ಮನರಂಜನೆ

ಎಂಟು ವರ್ಷಗಳ ನಂತರ ಮತ್ತೆ ಕಾಲೇಜ್‍ ಹುಡುಗಿಯಾದ ರಚಿತಾ ರಾಮ್‍

ರಚಿತಾ ರಾಮ್‍ ಅಭಿನಯದ ‘ಮ್ಯಾಟ್ನಿ’, ‘ಸಂಜು ವೆಡ್ಸ್ ಗೀತಾ 2’, ‘ಬ್ಯಾಡ್‍ ಮ್ಯಾನರ್ಸ್’, ‘ವೀರಂ’, ‘ಕ್ರಾಂತಿ’ ಸೇರಿದಂತೆ ಕೆಲವು ಚಿತ್ರಗಳು ಒಂದರ ಹಿಂದೊಂದು ಸೋತಿವೆ. ಈ ಸೋಲುಗಳ ನಡುವೆಯೂ ಅವರ ಕೈಯಲ್ಲಿ ‘ಕಲ್ಟ್’, ‘ಲ್ಯಾಂಡ್ ಲಾರ್ಡ್’ ಮತ್ತು ‘ಅಯೋಗ್ಯ’ ಚಿತ್ರಗಳಿವೆ. ಈ ಸಾಲಿಗೆ ಇದೀಗ ಧ್ರುವ ಸರ್ಜಾ ಅಭಿನಯದ ‘ಕ್ರಿಮಿನಲ್‍’ ಚಿತ್ರ ಸಹ ಸೇರಿದೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ರಚಿತಾ ಬಹಳ ದಿನಗಳ ನಂತರ ಕಾಲೇಜು ಯುವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಷ್ಟೇ ಅಲ್ಲ, ಪಾತ್ರಕ್ಕಾಗಿ ತೂಕವನ್ನು ಇಳಿಸಿಕೊಳ್ಳುತ್ತಿದ್ದಾರಂತೆ. ಈ ವಿಷಯವನ್ನು ಸ್ವತಃ ಅವರೇ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘’ಕ್ರಿಮಿನಲ್‍ ಚಿತ್ರದಲ್ಲಿ ಗ್ಲಾಮರ್‍ ಇರುವುದಿಲ್ಲ. ಮೇಕಪ್‍ ಹಾಕೋಕೂ ಬಿಡುತ್ತಿಲ್ಲ. ಈ ಚಿತ್ರದಲ್ಲಿ ಯುವ ಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಪಾತ್ರಕ್ಕಾಗಿ ಇನ್ನಷ್ಟು ತೂಕ ಇಳಿಸಿಕೊಳ್ಳಬಬೇಕು. ‘ಭರ್ಜರಿ’ಯಲ್ಲಿ ಕಾಲೇಜ್‍ ಹುಡುಗಿಯಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ, ನಂತರ ಇದೇ ಚಿತ್ರದಲ್ಲಿ ಅಂಥದ್ದೊಂದು ಪಾತ್ರ ಮಾಡುತ್ತಿದ್ದೇನೆ. ಇಲ್ಲಿ ಹೆಚ್ಚು ಮೇಕಪ್‍ ಇರುವುದಿಲ್ಲ. ಒಬ್ಬ ಸರಳ ಹುಡುಗಿಯ ಪಾತ್ರ ಮಾಡುತ್ತಿದ್ದೇನೆ. ನಾನೊಬ್ಬಳೇ ಅಲ್ಲ, ಧ್ರುವ ಸಹ ತೂಕ ಇಳಿಸಿಕೊಳ‍್ಳುತ್ತಿದ್ದಾರೆ. ಇಬ್ಬರೂ ಯಂಗ್‍ ಆಗಿ ಕಾಣಬೇಕು ಎಂಬುದು ನಮ್ಮ ಉದ್ದೇಶ’ ಎನ್ನುತ್ತಾರೆ.

‘ಕ್ರಿಮಿನಲ್‍’ ಚಿತ್ರದಲ್ಲಿ ಪಾರ್ವತಿ ಎಂಬ ಪಾತ್ರ ಮಾಡುತ್ತಿರುವುದಾಗಿ ಹೇಳುವ ರಚಿತಾ, ‘ಚಿತ್ರದಲ್ಲಿ ಧ್ರುವ, ಶಿವ ಎಂಬ ಪಾತ್ರ ಮಾಡಿದರೆ, ನಾನು ಪಾರ್ವತಿ ಎಂಬ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಶಿವ-ಪಾರ್ವತಿ ಪ್ರೀತಿ ಜಗಳ, ಗಲಾಟೆ, ಅಳು-ನಗು ಎಲ್ಲವೂ ಇರುತ್ತದೆ. ‘ಕೂಲಿ’ ಚಿತ್ರದ ನಂತರ ಬೇರೆ ತರಹದ ಪಾತ್ರಗಳು ಬರುತ್ತಿವೆ. ಬೇರೆ ತರಹ ನೋಡುತ್ತಿದ್ದಾರೆ. ಈ ಚಿತ್ರದಲ್ಲೂ ವಿಭಿನ್ನ ಪಾತ್ರ ಸಿಕ್ಕಿದೆ. ಈ ಚಿತ್ರಕ್ಕಾಗಿ ಮೊದಲ ಕಾಲ್‍ ಬಂದಿದ್ದು ಧ್ರುವ ಅವರದ್ದು. ಈ ಪಾತ್ರವನ್ನು ನೀವು ಮಾಡಬೇಕು ಎಂದರು. ನಾನೇ ಯಾಕೆ ಎಂದು ಕೇಳಿದೆ. ಈ ಪಾತ್ರಕ್ಕೆ ನೀವೇ ಸೂಕ್ತ, ನಿಮಗೆ ಈ ಪಾತ್ರ ಕಷ್ಟವಾಗುವುದಿಲ್ಲ ಎಂದರು. ಈ ಚಿತ್ರದಲ್ಲಿ ಶಿವ-ಪಾರ್ವತಿ ಬಹಳ ಚೆನ್ನಾಗಿರುತ್ತಾರೆ. ಮುದ್ದುಮುದ್ದಾಗಿ ಇರುತ್ತಾರೆ ಎನ್ನುವುದಕ್ಕಿಂತ ಆ ಕಾಂಬಿನೇಷನ್‍ ಚೆನ್ನಾಗಿದೆ’ ಎನ್ನುತ್ತಾರೆ ರಚಿತಾ.

