ಪತ್ರಿಕೆಯಿಂದ

ಹಿರಿಯರಿಗೂ ಒಲಿದಿರುವ ಸ್ಮಾರ್ಟ್‌ಫೋನ್ ಗೆಳೆಯ

  • ಇ.ಆರ್.ರಾಮಚಂದ್ರನ್, ಮೈಸೂರು.

ವಯಸ್ಸಾದಂತೆಲ್ಲಾ ನಮ್ಮ ಆಪ್ತ ವಲಯದ ಸಂಪರ್ಕಗಳು ಕಡಿಮೆ ಯಾಗುತ್ತಿರುತ್ತವೆ. ಬಾಲ್ಯದಲ್ಲಿ, ಶಾಲಾ-ಕಾಲೇಜಿನಲ್ಲಿ ಜತೆಯಾದವರ ಗುಂಪು ಈಗ ಚದುರಿ ಹೋಗಿರುತ್ತದೆ. ಅವರ ಸಂಪರ್ಕ ಅಪರೂಪ. ಇದರ ಮೇಲೆ ಕೆಲಸದ ಮೇಲೆ ಹೊರ ಹೋಗಿ ಅಲ್ಲಿಯೇ ನೆಲೆಸಿ ಎಲ್ಲರ ಸಂಪರ್ಕದಿಂದ ದೂರಾಗಿ ಕ್ರಮೇಣ ನೆನಪೇ ಕರಗಿ ಹೋಗಿರುತ್ತದೆ. ಕೊನೆಗೆ ಬಾಳಿನುದ್ದಕ್ಕೂ ನಮ್ಮ ಸ್ನೇಹಿತೆ, ಸಂಗಾತಿಯಾಗಿ ಉಳಿಯುವುದು ನಮ್ಮ ಪತ್ನಿ ಮಾತ್ರ.

ನಮ್ಮ ಮಕ್ಕಳೂ ಅವರದ್ದೇ ಆದ ಕುಟುಂಬದೊಂದಿಗೆ ಬೇರೆಡೆ ನೆಲೆಸಿ ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ನಮ್ಮೆಲ್ಲರನ್ನೂ ಕಾಲ ಒಗ್ಗೂಡಿಸುವುದು, ಮಕ್ಕಳು-ಮೊಮ್ಮಕ್ಕಳ ಜೊತೆ, ಸ್ನೇಹಿತರ ಜತೆ ಮಾತನಾಡುತ್ತಾ ಕಳೆಯಲು ಅವರೊಂದಿಗೆ ಸಂಪರ್ಕದಲ್ಲಿರಲು ವರದಾನವಾಗಿ ಬಂದಿರುವುದೇ ಸ್ಮಾರ್ಟ್ ಫೋನ್.

ಇತ್ತೀಚೆಗೆ ಸ್ಟಾರ್ಟ್‌ ಫೋನ್‌ನಿಂದ ದುರುಪಯೋಗವೇ ಹೆಚ್ಚು. ಇದರ ವ್ಯಾಮೋಹಕ್ಕೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಬಲಿಯಾಗಿ ಅದರಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎನ್ನುವವರೆ ಹೆಚ್ಚು. ಆದರೆ ಈ ಸ್ಟಾರ್ಟ್‌ಫೋನ್ ಕೂಡ ನಮಗೆ ನೆಮ್ಮದಿ ಮತ್ತು ಸಂತೋಷದಿಂದರಲು, ಅದರಲ್ಲಿಯೂ 70-80 ವಯಸ್ಸು ದಾಟಿರುವವರಿಗಂತೂ ಸ್ನೇಹಿತರೊಂದಿಗೆ, ಕುಟುಂಬದ ಮಂದಿಯೊಂದಿಗೆ ಸಂಪರ್ಕದಿಂದಿರಲು ಸಹಾಯ ಮಾಡುತ್ತದೆ.

