ಅನಾವರಣ ವಸ್ತು ಪ್ರದರ್ಶನ ಉದ್ಘಾಟಿಸಿ ಪತ್ರಕರ್ತ ಕೆ.ದೀಪಕ್ ಕರೆ
ಮೈಸೂರು : ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತಿಸುವುದನ್ನು ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಅಭಿಪ್ರಾಯಪಟ್ಟರು.
ನಗರದ ಹೂಟಗಳ್ಳಿ ಹೌಸಿಂಗ್ ಕಾಲೋನಿಯಲ್ಲಿರುವ ರೋಟರಿ ಮಿಡ್ ಟೌನ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ‘ ಅನಾವರಣ ‘ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಭೂಮಿ, ಪರಿಸರ, ಮನುಷ್ಯನ ಹುಟ್ಟು, ಜೀವನದಿಂದ ಆರಂಭಗೊಂಡು ಸಾವಿನವರೆಗೂ ವಿಜ್ಞಾನವೇ ಮೂಲ ಸೆಲೆ. ಆದ್ದರಿಂದ ವಿದ್ಯಾರ್ಥಿಗಳು ಮೌಢ್ಯ ಕಂದಾಚಾರ, ಮೂಡ ನಂಬಿಕೆಯ ಆಚಾರ – ವಿಚಾರಗಳನ್ನು ನಂಬುವುದನ್ನು ಬಿಟ್ಟು ವಿಜ್ಞಾನದ ಕಡೆಗೆ ನಿಮ್ಮ ಆಸಕ್ತಿ ಮತ್ತು ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಶ್ರಮವಹಿಸಿ ಓದಿ ಪರೀಕ್ಷೆ ಬರೆಯದೆ ಪಾಸಾಗಲು ದೇವರ ಮೊರೆ ಹೋದರೆ ಪ್ರಯೋಜನವಿಲ್ಲ. ಪುಸ್ತಕ ನಮಗೆ ಪಾಠ ಕಲಿಸುವಾಗ ನಾವು ನಿದ್ದೆಗೆ ಜಾರಿದರೆ, ಮುಂದೆ ಜೀವನ ನಮಗೆ ಪಾಠ ಕಲಿಸುವಾಗ ನಾವು ನಿದ್ದೆಗೆಡಬೇಕಾಗುತ್ತದೆ. ಆದ್ದರಿಂದ ಬಾಹ್ಯ ಆಕರ್ಷಣೆಗಳಿಗೆ ಮನಸ್ಸು ಕೊಡದೆ ಓದಿನ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ನಮಗೆ ಜನುಮ ಕೊಟ್ಟು, ಅನ್ನ ಕೊಟ್ಟು, ವಿದ್ಯೆ ಕೊಟ್ಟು ಉತ್ತಮ ಮನುಷ್ಯರನ್ನಾಗಿ ಮಾಡಲು ನಮ್ಮ ಜೀವನವನ್ನು ಮುಡುಪಾಗಿಡುವ ತಂದೆ- ತಾಯಿ ನಮ್ಮ ನಿಜವಾಗಿ ಹಿರೋ- ಹಿರೋಯಿನ್ ಎಂಬ ಭಾವನೆ ಮಕ್ಕಳಿಗೆ ಬರಬೇಕು. ಅಗ ಮಾತ್ರ ನಿಮ್ಮ ಗುರಿ ಮತ್ತು ಸಾಧನೆಗೆ ಸ್ಪಷ್ಟ ರೂಪ ಬರಲಿದೆ ಎಂದು ತಿಳಿಸಿದರು.
ಒಂದು ದಿನದ ವಸ್ತು ಪ್ರದರ್ಶನದಲ್ಲಿ ಮಕ್ಕಳು ವಿಜ್ಞಾನ, ಗಣಿತ, ಕನ್ನಡ, ಹಿಂದಿ, ಕ್ರೀಡೆ, ಇಂಗ್ಲಿಷ್, ಎನ್ಸಿಸಿ ವಿಷಯಗಳ ಕುರಿತು ಮಾದರಿಗಳನ್ನು ಅನಾವರಣಗೊಳಿಸಿದರು. ಪೋಷಕರು, ವಿವಿಧ ಶಾಲೆಯ ಮಕ್ಕಳು ವಸ್ತು ಪ್ರದರ್ಶನ ವೀಕ್ಷಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲರಾದ ಆತ್ಮಾನಂದ, ಕರಾಟೆ ಪಟು ಸಿದ್ದರಾಜು, ಪವಿತ್ರನ್, ಶಿಕ್ಷಕ ವೃಂದ ಹಾಜರಿದ್ದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಅತಿ ಹೆಚ್ಚು ಕಾಲ ಸರ್ಕಾರದ ಮುಖ್ಯಸ್ಥರಾದ ದಾಖಲೆ ಬರೆದಿದ್ದಾರೆ. ಈ ಮೂಲಕ ಸಿಕ್ಕಿಂನ…
ತುಮಕೂರು: ಏಪ್ರಿಲ್.1ರಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು…
ಬೆಂಗಳೂರು: ಏಪ್ರಿಲ್.9ರಂದು ನಡೆಯಲಿರುವ ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಬಾಗಲಕೋಟೆ…
ಬೆಂಗಳೂರು: ಅಮೇರಿಕಾದಲ್ಲಿರುವ ಕನ್ನಡಿಗರ ಅತಿ ದೊಡ್ಡ ಸಾಂಸ್ಕೃತಿಕ ಸಂಭ್ರಮವಾಗಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನ ರಾಯಭಾರಿಯಾಗಿ ನಟ ರಿಷಬ್ ಶೆಟ್ಟಿ…
ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯನ್ನು 48 ಗಂಟೆಯೊಳಗೆ ಸಂಪೂರ್ಣ ಓಪನ್ ಮಾಡಬೇಕು ಎಂದು ಇರಾನ್ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಡುವು…
ಮೈಸೂರಿನ ಶಾರದಾದೇವಿ ನಗರದ ಸರ್ಕಲ್ನಲ್ಲಿ ಒಂದು ವರ್ಷದ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಆದರೆ…