ಮೈಸೂರು ನಗರ

ಪುಸ್ತಕ ಪ್ರೀತಿಸದೇ ಇರುವವರು ಪುಸ್ತಕವನ್ನು ಓದಲಿಕ್ಕೆ ಸಾಧ್ಯವಾಗುವುದಿಲ್ಲ: ಡಾ. ಕುಮಾರ

ಮೈಸೂರು: ಯಾರಿಗೆ ಪುಸ್ತಕದ ಮೇಲೆ ಪ್ರೀತಿ ಇದೆಯೋ ಅವರು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಹ ಪುಸ್ತಕವನ್ನು ಪ್ರೀತಿಸಬೇಕು. ಪುಸ್ತಕ ಪ್ರೀತಿಸದೇ ಇರುವವರು ಪುಸ್ತಕವನ್ನು ಓದಲಿಕ್ಕೆ ಸಾಧ್ಯವಾಗುವುದಿಲ್ಲ ಎಂದು ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಕುಮಾರ ಅವರು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ “ಮಾನಸ ಯುವ ಸಂವರ್ಧನೆ-2025” (ಔದ್ಯೋಗಿಕ ಮತ್ತು ಯುವ ಸಬಲೀಕರಣ ಕಾರ್ಯಾಗಾರ) ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಮೊದಲು ಪುಸ್ತಕದ ಪ್ರೇಮಿ ಆಗಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು ಮೊಬೈಲ್‌ಗಳನ್ನು ನೋಡುವ ಬದಲು ಪುಸ್ತಕವನ್ನು ಓದಿದರೆ ಅದು ನಿಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡುತ್ತದೆ ಎಂದು ತಿಳಿಸಿದರು.

ಗುರಿಯನ್ನು ದಾಟಲು ಹಲವಾರು ಅಡೆತಡೆಗಳು ಬರಬಹುದು ಬಂದರು ನಾವು ಕುಗ್ಗದೆ ನಾವು ಹಿಗ್ಗಬೇಕು, ಹೆಮ್ಮೆಪಡಬೇಕು. ನಾವು ಸಮಸ್ಯೆಗಳನ್ನು ಸ್ವಾಗತ ಮಾಡಬೇಕು. ಏಕೆಂದರೆ ಆಗಲೇ ನಮಗೆ ಎಷ್ಟು ಸಾಮರ್ಥ್ಯ ಶಕ್ತಿ ಇದೆ ಎಂದು ತಿಳಿಯುವುದು ಎಂದು ಹೇಳಿದರು.

ನೀವು ಯಾವುದೇ ರೀತಿ ಸಮಸ್ಯೆಗಳನ್ನು ತಲೆಗೆ ಹಾಕಿಕೊಳ್ಳದೆ ಇದ್ದರೆ ಸಮಸ್ಯೆಗಳನ್ನು ಎದುರಿಸದೆ ಇದ್ದರೆ ನಿಮಗೆ ಹೇಗೆ ತಿಳಿಯುತ್ತದೆ ನಿಮಲ್ಲಿ ಎಷ್ಟು ಸಾಮರ್ಥ್ಯ ಶಕ್ತಿ ಇದೆ ಎಂದು. ಅದಕ್ಕೆ ಸಮಸ್ಯೆಗಳನ್ನು ಸ್ವಾಗತ ಮಾಡಬೇಕು. ನಿಮಲ್ಲಿ ಆಂತರ್ಯ ಶಕ್ತಿಯ ಬಗ್ಗೆ ತಿಳಿಯಬೇಕು ಎಂದು ತಿಳಿಸಿದರು.

ಗುರಿ ತಲುಪಲು ಅನಗತ್ಯ ಆಕಾಂಕ್ಷೆ, ಆಸೆಗಳನ್ನು ಬಿಡಬೇಕು. ಆಗ ಮಾತ್ರ ಗುರಿಯ ಕಡೆಗೆ ತಲುಪಲು ಸಾಧ್ಯ. ಸಾಧನೆಯನ್ನು ಮಾಡಬೇಕು ಎಂದರೆ ಕಂಫರ್ಟ್ ಝೋನ್ ಇಂದ ಹೊರಗೆ ಮೊದಲು ಬರಬೇಕು. ನಿಮ್ಮಲ್ಲಿ ನಿಮಗೆ ನಂಬಿಕೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲಿಕ್ಕೆ ಸಾಧ್ಯವಾಗುತ್ತದೆ. ಕುವೆಂಪು ಅವರು ಹೇಳಿರುವ ಮಾತಿನಂತೆ “ಎಷ್ಟು ದೇವರನ್ನು ನಂಬಿದರೇನಂತೆ ನಿನ್ನನು ನೀನು ನಂಬದೆ ಇದ್ದಾಗ” ಎನ್ನುವ ಮಾತಿನಂತೆ ನಿಮ್ಮನ್ನು ನೀವು ಮೊದಲು ನಂಬಬೇಕು ಎಂದು ಹೇಳಿದರು.