ತಮ್ಮ ಅಜ್ಜ ಅಜ್ಜಿಯನ್ನು ಆಗಾಗ್ಗೆ ಮಾತನಾಡಿಸುವ ಸಲುವಾಗಿ ಮೊಮ್ಮಕ್ಕಳು ಅವರಿಗೊಂದು ಸ್ಟಾಟ್‌ ಫೋನ್ ಕೊಡಿಸಿರುತ್ತಾರೆ. ಗೆಳೆಯನಾಗಬಹುದು. ಸ್ಟಾಟ್‌ಫೋನ್ ಅದು ಅವರೆಲ್ಲೇ ಇದ್ದರೂ ತಮ್ಮ ಅಜ್ಜ ಅಜ್ಜಿಯೊಂದಿಗೆ ಮಾತನಾಡುತ್ತಾ ಸಮಯ ಕಳೆಯಲು ಅನುಕೂಲ. ಇತ್ತೀಚೆಗೆ ಬಂದಿರುವ ಸಾಫ್ಟ್‌ವೇರ್‌ಗಳ ಮೂಲಕ ವಿಡಿಯೋ ಕಾಲ್ ಮಾಡಿಕೊಂಡು ಕುಟುಂಬಸ್ಥರು, ಸ್ನೇಹಿತರು ಪರಸರ ಒಬ್ಬರನ್ನೊಬ್ಬರು ನೋಡಿಕೊಂಡು ಮಾತನಾಡಬಹುದು. ಇದು ನಮ್ಮನ್ನು ಮತ್ತಷ್ಟು ಹತ್ತಿರ ಮಾಡುತ್ತದೆ. ಅಲ್ಲದೆ ಫೋಟೋ, ವಿಡಿಯೋಗಳನ್ನೂ ಪರಸ್ಪರ ವಿನಿಯಮ ಮಾಡಿಕೊಂಡು ನಾವು ಬೇರೆಡೆ ಇದ್ದರೂ ಅಂದಿನ ಸಂಭ್ರಮದಲ್ಲಿ ಕುಟುಂಬದೊಂದಿಗೆ ಭಾಗಿಯಾಗುವ ಅವಕಾಶವನ್ನು ಈ ಸ್ಟಾರ್ಟ್‌ ಫೋನ್‌ಗಳು ನೀಡಿವೆ.
ಇನ್ನು ಮನೆಯಲ್ಲಿ ಹಿರಿಯರಿಬ್ಬರೆ ಅಥವಾ ಒಬ್ಬೊಂಟಿ ಯಾಗಿದ್ದ ಸಂದರ್ಭದಲ್ಲಿ ಏನಾದರೂ ತುರ್ತು ಸಂದರ್ಭ ಬಂದಲ್ಲಿ ಕೂಡಲೇ ಕುಟುಂಬಸ್ಥರನ್ನೋ, ಸ್ನೇಹಿತರನ್ನೋ ಸಂಪರ್ಕಿಸಲು ಸಹಾಯಕವಾಗಿದೆ ಈ ಸ್ಮಾರ್ಟ್‌ ಫೋನ್.

ಇತ್ತೀಚೆಗೆ ಸ್ಟಾರ್ಟ್‌ಫೋನ್ ಎಷ್ಟರ ಮಟ್ಟಿಗೆ ಅವಲಂಬಿತವಾಗಿದೆ ಎಂದರೆ, ಮನೆಗೆ ಬೇಕಾದ ಗ್ಯಾಸ್‌ ಸಿಲಿಂಡರ್‌ನಿಂದ ಹಿಡಿದು, ದಿನಸಿ, ಪ್ರತಿಯೊಂದು ವಸ್ತುವನ್ನೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಮನೆಗೆ ತರಿಸಿಕೊಳ್ಳಬಹುದು. ಮೊಬೈಲ್‌ನಲ್ಲಿ ಬುಕ್ ಮಾಡಿದರೆ ಸಾಕು. ಮುಂಜಾನೆಯೇ ಎದ್ದು ಹಾಲು ತರಲು ಹೋಗುವ ಪ್ರಮೇಯವೇ ಬರುವುದಿಲ್ಲ.

