ಮನರಂಜನೆ

ಬೆಂಗಳೂರು ಬಿಟ್ಟು ದೂರ ತೀರದಲ್ಲಿ ಚಿತ್ರ ತೋರಿಸಿದ ಮಂಸೋರೆ

ಸಾಮಾನ್ಯವಾಗಿ ಒಂದು ಚಿತ್ರದ ಪ್ರೀಮಿಯರ್‌ ಪ್ರದರ್ಶನ ಬೆಂಗಳೂರಿನಲ್ಲಿ ನಡೆದು, ಆ ನಂತರ ಬೇರೆ ಊರುಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದೆ. ಈ ವಾರ ಬಿಡುಗಡೆಯಾಗುತ್ತಿರುವ ತಮ್ಮ ‘ದೂರ ತೀರ ಯಾನ’ ಚಿತ್ರದ ಮೂಲಕ ಹೊಸ ಪ್ರಯೋಗವನ್ನು ಮಂಸೋರೆ ಮಾಡುತ್ತಿದ್ದಾರೆ. ಈಗಾಗಲೇ ಅವರು ತಮ್ಮ ಚಿತ್ರವನ್ನು ಬೆಂಗಳೂರಿಗೂ ಮೊದಲೇ ಧಾರವಾಡದ ಪದ್ಮ ಚಿತ್ರಮಂದಿರದಲ್ಲಿ ತೋರಿಸಿದ್ದಾರೆ.

ಇಷ್ಟಕ್ಕೂ ಬೆಂಗಳೂರು ಬಿಟ್ಟು, ಧಾರವಾಡದಲ್ಲಿ ಮಂಸೋರೆ ಚಿತ್ರ ತೋರಿಸಿದ್ದು ಯಾಕೆ? ಈ ಕುರಿತು ಮಾತನಾಡಿರುವ ಅವರು, ‘ಧಾರವಾಡದಲ್ಲಿ ಪ್ರೀಮಿಯರ್‍ ಶೋ ಮಾಡಿದ್ದೇವೆ. ಸಾಮಾನ್ಯವಾಗಿ, ನಾವು ಬೆಂಗಳೂರಿನಲ್ಲಿ ಸೆಲೆಬ್ರಿಟಿಗಳನ್ನು ಕರೆದು ಪ್ರೀಮಿಯರ್‍ ಶೋ ಮಾಡುತ್ತೇವೆ. ಇಲ್ಲಿ ಸಿಕ್ಕ ಪ್ರತಿಕ್ರಿಯೆನ್ನು ಕರ್ನಾಟಕದ ಜನರ ಜೊತೆಗೆ ಹಂಚಿಕೊಳ್ಳುತ್ತೇವೆ. ಮೊದಲು ಪ್ರೇಕ್ಷಕರು ಚಿತ್ರ ನೋಡಲಿ, ಆ ನಂತರ ಸೆಲೆಬ್ರಿಟಿಗಳು ಚಿತ್ರ ನೋಡಲಿ ಎಂಬುದು ನಮ್ಮ ಉದ್ದೇಶ. ಪ್ರೇಕ್ಷಕರೇ ನಮ್ಮ ಚಿತ್ರದ ಸೆಲೆಬ್ರಿಟಿ.‌ ಅವರು ನೋಡಿ ನಮ್ಮ ಚಿತ್ರ ಚೆನ್ನಾಗಿದೆ ಎಂದು ಇನ್ನೊಬ್ಬರಿಗೆ ಹೇಳಿದಾಗ ಖಂಡಿತವಾಗಿ ಹೆಚ್ಚಿನ ಜನರು ಚಿತ್ರಮಂದಿರಗಳಿಗೆ ಬರುತ್ತಾರೆ. ಸಿನಿಮಾ ಬದುಕಿರುವುದೇ ಪ್ರೇಕ್ಷಕರಿಂದ. ಪ್ರೇಕ್ಷಕರು ನೋಡಿದರೆ ಮಾತ್ರ ಚಿತ್ರ ಮಾಡಬಹುದು. ಚಿತ್ರ ತಯಾರಕರು ಮತ್ತು ಪ್ರೇಕ್ಷಕರು ಒಂದು ಗಾಡಿಗೆ ಎರಡು ಚಕ್ರಗಳಿದ್ದಂತೆ. ಅವೆರಡೂ ಜೊತೆಯಾಗಿ ಹೋದರೆ ಮಾತ್ರ, ಸಿನಿಮಾ ತಯಾರಾಗುತ್ತದೆ. ಒಂದು ಚಕ್ರ ಪಕ್ಕಕ್ಕೆ ಹೋದರೂ, ಇಡೀ ಬಾಡಿ ಅಲ್ಲೇ ಉಳಿಯುತ್ತದೆ’ ಎಂದರು.

