ದೇಶ- ವಿದೇಶ

2024ರ ವಿಶ್ವ ಶ್ರೀಮಂತರ ಪಟ್ಟಿ ಬಿಡುಗಡೆಗೊಳಿಸಿದ ಫೋರ್ಬ್ಸ್;‌ ಮುಖೇಶ್‌ ಅಂಬಾನಿಗೆ ಎಷ್ಟನೇ ಸ್ಥಾನ?

ಪ್ರತಿಷ್ಟಿತ ನಿಯತಕಾಲಿಕ ಫೋರ್ಬ್ಸ್‌ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಫ್ರಾನ್ಸ್‌ನ ಬರ್ನಾರ್ಡ್‌ ಅನೌಲ್ಟ್‌ ಅಂಡ್‌ ಫ್ಯಾಮಿಲಿ ಒಟ್ಟು 233 ಬಿಲಿಯನ್‌ ಡಾಲರ್‌ಗಳೊಂದಿಗೆ ಅಗ್ರಸ್ಥಾದಲ್ಲಿದ್ದರೆ, ಎಲನ್‌ ಮಸ್ಕ್‌ 195 ಬಿಲಿಯನ್‌ ಡಾಲರ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು ಈ ಬಾರಿಯ ಪಟ್ಟಿಯಲ್ಲಿ ಒಟ್ಟು 200 ಭಾರತೀಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವರ್ಷ 169 ಭಾರತೀಯ ಬಿಲಿಯನೇರ್‌ಗಳಿದ್ದರು. ಈ ಬಾರಿ ಒಟ್ಟು 31 ಬಿಲಿಯನೇರ್‌ಗಳು ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ಇನ್ನು ಭಾರತೀಯರಲ್ಲಿ ಮುಖೇಶ್‌ ಅಂಬಾನಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. 116 ಬಿಲಿಯನ್‌ ಡಾಲರ್‌ ಹೊಂದಿರುವ ಮುಖೇಶ್‌ ಅಂಬಾನಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ 83 ಬಿಲಿಯನ್ ಡಾಲರ್‌ಗಳನ್ನು ಹೊಂದಿದ್ದ ಮುಖೇಶ್‌ ಅಂಬಾನಿ ಈ ಬಾರಿ ನೂರು ಬಿಲಿಯನ್‌ ಡಾಲರ್‌ ಕ್ಲಬ್‌ ಸೇರಿದ್ದು, ದೇಶದ ಹಾಗೂ ಏಷ್ಯಾದ ಅತಿದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ.

ಭಾರತದ ಅತ್ಯಂತ ಹೆಚ್ಚು ಶ್ರೀಮಂತರ ಪಟ್ಟಿ: ಟಾಪ್‌ 10

ಮುಖೇಶ್‌ ಅಂಬಾನಿ – 116 ಬಿಲಿಯನ್‌ ಡಾಲರ್‌
ಗೌತಮ್‌ ಅದಾನಿ – 82 ಬಿಲಿಯನ್‌ ಡಾಲರ್‌
ಶಿವ ನಡಾರ್‌ – 36.9 ಬಿಲಿಯನ್‌ ಡಾಲರ್‌
ಸಾವಿತ್ರಿ ಜಿಂದಾಲ್‌ – 33.5 ಬಿಲಿಯನ್‌ ಡಾಲರ್‌
ದಿಲೀಪ್‌ ಸಾಂಘವಿ – 26.7 ಬಿಲಿಯನ್‌ ಡಾಲರ್‌
ಸೈರಸ್‌ ಪೂನಾವಾಲಾ – 21.3 ಬಿಲಿಯನ್‌ ಡಾಲರ್‌
ಕುಶಾಲ್‌ ಪಾಲ್‌ ಸಿಂಗ್‌ – 20.9 ಬಿಲಿಯನ್‌ ಡಾಲರ್‌
ಕುಮಾರ್‌ ಬಿರ್ಲಾ – 19.7 ಬಿಲಿಯನ್‌ ಡಾಲರ್‌
ರಾಧಾಕೃಷ್ಣನ್‌ ದಮನಿ – 17.6 ಬಿಲಿಯನ್‌ ಡಾಲರ್‌
ಲಕ್ಷ್ಮಿ ಮಿತ್ತಲ್‌ – 16.4 ಬಿಲಿಯನ್‌ ಡಾಲರ್‌