ಅಂದಹಾಗೆ, ‘ಕ್ರಿಮಿನಲ್‍’ ಚಿತ್ರ ಮುಹೂರ್ತ ಇತ್ತೀಚೆಗೆ ಆಗಿದ್ದು, ಸದ್ಯದಲ್ಲೇ ಚಿತ್ರೀಕರಣ ನಡೆಯಲಿದೆ.

ಆಂದೋಲನ ಡೆಸ್ಕ್

Recent Posts

IPL 2026 | ಮಾ.28ರಿಂದ ಪಂದ್ಯ ಆರಂಭ, ಬೆಂಗಳೂರಿನಲ್ಲಿ ಉದ್ಘಾಟನೆ, ಹೀಗಿದೆ ವೇಳಾಪಟ್ಟಿ

ಬೆಂಗಳೂರು : ಬಹುನಿರೀಕ್ಷಿತ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು…

11 mins ago

“ಸಂಶೋಧನೆಗೆ AI ನಿಂದಲ್ಲ, ಸ್ವಂತಿಕೆಯಿಂದ ಕೂಡಿರಲಿ” : ಕುಲಪತಿ ಶರಣಪ್ಪ ಹಲಸೆ ಸಲಹೆ

ಮೈಸೂರು : ಸಂಶೋಧನೆ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪರಿಶ್ರಮದಿಂದ ಸಂಶೋಧನೆಗಳನ್ನು ಸಿದ್ಧಪಡಿಸಬೇಕು, AI ತಂತ್ರಜ್ಞಾನದ ಕಡೆ ಮೊರೆಹೋಗುವುದನ್ನು ಕಡಿಮೆ…

26 mins ago

ಖಾತೆ ಮಾಡಿಕೊಡದ ಅಧಿಕಾರಿಗಳು : ರೈತನಿಂದ ವಿಷ ಸೇವನೆ ಯತ್ನ

ಸಾಲಿಗ್ರಾಮ : ತನ್ನ ಜಮೀನಿಗೆ ಸಂಬಂಧಿಸಿದ ಖಾತೆಯನ್ನು ಮಾಡಿಕೊಡದೆ ಸಾಲಿಗ್ರಾಮ ನಾಡಕಚೇರಿ ಅವರು ಸತಾಯಿಸುತ್ತಿದ್ದಾರೆ ಎಂದು ಮನನೊಂದು ಸಾಲಿಗ್ರಾಮದ ನಾಡ…

36 mins ago

ಹಡುಗುಗಳ ಮೇಲೆ ದಾಳಿ : ಇಬ್ಬರು ಭಾರತೀಯರ ಸಾವು

ಹೊಸದಿಲ್ಲಿ : ಪಶ್ಚಿಮ ಏಷ್ಯಾದ ಸಂಘರ್ಷ ಪೀಡಿತ ಸಮುದ್ರ ವಲಯದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು…

1 hour ago

ಗುಂಡ್ಲುಪೇಟೆ | ಕತ್ತು ಕೂಯ್ದು ವ್ಯಕ್ತಿಯ ಬರ್ಬರ ಹತ್ಯೆ

ಗುಂಡ್ಲುಪೇಟೆ : ಪಟ್ಟಣದ ಹೊರವಲಯದ ವಿಜಯಪುರ ಅಮಾನಿ ಕೆರೆಯ ಬಳಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಮೂಖಹಳ್ಳಿ…

2 hours ago

ಬಿಡುಗಡೆಗೂ ಮುನ್ನವೆ ದಾಖಲೆ ಬರೆದ ಧುರಂಧರ್‌ -2 ; ಮುಂಗಡ ಬುಕ್ಕಿಂಗ್‌ನಲ್ಲಿ ದಾಖಲೆ ಗಳಿಕೆ

ಮುಂಬೈ : ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ‘ಧುರಂಧರ್‌ : ದಿ ರೆವೆಂಜ್‌ನ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ…

2 hours ago