ಮೈಸೂರು ನಗರ

ಮಿರರ್ ರಿಫ್ಲೆಕ್ಷನ್‌ ಯಶಸ್ವಿಯಾಗಿದೆ, ಆದರೆ ಇದೇ ಪರಿಹಾರವಲ್ಲ: ಪಾಲಿಕೆ ಆಯುಕ್ತ ಶೇಖ್ ತನ್ವಿರ್ ಆಸೀಫ್

ಮೈಸೂರು: ಮಿರರ್ ರಿಫ್ಲೆಕ್ಷನ್‌ ಯಶಸ್ವಿಯಾಗಿದೆ. ಆದರೆ ಇದೇ ಪರಿಹಾರವಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್‌ ತನ್ವೀರ್‌ ಆಸಿಫ್‌ ಹೇಳಿದ್ದಾರೆ.

ಸಬರ್ಬನ್ ಬಸ್ ನಿಲ್ದಾಣದ ಬಳಿ ಮೂತ್ರ ವಿಸರ್ಜನೆ ತಡೆಗಟ್ಟಲು ಮಿರರ್ ಅಳವಡಿಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆ ಜಾಗದಲ್ಲಿ ಸಾರ್ವಜನಿಕರು ಎಷ್ಟು ಹೇಳಿದರೂ ಮೂತ್ರ ವಿಸರ್ಜನೆ ಮಾಡೋದನ್ನು ಬಿಡುತ್ತಿರಲಿಲ್ಲ. ಪಾಲಿಕೆ ಸಿಬ್ಬಂದಿಗಳ ಜೊತೆ ಸಭೆ ಮಾಡುವಾಗ ಮಿರರ್ ಅಳವಡಿಕೆ ಬಗ್ಗೆ ಚರ್ಚೆ ಮಾಡಲಾಯಿತು. ಹೀಗಾದರೂ ತಡೆಗಟ್ಟಬಹುದಾ ಎಂದು ಪ್ರಾಯೋಗಿಕವಾಗಿ ಒಂದು ಪ್ರಯತ್ನ ಮಾಡೋಣ ಎಂದು ತೀರ್ಮಾನ ಮಾಡಲಾಯಿತು. ಅದು ತುಂಬಾನೆ ಯಶಸ್ವಿಯಾಗಿ ದೊಡ್ಡ ಸುದ್ದಿನೂ ಆಗಿದೆ. ಇದೇ ಪರಿಹಾರ ಅಲ್ಲ. ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದಲೇ ಬದಲಾಗಬೇಕು. ನಾಗರಿಕ ಪ್ರಜ್ಞೆ ಎನ್ನುವುದನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬಯಲು ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಗಿಡ ನೆಡುವುದು, ಚಿತ್ರಗಳನ್ನು ಬಿಡಿಸುವುದು ಮತ್ತು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ತಡೆಗಟ್ಟುವ ಕೆಲಸ ಮಾಡಿದ್ದೆವು. ಆದರೂ ಆಗ ಇದನ್ನು ಪ್ರಾಯೋಗಿಕ ಮಾಡಿದ್ದೇವೆ. ಅನಿವಾರ್ಯ ಬಿದ್ದರೆ ಬೇರೆ ಕಡೆಯೂ ಅಳವಡಿಸುವ ಬಗ್ಗೆ ಸಾರ್ವಜನಿಕರ, ತಜ್ಞರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.

