ಮೈಸೂರು : ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಮುನ್ನುಡಿಯಾಗಿ ಅರಮನೆ ಫಲಪುಷ್ಪ ಪ್ರದರ್ಶನ ಭಾನುವಾರದಿಂದ ವರ್ಣರಂಜಿತವಾಗಿ ಆರಂಭಗೊಂಡಿದೆ.
ಮೈಸೂರು ಅರಮನೆ ಮಂಡಳಿ ವತಿಯಿಂದ ಡಿ. 21ರಿಂದ 31ರವರೆಗೆ 10 ದಿನಗಳ ಫಲಪುಷ್ಪ ಪ್ರದರ್ಶನ ನಡೆಯಲಿದೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಮುದ ನೀಡಲು ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಲಕ್ಷಾಂತರ ಹೂವುಗಳಿಂದ ನಿರ್ಮಿಸಿರುವ ‘ಶೃಂಗೇರಿ ದೇವಸ್ಥಾನ’ ಮಾದರಿ ಸೇರಿದಂತೆ ಇನ್ನಿತರ ಮಾದರಿಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ವೈವಿಧ್ಯಮಯ ಮಾದರಿಗಳೊಂದಿಗೆ ಅರಮನೆ ಅಂಗಳವೂ ಪುಷ್ಪಲೋಕವಾಗಿ ಮಾರ್ಪಟ್ಟಿದೆ.
ಧಾರ್ಮಿಕ, ಪರಂಪರೆ, ದೇಶಪ್ರೇಮ, ಕ್ರೀಡೆ, ಮನರಂಜನೆ ವಿಭಾಗಗಳಲ್ಲಿ ನಿರ್ಮಿಸಿರುವ ಮಾದರಿಗಳು ಮೈಮನಕ್ಕೆ ಮುದ ನೀಡಲಿವೆ. ಅರಮನೆಯ ದೀಪಾಲಂಕಾರದಲ್ಲಿ ಸಂಗೀತಯಾನವೂ ಚಳಿಗೆ ಹಿತಾನುಭವ ನೀಡಲಿದೆ. ಭವ್ಯವಾದ ಅರಮನೆ ಅಂಗಳದಲ್ಲಿ ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶಾರದದೇವಿಯ ದೇಗುಲವೂ ಬಗೆ ಬಗೆಯ ಹೂಗಳಲ್ಲಿ ಮೈದಳೆದಿದೆ. 50 ಅಡಿ ಅಗಲದ ಶೃಂಗೇರಿ ದೇವಸ್ಥಾನವೂ ಮುಖ್ಯ ಆಕರ್ಷಣೆಯಾಗಿದೆ.
8 ಸಾವಿರ ಮರಗಳನ್ನು ತನ್ನ ಮಕ್ಕಳಂತೆ ಪೋಷಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ತಿಮ್ಮಕ್ಕನವರ ಭಾವಚಿತ್ರವನ್ನು ಹೂ, ಸಿರಿಧಾನ್ಯದಿಂದ ಅಲಂಕರಿಸಿ ವೃಕ್ಷ ಮಾದರಿಯನ್ನು ನಿರ್ಮಿಸಲಾಗಿದ್ದು, ಪರಿಸರ ಜಾಗೃತಿ ಮೂಡಿಸುತ್ತಿದೆ.
