ದೇಶ- ವಿದೇಶ

ಟ್ರೆಂಡ್‌ ಸೃಷ್ಟಿಸಿದ ಕಾಕ್ರೋಚ್‌ ಜನತಾ ಪಾರ್ಟಿ ; ಚಳವಳಿಯಾಗಿ ಬದಲಾದ ಸಿಜೆಪಿ

ಹೊಸದಿಲ್ಲಿ : ಜೆನ್‌ಝೀಗಳ ನೆಚ್ಚಿನ ತಾಣವಾಗಿರುವ ಇನ್‌ಸ್ಟಾಗ್ರಾಂ ಈಗ ಕೇವಲ ಮನರಂಜನೆಯ ತಾಣವಾಗಂತೂ ಇಲ್ಲ. ಬದಲಾಗಿ ಸಂಚಲನ ಸೃಷ್ಟಿಸುವ ಬಹುದೊಡ್ಡ ಮಾಧ್ಯಮವಾಗಿ ಬದಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ರಾತ್ರೋ ರಾತ್ರಿ ಹುಟ್ಟಿದ ಕಾಕ್ರೋಜ್‌ ಜನತಾ ಪಾರ್ಟಿ(ಸಿಜೆಪಿ) ಎನ್ನುವ ರಾಜಕೀಯ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲದೆ ದೇಶದಲ್ಲೂ ಸದ್ದು ಮಾಡಿತ್ತಿದೆ.

ರಾಜಕೀಯ ಸಂವಹನ ತಜ್ಞ ಅಭಿಜೀತ್ ದೀಪ್ಕೆ ಅವರು ಮೇ 16 ರಂದು ಸಾಮಾಜಿಕ ಜಾಲತಾಣದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹೆಸರಿನಲ್ಲಿ ಅಣಕು ಗೂಗಲ್ ಫಾರ್ಮ್‌ನ್ನು ಆರಂಭಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಕೆಲ ನಿರುದ್ಯೋಗಿ ಕಾರ್ಯಕರ್ತರನ್ನು ‘ಜಿರಳೆ’ ಮತ್ತು ‘ಪರಾವಲಂಬಿ’ ಎಂದು ಹೋಲಿಸಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ವಿಡಂಬನೆ ಹುಟ್ಟಿತು ಎಂದು ಹೇಳಲಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಂತರ ಈ ಮಾತು ಮೋಸದ ಪದವಿಗಳನ್ನು ಬಳಸಿ ಮೋಸಮಾಡುವವರ ಬಗ್ಗೆ ಮಾತ್ರ ಎಂದು ಹೇಳಿದರು, ಆದರೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹಾನಿ ಆಗಿತ್ತು. ಈ ಕಿಚ್ಚಿನಲ್ಲಿ ಹುಟ್ಟಿದ ಈ ಪಕ್ಷವೇ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದೆ.

