ಮೈಸೂರು : ಯುಪಿಎಸ್ ಪರೀಕ್ಷೆ ಭೇದಿಸುವುದು ಸುಲಭವಲ್ಲ. ಅದಕ್ಕೆ ಕಠಿಣ ಪರಿಶ್ರಮ, ಸ್ಥಿರತೆ ಮತ್ತು ಸ್ಮಾರ್ಟ್ ಓದು ಅಗತ್ಯ ಎಂದು ಯುಪಿಎಸ್ಸಿ ಪರೀಕ್ಷೆಯಲ್ಲಿ 53ನೇ ರ್ಯಾಂಕ್ ಪಡೆದು ಐಎಎಸ್ಗೆ ಆಯ್ಕೆಯಾಗಿರುವ ಕಿರಣ್ ಕಮತೆ ಅವರು ಯುವ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.
ಕೆಎಸ್ಓಯುನ ಸ್ಮರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿರುವ ಐಎಎಸ್,ಕೆಎಎಸ್ ತರಬೇತಿ ಶಿಬಿರದ ವಿಶೇಷ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚಿಕ್ಕೋಡಿ ತಾಲ್ಲೂಕು ಹತ್ತರವಾಟ ಎಂಬ ಚಿಕ್ಕಗ್ರಾಮದಲ್ಲಿ ಹುಟ್ಟಿನ ನಾನು, ಈ ಹಿಂದೆ ಪಿಡಬ್ಲ್ಯೂಡಿ ಇಂಜಿನಿಯರ್ ಆಗಿದೆ. ಆದರೆ ಯುಪಿಎಸ್ಸಿ ಓದುವ ಹಂಬಲವಿತ್ತು. ಹೀಗಾಗಿ ತಯಾರಿ ಆರಂಭಿಸಿದೆ. ಆರು ಬಾರಿ ಪ್ರಯತ್ನಿಸಿದೆ ಕೊನೆಯಲ್ಲಿ ಯಶಸ್ಸು ಸಿಕ್ಕಿದೆ. ಇದಕ್ಕೆ ಕಠಿಣ ಪರಿಶ್ರಮ ಇರಬೇಕು ಎಂದರು.
ದಿನಕ್ಕೆ ಕನಿಷ್ಠ 9 ರಿಂದ 10 ಗಂಟೆ ಸತತ ಓದು ಅನಿವಾರ್ಯ. ಆದರೆ ಸುಮ್ಮನೆ ಓದಿದರೆ ಸಾಲದು, ಸ್ಮಾರ್ಟ್ ಓದು ಬೇಕು” ಎಂದು ಒತ್ತಿ ಹೇಳಿದ ಅವರು, ಯುಪಿಎಸ್ಸಿ ಪರೀಕ್ಷೆ ತಯಾರಿಗೆ ಎನ್ಸಿಇಆರ್ಟಿ ಪುಸ್ತಕಗಳನ್ನು ಓದಬೇಕು. ಜತೆಗೆ ‘ದಿ ಹಿಂದೂ’, ‘ಇಂಡಿಯನ್ ಎಕ್ಸ್ಪ್ರೆಸ್’ ಪ್ರಜಾವಾಣಿ ಪತ್ರಿಕೆಗಳನ್ನು ದಿನನಿತ್ಯ ಓದುವುದು ಅತ್ಯಂತ ಮುಖ್ಯ. ಪ್ರಸ್ತುತ ವಿದ್ಯಮಾನಗಳನ್ನು ಟಿಪ್ಪಣಿ ಮಾಡುವುದು, ಪ್ರಿಲಿಮ್ಸ್ಗೆ MCQ ಪ್ರ್ಯಾಕ್ಟಿಸ್, ಮೇನ್ಸ್ಗೆ ಉತ್ತರ ಬರೆಯುವ ಅಭ್ಯಾಸ ಮತ್ತು ನಿಯಮಿತ ಮಾಕ್ ಟೆಸ್ಟ್ಗಳು ಅಗತ್ಯ ಎಂದು ಅವರು ಸಲಹೆ ನೀಡಿದರು.
