ಮೈಸೂರು ನಗರ

ಮೈಸೂರು | ದಾಖಲೆ ಮೊತ್ತಕ್ಕೆ ಹರಾಜದ ಎಂಡಿಎ ನಿವೇಶನ

ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಇದೇ ಮೊಟ್ಟ ಮೊದಲ ಬಾರಿ ಕರೆದಿದ್ದ ನಿವೇಶನಗಳ ಬಹಿರಂಗ ಹರಾಜು ಪ್ರಾಧಿಕಾರಕ್ಕೆ ಬಂಪರ್ ಮೊತ್ತ ಸಂಗ್ರಹಿಸಲು ನೆರವಾಗಿದೆ. ನಿವೇಶನಗಳ ಹರಾಜು ದಾಖಲೆ ಮೊತ್ತಕ್ಕೆ ಮಾರಾಟವಾಗಿರುವುದು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಉಬ್ಬೇರಿಸುವಂತೆ ಮಾಡಿದೆ.

ಕೆಲ ದಿನಗಳ ಹಿಂದಷ್ಟೆ ಆನ್ ಲೈನ್ ಹರಾಜು ಆಹ್ವಾನಿಸಲಾಗಿತ್ತು. ಈ ಹರಾಜಿನಲ್ಲಿ ಆಸಕ್ತಿ ವಹಿಸಿ ಅನೇಕರು ಬಿಡ್ ನಲ್ಲಿ ಭಾಗವಹಿಸಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹೆಸರು ಬದಲಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರವಾದ ಮೇಲೆ ಇದೇ ಮೊದಲ ನಿವೇಶನಗಳ ಬಹಿರಂಗ ಹರಾಜು ಪ್ರಕ್ರಿಯೆಯಾಗಿತ್ತು. ಎಂಡಿಎ ನೂತನ ಆಯುಕ್ತರಾಗಿ ಕೆ.ಆರ್. ರಕ್ಷಿತ್ ಅವರನ್ನು ನೇಮಕಗೊಳಿಸಲಾಗಿತ್ತು. ಅಧಿಕಾರ ವಹಿಸಿಕೊಂಡ ಬಳಿಕ ಪ್ರಾಧಿಕಾರದ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿದ ರಕ್ಷಿತ್ ಕೆಲ ದಿನಗಳಲ್ಲೇ ಖಾಲಿ ನಿವೇಶನಗಳ ಪಟ್ಟಿ ಸಿದ್ಧಪಡಿಸಿ ಬಹಿರಂಗ ಹರಾಜಿಗೆ ಪ್ರಕಟಣೆ ಹೊರಡಿಸಿದರು.

ಈ ನಿರ್ಧಾರದಿಂದ ಈಗ ಪ್ರಾಧಿಕಾರಕ್ಕೆ ಕೋಟ್ಯಾಂತರ ರೂ. ಆದಾಯ ಸಂಗ್ರಹಗೊಂಡಿದೆ.

ಮಾಹಿತಿಗಳ ಪ್ರಕಾರ ದಾಖಲೆ ಮೊತ್ತಕ್ಕೆ ಹರಾಜುಗೊಂಡ ನಿವೇಶನಗಳ ಮಾಹಿತಿ ಹೀಗಿದೆ.

ವಿಜಯನಗರ 4 ನೇ ಹಂತ, 2 ನೇ ಫೇಸ್ ನ ನಿವೇಶನ ಸಂಖ್ಯೆ 109/4 (600 sqft – 20 X 30 ) ಹರಾಜು ಮೊತ್ತ 2 ಕೋಟಿ ರೂ. ನಿವೇಶನದ ಚದರ ಅಡಿ ಮೊತ್ತ 33,000 ರೂ.

ಅದೇ ರೀತಿ ವಿಜಯನಗರ 4 ನೇ ಹಂತ, 2 ನೇ ಫೇಸ್ ನ ನಿವೇಶನ ಸಂಖ್ಯೆ 10298 (4000 sqft- 50X80) ಹರಾಜು ಮೊತ್ತ 9 ಕೋಟಿ ರೂ. ನಿವೇಶನದ ಚದರ ಅಡಿ ಮೊತ್ತ 22500 ರೂ.

