ಮೈಸೂರು : ಪೂಜಾ ಕುಣಿತ, ಡೊಳ್ಳು ಕುಣಿತ, ಜಡೆ ಕೋಲಾಟ ಸೇರಿದಂತೆ ನಾನಾ ಜಾನಪದ ಕಲಾ ತಂಡಗಳು ಮಾನಸಗಂಗೋತ್ರಿ ಆವರಣದಲ್ಲಿ ಜಾನಪದ ಝೇಂಕಾರ ಮೊಳಗಿಸಿದವು.
ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಜಾನಪದ ಮಡಿಲು ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಮೈಸೂರು ವಿ.ವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಾನಪದ ಸಂಭ್ರಮ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾನಪದ ಸೊಬಗಿಗೆ ಸಭಿಕರು ತಲೆದೂಗಿದರು.
ತಮಟೆ ಕಲಾವಿದ ಉಮೇಶ್ ರಾಗಿಬೊಮ್ಮನಹಳ್ಳಿ ಮತ್ತು ತಂಡದವರ ಚರ್ಮವಾದ್ಯಮೇಳ, ತಮಟೆ ಕಲಾವಿದ ಎಚ್.ಕೆ.ಮೋಹನ್ ಕುಮಾರ್ ತಂಡದಿಂದ ತಮಟೆ ನಗಾರಿ ಪಾರ್ಸಿ ಸದ್ದು ಅನುರಣಿಸಿತು. ನಂದನ್ ಕುಮಾರ್ ಮತ್ತು ಡಿ.ಆರ್.ರಾಜೇಶ್ ಅವರ ತಂಡ ಪೂಜಾ ಕುಣಿತ, ಅಂತಾರಾಷ್ಟ್ರೀಯ ಜನಪದ ಕಲಾವಿದ ಆರ್.ಸಿ.ಸಿದ್ದರಾಜು ಮತ್ತು ತಂಡದಿಂದ ಡೊಳ್ಳು ಕುಣಿತ, ಉಪನ್ಯಾಸಕ ಡಾ.ಆರ್.ನಿಂಗರಾಜು ಮತ್ತು ತಂಡ ಕಂಸಾಳೆ ನೃತ್ಯ ನೋಡುಗರನ್ನು ಸೆಳೆಯಿತು.
ಎಸ್.ಆಕಾಶ್, ಹರ್ಷ, ರವಿ ಮತ್ತು ಜಯಂತ್ ತಂಡದಿಂದ ಪಟ ಕುಣಿತ, ದಿವ್ಯಶ್ರೀ ಸಿದ್ದುಜಂಗಮ, ಮಂಜು, ಶ್ರೀಕಂಠ ಮತ್ತು ಭಾಗ್ಯರಿಂದ ಜಡೆ ಕೋಲಾಟ, ಎಂ.ಆರ್.ಮಂಜು, ಎಂ.ಎಂ.ಆನಂದ್, ಸಂಜೀವಮೂರ್ತಿ ಅವರ ರಂಗಕುಣಿತ, ಕೀರಾಳು ಮಹೇಶ್ ಅವರ ವೀರಭದ್ರ ಕುಣಿತ, ಉಪನ್ಯಾಸಕ ಡಾ.ಪಿ.ಎಸ್.ಮಧುಸೂದನ್, ಹಾಡುಗಾರ ಎಂ.ಎನ್.ಶ್ರೀಕಾಂತ್ ಅವರ ಜಾನಪದ ಗೀತೆಗಳ ಗಾಯನ ಸಭಿಕರನ್ನು ಮೋಡಿ ಮಾಡಿತು.