ಕೆಪಿಎಸ್ಸಿ ಪರೀಕ್ಷೆಗೆ ಕರ್ನಾಟಕದ ಇತಿಹಾಸ, ಭೂಗೋಳ, ಆರ್ಥಿಕತೆ, ರಾಜ್ಯ ವಿಶೇಷ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ರಾಜ್ಯ ಪತ್ರಿಕೆಗಳು ಮತ್ತು ಕೆಪಿಎಸ್ಸಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿದರೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಲಕ್ಷಾಂತರ ಅಭ್ಯರ್ಥಿಗಳು ಲೋಕಸೇವಾ ಆಯೋಗದ ನಾಗರೀಕ ಸೇವೆಗಳ ಪರೀಕ್ಷೆ ಬರೆಯುತ್ತಾರೆ. ಆದರೆ ಆಯ್ಕೆ ಆಗುವುದು ಮಾತ್ರ ಸಾವಿರ ಅಭ್ಯರ್ಥಿಗಳಷ್ಟು. ಕಾರಣ ಈ ಪರೀಕ್ಷೆಯ ಕಠಿಣತೆ ಅಷ್ಟರಮಟ್ಟಿಗೆ ಇರುತ್ತದೆ. ಕೆಲವರು ಒಂದು ವರ್ಷದ ಶ್ರಮದಿಂದಲೇ ಯುಪಿಎಸ್ಸಿ ಪರೀಕ್ಷೆ ಗೆದ್ದರೆ, ಇನ್ನು ಕೆಲವರು ನಾಲ್ಕೈದು ವರ್ಷಕ್ಕೆ ಯಶಸ್ಸನ್ನು ಮುಟ್ಟುತ್ತಾರೆ. ಇನ್ನು ಕೆಲವರು ಎರಡು-ಮೂರು ಪ್ರಯತ್ನಗಳಲ್ಲಿ ಗೆಲ್ಲುವವರು ಇದ್ದಾರೆ, ಹಾಗೆಯೇ ನಿರಂತರ ಪ್ರಯತ್ನವಿದ್ದರೂ ಗೆಲ್ಲದೇ ಯುಪಿಎಸ್ಸಿ ಪರೀಕ್ಷೆಯಿಂದ ಹಿಮ್ಮುಖಗೊಂಡವರು ಇದ್ದಾರೆ ಎಂದರು.
ಐಎಎಸ್ ಕನಸು ಕಾಣುವುದು ಸುಲಭ, ಆದರೆ ಅದನ್ನು ಸಾಕಾರಗೊಳಿಸಲು ಕಠಿಣ ಪರಿಶ್ರಮವೇ ಏಕೈಕ ಮಾರ್ಗ ಎಂದ ಅವರು ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಜಯಗಳಿಸಲು ಅಗತ್ಯವಾದ ತಯಾರಿ ವಿಧಾನಗಳ ಬಗ್ಗೆ ವಿವರಿಸಿದರು.
ಕುಲಪತಿ ಶರಣಪ್ಪ ಹಲಸೆ, ಸಂಯೋಜನಾಧಿಕಾರಿ ಸತ್ಯನಾರಯಣಗೌಡ ಸೇರಿದಂತೆ ಇನ್ನಿತರರು ಇದ್ದರು.
ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…
ನಗರ ಪ್ರದೇಶಗಳ ಹೋಟೆಲ್ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…
ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…
ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆ ಜೂ.೩೦ರಿಂದ ಆರಂಭವಾಗಿದೆ. ಆದರೆ ಮತದಾರರು ಈ ಪ್ರಕ್ರಿಯೆಯಲ್ಲಿ ಯಾವ ದಾಖಲೆಗಳನ್ನು…
ಪಂಜು ಗಂಗೊಳ್ಳಿ ಬಡಕಟ್ಟು ಜನರಿಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಕರುಣಾಮಯಿ ೧೯೯೦ರಲ್ಲಿ ಅಸ್ಸಾಮಿನ ಹೊಜಾಯ್ ಜಿಲ್ಲೆಯ ಲುಮ್ಡಿಂಗ್ ಗ್ರಾಮದ…