ಮನರಂಜನೆ

‘ಟೋಬಿ’ಯಲ್ಲಿ ಕಲಿತಷ್ಟು ಯಾವ ಚಿತ್ರದಲ್ಲೂ ಕಲಿತಿಲ್ಲ: ರಾಜ್‍ ಬಿ ಶೆಟ್ಟಿ

ರಾಜ್‍ ಬಿ ಶೆಟ್ಟಿ ಅಭಿನಯದ ಬಗ್ಗೆ ‘ಟೋಬಿ’ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇತ್ತು. ಆದರೆ, ಚಿತ್ರ ನಿರೀಕ್ಷೆ ಗೆಲುವು ಕಾಣಲಿಲ್ಲ. ಅದಕ್ಕೆ ಸರಿಯಾಗಿ ಚಿತ್ರದ ಬಗ್ಗೆಯೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸೋಲಿನಿಂದ ರಾಜ್ ಶೆಟ್ಟಿ ಬಹಳಷ್ಟು ಪಾಠ ಕಲಿತಿರುವಂತೆ ಕಾಣುತ್ತದೆ. ಅವರೇ ಹೇಳಿಕೊಂಡಂತೆ ‘ಟೋಬಿ’ಯಲ್ಲಿ ಕಲಿತ ಬಗ್ಗೆ ಅವರು ಯಾವ ಚಿತ್ರದಲ್ಲೂ ಕಲಿತಿಲ್ಲವಂತೆ.

ಈ ಕುರಿತು ಇತ್ತೀಚೆಗೆ ಮಾತನಾಡಿರುವ ರಾಜ್‍, ‘ಸೋಲು ಬಹಳ ಸುಂದರ. ನಾನು ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ‘ಟೋಬಿ’ಯಲ್ಲಿ ಕಲಿತಷ್ಟು ಯಾವ ಚಿತ್ರದಲ್ಲೂ ಕಲಿತಿಲ್ಲ. ‘ಟೋಬಿ’ ಸೋಲಿನಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಈ ಸೋಲಿನಿಂದ ಸ್ವಲ್ಪ ಹಿನ್ನೆಡೆ ಆಗಬಹುದು. ಗೆಲುವು ಆತ್ಮವಿಶ್ವಾಸ ಕೊಟ್ಟರೆ, ಸೋಲು ಹಲವು ಪ್ರಶ್ನೆಗಳನ್ನು ನಮ್ಮಲ್ಲಿ ಹುಟ್ಟುಹಾಕುತ್ತವೆ. ಎಲ್ಲಿ ತಪ್ಪು ಮಾಡಿದೆ? ನಾವೆಷ್ಟು ಬದಲಾಗಿದ್ದೇವೆ? ಇವೆಲ್ಲವೂ ಯೋಚಿಸುವಂತೆ ಮಾಡುತ್ತದೆ’ ಎನ್ನುತ್ತಾರೆ.

ಇವತ್ತಿನ ಈ ಎನರ್ಜಿಗೆ ‘ಟೋಬಿ’ ಚಿತ್ರದ ಸೋಲು ಕಾರಣ ಎನ್ನುವ ರಾಜ್‍, ‘ನಾವು ಆರಂಭದಲ್ಲಿ ಚಿತ್ರರಂಗಕ್ಕೆ ಬಂದಾಗ ಮುಗ್ಧರಾಗಿರುತ್ತೇವೆ. ಕ್ರಮೇಣ ನಮ್ಮಲ್ಲೊಂದು ಬದಲಾವಣೆ ಆಗುತ್ತದೆ. ನಾವು ಸೋತಾಗ, ನಮಗೆ ನಾವೇ ಎಲ್ಲಿ ಸೋತೆವು ಎಂದು ಪ್ರಶ್ನೆ ಮಾಡಿಕೊಂಡರೆ ಎಲ್ಲವೂ ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ನಾನು ಸೋತಿದ್ದಕ್ಕೆ ನಾನು ಬಹಳ ಲಕ್ಕಿ ಎನ್ನಬೇಕು. ಸೋತಾಗ ಸ್ವಲ್ಪ ಕಷ್ಟವಾಗುವುದು ಹೌದು. ಆದರೆ, ಇವತ್ತಿನ ಈ ಎನರ್ಜಿಗೆ ‘ಟೋಬಿ’ ಚಿತ್ರದ ಸೋಲು ಕಾರಣ. ಆ ಚಿತ್ರ ಗೆದ್ದಿದ್ದರೆ, ನಾನು ಸಹ ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದೆನೇನೋ? ಅಷ್ಟರಲ್ಲಿ ಸೋತೆ. ಮುಂದೆ ತಪ್ಪಾದರೆ ಭಯವಿಲ್ಲ. ಇನ್ನೊಮ್ಮೆ ಪ್ರಯತ್ನ ಮಾಡೋಣ ಎಂಬ ಧೈರ್ಯ ಬರುತ್ತದೆ. ಸೋಲು ತುಂಬಾ ಸ್ವಾತಂತ್ರ್ಯ ಕೊಡುತ್ತದೆ’ ಎಂಬುದು ರಾಜ್‍ ಮಾತು.