ಹಾಗಂತ ಇದಕ್ಕೇ ಕಟ್ಟುಬೀಳುವುದು ಸರಿಯಲ್ಲ. ಇದು ನಮ್ಮ ದೈಹಿಕ ಶ್ರಮವನ್ನು ಕಸಿಯಬಹುದು. ಎಷ್ಟೋ ಬಾರಿ ನಾವು ಆನ್ ಲೈನ್ ಮೋಸದ ಜಾಲಕ್ಕೆ ಸಿಲುಕಬಹುದು. ಆದ್ದರಿಂದ ಹಿರಿಯರಾದವರು ಹಣಕಾಸು ವ್ಯವಹಾರವನ್ನು ಫೋನ್‌ನಲ್ಲಿ ಇಟ್ಟುಕೊಳ್ಳುವುದು ಅಷ್ಟು ಉಚಿತವಲ್ಲ. ಉಳಿದಂತೆವೈದ್ಯರೊಂದಿಗಿನ ಸಂಪರ್ಕ, ಇತರೆ ಅಗತ್ಯ ವಸ್ತುಗಳ ಖರೀದಿಗೆ ಈ ಸ್ಟಾರ್ಟ್ ಫೋನ್ ಉಪಯೋಗಿಸುವುದು ಸೂಕ್ತ.

ಇನ್ನು ಬಿಡುವಿನ ವೇಳೆ ಸಂಗೀತ ಆಲಿಸಲು, ನಮ್ಮಿಷ್ಟದ ಕಾರ್ಯಕ್ರಮಗಳನ್ನು ವೀಕ್ಷಿಸಲು ಈ ಸ್ಮಾರ್ಟ್ ಫೋನ್ ಹೆಚ್ಚು ಈ ಉಪಯುಕ್ತವಾಗಿದೆ. ಅಲ್ಲದೆ ನೀವು ಶಿಕ್ಷಕರಾಗಿದ್ದರೆ, ಸಂಗೀತಗಾರರಾಗಿದ್ದರೆ ಅಥವಾ ಅಡುಗೆ ಮಾಡಲು ನಿಪುಣರಾಗಿದ್ದಾರೆ, ಕಲೆ, ಚಿತ್ರಕಲೆ, ಯೋಗ ಶಿಕ್ಷಕರಾಗಿದ್ದರೆ ಆನ್ ಲೈನ್ ಮೂಲಕ ತರಗತಿಗಳನ್ನು ಮಾಡಿ ಇಳಿವಯಸ್ಸಿನಲ್ಲಿಯೂ ದುಡಿಯಬಹುದು. ಜತೆಗೆ ಸಮಾಜದೊಂದಿಗೆ ಮನೆಯಲ್ಲಿ ಕುಳಿತಿದ್ದರೂ ಸಂಪರ್ಕ ಸಾಧಿಸಬಹುದು.

ಸ್ಮಾರ್ಟ್ ಫೋನ್ ಇಳಿವಯಸ್ಸಿನಲ್ಲಿ ನಮಗೆ ಅತ್ಯುತ್ತಮ ಆದರೆ ನಮ್ಮ ಆರೋಗ್ಯ ಸಲಹೆಗಾರನಾಗುವುದಿಲ್ಲ. ಆದ್ದರಿಂದ ಮುಂಜಾನೆ ಅಥವಾ ಸಂಜೆ ವೇಳೆ ಒಂದು ವಾಕ್ ಅಥವಾ ಲಘು ವ್ಯಾಯಾಮಗಳನ್ನು ಮಾಡುವುದು ಸೂಕ್ತ. ಉತ್ತಮ ವಾತಾವರಣದಲ್ಲಿ, ತಂಗಾಳಿಯಲ್ಲಿ ಒಂದಿಷ್ಟು ಸಮಯ ಕಳೆಯುವುದು ಜನರೊಂದಿಗೆ ಬೆರೆಯುವುದೂ ಅತ್ಯಗತ್ಯ. ಆಗ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ. ಇಳಿವಯಸ್ಸಿನಲ್ಲಿಯೂ ಆರೋಗ್ಯವಂತ ಜೀವನ ಸಾಗಿಸಲು ಸಾಧ್ಯವಾಗುತ್ತದೆ.

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

9 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

15 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

19 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

19 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

19 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

22 hours ago