ಪತ್ರಿಕೆಯಿಂದ

ಹಿರಿಯರಿಗೂ ಒಲಿದಿರುವ ಸ್ಮಾರ್ಟ್‌ಫೋನ್ ಗೆಳೆಯ

  • ಇ.ಆರ್.ರಾಮಚಂದ್ರನ್, ಮೈಸೂರು.

ವಯಸ್ಸಾದಂತೆಲ್ಲಾ ನಮ್ಮ ಆಪ್ತ ವಲಯದ ಸಂಪರ್ಕಗಳು ಕಡಿಮೆ ಯಾಗುತ್ತಿರುತ್ತವೆ. ಬಾಲ್ಯದಲ್ಲಿ, ಶಾಲಾ-ಕಾಲೇಜಿನಲ್ಲಿ ಜತೆಯಾದವರ ಗುಂಪು ಈಗ ಚದುರಿ ಹೋಗಿರುತ್ತದೆ. ಅವರ ಸಂಪರ್ಕ ಅಪರೂಪ. ಇದರ ಮೇಲೆ ಕೆಲಸದ ಮೇಲೆ ಹೊರ ಹೋಗಿ ಅಲ್ಲಿಯೇ ನೆಲೆಸಿ ಎಲ್ಲರ ಸಂಪರ್ಕದಿಂದ ದೂರಾಗಿ ಕ್ರಮೇಣ ನೆನಪೇ ಕರಗಿ ಹೋಗಿರುತ್ತದೆ. ಕೊನೆಗೆ ಬಾಳಿನುದ್ದಕ್ಕೂ ನಮ್ಮ ಸ್ನೇಹಿತೆ, ಸಂಗಾತಿಯಾಗಿ ಉಳಿಯುವುದು ನಮ್ಮ ಪತ್ನಿ ಮಾತ್ರ.

ನಮ್ಮ ಮಕ್ಕಳೂ ಅವರದ್ದೇ ಆದ ಕುಟುಂಬದೊಂದಿಗೆ ಬೇರೆಡೆ ನೆಲೆಸಿ ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ನಮ್ಮೆಲ್ಲರನ್ನೂ ಕಾಲ ಒಗ್ಗೂಡಿಸುವುದು, ಮಕ್ಕಳು-ಮೊಮ್ಮಕ್ಕಳ ಜೊತೆ, ಸ್ನೇಹಿತರ ಜತೆ ಮಾತನಾಡುತ್ತಾ ಕಳೆಯಲು ಅವರೊಂದಿಗೆ ಸಂಪರ್ಕದಲ್ಲಿರಲು ವರದಾನವಾಗಿ ಬಂದಿರುವುದೇ ಸ್ಮಾರ್ಟ್ ಫೋನ್.

ಇತ್ತೀಚೆಗೆ ಸ್ಟಾರ್ಟ್‌ ಫೋನ್‌ನಿಂದ ದುರುಪಯೋಗವೇ ಹೆಚ್ಚು. ಇದರ ವ್ಯಾಮೋಹಕ್ಕೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಬಲಿಯಾಗಿ ಅದರಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎನ್ನುವವರೆ ಹೆಚ್ಚು. ಆದರೆ ಈ ಸ್ಟಾರ್ಟ್‌ಫೋನ್ ಕೂಡ ನಮಗೆ ನೆಮ್ಮದಿ ಮತ್ತು ಸಂತೋಷದಿಂದರಲು, ಅದರಲ್ಲಿಯೂ 70-80 ವಯಸ್ಸು ದಾಟಿರುವವರಿಗಂತೂ ಸ್ನೇಹಿತರೊಂದಿಗೆ, ಕುಟುಂಬದ ಮಂದಿಯೊಂದಿಗೆ ಸಂಪರ್ಕದಿಂದಿರಲು ಸಹಾಯ ಮಾಡುತ್ತದೆ.