ಕಾಕ್ರೋಚ್​ ಜನತಾ ಪಕ್ಷ ಸ್ಥಾಪನೆಯಾದ ಕೂಡಲೇ ಲಕ್ಷಾಂತರ ಫಾಲೋವರ್ಸ್​!
ಅದಾದ ಕೇವಲ 90 ಗಂಟೆಗಳಲ್ಲಿ ಈ ನೋಂದಣಿ ಲಿಂಕ್‌ ಮೂಲಕ 3,50,000 ಕ್ಕೂ ಹೆಚ್ಚು ಜನರು ಸದಸ್ಯತ್ವಕ್ಕೆ ಹೆಸರು ನೋಂದಾಯಿಸಿದರು, ಇನ್ಸ್ಟಾಗ್ರಾಮ್ ನಲ್ಲಿ ಕೆಲವೇ ಗಂಟೆಗಳಲ್ಲಿ 8 ಮಿಲಿಯನ್‌ಗಿಂತ ಹೆಚ್ಚು ಅನುಯಾಯಿಗಳು ಸೇರ್ಪಡೆಯಾದರು.‌ ಇದೀಗ 12 ಮಿಲಿಯನ್‌ಗೂ ಹೆಚ್ಚು ಅನುಯಾಯಿಗಳು ಇದ್ದಾರೆ.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಮೇ 16 ರಂದು ಮಾತನಾಡುತ್ತ ʼನಿರುದ್ಯೋಗಿ ಯುವ ಜನತೆ ಜಿರಳೆಗಳಿದ್ದಂತೆʼ ಎಂದಿದ್ದರು. ಇದನ್ನೇ ಹಿಡಿದು CJP ‘ಹಾನ್ ಮೈ ಹೂಂ ಜಿರಳೆ’ ಎಂಬ ಪ್ರತಿಭಟನಾ ಹಾಡನ್ನು ಬಿಡುಗಡೆ ಮಾಡಿತು. ಪ್ರಶ್ನೆ ಪತ್ರಿಕೆ ಸೋರಿಕೆ, ಮರುಪರೀಕ್ಷೆ ಶುಲ್ಕದ ಭಾರ, ಕೋಚಿಂಗ್ ಇಂಡಸ್ಟ್ರಿಯ ಒತ್ತಡ ಎಲ್ಲವನ್ನೂ ಈ ಹಾಡು ತೀವ್ರವಾಗಿ ಹೇಳುತ್ತದೆ. ಕ್ಷಣಾರ್ಧದಲ್ಲಿ ಈ ಗೀತೆ ದೆಹಲಿಯಿಂದ ಕೋಟಾದವರೆಗಿನ ವಿದ್ಯಾರ್ಥಿ ಪ್ರತಿಭಟನಗಳ ಹಿಂದಿನ ಘೋಷವಾಗಿಬಿಟ್ಟಿತು.

ಸೋಮಾರಿ ಮತ್ತು ನಿರುದ್ಯೋಗಿಗಳ ಧ್ವನಿ ಎಂದು ಪರಿಚಯಿಸಿಕೊಂಡ CJP
‘ಸೋಮಾರಿ ಮತ್ತು ನಿರುದ್ಯೋಗಿಗಳ ಧ್ವನಿ’ ಎಂದು ತಮಗೆ ತಾವೇ ಪರಿಚಯಿಸಿಕೊಂಡಿರುವ (ಕಾಕ್ರೋಚ್​​ ಜನತಾ ಪಾರ್ಟಿ) CJP, ಕೇವಲ ಹಾಸ್ಯದಲ್ಲೇ ನಿಲ್ಲದೆ 5 ಅಂಶಗಳ ಗಂಭೀರ ನೀತಿ ಪ್ರಣಾಳಿಕೆಯನ್ನು ತಯಾರಿಸಿದೆ. ಅದರ ಪ್ರಮುಖ ಬೇಡಿಕೆ ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯ ಸಂಪೂರ್ಣ ಸುಧಾರಣೆ. NEET, CBSE ಮುಂತಾದ ಪರೀಕ್ಷೆಗಳಲ್ಲಿ ವಂಚನೆ ನಡೆದರೆ ಜವಾಬ್ದಾರ ಅಧಿಕಾರಿಗಳಿಗೆ ಕಠಿಣ, ಜಾಮೀನು ಸಿಗದ ಕ್ರಿಮಿನಲ್ ಶಿಕ್ಷೆ ಇರಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ. ಮರುಮೌಲ್ಯಮಾಪನದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ವಸೂಲಾಗುವ ಹೆಚ್ಚುವರಿ ಶುಲ್ಕವನ್ನು ಕೂಡ ತಕ್ಷಣ ರದ್ದುಗೊಳಿಸಬೇಕು ಎಂಬುದು ಅವರ ಇನ್ನೊಂದು ಬೇಡಿಕೆ.