 

andolana

Recent Posts

ಸರಗೂರು| ಕಾಡಾನೆ ದಾಳಿ: ದೇವಸ್ಥಾನದ ಕಾವಲುಗಾರ ಸಾವು

ಸರಗೂರು: ಬಹುರ್ದೆಸೆಗೆಂದು ಬಯಲಿಗೆ ತೆರಳಿದ್ದ ವ್ಯಕ್ತಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು…

37 mins ago

ಓದುಗರ ಪತ್ರ: ವಾಲ್ಮೀಕಿ ಭವನ ಉದ್ಘಾಟಿಸಿ

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣವಾಗಿ ಎರಡು ವರ್ಷ ಕಳೆದಿದ್ದರೂ ಉದ್ಘಾಟನೆಯಾಗದೇ ಇರುವುದರಿಂದ ಸಾರ್ವಜನಿಕರು…

4 hours ago

ಓದುಗರ ಪತ್ರ: ಬಾಳೆಕೆರೆ ಗ್ರಾಮದಲ್ಲಿ ರಸ್ತೆ ನಿರ್ಮಿಸಿ

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಬಾಳೆಕೆರೆ ಗ್ರಾಮದಲ್ಲಿ ರಸ್ತೆ ಹಾಳಾಗಿದ್ದು, ಮಳೆಗಾಲದಲ್ಲಿ ಗ್ರಾಮಸ್ಥರು ಓಡಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಹೊಸ ಬಡಾವಣೆಗಳಿಗೆ…

4 hours ago

ಓದುಗರ ಪತ್ರ: ಸಾರಿಗೆ ಬಸ್ಸುಗಳು ಸಕಾಲಕ್ಕೆ ನಿಗದಿತ ಸ್ಥಳ ತಲುಪಲಿ

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಂಚರಿಸುವ ಕೆಲವು ಸಾರಿಗೆ ನಿಗಮದ ಬಸ್ಸುಗಳು ಹಾಗೂ ಮೈಸೂರು ಮತ್ತು, ಬೆಂಗಳೂರು ನಗರ ಸಾರಿಗೆ ಬಸ್ಸುಗಳಲ್ಲಿ…

4 hours ago

ಓದುಗರ ಪತ್ರ: ಮಕ್ಕಳಲ್ಲಿ ಸ್ವಯಂ ಪ್ರೇರಿತ ಓದು ಅವಶ್ಯ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿದ್ದು, ಅದಕ್ಕೆ ಪೂರಕವಾಗಿ ಸಂಜೆ ೭ರಿಂದ ರಾತ್ರಿ ೯ ರವರೆಗೆ ಎಲ್ಲ ಮನೆಗಳಲ್ಲೂ ಟಿವಿ…

4 hours ago

ನಿಯಮ ಮೀರಿ ನಿರ್ಮಿಸಿರುವ ಕಟ್ಟಡ ತೆರವಿಗೆ ಸೂಚನೆ

ಗಾಲ್ಫ್ ಕ್ಲಬ್ ಆಡಳಿತ ಮಂಡಳಿಗೆ ಮೈಸೂರು ನಗರಪಾಲಿಕೆ ನೋಟಿಸ್ ಮೈಸೂರು: ನಗರದ ಜಯಚಾಮರಾಜ ಒಡೆಯರ್ ಗಾಲ್ಛ್ ಕ್ಲಬ್ ಆವರಣದಲ್ಲಿ ನಿಯ ಮಾವಳಿ…

4 hours ago