ತಮ್ಮ ಅಜ್ಜ ಅಜ್ಜಿಯನ್ನು ಆಗಾಗ್ಗೆ ಮಾತನಾಡಿಸುವ ಸಲುವಾಗಿ ಮೊಮ್ಮಕ್ಕಳು ಅವರಿಗೊಂದು ಸ್ಟಾಟ್‌ ಫೋನ್ ಕೊಡಿಸಿರುತ್ತಾರೆ. ಗೆಳೆಯನಾಗಬಹುದು. ಸ್ಟಾಟ್‌ಫೋನ್ ಅದು ಅವರೆಲ್ಲೇ ಇದ್ದರೂ ತಮ್ಮ ಅಜ್ಜ ಅಜ್ಜಿಯೊಂದಿಗೆ ಮಾತನಾಡುತ್ತಾ ಸಮಯ ಕಳೆಯಲು ಅನುಕೂಲ. ಇತ್ತೀಚೆಗೆ ಬಂದಿರುವ ಸಾಫ್ಟ್‌ವೇರ್‌ಗಳ ಮೂಲಕ ವಿಡಿಯೋ ಕಾಲ್ ಮಾಡಿಕೊಂಡು ಕುಟುಂಬಸ್ಥರು, ಸ್ನೇಹಿತರು ಪರಸರ ಒಬ್ಬರನ್ನೊಬ್ಬರು ನೋಡಿಕೊಂಡು ಮಾತನಾಡಬಹುದು. ಇದು ನಮ್ಮನ್ನು ಮತ್ತಷ್ಟು ಹತ್ತಿರ ಮಾಡುತ್ತದೆ. ಅಲ್ಲದೆ ಫೋಟೋ, ವಿಡಿಯೋಗಳನ್ನೂ ಪರಸ್ಪರ ವಿನಿಯಮ ಮಾಡಿಕೊಂಡು ನಾವು ಬೇರೆಡೆ ಇದ್ದರೂ ಅಂದಿನ ಸಂಭ್ರಮದಲ್ಲಿ ಕುಟುಂಬದೊಂದಿಗೆ ಭಾಗಿಯಾಗುವ ಅವಕಾಶವನ್ನು ಈ ಸ್ಟಾರ್ಟ್‌ ಫೋನ್‌ಗಳು ನೀಡಿವೆ.
ಇನ್ನು ಮನೆಯಲ್ಲಿ ಹಿರಿಯರಿಬ್ಬರೆ ಅಥವಾ ಒಬ್ಬೊಂಟಿ ಯಾಗಿದ್ದ ಸಂದರ್ಭದಲ್ಲಿ ಏನಾದರೂ ತುರ್ತು ಸಂದರ್ಭ ಬಂದಲ್ಲಿ ಕೂಡಲೇ ಕುಟುಂಬಸ್ಥರನ್ನೋ, ಸ್ನೇಹಿತರನ್ನೋ ಸಂಪರ್ಕಿಸಲು ಸಹಾಯಕವಾಗಿದೆ ಈ ಸ್ಮಾರ್ಟ್‌ ಫೋನ್.

ಇತ್ತೀಚೆಗೆ ಸ್ಟಾರ್ಟ್‌ಫೋನ್ ಎಷ್ಟರ ಮಟ್ಟಿಗೆ ಅವಲಂಬಿತವಾಗಿದೆ ಎಂದರೆ, ಮನೆಗೆ ಬೇಕಾದ ಗ್ಯಾಸ್‌ ಸಿಲಿಂಡರ್‌ನಿಂದ ಹಿಡಿದು, ದಿನಸಿ, ಪ್ರತಿಯೊಂದು ವಸ್ತುವನ್ನೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಮನೆಗೆ ತರಿಸಿಕೊಳ್ಳಬಹುದು. ಮೊಬೈಲ್‌ನಲ್ಲಿ ಬುಕ್ ಮಾಡಿದರೆ ಸಾಕು. ಮುಂಜಾನೆಯೇ ಎದ್ದು ಹಾಲು ತರಲು ಹೋಗುವ ಪ್ರಮೇಯವೇ ಬರುವುದಿಲ್ಲ.

ಹಾಗಂತ ಇದಕ್ಕೇ ಕಟ್ಟುಬೀಳುವುದು ಸರಿಯಲ್ಲ. ಇದು ನಮ್ಮ ದೈಹಿಕ ಶ್ರಮವನ್ನು ಕಸಿಯಬಹುದು. ಎಷ್ಟೋ ಬಾರಿ ನಾವು ಆನ್ ಲೈನ್ ಮೋಸದ ಜಾಲಕ್ಕೆ ಸಿಲುಕಬಹುದು. ಆದ್ದರಿಂದ ಹಿರಿಯರಾದವರು ಹಣಕಾಸು ವ್ಯವಹಾರವನ್ನು ಫೋನ್‌ನಲ್ಲಿ ಇಟ್ಟುಕೊಳ್ಳುವುದು ಅಷ್ಟು ಉಚಿತವಲ್ಲ. ಉಳಿದಂತೆವೈದ್ಯರೊಂದಿಗಿನ ಸಂಪರ್ಕ, ಇತರೆ ಅಗತ್ಯ ವಸ್ತುಗಳ ಖರೀದಿಗೆ ಈ ಸ್ಟಾರ್ಟ್ ಫೋನ್ ಉಪಯೋಗಿಸುವುದು ಸೂಕ್ತ.