ನಮ್ಮ ವೈಯಕ್ತಿಕ ಜೀವನದ ಮೇಲೆ ಹೆಮ್ಮೆ ಇರಬೇಕು. ನಿಮ್ಮ ಮೌಲ್ಯಗಳ ಮೇಲೆ ಹೆಮ್ಮೆ ಇರಬೇಕು. ನಮ್ಮನ್ನು ನಾವು ಇಷ್ಟ ಪಡಬೇಕು. ಬೇರೆಯವರು ಇಷ್ಟಪಟ್ಟಿಲ್ಲ ಅಂತ ಯಾವುತ್ತು ಚಿಂತಿಸಬಾರದು. ಅಂತರ್ ಶಕ್ತಿಗೆ ಒಪ್ಪಿಗೆ ಆಗುವ ರೀತಿಯಲ್ಲಿ ದಿನ ಬದುಕಬೇಕು ಎಂದು ತಿಳಿಸಿದರು.

ಯಾವುದೇ ರೀತಿಯಿಂದ ಸಮಯ ವ್ಯರ್ಥ ಮಾಡದೆ ಜೀವನದಲ್ಲಿ ಹಲವಾರು ರೀತಿಯಿಂದ ವಿಷಯವನ್ನು ಕಲಿಯಬೇಕು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಯ ಒಂದು ಸಲಾ ಕಳೆದು ಹೋದರೆ ಮತ್ತೆ ಬಾರದು. ಸರಿಯಾದ ಸಮಯವನ್ನು ಉಪಯೋಗ ಮಾಡಿಕೊಳ್ಳಬೇಕು. ಗುರಿಯ ಕಡೆಗೆ ತಲುಪುವುದಕ್ಕೆ ಹೆಚ್ಚಾಗಿ ಧನಾತ್ಮಕವಾಗಿ ಯೋಜನೆಯನ್ನು ಮಾಡಬೇಕು ಎಂದು ಹೇಳಿದರು.

ಮೈಸೂರು ವಿವಿ ಕುಲಪತಿ ಎನ್.ಕೆ.ಲೋಕನಾಥ್ ಅವರು ಮಾತನಾಡಿ, ವಿದ್ಯೆ ಎಂಬುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಪುಸ್ತಕಗಳನ್ನು ಹೆಚ್ಚಾಗಿ ಓದಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಆರೋಗ್ಯ ಕೂಡ ಬಹಳ ಮುಖ್ಯವಾಗುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು. ಹಾಗೆ ಗುರಿಯ ಕಡೆಯು ಗಮನವನ್ನು ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲ ಸಚಿವರಾದ ಎಂಕೆ ಸವಿತಾ, ಕುಲ ಸಚಿವ (ಪರೀಕ್ಷಾಂಗ) ಎನ್‌.ನಾಗರಾಜ, ವಿವಿಯ ಹಣಕಾಸು ಅಧಿಕಾರಿಗಳಾದ ಕೆ.ಎಸ್‌.ರೇಖಾ ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಚಿನ್ನ ಕಳ್ಳ ಸಾಗಾಣಿಕೆ ಪತ್ತೆ : 2.89 ಕೋಟಿ ರೂ. ಮೌಲ್ಯದ ಚಿನ್ನ ವಶ

ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…

43 mins ago

ಗಣರಾಜ್ಯೋತ್ಸವ : ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ

ಭುಗಿಲೆದ್ದ ಆಕ್ರೋಶ; ಬಿಜೆಪಿ -ಕಾಂಗ್ರೆಸ್ ಆರೋಪ-ಪ್ರತ್ಯಾರೋಪ ಬೆಂಗಳೂರು : ದೇಶದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಈ…

53 mins ago

ಮೈಷುಗರ್ ಕಾರ್ಖಾನೆ ಖಾಸಗಿಯವರಿಗೆ ವಹಿಸಲ್ಲ : ಸಿ.ಡಿ.ಗಂಗಾಧರ ಸ್ಪಷ್ಟನೆ

ಮಂಡ್ಯ : ಮೈಷುಗರ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ವಹಿಸುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ…

1 hour ago

ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತ : ಕಾರಣ ಬಿಚ್ಚಿಟ್ಟ ಸಂಸದ ಯದುವೀರ್‌

ಮೈಸೂರು : ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತವಾಗಿದೆ, ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಹಸ್ತಾಂತರ ಮಾಡಿಲ್ಲ. ಈ ಬಗ್ಗೆ…

1 hour ago

ಶಾರ್ಟ್‌ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಟಿವಿ ; ದಾಖಲಾತಿಗಳು ಭಸ್ಮ

ಹನೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಟಿವಿ ಸೇರಿದಂತೆ ಅತ್ಯಮೂಲ್ಯ ದಾಖಲಾತಿಗಳು ಸುಟ್ಟು ಕರಕಲಾದ ಘಟನೆ ಹನೂರು ತಾಲೂಕಿನ ಬಂಡಳ್ಳಿಯಲ್ಲಿ…

2 hours ago

ಹನೂರು| ರಾಜ್ಯ ಸರ್ಕಾರದ ವಿರುದ್ಧ ಅಂಡೆ ಕುರುಬನದೊಡ್ಡಿ ಗ್ರಾಮಸ್ಥರಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ  ಹನೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಡೆ ಕುರುಬನ ದೊಡ್ಡಿ ಗ್ರಾಮದ ಡಾಂಬರು ರಸ್ತೆ ಅಭಿವೃದ್ಧಿಗೆ…

3 hours ago