ಮನರಂಜನೆ

ಎರಡು ತಲೆಮಾರಿನ ಪ್ರೇಮಕಥೆ ‘ಲವ್ ಮ್ಯಾಟ್ರು’ …

ಈ ಹಿಂದೆ ‘ಆ ದಿನಗಳು’ ಚೈತನ್ಯ, ‘ದುನಿಯಾ’ ಸೂರಿ ಮುಂತಾದವರ ಗರಡಿಯಲ್ಲಿ ಪಳಗಿರುವ ವಿರಾಟ್‍ ಬಿಲ್ವ, ಇದೀಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಹೆಸರು ‘ಲವ್‍ ಮ್ಯಾಟ್ರು’. ಹೆಸರು ಕೇಳುತ್ತಿದ್ದಂತೆಯೇ, ಇದೊಂದು ಪಕ್ಕಾ ಪ್ರೇಮಕಥೆ ಎಂದು ಸ್ಪಷ್ಟವಾಗುತ್ತದೆ. ಈ ಚಿತ್ರ ಸಂಪೂರ್ಣವಾಗಿದ್ದು, ಆಗಸ್ಟ್ 01ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ.

ಈ ಚಿತ್ರದ ಕುರಿತು ಮಾತನಾಡುವ ವಿರಾಟ ಬಿಲ್ವ, ‘ಪ್ರೀತಿ ಎಂಬ ಭಾವನೆಯನ್ನು ಹೇಳುವ ಕಥೆ ಇದು. ಇದು ಎರಡು ತಲೆಮಾರಿನ ಪ್ರೇಮಕಥೆ. ಎರಡ ಕಡೆ ಇಬ್ಬರು ನಾಯಕಿಯರು ಇರುವುದರಿಂದ, ಎರಡು ತ್ರಿಕೋನ ಪ್ರೇಮಕಥೆಗಳಿರಬಹುದು ಎಂದನಿಸಬಹುದು. ಇದು ತ್ರಿಕೋನ ಪ್ರೇಮಕಥೆಯಲ್ಲ, ಬೇರೆ ಆಯಾಮದಲ್ಲಿರುವ ಕಥೆ. ನಮ್ಮ ತಲೆಮಾರಿನ ಜೀವನದಲ್ಲಿ ನಡೆದಿರುವ ಮತ್ತು ಹಿರಿಯರ ಜೀವನದಲ್ಲಿ ನಡೆದಿರಬಹುದಾದ ಕಥೆಗಳನ್ನು ಆಧರಿಸಿ ಈ ಚಿತ್ರ ಮಾಡಿದ್ದೇವೆ. ಆ ಕಾಲಘಟ್ಟದ ಮತ್ತು ಈ ಕಾಲಘಟ್ಟದ ಪ್ರೀತಿಯನ್ನು ಸೇರಿಸಿ ಮಾಡಿ ಈ ಕಥೆ ಮಾಡಿದ್ದೇವೆ. ಚಿತ್ರದಲ್ಲಿ ಒಳ್ಳೆಯ ತಾರಾಗಣವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಒಂದು ಪ್ರಮೋಷನಲ್‍ ಹಾಡಿದೆ’ ಎಂದರು.

ವಿರಾಟ್‍ ಜೊತೆಗೆ ಅಚ್ಯುತ್‍ ಕುಮಾರ್‍ ಇದಕ್ಕೂ ಮೊದಲು ಕೆಲಸ ಮಾಡಿದ್ದರಂತೆ. ‘ನನ್ನ ಕೆಲವು ಚಿತ್ರಗಳಿಗೆ ವಿರಾಟ್‍ ಸಹಾಯಕ ನಿರ್ದೇಶಕರಾಗಿದ್ದರು. ಅವರು ಸಿನಿಮಾ ಮಾಡುತ್ತಿದ್ದೀನಿ ಎಂದಾಗ ಖುಷಿಯಿಂದ ಒಪ್ಪಿ ನಟಿಸಿದೆ. ಹಾಡುಗಳು ಚೆನ್ನಾಗಿದೆ. ಸಿನಿಮಾ ಸಹ ಚೆನ್ನಾಗಿ ಮೂಡಿಬಂದಿದೆ’ ಎಂದರು.