ಇನ್ನು ಬಿಡುವಿನ ವೇಳೆ ಸಂಗೀತ ಆಲಿಸಲು, ನಮ್ಮಿಷ್ಟದ ಕಾರ್ಯಕ್ರಮಗಳನ್ನು ವೀಕ್ಷಿಸಲು ಈ ಸ್ಮಾರ್ಟ್ ಫೋನ್ ಹೆಚ್ಚು ಈ ಉಪಯುಕ್ತವಾಗಿದೆ. ಅಲ್ಲದೆ ನೀವು ಶಿಕ್ಷಕರಾಗಿದ್ದರೆ, ಸಂಗೀತಗಾರರಾಗಿದ್ದರೆ ಅಥವಾ ಅಡುಗೆ ಮಾಡಲು ನಿಪುಣರಾಗಿದ್ದಾರೆ, ಕಲೆ, ಚಿತ್ರಕಲೆ, ಯೋಗ ಶಿಕ್ಷಕರಾಗಿದ್ದರೆ ಆನ್ ಲೈನ್ ಮೂಲಕ ತರಗತಿಗಳನ್ನು ಮಾಡಿ ಇಳಿವಯಸ್ಸಿನಲ್ಲಿಯೂ ದುಡಿಯಬಹುದು. ಜತೆಗೆ ಸಮಾಜದೊಂದಿಗೆ ಮನೆಯಲ್ಲಿ ಕುಳಿತಿದ್ದರೂ ಸಂಪರ್ಕ ಸಾಧಿಸಬಹುದು.

ಸ್ಮಾರ್ಟ್ ಫೋನ್ ಇಳಿವಯಸ್ಸಿನಲ್ಲಿ ನಮಗೆ ಅತ್ಯುತ್ತಮ ಆದರೆ ನಮ್ಮ ಆರೋಗ್ಯ ಸಲಹೆಗಾರನಾಗುವುದಿಲ್ಲ. ಆದ್ದರಿಂದ ಮುಂಜಾನೆ ಅಥವಾ ಸಂಜೆ ವೇಳೆ ಒಂದು ವಾಕ್ ಅಥವಾ ಲಘು ವ್ಯಾಯಾಮಗಳನ್ನು ಮಾಡುವುದು ಸೂಕ್ತ. ಉತ್ತಮ ವಾತಾವರಣದಲ್ಲಿ, ತಂಗಾಳಿಯಲ್ಲಿ ಒಂದಿಷ್ಟು ಸಮಯ ಕಳೆಯುವುದು ಜನರೊಂದಿಗೆ ಬೆರೆಯುವುದೂ ಅತ್ಯಗತ್ಯ. ಆಗ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ. ಇಳಿವಯಸ್ಸಿನಲ್ಲಿಯೂ ಆರೋಗ್ಯವಂತ ಜೀವನ ಸಾಗಿಸಲು ಸಾಧ್ಯವಾಗುತ್ತದೆ.

ಆಂದೋಲನ ಡೆಸ್ಕ್

Recent Posts

ಮುಂಗಾರು ಮತ್ತೆ ಚುರುಕು ; ಮೈಸೂರು, ಮಂಡ್ಯ, ಕೊಡಗಿನಲ್ಲಿ ಮಳೆ ಸಾಧ್ಯತೆ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ…

29 mins ago

ಪರಿಷತ್‌ ಚುನಾವಣೆ : ಕಾಂಗ್ರೆಸ್‌ನ ಐವರು, ಬಿಜೆಪಿಯ ಇಬ್ಬರ ಗೆಲುವು,

ಬೆಂಗಳೂರು : ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್​​ನ ಐವರು ಮತ್ತು ಬಿಜೆಪಿಯ ಎರಡು…

3 hours ago

ಪರಿಷತ್‌ ಚುನಾವಣೆ ; ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಜಯ

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ವಿನಯ್‌ ಕಾರ್ತಿಕ್‌ ಜಯ ಸಾಧಿಸಿದ್ದಾರೆ. ಅಡ್ಡಮತದ ಪರಿಣಾಮ ಮೈತ್ರಿ ಅಭ್ಯರ್ಥಿ…

4 hours ago

ಪಿಎಫ್‌ಗೆ ಶೇ 8.25 ಬಡ್ಡಿದರ : ಕೇಂದ್ರ ಸರ್ಕಾರದ ಅನುಮೋದನೆ

ಹೊಸದಿಲ್ಲಿ : 2025-26ನೇ ಆರ್ಥಿಕ ಸಾಲಿನಡಿ ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ಶೇ.8.25ರಷ್ಟಿ ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ…

6 hours ago

ಕರ್ತವ್ಯ ಲೋಪ ; ಮಹಿಳಾ ಮತ್ತು ಮಕ್ಕಳ ಇಲಾಖೆ ಡಿಡಿ ಅಮಾನತ್ತು

ಚಾಮರಾಜನಗರ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಸುರೇಶ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ…

7 hours ago

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಏಳು ದಿನ ಭಾರೀ ಮಳೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ರಾಜ್ಯದಲ್ಲಿ ಏಳು ದಿನ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

11 hours ago