ಮೈಸೂರು ನಗರ

ಮಿರರ್ ರಿಫ್ಲೆಕ್ಷನ್‌ ಯಶಸ್ವಿಯಾಗಿದೆ, ಆದರೆ ಇದೇ ಪರಿಹಾರವಲ್ಲ: ಪಾಲಿಕೆ ಆಯುಕ್ತ ಶೇಖ್ ತನ್ವಿರ್ ಆಸೀಫ್

ಮೈಸೂರು: ಮಿರರ್ ರಿಫ್ಲೆಕ್ಷನ್‌ ಯಶಸ್ವಿಯಾಗಿದೆ. ಆದರೆ ಇದೇ ಪರಿಹಾರವಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್‌ ತನ್ವೀರ್‌ ಆಸಿಫ್‌ ಹೇಳಿದ್ದಾರೆ.

ಸಬರ್ಬನ್ ಬಸ್ ನಿಲ್ದಾಣದ ಬಳಿ ಮೂತ್ರ ವಿಸರ್ಜನೆ ತಡೆಗಟ್ಟಲು ಮಿರರ್ ಅಳವಡಿಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆ ಜಾಗದಲ್ಲಿ ಸಾರ್ವಜನಿಕರು ಎಷ್ಟು ಹೇಳಿದರೂ ಮೂತ್ರ ವಿಸರ್ಜನೆ ಮಾಡೋದನ್ನು ಬಿಡುತ್ತಿರಲಿಲ್ಲ. ಪಾಲಿಕೆ ಸಿಬ್ಬಂದಿಗಳ ಜೊತೆ ಸಭೆ ಮಾಡುವಾಗ ಮಿರರ್ ಅಳವಡಿಕೆ ಬಗ್ಗೆ ಚರ್ಚೆ ಮಾಡಲಾಯಿತು. ಹೀಗಾದರೂ ತಡೆಗಟ್ಟಬಹುದಾ ಎಂದು ಪ್ರಾಯೋಗಿಕವಾಗಿ ಒಂದು ಪ್ರಯತ್ನ ಮಾಡೋಣ ಎಂದು ತೀರ್ಮಾನ ಮಾಡಲಾಯಿತು. ಅದು ತುಂಬಾನೆ ಯಶಸ್ವಿಯಾಗಿ ದೊಡ್ಡ ಸುದ್ದಿನೂ ಆಗಿದೆ. ಇದೇ ಪರಿಹಾರ ಅಲ್ಲ. ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದಲೇ ಬದಲಾಗಬೇಕು. ನಾಗರಿಕ ಪ್ರಜ್ಞೆ ಎನ್ನುವುದನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬಯಲು ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಗಿಡ ನೆಡುವುದು, ಚಿತ್ರಗಳನ್ನು ಬಿಡಿಸುವುದು ಮತ್ತು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ತಡೆಗಟ್ಟುವ ಕೆಲಸ ಮಾಡಿದ್ದೆವು. ಆದರೂ ಆಗ ಇದನ್ನು ಪ್ರಾಯೋಗಿಕ ಮಾಡಿದ್ದೇವೆ. ಅನಿವಾರ್ಯ ಬಿದ್ದರೆ ಬೇರೆ ಕಡೆಯೂ ಅಳವಡಿಸುವ ಬಗ್ಗೆ ಸಾರ್ವಜನಿಕರ, ತಜ್ಞರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.

ಇನ್ನು ಇ- ಟಾಯ್ಲೆಟ್ ಮತ್ತು ಸ್ಥಗಿತ ಆಗಿರುವ ಸಾರ್ವಜನಿಕ ಶೌಚಾಲಯ ಪುನರಾರಂಭ ಮಾಡಲು ಕ್ರಮ ವಹಿಸಲಾಗಿದೆ. ಈಗಾಗಲೇ ಸ್ಥಗಿತವಾಗಿರುವ ಸುಮಾರು 112 ಶೌಚಾಲಯಗಳನ್ನು ಪುನರಾಂಭ ಮಾಡಲಾಗಿದೆ. ಇನ್ನು ಕೆಲವು ಕಡೆ ನಿರ್ವಹಣೆ ಮಾಡಲು ಅತ್ಯಂತ ಕಡಿಮೆ ಬಿಡ್ ಸಾರಿದರೂ ಯಾರೂ ಮುಂದೆ ಬರ್ತಾ ಇಲ್ಲ. ಇ- ಟಾಯ್ಲೆಟ್‌ಗಳದ್ದು ಇದೇ ಸಮಸ್ಯೆ. ಅವಶ್ಯಕತೆ ಇಲ್ಲ ಎನ್ನುವ ಕಡೆ ನಿರುಪಯುಕ್ತವಾಗಿ ಬಿದ್ದಿವೆ. ಕೆಲವು ಕಡೆ ನೀರು ಮತ್ತು ಎಲೆಕ್ಟ್ರಿಕಲ್ ಸಮಸ್ಯೆಯಿಂದ ದುರಸ್ತಿಗೊಂಡಿವೆ. ನಿರ್ವಹಣೆಗೆ ಯಾರೂ ಮುಂದೆ ಬಾರದ ಕಾರಣ ನೆನೆಗುದಿಗೆ ಬಿದ್ದಿವೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ವಹಣೆಗೆ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸ್ವಾಗತಾರ್ಹ ಸಂಕಲ್ಪ!

ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…

3 hours ago

ಓದುಗರ ಪತ್ರ: ಸತ್ಪ್ರಜೆಗಳಾಗಿ ಜೀವಿಸುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ನೀಡುವ ಗೌರವ

ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…

3 hours ago

ಓದುಗರ ಪತ್ರ: ಸೇತುವೆ ಅವ್ಯವಸ್ಥೆ; ಸಂಚಾರ ದುಸ್ತರ

ಮೈಸೂರು ತಾಲ್ಲೂಕಿನ ಬ್ಯಾತಹಳ್ಳಿ ಮತ್ತು ದಡದಹಳ್ಳಿ ನಡುವೆ ಹರಿಯುತ್ತಿರುವ ಎಣ್ಣೆಹೊಳೆ ದಾಟಲು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ದುಸ್ಥಿತಿಯಲ್ಲಿದೆ. ಈ…

3 hours ago

ಕಪ್ಪು ವರ್ಣೀಯರ ಕಣ್ಣೀರ ಕಥನ

ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಅವರ ಅಲ್ಕೆಬುಲಾನದ ಹೃದಯದಿಂದ…

3 hours ago

ಯಶ್: ‘ಟಾಕ್ಸಿಕ್’ ಬೆನ್ನೇರಿದ ಯಶೋ ಮಾರ್ಗ

ವೈಡ್‌ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ‘ಫಸ್ಟ್ , ಯು ಹ್ಯಾವ್ ಟು ಬಿಲೀವ್ ಇನ್ ಇಟ್, ದೆನ್…

3 hours ago

ರೈತರ ಪಾಲಿಗೆ ಕಹಿಯಾದ ಸಿಹಿಗುಂಬಳ

ದಾ.ರಾ.ಮಹೇಶ್ ಹನಗೋಡು ಹೋಬಳಿ ರೈತರು ಬೆಳೆದ ಸಿಹಿಗುಂಬಳಕ್ಕೆ ದೊರೆಯದ ಮಾರುಕಟ್ಟೆ  ವೀರನಹೊಸಹಳ್ಳಿ: ಜೋಳ, ಶುಂಠಿ, ಮತ್ತಿತರ ಸಾಂಪ್ರದಾಯಿಕ ಕೃಷಿ ಬಿಟ್ಟು…

3 hours ago