ಈ ಚಿತ್ರದಲ್ಲಿ ವರ್ಷ ಎಂಬ ಪಾತ್ರ ಮಾಡಿದ್ದೇನೆ ಎಂದ ಸೋನಾಲ್‍, ‘ಚಿಕ್ಕವಯಸ್ಸಿನಲ್ಲಿ ಅಪ್ಪ-ಅಮ್ಮ ಅವಳಿಂದ ದೂರ ಆಗಿರುತ್ತಾರೆ. ನಂತರ ಜೀವನದ ಏಳುಬೀಳುಗಳನ್ನು ಹೇಗೆ ಎದುರಿಸುತ್ತಾಳೆ? ಪ್ರೀತಿಯಲ್ಲಿ ಬಿದ್ದಾಗ ಏನೆಲ್ಲಾ ಆಗುತ್ತದೆ? ಎಂಬುದು ನನ್ನ ಪಾತ್ರ’ ಎಂದರು.

ಸಿಲ್ವರಿಥಮ್ ಪ್ರೊಡಕ್ಷನ್ ಮತ್ತು INK ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಿರುವ ‘ಲವ್ ಮ್ಯಾಟ್ರು’ ಚಿತ್ರದಲ್ಲಿ ವಿರಾಟ್‍ ಜೊತೆಗೆ ಸೋನಲ್ ಮಾಂತೆರೋ, ಸುಶ್ಮಿತಾ ಗೋಪಿನಾಥ್, ಅಚ್ಯುತ್‍ ಕುಮಾರ್, ಸುಮನ್ ರಂಗನಾಥ್, ಅನಿತಾ ಭಟ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ದೇವೇಂದ್ರ ಆರ್. ನಾಯ್ಡು ಮತ್ತು ಪರಮೇಶ್ ಸಿ.ಎಂ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನವಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸ್ವಾಗತಾರ್ಹ ಸಂಕಲ್ಪ!

ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…

2 hours ago

ಓದುಗರ ಪತ್ರ: ಸತ್ಪ್ರಜೆಗಳಾಗಿ ಜೀವಿಸುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ನೀಡುವ ಗೌರವ

ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…

2 hours ago

ಓದುಗರ ಪತ್ರ: ಸೇತುವೆ ಅವ್ಯವಸ್ಥೆ; ಸಂಚಾರ ದುಸ್ತರ

ಮೈಸೂರು ತಾಲ್ಲೂಕಿನ ಬ್ಯಾತಹಳ್ಳಿ ಮತ್ತು ದಡದಹಳ್ಳಿ ನಡುವೆ ಹರಿಯುತ್ತಿರುವ ಎಣ್ಣೆಹೊಳೆ ದಾಟಲು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ದುಸ್ಥಿತಿಯಲ್ಲಿದೆ. ಈ…

2 hours ago

ಕಪ್ಪು ವರ್ಣೀಯರ ಕಣ್ಣೀರ ಕಥನ

ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಅವರ ಅಲ್ಕೆಬುಲಾನದ ಹೃದಯದಿಂದ…

2 hours ago

ಯಶ್: ‘ಟಾಕ್ಸಿಕ್’ ಬೆನ್ನೇರಿದ ಯಶೋ ಮಾರ್ಗ

ವೈಡ್‌ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ‘ಫಸ್ಟ್ , ಯು ಹ್ಯಾವ್ ಟು ಬಿಲೀವ್ ಇನ್ ಇಟ್, ದೆನ್…

2 hours ago

ರೈತರ ಪಾಲಿಗೆ ಕಹಿಯಾದ ಸಿಹಿಗುಂಬಳ

ದಾ.ರಾ.ಮಹೇಶ್ ಹನಗೋಡು ಹೋಬಳಿ ರೈತರು ಬೆಳೆದ ಸಿಹಿಗುಂಬಳಕ್ಕೆ ದೊರೆಯದ ಮಾರುಕಟ್ಟೆ  ವೀರನಹೊಸಹಳ್ಳಿ: ಜೋಳ, ಶುಂಠಿ, ಮತ್ತಿತರ ಸಾಂಪ್ರದಾಯಿಕ ಕೃಷಿ ಬಿಟ್ಟು…

2 hours ago