ಮನರಂಜನೆ

ಕಾಡಿನಲ್ಲಿ ಪ್ರೇಮಿಗಳು; ‘ಜಂಗಲ್ ಮಂಗಲ್’ ಟ್ರೇಲರ್ ಬಿಡುಗಡೆ

‘ಸೂಜಿದಾರ’ ನಂತರ ಯಶ್‍ ಶೆಟ್ಟಿ ನಾಯಕನಾಗಿ ನಟಿಸಿರಲಿಲ್ಲ. ಇದೀಗ ಅವರು ಸದ್ದಿಲ್ಲದೆ ‘ಜಂಗಲ್‍ ಮಂಗಲ್‍’ ಎಂಬ ಚಿತ್ರದದಲ್ಲಿ ನಾಯಕನಾಗಿ ನಟಿಸಿದ್ದು, ಈ ಚಿತ್ರವು ಜುಲೈ 04ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್‍, ಮಂಗಳವಾರ ಸಂಜೆ ಬಿಡುಗಡೆಯಾಗಿದೆ.

ಸಹ್ಯಾದ್ರಿ ಸ್ಟುಡಿಯೋಸ್‍ ಬ್ಯಾನರ್‍ ಅಡಿ ಪ್ರಜೀತ್‍ ಹೆಗ್ಡೆ ಮುಂತಾದವರು ನಿರ್ಮಿಸಿರುವ ‘ಜಂಗಲ್‍ ಮಂಗಲ್‍’ ಚಿತ್ರಕ್ಕೆ ರಕ್ಷಿತ್‍ ಕುಮಾರ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಯಶ್‍ ಶೆಟ್ಟಿ, ಹರ್ಷಿತಾ ರಾಮಚಂದ್ರ, ‘ಉಗ್ರಂ’ ಮಂಜು, ದೀಪಕ್‍ ರೈ ಪಣಾಜೆ ಮುಂತಾದವರು ನಟಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ರಕ್ಷಿತ್‍ ಕುಮಾರ್, ‘ಮೊದಲು ಈ ಚಿತ್ರಕ್ಕೆ ‘ಹೆಜ್ಜೆ ಮೂಡದ ಹಾದಿ’ ಎಂದು ಹೆಸರಿಟ್ಟಿದ್ದೆ. ಅದು ಬಹಳ ಕಾವ್ಯಾತ್ಮಕವಾಗಿರುತ್ತದೆ ಎಂಬ ಕಾರಣಕ್ಕೆ, ಟ್ರೇಲರ್‍ ನೋಡಿದ ಯೋಗರಾಜ್‍ ಭಟ್‍, ಈ ಚಿತ್ರಕ್ಕೆ ‘ಜಂಗಲ್ ಮಂಗಲ್’ ಎಂಬ ಹೆಸರಿಡಿ ಎಂದು ಸಲಹೆ ನೀಡಿದರು. ಸುನಿ ತಮ್ಮ ಬ್ಯಾನರ್‍ ಅಡಿ ಅರ್ಪಿಸುವುದಕ್ಕೆ ಮುಂದಾದರು. ಮೊದಲು ನಾನೊಂದು ಟ್ರೇಲರ್‍ ಮಾಡಿದ್ದೆ. ಅದನ್ನು ಸಂಕಲನಕಾರ ಮನು ಶೆಡ್ಗಾರ್‍ ಕಸದ ಬುಟ್ಟಿಗೆ ಎಸೆದು, ಈ ಟ್ರೇಲರ್‍ ಮಾಡಿಕೊಟ್ಟರು. ಈ ಟ್ರೇಲರ್‍ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎಂದರು.

ಇದು ಯಾವ ಊರಿನ ಕಥೆ ಬೇಕಾದರೂ ಆಗಿರಬಹುದು ಎನ್ನುವ ರಕ್ಷಿತ್‍, ‘ಇಲ್ಲಿ ನಾಯಕ-ನಾಯಕಿ ಕಾಡಿಗೆ ಹೋಗುತ್ತಾರೆ. ಅವರನ್ನು ಊರಿನ ಜನ ಹಿಂಬಾಲಿಸುತ್ತಾರೆ. ಊರಿನ ಜನರ ಮುಗ್ಧ ಕುತೂಹಲವನ್ನು ಈ ಚಿತ್ರದ ಮೂಲಕ ಹೇಳುವ ತೋರಿಸುವ ಪ್ರಯತ್ನ ಮಾಡಿದ್ದೇನೆ. ಇದೊಂದು ಯೂನಿವರ್ಸಲ್‍ ಆದ ಕಥೆ. ಎಲ್ಲಿ ಬೇಕಾದರೂ ನಡೆಯಬಹುದು. ಅದನ್ನು ತೆಳುಹಾಸ್ಯದೊಂದಿಗೆ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು.

ಯಶ್‍ ಶೆಟ್ಟಿ ಈ ಚಿತ್ರ ಒಪ್ಪಲು ಕಥೆ ಕಾರಣವಂತೆ. ‘ನನಗೆ ನಾಯಕನಾಗಿಯೇ ನಟಿಸಬೇಕೆಂಬ ಆಸೆ ಇಲ್ಲ. ನಟನಾಗಿ ಗುರಿತಿಸಿಕೊಳ್ಳಬೇಕಷ್ಟೇ. ಈ ಚಿತ್ರದ ಒಪ್ಪಿಕೊಳ್ಳಲು ಕಥೆಯೇ ಕಾರಣ. ಈ ಚಿತ್ರಕ್ಕೆ ಕಥೆಯೇ ನಿಜವಾದ ನಾಯಕ’ ಎಂದರು.

ನಾಯಕಿ ಹರ್ಷಿತಾ ರಾಮಚಂದ್ರ, ಈ ಚಿತ್ರದಲ್ಲಿ ದಿವ್ಯ ಎಂಬ ಮಧ್ಯಮ ವರ್ಗದ ಅಂಗನವಾಡಿ ಶಿಕ್ಷಕಿಯ ಪಾತ್ರ ಮಾಡಿದರೆ, ‘ಉಗ್ರಂ’ ಮಂಜು ತಮ್ಮದು ನಾಯಕಿಯನ್ನು ಪ್ರೀತಿಸುವಂತಹ ಮಜವಾದ ಪಾತ್ರವಂತೆ.

‘ಜಂಗಲ್‍ ಮಂಗಲ್‍’ ಚಿತ್ರಕ್ಕೆ ವಿಷ್ಣುಪ್ರಸಾದ್‍ ಛಾಯಾಗ್ರಹಣ, ಪ್ರಸಾದ್‍ ಕೆ. ಶೆಟ್ಟಿ ಸಂಗೀತ ಮತ್ತು ಮನು ಶೆಡ್ಗಾರ್ ಸಂಕಲನವಿದೆ.

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

6 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

6 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

7 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

8 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

9 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

9 hours ago