ಜಾನಪದ ಜೀವಾಳ ಪ್ರಶಸ್ತಿ ಪುರಸ್ಕೃತರು
ಡಾ.ಎಂ.ಕೆಂಪಮ್ಮ ಕಾರ್ಕಳ್ಳಿ, ಅನಿಲ್ ರಾಜ್ ಸಿ.ಮಹದೇವಪುರ, ವಿಶ್ವನಾಥ್ ಎಲ್.ಚಂಗಚಹಳ್ಳಿ, ಲಕ್ಷ್ಮಿರಾಮ್ (ಜಾನಪದ ಕಲಾವಿದರು) , ಮನುಜ ತಳಗವಾದಿ (ಕೋಲಾಟ ಕಲಾವಿದ), ಡಾ.ಕೆ.ಜೆ.ನಾರಾಯಣ(ರಂಗ ನಿರ್ದೇಶಕ), ಎಂ.ಆರ್.ಮನೋಜ್ ಕುಮಾರ್(ತಮಟೆ ವಾದನ ಕಲಾವಿದ) ಶಿಕ್ಷಣ ಸೇವಾ ರತ್ನಪ್ರಶಸ್ತಿ ಪುರಸ್ಕೃತರು : ಕಾಡುಕೊತ್ತನಹಳ್ಳಿಯ ಅಂಬೇಡ್ಕರ್ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸಿ.ಚಂದ್ರಶೇಖರ್, ಮಹಾರಾಜ ಕಾಲೇಜಿನ ಉಪನ್ಯಾಸಕ ಡಾ.ಎಸ್.ಕೃಷ್ಣಪ್ಪ ಅವರಿಗೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮವನ್ನು ಹಿರಿಯ ಜಾನಪದ ತಜ್ಞ ಡಾ.ಕ್ಯಾತನಹಳ್ಳಿ ರಾಮಣ್ಣ ಉದ್ಘಾಟಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ನಿರ್ಮಲ ಮಠಪತಿ, ನಿವೃತ್ತ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಜಾನಪದ ವಿದ್ವಾಂಸ ವ.ನಂ.ಶಿವರಾಮು, ಜಾನಪದ ಮಡಿಲು ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಸುಂದರೇಶ್, ಜಾನಪದ ಕಲಾವಿದ ಆರ್.ಸಿ.ಸಿದ್ದರಾಜು, ಉಪನ್ಯಾಸಕ ಎಚ್.ಪಿ.ಮಂಜು, ಜನಪದ ಸಂಘಟಕ ಕೆ.ಎಂ.ಕೃಷ್ಣೇಗೌಡ ಮತ್ತಿತರರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಎಸ್ಸಿಪಿ-ಟಿಎಸ್ಪಿ ಹಣ ಗ್ಯಾರಂಟಿಗಳಿಗೆ ಬಳಕೆ: ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯ – ಬಿ.ವೈ. ವಿಜಯೇಂದ್ರ ಮಸ್ಕಿ : ಕಾಂಗ್ರೆಸ್ ಸರ್ಕಾರ…
ಮಂಡ್ಯ : ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಗ್ರಾಮ ಪಂಚಾಯಿತಿಯ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಜಿಲ್ಲಾಧಿಕಾರಿ…
ಎಂಎಲ್ಸಿ ಕೆ.ಶಿವಕುಮಾರ್ ಮನವಿಗೆ ಸ್ಪಂದಿಸಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಟಿ.ರಘುಮೂರ್ತಿ ಮೈಸೂರು : ಬುಡಕಟ್ಟು ಕುಟುಂಬಗಳಿಗೆ ಸರ್ಕಾರದಿಂದ…
ಮೈಸೂರು : ಅಕ್ರಮ ದಾಸ್ತಾನು, ಗ್ರಾಹಕರಿಗೆ ವಂಚನೆ ಇನ್ನಿತರ ಅಕ್ರಮಗಳ ಬಗ್ಗೆ ಆಹಾರ ಮತ್ತು ಕಾನೂನು ಮಾಪನ ಶಾಸ ಇಲಾಖೆ…
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿಗಣಿಸಲ್ಪಟ್ಟಿರುವ 14ನೇ ಆರೋಪಿ ಪ್ರದೋಷ್ ಹೇಳಿಕೆ ದಾಖಲಿಸುವ…
ಮಂಗಳೂರು: ಜನರಿಗೆ ಶುದ್ಧ ಆಹಾರ ಪೂರೈಸುವ ನಿಟ್ಟಿನಲ್ಲಿ ತಜ್ಞರ ತಂಡದ ತಪಾಸಣೆ ನಿರಂತರವಾಗಿ ನಡೆಯಲಿದ್ದು, ಎರಡನೇ ಬಾರಿ ಲೋಪಗಳು ಕಂಡು…