‘ಟೋಬಿ’ ಸೋತರೂ, ಅದರಿಂದ ಒಬ್ಬ ನಟನಾಗಿ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆಯಂತೆ. ‘ಆ ಚಿತ್ರ ಕಮರ್ಷಿಯಲ್‍ ಆಗಿ ಗೆಲ್ಲದೇ ಇರಬಹುದು. ಒಬ್ಬ ನಟನಾಗಿ ನನಗೆ ಆ ಚಿತ್ರದ ನಂತರ ಬಹಳ ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಮೊದಲ ಬಾರಿಗೆ ಏನೋ ಮಾಡಬಹುದು ಅಂತ ಅನಿಸುತ್ತಿದೆ. ಸದ್ಯ ‘45’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದಲ್ಲದೆ ಇನ್ನೊಂದೆರಡು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಮಲಯಾಳಂನಿಂದ ಒಂದಿಷ್ಟು ಅವಕಾಶಗಳು ಬರುತ್ತಿವೆ. ಆದರೆ, ಸದ್ಯ ಅಲ್ಲಿಗೆ ಹೋಗಿ ನಟಿಸುವಷ್ಟು ಪುರುಸೊತ್ತಿಲ್ಲ. ಇದಲ್ಲದೆ ಒಂದು ವೆಬ್‍ ಸೀರೀಸ್ ಸಹ ಮಾಡುತ್ತಿದ್ದೀನಿ’ ಎಂದು ಅವರು ಮಾಹಿತಿ ಕೊಡುತ್ತಾರೆ.

ಭೂಮಿಕಾ

Recent Posts

ರಾಮನಗರ: ಕಲ್ಲು ಕ್ವಾರಿಯಲ್ಲಿ ದುರಂತ: ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವು

ರಾಮನಗರ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾದಾಪಟ್ಟಣ ಬಳಿ…

59 mins ago

ಕೊಡಗಿನಲ್ಲಿ ಸಾಧಾರಣ ಮಳೆ: ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿರುವ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯಕ್ಕೆ…

1 hour ago

ಓದುಗರ ಪತ್ರ: ಮುತ್ತತ್ತಿ ನದಿ ಬಳಿ ಪೊಲೀಸರನ್ನು ನಿಯೋಜಿಸಿ

ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…

6 hours ago

ಓದುಗರ ಪತ್ರ: ಚಪ್ಪಲಿ ಎಸೆತ ಪ್ರಕರಣ ಎಳೆದಾಡುವುದು ಬೇಡ

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…

6 hours ago

ಓದುಗರ ಪತ್ರ: ತರಬೇತಿಗೆ ಅರ್ಜಿ ಏಕೆ ಕರೆದಿಲ್ಲ?

ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮ, ಸವಲತ್ತು ಮೊದಲು ದಲಿತ, ದಮನಿತ, ಶೋಷಿತ ವರ್ಗಕ್ಕೆ ತಲುಪಬೇಕು. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ…

6 hours ago

ಓದುಗರ ಪತ್ರ: ಬಿಡದಿ ಟೌನ್ ಶಿಪ್: ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡುವ ಮೊದಲು ಮತ್ತೊಮ್ಮೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ…

6 hours ago