ಇದನ್ನು ಓದಿ: ಜೋಹಾನ್ಸ್ಬರ್ಗ್ನಲ್ಲಿ ಗುಂಡಿನ ದಾಳಿ : 10 ಮಂದಿ ಸಾವು, 10 ಜನರಿಗೆ ಗಾಯ
ದೇಶಪ್ರೇಮ ಮೂಡಿಸು ಮಾದರಿಗಳು
ಯುದ್ಧದ ಟ್ಯಾಂಕರ್ ಮುಂದೆ ನಿಂತ ಕರ್ನಲ್ ಸೋಫಿಯಾ ಖುರೇಷಿ, ಯುದ್ಧದ ವಿಮಾನದ ಎದುರು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ನೌಕಪಡೆಯ ಯುದ್ಧ ನೌಕೆಯೊಂದಿಗೆ ಕಮಾಂಡರ್ ಪ್ರೇರಣಾ ಡಿ ಅವರ ಭಾವಚಿತ್ರಗಳು ಭಾರತದ ಸೇನೆಯ ಶೌರ್ಯದ ಪ್ರತೀಕವಾಗಿವೆ. ಆಪರೇಷನ್ ಸಿಂಧೂರದಲ್ಲಿ ಈ ಮೂವರು ಪ್ರದರ್ಶಿಸಿದ ಶೌರ್ಯಕ್ಕೆ ಗೌರವ ಸಮರ್ಪಿಸಲಾಗಿದೆ. ಬಾಬಾ ಸಾಹೇಬ ಬಿ.ಆರ್. ಅಂಬೇಡ್ಕರ್ ಭಾವಚಿತ್ರದೊಂದಿಗೆ ಭಾರತ ಸಂವಿಧಾನದ ಘೋಷವಾಕ್ಯ ಪುಸ್ತಕ ರೂಪದಲ್ಲಿ ಹೂಗಳು ಅಲಂಕರಿಸಿದೆ. ಉಯ್ಯಾಲೆಯಲ್ಲಿ ಕುಳಿತು ವಿಹರಿಸುತ್ತಿರುವ ಕೃಷ್ಣ, ರಾಧೆ ಫಲ ಪುಷ್ಪ ಪ್ರದರ್ಶನದ ಮತ್ತೊಂದು ಆಕರ್ಷಣೆಯಾಗಿದೆ. 2025ರಲ್ಲಿ ಮಹಿಳಾ ಕ್ರಿಕೆಟಿಗರು ಗೆದ್ದ ಟ್ರೋಫಿ, ಖೋ ಖೋ, ಕಬಡ್ಡಿ, ಅಂಧರ ಕ್ರಿಕೆಟ್ ಆಟಗಾರರ ಭಾವಚಿತ್ರ ಡಿಜಿಟಲ್ ಬೋರ್ಡ್ನಿಂದ ಅಲಂಕರಿಸಲಾಗಿದೆ.
ಎರಡು ದ್ವಾರಗಳಲ್ಲಿ ನವಿಲು, ಮಕ್ಕಳನ್ನು ಆಕರ್ಷಿಸಲು ಛೋಟಾಭೀಮ್, ಕಾಳಿಂಗ ಮರ್ಧನ, ಅಳಿಲು ಸೈಕಲ್, ಹಂಸ ಮಾದರಿಯ ಸೆಲಿ ಪಾಯಿಂಟ್ ನಿರ್ಮಿಸಲಾಗಿದೆ. ವಿವಿಧ ಹಣ್ಣು ಮತ್ತು ತರಕಾರಿ ಕೆತ್ತನೆಗಳಿಂದ ಗಣ್ಯ ವ್ಯಕ್ತಿಗಳು ಮತ್ತು ಪ್ರಾಣಿ ಪಕ್ಷಿಗಳು ಸಾಧನೆಯ ಕತೆಗಳನ್ನು ಹೇಳುತ್ತಿವೆ.
ಅರಮನೆ ದೀಪಾಲಂಕಾರದಲ್ಲಿ ಫಲಪುಷ್ಪ ಪ್ರದರ್ಶನ ಜಗಮಗಿಸಲಿದೆ. 50 ರೂ. ಪ್ರವೇಶ ನಿಗದಿಪಡಿಸಲಾಗಿದೆ. ಮೊದಲ ದಿನವಾದ ಭಾನುವಾರವೇ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಸಾವಿರಾರು ಜನರು ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು.
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…
ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…
ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ…
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…