುಮಾರು 359 ಕಿ.ಮೀ.ದೂರದ ಪ್ರಯಾಣವನ್ನು 5.45 ಗಂಟೆಗಳಲ್ಲಿ ತಲುಪಲಿದೆ. ಈ ರೈಲು ಭೂಜ್ನಿಂದ ಹೊರಟಯ ಅಹಮದಾಬಾದ್ ತಲುಪಲಿದೆ. ರೈಲಿನ ಟಿಕೆಟ್ ದರ 455 ಆಗಿದ್ದು, ರೈಲಿನಲ್ಲಿ ಸಂಚಾರಿಸಲು ಸಾರ್ವಜನಿಕರಿಗೆ ಸೆ.17ರಿಂದ ಅನುವು ಮಾಡಿಕೊಡಲಾಗುವುದು. ಇದು ಗರಿಷ್ಠ 100 ಮೀ.ವೇಗದಲ್ಲಿ ಚಲಿಸುವ ರೈಲಾಗಿದ್ದು, ಪ್ರಯಾಣಿಕರ ಖರ್ಚುನ್ನು ತಗ್ಗಿಸಿ, ವೇಗದ ಪ್ರಯಾಣವನ್ನು ಖಚಿತಪಡಿಸುತ್ತದೆ ಹೇಳಿದೆ.
ಈ ರೈಲಿನಲ್ಲಿ ಅತ್ಯುತ್ತಮ ದರ್ಜೆಯ ಸೀಟುಗಳು, ಹವಾನಿಯಂತ್ರಿತ ಕ್ಯಾಬಿನ್, ಮಾಡ್ಯುಲರ್ ಇಂಟೀರಿಯರ್ಸ್ ಹೊಂದಿದ್ದು, ಇತರೆ ಮೆಟ್ರೋ ರೈಲುಗಳಿಗಿಂತ ಉನ್ನತ ದರ್ಜೆಯ ರೈಲಾಗಿದೆ. ಅಲ್ಲದೆ, ಅಪಘಾತದ ಸಂದರ್ಭದಲ್ಲಿ ತಡೆ ತಂತ್ರಜ್ಞಾನ ಕವಚ, ಬೆಂಕಿ ಅವಘಡ ಪತ್ತೆ ತಂತ್ರಜ್ಞಾನ, ತುರ್ತು ಲೈಟ್ಗಳು, ಏರೋಸಾಲ್ ಆಧಾರಿತ ಬೆಂಕಿ ನಂದಿಸುವ ವ್ಯವಸ್ಥೆಯಂತಹ ಆತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನವನ್ನು ಒಳಗೊಂಡಿದೆ.
ವಂದೇ ಮೇಟ್ರೋ ರೈಲಿಗಿಂತ ಇತರೆ ಮೆಟ್ರೊ ರೈಲುಗಳು ಕಡಿಮೆ ಅಂತರದಲ್ಲಿ ಸಂಚರಿಸುತ್ತವೆ. ಮೆಟ್ರೋ ಎಂಬ ಪದ ನಗರದ ಭೂದೃಶ್ಯದ ಪರಿಕಲ್ಪನೆ ನೀಡಿದ್ದು, ಅದರಂತೆಯೇ ಈ ರೈಲು ನಗರದ ಹೃದ
ಯಭಾಗದಿಂದ ಬಾಹ್ಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಎಂ.ಕೇಶವ ಮೈಸೂರು: ನಗರದ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ಹಾಗೂ ನಂಜನಗೂಡು ರಸ್ತೆಯ ಎಪಿಎಂಸಿ ಬಳಿ ನಿರ್ಮಾ ಣವಾಗುತ್ತಿರುವ ಫ್ಲೈ…
ಚಿರಂಜೀವಿ ಸಿ ಹುಲ್ಲಹಳ್ಳಿ ಸ್ಥಳೀಯ ಮಾರುಕಟ್ಟೆ ದರ ೭೨ರಿಂದ ೭೫ರೂ. ಒಂದೇ ತಿಂಗಳ ಅಂತರದಲ್ಲಿ ದುಪ್ಪಟ್ಟು ಚಹ- ಕಾಫಿ, ಸಿಹಿ…
ಲಕ್ಷ್ಮೀಕಾಂತ್ ಕೊಮಾರಪ್ಪ ಮಣ್ಣಿನೊಂದಿಗೆ ಯುವಜನರ ನಂಟು ಬೆಸೆಯುವ ಉದ್ದೇಶ ನಾಳೆ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಗದ್ದೆ ನಾಟಿ…
ಎಂ.ನಾರಾಯಣ ತಿ.ನರಸೀಪುರ: ಹೂ ಕಚ್ಚದ ಕಡಲೆಕಾಯಿ, ಸೂರ್ಯಕಾಂತಿ, ಮುಸುಕಿನ ಜೋಳದ ಬೆಳೆಗಳು ತಿ.ನರಸೀಪುರ: ತಾಲ್ಲೂಕಿನಲ್ಲಿ ಸಮರ್ಪಕ ಮಳೆ ಬಾರದಿರುವುದರಿಂದ ರೈತರು…
ಭೇರ್ಯ ಮಹೇಶ್ ಭೇರ್ಯ: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಳಿಗೆಗಳು ತೆರೆಯದೆ ಪ್ರಯಾಣಿಕರಿಗೆ ಸಮಸ್ಯೆ ಭೇರ್ಯ: ಭೇರ್ಯ ಗ್ರಾಮದ ಬಸ್ ನಿಲ್ದಾಣದಲ್ಲಿ…