ಮನರಂಜನೆ

ಒಂದೇ ಸಿನಿಮಾದಲ್ಲಿ ಐವರು ನಿರ್ದೇಶಕರ ಐದು ವಿಭಿನ್ನ ಕಥೆಗಳು

ಕನ್ನಡದಲ್ಲಿ ಹೈಪರ್ ಲಿಂಕ್‍ ಸಿನಿಮಾಗಳ ಟ್ರೆಂಡ್‍ ಶುರುವಾಗಿದೆ. ಇತ್ತೀಚಿನ ಉದಾಹರಣೆ ರಾಜ್‍ ಬಿ ಶೆಟ್ಟಿ ಅಭಿನಯದ ‘ರೂಪಾಂತರ’. ಈ ಚಿತ್ರದಲ್ಲಿ ನಾಲ್ಕು ವಿಭಿನ್ನ ಕಥೆಗಳಿದ್ದು, ಅವೆಲ್ಲವೂ ಒಂದಕ್ಕೊಂದು ಲಿಂಕ್‍ ಆಗಿವೆ. ಇದಕ್ಕೂ ಮುನ್ನ ‘ಟೇಲ್ಸ್ ಆಫ್‍ ಮಹಾನಗರ’ ಸೇರಿದಂತೆ ವಿಭಿನ್ನ ಕಥೆಗಳಿರುವ ಒಂದೇ ಚಿತ್ರಗಳು ಕೆಲವು ಬಂದಿವೆ.

ಈ ಸಾಲಿಗೆ ಇದೀಗ ‘ಬಿಟಿಎಸ್‍’ ಸಹ ಸೇರಿದೆ. ‘ಬಿಟಿಎಸ್‍’ ಎಂದರೆ ಮೊದಲಿಗೆ ನೆನಪಿಗೆ ಬರುವುದು ‘ಬ್ಯಾಂಗ್ಟನ್‍ ಬಾಯ್ಸ್’ ಎಂಬ ದಕ್ಷಿಣ ಕೊರಿಯಾದ ಜನಪ್ರಿಯ ಮ್ಯೂಸಿಕ್ ಬ್ಯಾಂಡ್. ಬಿಟಿಎಸ್ ಎಂದರೆ ಬಿಹೈಂದ್‍ ದಿ ಸೀನ್ಸ್ ಅಂತಲೂ ಹೇಳುತ್ತಾರೆ. ಆದರೆ, ಈ ‘ಬಿಟಿಎಸ್‍’ ಎಂದರೆ, ಬಿಹೈಂಡ್‍ ದಿ ಸ್ಕ್ರೀನ್‍ ಎಂದರ್ಥ.

ಇದು ಸಿನಿಮಾದ ಹಿಂದಿನ ಕಥೆಗಳ ಕುರಿತ ಒಂದು ಸಿನಿಮಾ. ಒಂದೇ ಕಥೆಯಲ್ಲಿ ಚಿತ್ರರಂಗದ ಹಲವು ಪ್ಲಸ್, ಮೈನಸ್‍ಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆಯಂತೆ. ಚಿತ್ರರಂಗದ ಕುರಿತು ಐದು ವಿಭಿನ್ನ ಕಥೆಗಳನ್ನು ಹೇಳುವ ಪ್ರಯತ್ನ ಮಾಡಲಾಗಿದ್ದು, ಈ ಚಿತ್ರವನ್ನು ಐವರು ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ.

‘ಬಿಟಿಎಸ್’ ( ಬಿಹೈಂಡ್ ದಿ ಸ್ಕ್ರೀನ್ ) ಚಿತ್ರದ ಟ್ರೇಲರ್‍ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಬಿಡುಗಡೆ ಆಗಿದೆ. ಈ ಟ್ರೇಲರ್‍ಗೆ ರಾಜ್ ಬಿ. ಶೆಟ್ಟಿ ಧ್ವನಿ ನೀಡಿದ್ದಾರೆ. ‘ಭೀಮ’ ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವನ್ನು ಪ್ರಜ್ಚಲ್ ರಾಜು, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್ ಶಂಕದ್ ಮತ್ತು ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ.

ಈ ಪೈಕಿ ಅಪೂರ್ವ ಭಾರದ್ವಾಜ್‍ ಇದಕ್ಕೂ ಮುನ್ನ ‘ನಾನು ಅದು ಮತ್ತು ಸರೋಜ’, ‘ಬ್ಯಾಡ್‍’, ‘ಕ್ರಿಟಿಕಲ್‍ ಕೀರ್ತನೆಗಳು’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಇದೇ ಮೊದಲ ಬಾರಿಗೆ ಅವರು ನಿರ್ದೇಶನ ಮಾಡಿದ್ದಾರೆ. ತಮ್ಮ ಚಿತ್ರದ ಕುರಿತು ಮಾತನಾಡಿರುವ ಅಪೂರ್ವ, ‘ಸಿನಿಮಾದಲ್ಲಿ ಕೆಳ ಹಂತದಿಂದ ಬಂದ ಜನ ಸಾಕಷ್ಟು ಕಷ್ಟಪಟ್ಟಿರುತ್ತಾರೆ ಮತ್ತು ಹಲವು ಅವಮಾನಗಳನ್ನು ಎದುರಿಸಿರುತ್ತಾರೆ. ಒಬ್ಬ ಮೇಕಪ್‍ ಮ್ಯಾನ್, ತಾನು ಟಚಪ್‍ ಹುಡುಗನಾಗಿದ್ದಾಗ ಬೇರೆಯವರಿಂದ ಸಾಕಷ್ಟು ಅವಮಾನ ಎದುರಿಸಿರುತ್ತಾರೆ. ಅದೇ ರೀತಿ ಒಬ್ಬ ಸಹಾಯಕ ನಿರ್ದೇಶಕ ಸಹ ದಿನನಿತ್ಯ ಸಾಕಷ್ಟು ನೋವು ತಂದಿರುತ್ತಾರೆ. ಆ ತರಹದ ನೋವುಗಳನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಈ ಕಥೆಯನ್ನು ನನಗೆ ಮೇಕಪ್‍ ಮಾಡಿದ ಹುಡುಗರಿಗೆ, ಸಹಾಯಕರಿಗೆ ಅರ್ಪಿಸುತ್ತೇನೆ’ ಎಂದರು.

‘ಬಿಟಿಎಸ್‍’ ಚಿತ್ರವನನ್ನು ಮುರಳಿಕೃಷ್ಣ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ವಿಜಯ್ ಕೃಷ್ಣ ಮುಂತಾದವರು ನಟಿಸಿದ್ದಾರೆ.

ಭೂಮಿಕಾ

Recent Posts

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

2 mins ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

2 hours ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

3 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

3 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

6 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

7 hours ago