ಗಗನಕ್ಕೇರಿದ ಬೆಲೆ
ಈ ಹರಾಜು ಪ್ರಕ್ರಿಯೆಯಿಂದ ಈಗ ಮೈಸೂರು ನಗರದಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿದಂತಾಗಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಈಗಾಗಲೇ ನಿವೇಶನಗಳ ಬೆಲೆ ಮುಗಿಲು ಮುಟ್ಟಿದ್ದು ಮಧ್ಯಮ ವರ್ಗದವರಿಗೆ ನಿವೇಶನ ಖರೀದಿ ಗಗನ ಕುಸುಮವಾಗಿದೆ. ಈಗ ಮೈಸೂರು ನಗರದಲ್ಲೂ ಮುಂಬರುವ ದಿನಗಳಲ್ಲಿ ಅದೇ ಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಈ ಹರಾಜು ಪ್ರಕ್ರಿಯೆಯಿಂದ ಗೋಚರಿಸುತ್ತಿದೆ.

ಪ್ರಾಧಿಕಾರ ಹರಾಜು ಮಾಡಿದ ನಿವೇಶನಗಳ ಮೊತ್ತ ಈ ಮಟ್ಟದಲ್ಲಿ ಏರಿಕೆಗೊಂಡಿರುವ ಕಾರಣ, ಇನ್ಮುಂದೆ ಮೈಸೂರಿನ ಇತರೆ ನಿವೇಶನಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ಅಭಿಪ್ರಾಯಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ಧ: ಸಚಿವ ಕೃಷ್ಣಭೈರೇಗೌಡ

ಬೆಳಗಾವಿ: ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವ್ಯಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ…

2 mins ago

ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ವಿಚಾರ: ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು.!

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪವಾಗಿದೆ. ಈ ಬಗ್ಗೆ ಸಾರಿಗೆ ಸಚಿವ…

10 mins ago

ಲೋಕಸಭೆಯಲ್ಲಿ ವಿ-ಬಿಜಿ ರಾಮ್‌ ಜಿ ಮಸೂದೆ ಅಂಗೀಕಾರ

ನವದೆಹಲಿ: ಲೋಕಸಭೆಯಲ್ಲಿ ವಿ-ಬಿಜಿ ರಾಮ್‌ ಜಿ ಮಸೂದೆ ಅಂಗೀಕಾರಗೊಂಡಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇಂದು ಲೋಕಸಭೆಯು ರೋಜ್‌ಗಾರ್‌ ಮತ್ತು ಅಜೀವಿಕಾ…

40 mins ago

ಕಳೆದ 3 ವರ್ಷಗಳಲ್ಲಿ 88 ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿ: ಸಚಿವ ಪರಮೇಶ್ವರ್‌

ಬೆಳಗಾವಿ: ರಾಜ್ಯದಲ್ಲಿ ಪೊಲೀಸ್‌ ಸಿಬ್ಬಂದಿಗಳೇ ದರೋಡೆ, ಕಳ್ಳತನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಬೇಲಿಯೇ ಎದ್ದು…

52 mins ago

ಪಾರಿವಾಳದ ಮಲ-ಮೂತ್ರದಿಂದ ಜನರಿಗೆ ಉಸಿರಾಟದ ತೊಂದರೆ: ಸಚಿವ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ

ಬೆಂಗಳೂರು: ಪಾರಿವಾಳದ ಮಲ-ಮೂತ್ರದಿಂದ ಸೋಂಕು, ಉಸಿರಾಟದ ತೊಂದರೆಯಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು…

2 hours ago

ಕಳ್ಳತನ ಪ್ರಕರಣ: ಸ್ಯಾಂಡಲ್‌ವುಡ್‌ ನಿರ್ಮಾಪಕ ಹರ್ಷವರ್ಧನ್‌ ಅರೆಸ್ಟ್‌

ಕಾರವಾರ: ಪತ್ನಿ ಕಿಡ್ನ್ಯಾಪ್‌ ಮಾಡಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ನಿರ್ಮಾಪಕ ಹರ್ಷವರ್ಧನ್‌ ಇದೀಗ ಮನೆಗಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ…

3 hours ago