ಇನ್ನು ಇ- ಟಾಯ್ಲೆಟ್ ಮತ್ತು ಸ್ಥಗಿತ ಆಗಿರುವ ಸಾರ್ವಜನಿಕ ಶೌಚಾಲಯ ಪುನರಾರಂಭ ಮಾಡಲು ಕ್ರಮ ವಹಿಸಲಾಗಿದೆ. ಈಗಾಗಲೇ ಸ್ಥಗಿತವಾಗಿರುವ ಸುಮಾರು 112 ಶೌಚಾಲಯಗಳನ್ನು ಪುನರಾಂಭ ಮಾಡಲಾಗಿದೆ. ಇನ್ನು ಕೆಲವು ಕಡೆ ನಿರ್ವಹಣೆ ಮಾಡಲು ಅತ್ಯಂತ ಕಡಿಮೆ ಬಿಡ್ ಸಾರಿದರೂ ಯಾರೂ ಮುಂದೆ ಬರ್ತಾ ಇಲ್ಲ. ಇ- ಟಾಯ್ಲೆಟ್‌ಗಳದ್ದು ಇದೇ ಸಮಸ್ಯೆ. ಅವಶ್ಯಕತೆ ಇಲ್ಲ ಎನ್ನುವ ಕಡೆ ನಿರುಪಯುಕ್ತವಾಗಿ ಬಿದ್ದಿವೆ. ಕೆಲವು ಕಡೆ ನೀರು ಮತ್ತು ಎಲೆಕ್ಟ್ರಿಕಲ್ ಸಮಸ್ಯೆಯಿಂದ ದುರಸ್ತಿಗೊಂಡಿವೆ. ನಿರ್ವಹಣೆಗೆ ಯಾರೂ ಮುಂದೆ ಬಾರದ ಕಾರಣ ನೆನೆಗುದಿಗೆ ಬಿದ್ದಿವೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ವಹಣೆಗೆ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಎಂ.ಕೆ.ಸ್ಟಾಲಿನ್‌ ಭೇಟಿಯಾದ ತಮಿಳುನಾಡು ನೂತನ ಸಿಎಂ ವಿಜಯ್‌

ಚೆನ್ನೈ: ತಮಿಳುನಾಡಿನ ನೂತನ ಸಿಎಂ ವಿಜಯ್‌ ಅವರಿಂದು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿಯಾದರು. ಸದ್ಯ ಇಂದಿನ ಸಭೆಯಲ್ಲಿ ಇಬ್ಬರು…

17 mins ago

ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ

ಚಾಮರಾಜನಗರ: ನಾಗಮಲೆಯಲ್ಲಿ ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ಸರ್ಕಾರ 20 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ. ಭಾನುವಾರ…

25 mins ago

ತಮಿಳುನಾಡು ಸಿಎಂ ವಿಜಯ್‌ಗೆ ಕರೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ತಮಿಳುನಾಡು ನೂತನ ಸಿಎಂ ವಿಜಯ್‌ ದಳಪತಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಕರೆ…

1 hour ago

ಮೇ.13 ರಿಂದ 3 ದಿನಗಳ ಕಾಲ ಟ್ರಂಪ್‌ ಚೀನಾ ಪ್ರವಾಸ

ವಾಷಿಂಗ್ಟನ್:‌ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಆಹ್ವಾನದ ಮೇರೆಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇ.13ರಿಂದ 15ರವರೆಗೆ ಚೀನಾಗೆ…

2 hours ago

ʻಪ್ರೀತಿ ಎಲ್ಲಕ್ಕಿಂತ ಶಕ್ತಿಶಾಲಿʼ ವಿಜಯ್‌ ಮುಖ್ಯಮಂತ್ರಿ ಆದ ಬೆನ್ನಲ್ಲೇ ತ್ರಿಶಾ ಪೋಸ್ಟ್‌

ಚೆನ್ನೈ : ಜೋಸೆಫ್‌ ವಿಜಯ್ ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಅವರ ಆಪ್ತ ಸ್ನೇಹಿತೆ, ನಟಿ…

2 hours ago

ಚಿನ್ನ ಖರೀದಿ ನಿಲ್ಸಿ ; ಇಂಧನ ಕಡಿಮೆ ಬಳಸಿ : ಬೆಲೆ ಏರಿಕೆ ಮುನ್ಸೂಚನೆ ಕೊಟ್ರಾ ಪ್ರಧಾನಿ ಮೋದಿ?

ಹೈದರಾಬಾದ್‌ : ಅಮೆರಿಕ-ಇರಾನ್‌ ಸಂಘರ್ಷವು ಜಾಗತಿಕ ತೈಲ ಮಾರುಕಟ್ಟೆ ಹಾಗೂ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಜಾಗತಿಕ ತೈಲ…

3 hours ago