ಕನ್ನಡದಲ್ಲಿ ನಡೆಯುತ್ತಿರುವ ಒಳ್ಳೆಯ ಪ್ರಯತ್ನಗಳ ಬಗ್ಗೆ ಬೇರೆ ಕಡೆ ಗಮನಸೆಳೆಯುವ ಪ್ರಯತ್ನ ಇದು ಎಂದ ಮಂಸೋರೆ, ‘ಇಂಟರ್ನೆಟ್‍ ಬರುವ ಮುನ್ನ ಸುದ್ದಿ ಎಲ್ಲರಿಗೂ ಸರಿಯಾಗಿ ತಲುಪುತ್ತಿತ್ತು. ಆದರೆ, ಇಂಟರ್ನೆಟ್‍ ಬಂದ ಮೇಲೆ, ಒಂದು ಪೋಸ್ಟರ್ ಒಂದು ಪ್ರದೇಶ ಬಿಟ್ಟು ಇನ್ನೊಂದು ಕಡೆ ಹೋಗಲ್ಲ. ನಮ್ಮ ಪ್ರಚಾರ ಸರಿಯಾಗಿ ತಲುಪುತ್ತಿಲ್ಲ. ಎಷ್ಟೋ ಬಾರಿ ಒಳ್ಳೆಯ ಸಿನಿಮಾಗಳು ಬಂದರೂ, ಅದು ಬೇರೆ ಕಡೆ ತಲುಪುವುದಿಲ್ಲ. ಹಾಗಾಗಿ, ನಾವು ನಮ್ಮ ಚಿತ್ರವನ್ನು ಬೇರೆ ಪ್ರದೇಶದಲ್ಲಿ ತೋರಿಸಿ, ಅಲ್ಲಿ ಜನ ಚಿತ್ರ ನೋಡಿ, ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಒಳ್ಳೆಯ ಪ್ರಯತ್ನಗಳ ಬಗ್ಗೆ ಅಲ್ಲೂ ವಿಷಯಗಳು ಮುಟ್ಟಲಿ ಎಂಬ ನಂಬಿಕೆ ಮೇಲೆ ಈ ಪ್ರದರ್ಶನ ಮಾಡಿದ್ದೇವೆ. ಈ ಚಿತ್ರವನ್ನು ಹೆಚ್ಚಾಗಿ ಮಲ್ಟಿಪ್ಲೆಕ್ಸ್‌ಗಳಲ್ಲೇ ನಾವು ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.

ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ದೂರ ತೀರ ಯಾಬ’ ಚಿತ್ರವನ್ನು ಡಿ ಕ್ರಿಯೇಶನ್ಸ್ ಬ್ಯಾನರ್‍ ಅಡಿ ದೇವರಾಜ್‍ ನಿರ್ಮಿಸಿದ್ದಾರೆ. ಇದು ಅವರ ನಿರ್ಮಾಣದ ಐದನೇ ಚಿತ್ರ. ಪ್ರಯಾಣದಲ್ಲಿ ನಡೆಯುವ ಪ್ರೇಮಕಥೆ ಇರುವ ಈ ಚಿತ್ರಕ್ಕೆ ಮಂಸೋರೆ ಕಥೆ ಬರೆದಿದ್ದಾರೆ. ಚೇತನಾ ತೀರ್ಥಹಳ್ಳಿ ಸಂಭಾಷಣೆ ಬರೆದಿದ್ದಾರೆ.

‘ದೂರ ತೀರ ಯಾನ’ ಚಿತ್ರದಲ್ಲಿ ವಿಜಯ್‍ ಕೃಷ್ಣ, ಪ್ರಿಯಾಂಕಾ ಜೊತೆಗೆ ಶ್ರುತಿ ಹರಿಹರನ್‍, ಶರತ್ ಲೋಹಿತಾಶ್ವ, ಅರುಣ್‍ ಸಾಗರ್‍ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಶೇಖರ್‍ ಚಂದ್ರ ಛಾಯಾಗ್ರಹಣ ಮತ್ತು ಬಕ್ಕೇಶ್‍ ಸಂಗೀತವಿದೆ.

ಆಂದೋಲನ ಡೆಸ್ಕ್

Recent Posts

ಬಿಡದಿ ಹೋರಾಟಕ್ಕೆ ಜೆನ್‌-ಝೀ ಗಳು ಬರಲಿ ; ದೇವನೂರು ಮಹದೇವ ಕರೆ

ಮೈಸೂರು: ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಆಕಾಂಕ್ಷೆ ಪ್ರಭುತ್ವಕ್ಕೆ ಇರಬೇಕು. ಭೂಮಿ ನೀಡುವ ರೈತರ ಬದುಕಿನ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆಯೇ…

8 hours ago

ಕನ್ನಡ ಭಾಷ ಶಿಕ್ಷಕರ ಪ್ರತ್ಯೇಕ ನೇಮಕಕ್ಕೆ ಸರ್ಕಾರ ಅಸ್ತು ; ಸ್ವಾಗತಾರ್ಹ

ಮೈಸೂರು : ಶಾಲಾ ಶಿಕ್ಷಣ ಇಲಾಖೆಯ ಜಿಪಿಎಸ್‌ಟಿಆರ್ ಹಾಗೂ ಎಚ್‌ಎಸ್‌ಟಿಆರ್ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಪ್ರತ್ಯೇಕವಾಗಿ…

12 hours ago

ಶೀಘ್ರದಲ್ಲೇ ರಾಜ್ಯದಲ್ಲಿ ಗುಟ್ಕಾ ನಿಷೇಧ ಆದೇಶ ವಾಪಸ್?‌

ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್‌ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…

16 hours ago

6 ದಿನಗಳಾದರೂ ಸಿಗದ ಟೆಕ್ಕಿ ಅದ್ವೈತ್‌ ಸುಳಿವು: ಶಿವಗಂಗೆ ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…

18 hours ago

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.‌ಅಶೋಕ್‌ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌…

19 hours ago

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: 7 ಮಂದಿ ಕಾರ್ಮಿಕರು ಸಾವು

ಡೆಹ್ರಾಡೂನ್:‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…

20 hours ago