ಅಂತಾರಾಷ್ಟ್ರೀಯ

ಚಾಟ್‌ ಜಿಪಿಟಿ ಬಹಳ ಕೆಟ್ಟದ್ದು : ವಿಕಿಪೀಡಿಯಾ ಸಹಸಂಸ್ಥಾಪಕ ಜಿಮ್ಮಿ ವೇಲ್ಸ್‌

ವಿಕಿಪೀಡಿಯಾ ಸಹಸಂಸ್ಥಾಪಕರಾದ ಜಿಮ್ಮಿ ವೇಲ್ಸ್‌ ಅವರು ಚಾಟ್‌ ಜಿಪಿಟಿ ಬಗ್ಗೆ ಮಾತನಾಡಿದ್ದು, ಚಾಟ್‌ ಜಿಪಿಟಿ ಬಹಳ ಕೆಟ್ಟದ್ದು, ಇದರಿಂದ ಜ್ಞಾನ ನಾಶವಾಗುತ್ತದೆ ಎಂದು ವಿಕಿಪೀಡಿಯಾ ಸಹಸಂಸ್ಥಾಪಕ ಅಭಿಪ್ರಾಯಪಟ್ಟಿದ್ದಾರೆ.

ಪೋರ್ಚುಗಲ್‌ನಲ್ಲಿ ಆಯೋಜಿಸಲಾಗಿದ್ದ ವೆಬ್‌ ಶೃಂಗಸಭೆ 2023ರಲ್ಲಿ ಚಾಟ್‌ ಜಿಪಿಟಿ ಬಗ್ಗೆ ಮಾತನಾಡಿದ ಅವರು ಇಂತಹ ಕೃತಕ ಬುದ್ಧಮತ್ತೆಯ ಮಿತಿಗಳ ಬಗ್ಗೆ ವಿವರಿಸಿದ್ದಾರೆ, “ಚಾಟ್‌ ಜಿಪಿಟಿ ಆರಂಬದಲ್ಲಿ ಬಳಸಲು ಉತ್ತಮವೆನಿಸುತ್ತದೆ. ಬಳಸಲು ಆರಂಭಿಸಿದ ನಂತರ ಅದು ಕೆಟ್ಟದ್ದು ಎನಿಸಿಬಿಡುತ್ತದೆ, ಇದರಿಂದ ಸಂಶೋಧನಾ ಮನೊಭಾವ ಕುಂಠಿತಗೊಂಡಿದೆ, ಈ ಸಭೆಯಲ್ಲಿರುವ ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವಿದೆ” ಎಂದಿದ್ದಾರೆ.

ಜನರೇಟಿವ್‌ ಎಐ ಕಂಪನಿಗಳು ಸರಿಯಾದ ಕ್ರಮದಲ್ಲಿ ಪರಿಶೀಲನೆ ನಡೆಸಿ, ಅರ್ಹವಾಗಿ ಪರವಾನಗಿ ಪಡೆಯುತ್ತಿದ್ದಾರೆಯೇ ಎಂಬ ಆಕ್ಸಿಯೋನ್‌ನ ಹಿರಿಯ ಪತ್ರಕರ್ತರ ಪ್ರಶ್ನೆಗೆ, ” ಹೊಸ ತಂತ್ರಜ್ಞಾನಗಳು ಒಮ್ಮೆ ಬಂದು, ಅವುಗಳನ್ನು ನಾವು ಅಳವಡಿಸಿಕೊಂಡರೆ ಅದು ಸೋಮಾರಿತನವನ್ನು ಸೂಚಿಸುವ ಎಚ್ಚರಿಕೆಯನ್ನು ನೀಡುತ್ತದೆ. ಎಐಯ ಪರಿಶೀಲನೆಯು ಮುಂದಿನ ನವೀನ ತಂತ್ರಜ್ಞಾನಗಳ ಎಚ್ಚರಿಕೆಯ ಭಾಗವಾಗಿದೆ ಎಂದು ವೇಲ್ಸ್‌ ಹೇಳಿದ್ದಾರೆ.

ಚಾಟ್‌ ಜಿಪಿಟಿಯನ್ನು ಹೆಚ್ಚು ಜವಾಬ್ದಾರಿಯುತವಾಗಿ ಮತ್ತು ವಾಸ್ತವಿಕವಾಗಿ ನಾವು ನೋಡಬೇಕಿದೆ. ಇದರಿಂದ ಡೇಟಾವನ್ನು ಹೆಚ್ಚು ಫಿಲ್ಟರ್‌ ಮಾಡಿದರೇ ಅದು ಸಾಮಾಜಿಕ ಮಾಧ್ಯಮದಂತಹ ಕಡಿಮೆ ಗುಣಮಟ್ಟದ ಮೂಲಗಳನ್ನು ತಪ್ಪಿಸಿ, ವಿವಿಧ ಕ್ಷೇತ್ರಗಳಿಗೆ ಹಾನಿಯನ್ನುಂಟು ಮಾಡಲಿದೆ ಎಂದು ಅವರು ಭಾವಿಸಿದ್ದಾರೆ.

ಏನಿದು ಚಾಟ್‌ ಜಿಪಿಟಿ?
ಇದೊಂದು ನವೀನ ತಂತ್ರಜ್ಞಾನವಾಗಿದೆ. ನಮಗೆ ಬೇಕಾದ ಸಮಗ್ರ ಮಾಹಿತಿಯ ಬಗ್ಗೆ ಒಂದು ಸಾಲಿನಲ್ಲಿ ಬರೆದರೆ ಚಾಟ್‌ ಜಿಪಿಟಿ ನಾವು ಕೇಳಿದಷ್ಟು ಪದಮಿತಿಯಲ್ಲಿ ಮಾಹಿತಿ ನೀಡಲಿದೆ. ಇದು ಅತಿ ನಿಖರವಾಗಿದ್ದು, ಇದನ್ನು ಬಳಸುವ ಮೂಲ ಉದ್ದೇಶವೇ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳುವುದಾಗಿದೆ. ಆದರೆ ಇದು ಜನರ ಜ್ಞಾನ ಸಂಪಾದನೆಗೆ ನೇರವಾಗಿಯೇ ಪೆಟ್ಟು ನೀಡುತ್ತಿದೆ.

andolanait

Share
Published by
andolanait

Recent Posts

ಪೂರ್ಣ ಸಿದ್ಧವಾಗದ ಎಕ್ಸ್‌ಪ್ರೇಸ್‌ ವೇ : ಟೋಲ್‌ ಕಡಿತ

ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…

8 hours ago

ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…

9 hours ago

T20 World Cup | ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…

9 hours ago

ದಳಪತಿ ವಿಜಯ್‌ ರ‍್ಯಾಲಿಯಲ್ಲಿ ನಿಲ್ಲದ ದುರಂತ : ಮತ್ತೊಬ್ಬನ ಸಾವು

ಸೇಲಂ : ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ…

10 hours ago

ರೈಲ್‌ಒನ್‌ ಆಪ್‌ : ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ಆಪ್ ‘ರೈಲ್‌ಒನ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ…

10 hours ago

ತಾರಿಖ್‌ ರೆಹಮಾನ್‌ ಬಾಂಗ್ಲಾದೇಶದ ನೂತನ ಪ್ರಧಾನಿ

ಢಾಕಾ : ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(ಬಿಎನ್‌ಪಿ) ಗೆದ್ದು ಬೀಗಿದೆ. ಸಂಸತ್ತಿನ ಒಟ್ಟು 300 ಸ್ಥಾನಗಳ ಪೈಕಿ…

10 hours ago