ಕಾಮನ್ವೆಲ್ತ್ ಗೇಮ್ಸ್ನಲ್ಲಿ ದಿವ್ಯ ಪಡೆದ ಎರಡನೇ ಪದಕವಾಗಿದೆ. 2018ರ ಕ್ರೀಡಾಕೂಟದಲ್ಲೂ ದಿವ್ಯ ಪದಕ ಸಾಧನೆ ಮಾಡಿದ್ದರು. ಈ ಬಾರಿ ಪದಕ ಗೆದ್ದ ಬೆನ್ನಲ್ಲೇ ಸಿಎಂ ಅರವಿಂದ್ ಕೇಜ್ರಿವಾಲ್ ಅಭಿನಂದನೆ ಸಲ್ಲಿಸಿದ್ದರು. ಇದುವರೆಗೂ ಯಾವ ರೀತಿಯ ನೆರವು ನೀಡಿದ ಆಮ್ ಆದ್ಮಿ ಸರ್ಕಾರ ಇದೀಗ ಪದಕ ಗೆದ್ದಾಗ ಕ್ರೆಡಿಟ್ ಪಡೆಯುವ ಲೆಕ್ಕಾಚಾರದಲ್ಲಿತ್ತು. ಈ ಅಭಿನಂದನೆಗೆ ಪ್ರತಿಕ್ರಿಯೆ ನೀಡಿದ ದಿವ್ಯ ಕಾಕ್ರನ್, ತಾನು 20 ವರ್ಷಗಳಿಂದ ದೆಹಲಿಯಲ್ಲಿದ್ದೇನೆ. ಅಭ್ಯಾಸ, ತರಬೇತಿ ಎಲ್ಲವೂ ದೆಹಲಿಯಲ್ಲೇ ಪಡೆದಿದ್ದೇನೆ. ಆದರೆ ಇದುವರೆಗೂ ಯಾವುದೇ ನೆರವು ಸಿಕ್ಕಿಲ್ಲ. ನಗದು ಬಹುಮಾನ ಸೇರಿದಂತೆ ಯಾವ ನೆರವೂ ಆಪ್ ಸರ್ಕಾರ ನೀಡಿಲ್ಲ ಎಂದು ದಿವ್ಯ ಕಾಕ್ರನ್ ಬೇಸರ ವ್ಯಕ್ತಪಡಿಸಿದ್ದರು.
2018ರ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ದಿವ್ಯ ಕಾಕ್ರನ್ಗೆ ಆಪ್ ಸರ್ಕಾರ ಯಾವುದೇ ಬಹಮಾನ, ನಗದು, ಆರ್ಥಿಕ ನೆರವು ನೀಡಿಲ್ಲ. ಇಷ್ಟೇ ಅಲ್ಲ ಇದುವರೆಗೂ ಯಾವ ನೆರವನ್ನೂ ನೀಡಿಲ್ಲ. ಇದೀಗ ಪದಕ ಗೆದ್ದಾಗ ಅದರ ಶ್ರೇಯಸ್ಸು ಪಡೆಯಲು ಬಂದ ಆಪ್ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಸರಿಯಾಗಿ ತಿರುಗೇಟು ನೀಡಿದ್ದರು. ದಿವ್ಯ ಕಾಕ್ರನ್ ಟ್ವೀಟ್, ಆಪ್ ಶಾಸಕ ಸೌರಬ್ ಭಾರದ್ವಾಜ್ ಕೆರಳಿಸಿತ್ತು. ದಿವ್ಯ ಕಾಕ್ರನ್ ದೆಹಲಿ ಪರ ಆಡಿಲ್ಲ. ಹೀಗಾಗಿ ದೆಹಲಿ ಸರ್ಕಾರ ನೆರವು ನೀಡುವ ಅಗತ್ಯವೆಲ್ಲಿದೆ. ಯೋಗಿ ಆದಿತ್ಯನಾಥ್ ನಿಮಗೆ ಯಾವುದೇ ನೆರವು ನೀಡಿಲ್ಲವೇ ಎಂದು ಅರವಿಂದ್ ಕೇಜ್ರಿವಾಲ್ ಪರ ಬ್ಯಾಟ್ ಬೀಸಿದ್ದರು. ಆದರೆ ಈ ನಿಲುವು ಹಾಗೂ ಪ್ರಶ್ನೆ ಆಪ್ಗೆ ತಿರುಗುಬಾಣವಾಗಿದೆ.
2011 ರಿಂದ 2017ರ ವರೆಗೆ ದೆಹಲಿ ಪರ ಆಡಿದ ಪ್ರಮಾಣ ಪತ್ರ ಇಲ್ಲಿದೆ. ಇನ್ನೂ ನಿಮಗೆ ನಂಬಲು ಸಾಧ್ಯವಾಗುತ್ತಿಲ್ಲ ಅಂದರೆ ದೆಹಲಿ ಪ್ರತಿನಿದಿಸಿ17 ಚಿನ್ನದ ಪದಕ ಗೆದ್ದಿದ್ದೇನೆ. ಅದರ ಪ್ರಮಾಣ ಪತ್ರಗಳನ್ನು ಪೋಸ್ಟ್ ಮಾಡಬೇಕಾ ಎಂದು ದಿವ್ಯ ಖಾರವಾಗಿ ಪ್ರಶ್ನಿಸಿದ್ದಾರೆ. ಅಷ್ಟರಲ್ಲೇ ಆಪ್ ಮಾನ ಬೀದಿಗೆ ಬಂದಿದೆ. ದೇಶಕ್ಕೆ ಕಂಚಿನ ಪದಕ ತಂದುಕೊಟ್ಟ ಪ್ರತಿಭೆಗೆ ಯಾವುದೇ ನೆರವು ನೀಡದೆ ಇದೀಗ ಅದರ ಮೇಲೆ ರಾಜಕೀಯ ಮಾಡುತ್ತಿರುವ ಆಮ್ ಆದ್ಮಿ ಹಾಗೂ ಆಪ್ ನಾಯಕರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಆಪ್ ಶಾಸಕ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು,…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಶ್ರೀ ಕ್ಷೇತ್ರ ಮಲೆ…
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಮತ್ತೊಬ್ಬ ಪಾದಯಾತ್ರಿಕ…
ಬೆಂಗಳೂರು: ನಾನು ಸಿದ್ದರಾಮಯ್ಯ ಏನು ಮಾತಾಡಿಕೊಂಡಿದ್ದೇವೆ ಎನ್ನುವುದು ನನಗೆ ಗೊತ್ತಿದೆ. ನಾವು ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.…
ಬೆಂಗಳೂರು: ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆ ಮೇರೆಗೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘವು ಇದೇ ಫೆಬ್ರವರಿ.12ರಂದು ರಾಜ್ಯಾದ್ಯಂತ…
ಮಂಡ್ಯ: ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಅಕ್ಕಮ್ಮನಕೊಪ್ಪಲು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮನೆ ಜಗುಲಿಯಲ್ಲೇ ಅನುಮಾನಾಸ್ಪದವಾಗಿ ಮಂಜು ಶವ ಪತ್ತೆಯಾಗಿದೆ. ದುಷ್ಕರ್ಮಿಗಳು…