ಅಂತಾರಾಷ್ಟ್ರೀಯ

ಚಾಟ್‌ ಜಿಪಿಟಿ ಬಹಳ ಕೆಟ್ಟದ್ದು : ವಿಕಿಪೀಡಿಯಾ ಸಹಸಂಸ್ಥಾಪಕ ಜಿಮ್ಮಿ ವೇಲ್ಸ್‌

ವಿಕಿಪೀಡಿಯಾ ಸಹಸಂಸ್ಥಾಪಕರಾದ ಜಿಮ್ಮಿ ವೇಲ್ಸ್‌ ಅವರು ಚಾಟ್‌ ಜಿಪಿಟಿ ಬಗ್ಗೆ ಮಾತನಾಡಿದ್ದು, ಚಾಟ್‌ ಜಿಪಿಟಿ ಬಹಳ ಕೆಟ್ಟದ್ದು, ಇದರಿಂದ ಜ್ಞಾನ ನಾಶವಾಗುತ್ತದೆ ಎಂದು ವಿಕಿಪೀಡಿಯಾ ಸಹಸಂಸ್ಥಾಪಕ ಅಭಿಪ್ರಾಯಪಟ್ಟಿದ್ದಾರೆ.

ಪೋರ್ಚುಗಲ್‌ನಲ್ಲಿ ಆಯೋಜಿಸಲಾಗಿದ್ದ ವೆಬ್‌ ಶೃಂಗಸಭೆ 2023ರಲ್ಲಿ ಚಾಟ್‌ ಜಿಪಿಟಿ ಬಗ್ಗೆ ಮಾತನಾಡಿದ ಅವರು ಇಂತಹ ಕೃತಕ ಬುದ್ಧಮತ್ತೆಯ ಮಿತಿಗಳ ಬಗ್ಗೆ ವಿವರಿಸಿದ್ದಾರೆ, “ಚಾಟ್‌ ಜಿಪಿಟಿ ಆರಂಬದಲ್ಲಿ ಬಳಸಲು ಉತ್ತಮವೆನಿಸುತ್ತದೆ. ಬಳಸಲು ಆರಂಭಿಸಿದ ನಂತರ ಅದು ಕೆಟ್ಟದ್ದು ಎನಿಸಿಬಿಡುತ್ತದೆ, ಇದರಿಂದ ಸಂಶೋಧನಾ ಮನೊಭಾವ ಕುಂಠಿತಗೊಂಡಿದೆ, ಈ ಸಭೆಯಲ್ಲಿರುವ ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವಿದೆ” ಎಂದಿದ್ದಾರೆ.

ಜನರೇಟಿವ್‌ ಎಐ ಕಂಪನಿಗಳು ಸರಿಯಾದ ಕ್ರಮದಲ್ಲಿ ಪರಿಶೀಲನೆ ನಡೆಸಿ, ಅರ್ಹವಾಗಿ ಪರವಾನಗಿ ಪಡೆಯುತ್ತಿದ್ದಾರೆಯೇ ಎಂಬ ಆಕ್ಸಿಯೋನ್‌ನ ಹಿರಿಯ ಪತ್ರಕರ್ತರ ಪ್ರಶ್ನೆಗೆ, ” ಹೊಸ ತಂತ್ರಜ್ಞಾನಗಳು ಒಮ್ಮೆ ಬಂದು, ಅವುಗಳನ್ನು ನಾವು ಅಳವಡಿಸಿಕೊಂಡರೆ ಅದು ಸೋಮಾರಿತನವನ್ನು ಸೂಚಿಸುವ ಎಚ್ಚರಿಕೆಯನ್ನು ನೀಡುತ್ತದೆ. ಎಐಯ ಪರಿಶೀಲನೆಯು ಮುಂದಿನ ನವೀನ ತಂತ್ರಜ್ಞಾನಗಳ ಎಚ್ಚರಿಕೆಯ ಭಾಗವಾಗಿದೆ ಎಂದು ವೇಲ್ಸ್‌ ಹೇಳಿದ್ದಾರೆ.

ಚಾಟ್‌ ಜಿಪಿಟಿಯನ್ನು ಹೆಚ್ಚು ಜವಾಬ್ದಾರಿಯುತವಾಗಿ ಮತ್ತು ವಾಸ್ತವಿಕವಾಗಿ ನಾವು ನೋಡಬೇಕಿದೆ. ಇದರಿಂದ ಡೇಟಾವನ್ನು ಹೆಚ್ಚು ಫಿಲ್ಟರ್‌ ಮಾಡಿದರೇ ಅದು ಸಾಮಾಜಿಕ ಮಾಧ್ಯಮದಂತಹ ಕಡಿಮೆ ಗುಣಮಟ್ಟದ ಮೂಲಗಳನ್ನು ತಪ್ಪಿಸಿ, ವಿವಿಧ ಕ್ಷೇತ್ರಗಳಿಗೆ ಹಾನಿಯನ್ನುಂಟು ಮಾಡಲಿದೆ ಎಂದು ಅವರು ಭಾವಿಸಿದ್ದಾರೆ.

ಏನಿದು ಚಾಟ್‌ ಜಿಪಿಟಿ?
ಇದೊಂದು ನವೀನ ತಂತ್ರಜ್ಞಾನವಾಗಿದೆ. ನಮಗೆ ಬೇಕಾದ ಸಮಗ್ರ ಮಾಹಿತಿಯ ಬಗ್ಗೆ ಒಂದು ಸಾಲಿನಲ್ಲಿ ಬರೆದರೆ ಚಾಟ್‌ ಜಿಪಿಟಿ ನಾವು ಕೇಳಿದಷ್ಟು ಪದಮಿತಿಯಲ್ಲಿ ಮಾಹಿತಿ ನೀಡಲಿದೆ. ಇದು ಅತಿ ನಿಖರವಾಗಿದ್ದು, ಇದನ್ನು ಬಳಸುವ ಮೂಲ ಉದ್ದೇಶವೇ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳುವುದಾಗಿದೆ. ಆದರೆ ಇದು ಜನರ ಜ್ಞಾನ ಸಂಪಾದನೆಗೆ ನೇರವಾಗಿಯೇ ಪೆಟ್ಟು ನೀಡುತ್ತಿದೆ.

andolanait

Share
Published by
andolanait

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

11 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

11 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

12 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

13 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

13 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

13 hours ago