ಸಿಜೆಪಿ ಉದ್ದೇಶ ಏನು?
ಇದರ ಹಿಂದಿನ ದೊಡ್ಡ ಅಂಶ, ಸಾಂಸ್ಥಿಕ ಭ್ರಷ್ಟಾಚಾರವನ್ನು ಗುರಿಯಾಗಿಸಿಕೊಂಡಿರುವುದು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ನಿವೃತ್ತಿಯ ನಂತರ ರಾಜ್ಯಸಭಾ ಸ್ಥಾನಗಳು ಅಥವಾ ಸರ್ಕಾರಿ ಹುದ್ದೆಗಳನ್ನು ನೀಡುವುದನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ನ್ಯಾಯಾಂಗದ ತಟಸ್ಥತೆ ಉಳಿಸಿಕೊಳ್ಳಲು ಇದು ಅಗತ್ಯ ಎಂಬ ವಾದ ಅವರದ್ದಾಗಿದೆ. ಜೊತೆಗೆ, ಮಾಹಿತಿ ಹಕ್ಕು (RTI) ಕಾಯ್ದೆಯಡಿ ಪಾರದರ್ಶಕತೆಯನ್ನು ಪಾಲಿಸುವುದಾಗಿ, ಅನಾಮಧೇಯ ದೇಣಿಗೆಗಳು ಅಥವಾ ಕಾರ್ಪೊರೇಟ್ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟ ಘೋಷಣೆ ಮಾಡಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಮಡಿಕೇರಿ: ವಿದ್ಯುತ್ ತಂತಿ ಮೇಲೆ ಮರ ಬೀಳಿಸಿ ಕಾಡಾನೆಗಳ ಪುಂಡಾಟ

ಮಡಿಕೇರಿ: ಕೊಡಗಿನಲ್ಲಿ ವನ್ಯಜೀವಿ–ಮಾನವ ಸಂಘರ್ಷ ಮತ್ತೆ ಮುಂದುವರಿದಿದೆ. ಈ ಬಾರಿ ಕಾಡಾನೆಗಳ ಬುದ್ಧಿವಂತಿಕೆ ಹಾಗೂ ಉಪಾಯದಿಂದ ನಡೆದ ಘಟನೆ ಗ್ರಾಮಸ್ಥರಲ್ಲಿ…

10 hours ago

ಶ್ರೀಲಂಕಾ ಜೈಲಿನಲ್ಲಿ ಗ್ಯಾಂಗ್‌ ವಾರ್:‌ 25 ಕೈದಿಗಳು ಸಾವು

ಕೊಲಂಬೊ: ಶ್ರೀಲಂಕಾದ ಜೈಲಿನಲ್ಲಿ ಕೈದಿಗಳ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದ ಪರಿಣಾಮ 25 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು…

10 hours ago

ಜನತೆಗೆ ಮತ್ತೊಂದು ಬ್ಯಾಡ್‌ನ್ಯೂಸ್:‌ ದುಬಾರಿಯಾಗಲಿದೆ ಸೇಬು

ನವದೆಹಲಿ: ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರಿಗೆ ಈಗ ಮತ್ತೊಂದು ಬ್ಯಾಡ್‌ ನ್ಯೂಸ್‌ ಸಿಕ್ಕಿದೆ. ಹವಾಮಾನ ವೈಪರೀತ್ಯದಿಂದಾಗಿ ಸೇಬು ಹಣ್ಣಿನ ಇಳುವರಿ…

10 hours ago

ಮೊಬೈಲ್‌ ಟಾರ್ಚ್‌ ಹಿಡಿದು ಬಸ್‌ ಚಾಲನೆ: ಮೂವರು ಅಮಾನತು

ಕಲಬುರ್ಗಿ: ಟಾರ್ಚ್‌ ಹಿಡಿದು ಬಸ್‌ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್‌ ಡ್ರೈವರ್‌ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ. ತಾಂತ್ರಿಕ…

10 hours ago

ರಾಜ್ಯದಲ್ಲಿ ಚುರುಕು ಪಡೆದುಕೊಂಡ ಮಳೆ: ಜಲಾಶಯಗಳ ಒಳಹರಿವಿನಲ್ಲಿ ಏರಿಕೆ

ಬೆಂಗಳೂರು: ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ದಾಖಲಾಗದಿದ್ದರೂ, ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಉತ್ತರ…

11 hours ago

ಧಾರಾಕಾರ ಮಳೆಗೆ ತತ್ತರಿಸಿದ ಮುಂಬೈ

ಮುಂಬೈ: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೇಶದ ವಾಣಿಜ್ಯ ರಾಜಧಾನಿ ಮುಂಬೈ ತತ್ತರಿಸಿದೆ. ಮಳೆಯ ಆರ್ಭಟಕ್ಕೆ ನಗರದ…

11 hours ago